ETV Bharat / state

‘ಕಾಫಿ’ ಧಣಿಯ ಬದುಕಿನ ಕೊನೆ ‘ಡೇ’.. ಮೃತದೇಹದ ಬಗ್ಗೆ ಮೀನುಗಾರ ಹೇಳಿದ್ದೇನು?

ನಾವು ಮೂವರು ಈ ಮೃತದೇಹವನ್ನು ನದಿ ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದೆವು. ಪೊಲೀಸ್ ಅಧಿಕಾರಿಗಳು ಹಾಗೂ ಮಾಜಿ ಸಚಿವ ಯು ಟಿ ಖಾದರ್ ಬಂದು ಮೃತದೇಹದ ಗುರುತು ಪತ್ತೆಹಚ್ಚಿದರು ಎಂದು ಮೀನುಗಾರ ರಿತೇಶ್ ಮಾಹಿತಿ ನೀಡಿದರು.

author img

By

Published : Jul 31, 2019, 11:05 AM IST

ಮೀನುಗಾರ ರಿತೇಶ್

ಮಂಗಳೂರು: ನಿನ್ನೆಯಿಂದ ಸಿದ್ದಾರ್ಥ್​ಗಾಗಿ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದೆ. ಇಂದು ಬೆಳಗ್ಗೆ ಸುಮಾರು 6.30ಕ್ಕೆ ನಿತ್ಯ ಮೀನುಗಾರಿಕೆಗೆ ತೆರಳಿದಾಗ ನಗರದ ಹೊಯಿಗೆ ಬಜಾರ್‌ನಲ್ಲಿರುವ ಐಸ್ ಪ್ಲ್ಯಾಂಟ್ ಬಳಿ ಮೃತದೇಹ ನಮಗೆ ಕಾಣಸಿಕ್ಕಿದೆ ಎಂದು ಮೃತದೇಹವನ್ನು ಪತ್ತೆಹಚ್ಚಿದ ಮೀನುಗಾರ ರಿತೇಶ್ ಹೇಳಿದ್ದಾರೆ.

ತಕ್ಷಣ ನಾವು ಮೂವರು ಈ ಮೃತದೇಹವನ್ನು ನದಿ ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದೆವು. ಪೊಲೀಸ್ ಅಧಿಕಾರಿಗಳು ಹಾಗೂ ಮಾಜಿ ಸಚಿವ ಯು ಟಿ ಖಾದರ್ ಬಂದು ಮೃತದೇಹದ ಗುರುತು ಪತ್ತೆಹಚ್ಚಿದರು ಎಂದು ಮಾಹಿತಿ ನೀಡಿದರು.

ಮೃತದೇಹದ ಬಗ್ಗೆ ಮೀನುಗಾರ ಹೇಳಿದ್ದೇನು?

ಮೃತದೇಹ ನದಿಯಲ್ಲಿ ತೇಲುತಿತ್ತು. ಯಾರಾದರೂ ನೀರಿಗೆ ಬಿದ್ದರೆ 18-24 ಗಂಟೆಯೊಳಗೆ ಮೃತದೇಹವು ಊದಿಕೊಳ್ಳುತ್ತದೆ. ಇದರೆ ಇವರ ಮೃತದೇಹ ಅಷ್ಟೇನು ಊದಿಕೊಂಡಿಲ್ಲ. ಮುಖ ಪರಿಚಯ ಸಿಗುತ್ತಿತ್ತು. ಮೃತದೇಹ ದೊರಕುವಾಗ ಮೈಮೇಲೆ ಬಟ್ಟೆ ಇರಲಿಲ್ಲ. ಕೇವಲ ಪ್ಯಾಂಟ್, ಶೂ ಹಾಗೂ ಕೈಯಲ್ಲೊಂದು ವಾಚು, ಉಂಗುರ ಇತ್ತು. ಮೇಲಿನಿಂದ ಬಿದ್ದ ಪರಿಣಾಮದಿಂದ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ಅದು ಬಿಟ್ಟರೆ ಮೃತದೇಹದಲ್ಲಿ ಯಾವುದೇ ದೊಡ್ಡ ಪ್ರಮಾಣದ ಗಾಯಗಳಾಗಿರಲಿಲ್ಲ ಎಂದು ಮೀನುಗಾರ ರಿತೇಶ್ ತಿಳಿಸಿದರು.

ಮಂಗಳೂರು: ನಿನ್ನೆಯಿಂದ ಸಿದ್ದಾರ್ಥ್​ಗಾಗಿ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದೆ. ಇಂದು ಬೆಳಗ್ಗೆ ಸುಮಾರು 6.30ಕ್ಕೆ ನಿತ್ಯ ಮೀನುಗಾರಿಕೆಗೆ ತೆರಳಿದಾಗ ನಗರದ ಹೊಯಿಗೆ ಬಜಾರ್‌ನಲ್ಲಿರುವ ಐಸ್ ಪ್ಲ್ಯಾಂಟ್ ಬಳಿ ಮೃತದೇಹ ನಮಗೆ ಕಾಣಸಿಕ್ಕಿದೆ ಎಂದು ಮೃತದೇಹವನ್ನು ಪತ್ತೆಹಚ್ಚಿದ ಮೀನುಗಾರ ರಿತೇಶ್ ಹೇಳಿದ್ದಾರೆ.

ತಕ್ಷಣ ನಾವು ಮೂವರು ಈ ಮೃತದೇಹವನ್ನು ನದಿ ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದೆವು. ಪೊಲೀಸ್ ಅಧಿಕಾರಿಗಳು ಹಾಗೂ ಮಾಜಿ ಸಚಿವ ಯು ಟಿ ಖಾದರ್ ಬಂದು ಮೃತದೇಹದ ಗುರುತು ಪತ್ತೆಹಚ್ಚಿದರು ಎಂದು ಮಾಹಿತಿ ನೀಡಿದರು.

ಮೃತದೇಹದ ಬಗ್ಗೆ ಮೀನುಗಾರ ಹೇಳಿದ್ದೇನು?

ಮೃತದೇಹ ನದಿಯಲ್ಲಿ ತೇಲುತಿತ್ತು. ಯಾರಾದರೂ ನೀರಿಗೆ ಬಿದ್ದರೆ 18-24 ಗಂಟೆಯೊಳಗೆ ಮೃತದೇಹವು ಊದಿಕೊಳ್ಳುತ್ತದೆ. ಇದರೆ ಇವರ ಮೃತದೇಹ ಅಷ್ಟೇನು ಊದಿಕೊಂಡಿಲ್ಲ. ಮುಖ ಪರಿಚಯ ಸಿಗುತ್ತಿತ್ತು. ಮೃತದೇಹ ದೊರಕುವಾಗ ಮೈಮೇಲೆ ಬಟ್ಟೆ ಇರಲಿಲ್ಲ. ಕೇವಲ ಪ್ಯಾಂಟ್, ಶೂ ಹಾಗೂ ಕೈಯಲ್ಲೊಂದು ವಾಚು, ಉಂಗುರ ಇತ್ತು. ಮೇಲಿನಿಂದ ಬಿದ್ದ ಪರಿಣಾಮದಿಂದ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ಅದು ಬಿಟ್ಟರೆ ಮೃತದೇಹದಲ್ಲಿ ಯಾವುದೇ ದೊಡ್ಡ ಪ್ರಮಾಣದ ಗಾಯಗಳಾಗಿರಲಿಲ್ಲ ಎಂದು ಮೀನುಗಾರ ರಿತೇಶ್ ತಿಳಿಸಿದರು.

Intro:ಮಂಗಳೂರು: ನಿನ್ನೆಯಿಂದ ಸಿದ್ದಾರ್ಥ್ ಅವರ ಮೃತದೇಹವನ್ನು ಪತ್ತೆಹಚ್ಚಲು ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ ಬೆಳಗ್ಗಿನ ಜಾವ 6.30-7 ಗಂಟೆ ಸುಮಾರಿಗೆ ನಿತ್ಯ ಮೀನುಗಾರಿಕೆಗೆ ತೆರಳಿದಾಗ ನಗರದ ಹೊಯಿಗೆ ಬಜಾರ್ ನಲ್ಲಿರುವ ಐಸ್ ಫ್ಲ್ಯಾಂಟ್ ಬಳಿ ಮೃತದೇಹ ನಮಗೆ ಕಾಣಸಿಕ್ಕಿದೆ ಎಂದು ಮೃತದೇಹವನ್ನು ಪತ್ತೆಹಚ್ಚಿದ ರಿತೇಶ್ ಹೇಳಿದ್ದಾರೆ.

ತಕ್ಷಣ ನಾವು ಮೂವರು ಈ ಮೃತದೇಹವನ್ನು ನದಿ ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಈ ಸಂದರ್ಭ ಪೊಲೀಸ್ ಅಧಿಕಾರಿಗಳು ಹಾಗೂ ಮಾಜಿ ಸಚಿವ ಯು.ಟಿ. ಖಾದರ್ ಬಂದು ಮೃತದೇಹದ ಗುರುತು ಪತ್ತೆಹಚ್ಚಿದರು ಎಂದು ಹೇಳಿದರು.


Body:ಒಂದು ದಿನಗಳ ಕಾಲ ಮೃತದೇಹ ನದಿಯಲ್ಲಿದ್ದುದರಿಂದ ನದಿಯಲ್ಲಿ ತೇಲುತ್ತಿತ್ತು. ಯಾರಾದರೂ ನೀರಿಗೆ ಬಿದ್ದರೆ 18-24 ಗಂಟೆಯೊಳಗೆ ಮೃತದೇಹವು ಊದಿಕೊಳ್ಳುತ್ತದೆ. ಇದರೆ ಇವರ ಮೃತದೇಹ ಅಷ್ಟೇನು ಊದಿಕೊಂಡಿಲ್ಲ. ಮುಖಪರಿಚಯ ಸಿಗುತ್ತಿತ್ತು. ಮೃತದೇಹ ದೊರಕುವಾಗ ಮೈಯ್ಯಲ್ಲಿ ಬಟ್ಟೆ ಇರಲಿಲ್ಲ. ಕೇವಲ ಪ್ಯಾಂಟ್, ಶೂ ಹಾಗೂ ಕೈಯ್ಯಲ್ಲೊಂದು ವಾಚು, ಉಂಗುರ ಇತ್ತು. ಮೇಲಿನಿಂದ ಬಿದ್ದ ಪರಿಣಾಮದಿಂದ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ಅದು ಬಿಟ್ಟರೆ ಮೃತದೇಹದಲ್ಲಿ ಯಾವುದೇ ದೊಡ್ಡ ಪ್ರಮಾಣದ ಗಾಯಗಳಾಗಿರಲಿಲ್ಲ ಎಂದು ಮೀನುಗಾರ ರಿತೇಶ್ ಹೇಳಿದರು.

Reporter_Vishwanath Panjimogaru


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.