ETV Bharat / state

ಚಾಕುವಿನಿಂದ ಚುಚ್ಚಿ ರೌಡಿಶೀಟರ್ ಕೊಲೆ: ಐವರು ಆರೋಪಿಗಳು ಅರೆಸ್ಟ್​

ರೌಡಿಶೀಟರ್ ಹರೀಶ್​​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

author img

By

Published : Jul 30, 2021, 10:29 AM IST

arrest
arrest

ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆ ಹಾಡಹಾಗಲೇ ರೌಡಿಶೀಟರ್ ಹರೀಶ್​​ನನ್ನು‌ ಚಾಕುವಿನಿಂದ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ರಕ್ಷಿತ್, ನೆಲ್ಸನ್, ಅವಿನಾಶ್, ಸುಭಾಷ್ ಮತ್ತು ಇಂದ್ರಜಿತ್ ಬಂಧಿತ ಅರೋಪಿಗಳು. ಬಸವೇಶ್ವರ ನಗರ ನಿವಾಸಿ ಹರೀಶ್ ಕೊಲೆಯಾಗಿದ್ದ ರೌಡಿಶೀಟರ್‌. ಈ ಹಿಂದೆ 2017 ರಲ್ಲಿ ರಕ್ಷಿತ್​ ಎಂಬಾತನ ಮೇಲೆ ಹರೀಶ್‌ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಹರೀಶ್​ನನ್ನು ಬಾಣಸವಾಡಿ ಠಾಣೆಗೆ ಬರುವಂತೆ ಸೂಚಿಸಲಾಗಿತ್ತು.‌ ಬಾಣಸವಾಡಿ ಪೊಲೀಸ್ ಠಾಣೆಗೆ ಆಗಮಿಸಿ ಹೊರಗೆ ಬಂದ ಹರೀಶ್, ಬಳಿಕ ತಾನೇ ರಕ್ಷಿತ್​ಗೆ ಫೋನ್ ಮಾಡಿ ಅವಾಜ್ ಹಾಕಿದ್ದಾನಂತೆ. ಇದರಿಂದ‌ ಕೋಪಗೊಂಡ ರಕ್ಷಿತ್, ಗ್ಯಾಂಗ್ ಕಟ್ಟಿಕೊಂಡು ಬಂದು ಹರೀಶ್​ಗಾಗಿ ಹುಡುಕಾಟ ನಡೆಸಿದ್ದಾನೆ. ಕೊನೆಗೆ ಪೊಲೀಸ್ ಠಾಣೆಯಿಂದ ಹೊರ ಬರುವ ವಿಚಾರ ತಿಳಿದು, ಹರೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದನು.

ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆ ಹಾಡಹಾಗಲೇ ರೌಡಿಶೀಟರ್ ಹರೀಶ್​​ನನ್ನು‌ ಚಾಕುವಿನಿಂದ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ರಕ್ಷಿತ್, ನೆಲ್ಸನ್, ಅವಿನಾಶ್, ಸುಭಾಷ್ ಮತ್ತು ಇಂದ್ರಜಿತ್ ಬಂಧಿತ ಅರೋಪಿಗಳು. ಬಸವೇಶ್ವರ ನಗರ ನಿವಾಸಿ ಹರೀಶ್ ಕೊಲೆಯಾಗಿದ್ದ ರೌಡಿಶೀಟರ್‌. ಈ ಹಿಂದೆ 2017 ರಲ್ಲಿ ರಕ್ಷಿತ್​ ಎಂಬಾತನ ಮೇಲೆ ಹರೀಶ್‌ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಹರೀಶ್​ನನ್ನು ಬಾಣಸವಾಡಿ ಠಾಣೆಗೆ ಬರುವಂತೆ ಸೂಚಿಸಲಾಗಿತ್ತು.‌ ಬಾಣಸವಾಡಿ ಪೊಲೀಸ್ ಠಾಣೆಗೆ ಆಗಮಿಸಿ ಹೊರಗೆ ಬಂದ ಹರೀಶ್, ಬಳಿಕ ತಾನೇ ರಕ್ಷಿತ್​ಗೆ ಫೋನ್ ಮಾಡಿ ಅವಾಜ್ ಹಾಕಿದ್ದಾನಂತೆ. ಇದರಿಂದ‌ ಕೋಪಗೊಂಡ ರಕ್ಷಿತ್, ಗ್ಯಾಂಗ್ ಕಟ್ಟಿಕೊಂಡು ಬಂದು ಹರೀಶ್​ಗಾಗಿ ಹುಡುಕಾಟ ನಡೆಸಿದ್ದಾನೆ. ಕೊನೆಗೆ ಪೊಲೀಸ್ ಠಾಣೆಯಿಂದ ಹೊರ ಬರುವ ವಿಚಾರ ತಿಳಿದು, ಹರೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದನು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.