ETV Bharat / state

ಅಣ್ಣಾಮಲೈ ತಂಡದಿಂದ ಭರ್ಜರಿ ಕಾರ್ಯಾಚರಣೆ... 22 ಆರೋಪಿಗಳು ಅರೆಸ್ಟ್​​

ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳ ಕಾರ್ಯಾಚರಣೆಯಿಂದಾಗಿ 64 ಪ್ರಕರಣಗಳು ಪತ್ತೆಯಾಗಿದ್ದು, 61 ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳ ಜೊತೆ 22 ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ.

ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರು
author img

By

Published : Mar 22, 2019, 5:50 PM IST

ಬೆಂಗಳೂರು: ಸ್ಕೂಟರ್‌ಗಳು, ಕಾರುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್​ನ್ನು ನಗರದಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ಕೆಲವರು ಸಿಕ್ಕಿಬಿದ್ದಿದ್ದರೆ ಮತ್ತೆ ಇದೇ ಗ್ಯಾಂಗ್​ನ ಉಳಿದ ಕೆಲವರು ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಅವರು, ಚೇತನ್, ಪ್ರವೀಣ್, ಸೈಯದ್, ಸಲೀಮ್, ನವಾಜ್, ನಯಾಜ್ ಸೇರಿ 8 ಮಂದಿ ಇದ್ದ ಈ ಗ್ಯಾಂಗ್​ ವಾಹನ ಕದಿಯೋದ್ರಲ್ಲಿ ಚಾಲಾಕಿಗಳಾಗಿದ್ದಾರೆ. ಇವರು ಕ್ಷಣಮಾತ್ರದಲ್ಲಿ ಬೈಕ್‌ಗಳನ್ನು ಕದ್ದು ಬಳಿಕ ಅವುಗಳನ್ನು ಟೊಮೆಟೊ ಲಾರಿಯಲ್ಲಿ ಸಾಗಿಸುತ್ತಿದ್ದರು ಎಂದು ಮಾಹಿತಿ ನೀಡಿದರು.

ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರು

ಕೊನೆಗೂ ಈ ಗ್ಯಾಂಗ್ ಪತ್ತೆಹಚ್ಚಿದ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು 1 ಸ್ಕಾರ್ಪಿಯೋ, 1 ಆಟೋ, 25 ಬೈಕ್ ಮತ್ತು 1ಕೆಜಿ ಗಾಂಜಾ ಹಾಗೂ 1.5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಗ್ಯಾಂಗ್ ವಾಹನ ಕಳ್ಳತನ ಮಾಡುತ್ತಿರೋದನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇದಲ್ಲದೇ ಪುಟ್ಟೇನಹಳ್ಳಿ ಪೊಲೀಸರು ನಟೋರಿಯಸ್ ಬೈಕ್ ಕಳ್ಳರಾದ ಜಯವರ್ಧನ ಹಾಗೂ ಕಲ್ಯಾಣ್ ಎಂಬುವರನ್ನು ಬಂಧಿಸಿದ್ದಾರೆ. ಇದರ ಜೊತೆ ಹಲವು ಪ್ರಕರಣಗಳು ಸೇರಿ ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳ ಕಾರ್ಯಾಚರಣೆಯಿಂದಾಗಿ 64 ಪ್ರಕರಣಗಳು ಪತ್ತೆಯಾಗಿವೆ. 61 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳ ಜೊತೆ 22 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು: ಸ್ಕೂಟರ್‌ಗಳು, ಕಾರುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್​ನ್ನು ನಗರದಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ಕೆಲವರು ಸಿಕ್ಕಿಬಿದ್ದಿದ್ದರೆ ಮತ್ತೆ ಇದೇ ಗ್ಯಾಂಗ್​ನ ಉಳಿದ ಕೆಲವರು ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಅವರು, ಚೇತನ್, ಪ್ರವೀಣ್, ಸೈಯದ್, ಸಲೀಮ್, ನವಾಜ್, ನಯಾಜ್ ಸೇರಿ 8 ಮಂದಿ ಇದ್ದ ಈ ಗ್ಯಾಂಗ್​ ವಾಹನ ಕದಿಯೋದ್ರಲ್ಲಿ ಚಾಲಾಕಿಗಳಾಗಿದ್ದಾರೆ. ಇವರು ಕ್ಷಣಮಾತ್ರದಲ್ಲಿ ಬೈಕ್‌ಗಳನ್ನು ಕದ್ದು ಬಳಿಕ ಅವುಗಳನ್ನು ಟೊಮೆಟೊ ಲಾರಿಯಲ್ಲಿ ಸಾಗಿಸುತ್ತಿದ್ದರು ಎಂದು ಮಾಹಿತಿ ನೀಡಿದರು.

ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರು

ಕೊನೆಗೂ ಈ ಗ್ಯಾಂಗ್ ಪತ್ತೆಹಚ್ಚಿದ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು 1 ಸ್ಕಾರ್ಪಿಯೋ, 1 ಆಟೋ, 25 ಬೈಕ್ ಮತ್ತು 1ಕೆಜಿ ಗಾಂಜಾ ಹಾಗೂ 1.5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಗ್ಯಾಂಗ್ ವಾಹನ ಕಳ್ಳತನ ಮಾಡುತ್ತಿರೋದನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇದಲ್ಲದೇ ಪುಟ್ಟೇನಹಳ್ಳಿ ಪೊಲೀಸರು ನಟೋರಿಯಸ್ ಬೈಕ್ ಕಳ್ಳರಾದ ಜಯವರ್ಧನ ಹಾಗೂ ಕಲ್ಯಾಣ್ ಎಂಬುವರನ್ನು ಬಂಧಿಸಿದ್ದಾರೆ. ಇದರ ಜೊತೆ ಹಲವು ಪ್ರಕರಣಗಳು ಸೇರಿ ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳ ಕಾರ್ಯಾಚರಣೆಯಿಂದಾಗಿ 64 ಪ್ರಕರಣಗಳು ಪತ್ತೆಯಾಗಿವೆ. 61 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳ ಜೊತೆ 22 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

KN_BNg_09_22_south pres meet_bhavya_7204498
Bhavya


Mojo visval bandide

ಅಣ್ಣಾಮಲೈ ತಂಡದಿಂದ ಭರ್ಜರಿ ಕಾರ್ಯಚರಣೆ
೬೪ ಪ್ರಕರಣ, ೬೧ ಲಕ್ಷ ರೂಪಾಯಿ ಹಣ ೨೨ ಮಂದಿ ಆರೋಪಿಗಳ ಬಂಧನ

ಈ ಗ್ಯಾಂಗ್ ಅಂತಿಂಥಾ ಗ್ಯಾಂಗ್ ಅಲ್ಲ..ವಾಹನ ಕದಿಯೋದ್ರಲ್ಲಿ ಎಕ್ಸ್ಪರ್ಟ್..ಸದ್ಯ ಕದ್ದ ವಾಹನಗಳನ್ನ ಟಮೋಟೊ ಲಾರಿಯಲ್ಲಿ ಸಾಗಿಸುತ್ತಿತ್ತು.ಆದ್ರೆ ಗ್ರಹಚಾರ ಕೆಟ್ಟು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ರ ಕೈಗೆ ಸಿಕ್ಕಿ ಬಿದ್ದಿದೆ.ಇದ್ರ ಜೊತೆ ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರ ಕೈಗೆ ಇನ್ನೊಂದಷ್ಟು ಕಳ್ಳರು ಸಿಕ್ಕಿ ಬಿದಿದ್ದಾರೆ.. ಸ್ಕೂಟರ್‌ಗಳು..ಕಾರುಗಳು..ವಿವಿಧ ವಸ್ತುಗಳನ್ನ ಕಳ್ಳತನ ಮಾಡ್ರಿದ್ದ ಆರೋಪಿಗಳನ್ನ ಅಣ್ಣಾಮಲೈ ಟೀಂ ಅಂದರ್ ಮಾಡಿದ್ದಾರೆ..

ಅಂದ ಹಾಗೇ ಬೆಂಗಳೂರು ನಗರ ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳ ಪೊಲೀಸ್ನೋರು ನಡೆಸಿದ ಕಾರ್ಯಚರಣೆ ಬಗ್ಗೆ ಇವತ್ತು ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಮಾಹಿತಿ ನೀಡಿದ್ರು..

ಈ ಗ್ಯಾಂಗ್ ಅಂತಿಂಥಾ ಗ್ಯಾಂಗ್ ಅಲ್ಲ..ವಾಹನ ಕದಿಯೋದ್ರಲ್ಲಿ ಮಾತ್ರ ಎಕ್ಸ್ಪರ್ಟ್..ಚೇತನ್,  ಪ್ರವೀಣ್ , ಸೈಯದ್, ಸಲೀಮ್ ,ನವಾಜ್, ನಯಾಜ್  ಸೇರಿ ೮ ಮಂದಿ ಇದ್ದ ಈ ಗ್ಯಾಂಗ್ ಕ್ಷಣ ಮಾತ್ರದಲ್ಲಿ ಬೈಕ್‌ಗಳನ್ನು ಕದ್ದಿಯೋದು ಬಳಿಕ ಅವುಗಳನ್ನ ಟಮೋಟೊ ಲಾರಿಯಲ್ಲಿ ಸಾಗಿಸೋ ಕೆಲಸ ಮಾಡ್ತಾ ಇತ್ತು.ಅದ್ರೆ ಈ ಗ್ಯಾಂಗ್‌ನ ಗ್ರಹಚಾರ ಕೆಟ್ಟಿತ್ತು ಅನ್ನಿಸುತ್ತೆ..ಕೊನೆಗೂ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ರ ಕೈಗೆ ಸಿಕ್ಕಿ ಬಿದ್ದಿದೆ.‌  ಈ ಗ್ಯಾಂಗ್‌ನಿಂದ ಕುಮಾರಸ್ವಾಮಿ ಲೇಔಟ್ ಪೊಲೀಸ್ನೋರು ಒಂದು ಸ್ಕಾರ್ಪಿಯೋ,ಒಂದು ಆಟೋ,೨೫ ಬೈಕ್ ಮತ್ತು ೧.ಕೆ.ಜಿ. ಗಾಂಜಾ, ಒಂದು ವರೆ ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.
ಹಾಗೇ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಗ್ಯಾಂಗ್ ವಾಹನ ಕಳ್ಳತನ ಮಾಡುತ್ತಿರೋದನ್ನ ಕುಮಾರಸ್ವಾಮಿ ಲೇಔಟ್ ಪೊಲೀಸ್ರು ಪತ್ತೆ ಹಚ್ಚಿದ್ದಾರೆ.

ಇದಲ್ಲದೆ, ಪುಟ್ಟೇನಹಳ್ಳಿ ಪೊಲೀಸ್ನೋರು ನಟೋರಿಯಸ್ ಬೈಕ್ ಕಳ್ಳರನ್ನ ಕಂಬಿ ಹಿಂದೆ ತಳ್ಳಿದ್ದಾರೆ.ಅಂದ ಹಾಗೇ ಜಯವರ್ಧನ, ಹಾಗೂ ಕಲ್ಯಾಣ ಅನ್ನೋ ಈ ಖದೀಮರು ಮಜಾ ಮಾಡಲು ಬೈಕ್ ಕಳ್ಳತನ ಮಾಡ್ತಿದ್ರು..ಅಲ್ದೆ.. ದಿನಕ್ಕೊಂದು ಏರಿಯಾದಲ್ಲಿ ಕದ್ದ ಬೈಕ್‌ನಲ್ಲಿ ಈ ಕಳ್ಳರು ಶೋಕಿ ಮಾಡ್ತಿದ್ರು..

ಒಟ್ಟು  ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳ ಕಾರ್ಯಚರಣೆಯಿಂದಾಗಿ ಒಟ್ಟು ೬೪ ಪ್ರಕರಣಗಳು ಪತ್ತೆಯಾಗಿದ್ದು, ೬೧ ಲಕ್ಷ ರೂಪಾಯಿ ಬೆಲೆ ಬಾಳೋ ವಸ್ತುಗಳ ಜೊತೆ ೨೨ ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ.ಜೊತೆಗೆ ಕೆ.ಎಸ್.ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ೧ ಸ್ಕಾರ್ಫಿಯೋ ಕಾರ್,ಆಟೋ,೨೫ ದ್ವಿಚಕ್ರ ವಾಹನಗಳು ೧,೫೨ ಸಾವಿರ ನಗದು,೧ ಕೆಜಿ ಗಾಂಜಾ,ಪುಟ್ಟೆನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೧೫ ದ್ವಿಚಕ್ರ ವಾಹನಗಳು,ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೫೦೦ಗ್ರಾಂ ಚಿನ್ನ ,೫ ಕೆಜಿ ಬೆಳ್ಳಿ,೧೨ ದ್ವಿ-ಚಕ್ರ ವಾಹನ ಡಿ.ಜೆ ವಸ್ತುಗಳು,ಕಂಪ್ಯೂಟರ್,೩೦.೨೫ ಲಕ್ಷ ನಗದು,ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೫ ದ್ವಿಚಕ್ರ ವಾಹನಗಳು ಹಾಗೂ ಸುಬ್ರಮಣ್ಯಪುರ ಪೋಲಿಸ್ ಠಾಣೆವ್ಯಾಪ್ತಿಯಲ್ಲಿ೪ ದ್ವಿಚಕ್ರ ವಾಹನ,
೫೦೦ ಗ್ರಾಂ ಚಿನ್ನ, ೫ಕೆಜಿ ಬೆಳ್ಳಿ ೧ ಕಾರ್, ೧ಆಟೋ,೪೮ ದ್ವಿಚಕ್ರ ವಾಹನ, ೧.೯೨ ಸಾವಿರ ನಗದು, ೧ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆಒಟ್ನಲ್ಲಿ ಬೆಂಗಳೂರು ನಗರ ದಕ್ಷಿಣ ವಿಭಾಗದ ಪೊಲೀಸ್ರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿಕಟ್ಟಿ ಜೈಲಿಗೆ ಬಿಟ್ಟು ಬಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.