ETV Bharat / state

ಬೆಂಗಳೂರಲ್ಲಿ ಬೀದಿ ನಾಯಿಗಳ ದಾಳಿ: ಬಾಲಕ ಸಾವು - undefined

ಬೆಂಗಳೂರಿನ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ನಾಯಿಗಳ ದಾಳಿಯಿಂದ ಬಾಲಕ ಮೃತಪಟ್ಟಿದ್ದಾನೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕಲಬುರಗಿ ಮೂಲದವರಾದ ಮಲ್ಲಪ್ಪ ಎಂಬ ದಂಪತಿಯ ಐದು ವರ್ಷದ ಮಗ ದುರ್ಗೇಶ್​ ಮೃತ ದುರ್ದೈವಿ.

ಮೃತ ಬಾಲಕ ದುರ್ಗೇಶ್
author img

By

Published : Jun 25, 2019, 7:15 PM IST

ಬೆಂಗಳೂರು: ಬೀದಿ ನಾಯಿಗಳ ದಾಳಿಯಿಂದ ಸ್ಥಳದಲ್ಲಿಯೇ ಬಾಲಕ ಅಸುನೀಗಿರುವ ಘಟನೆ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.

bgl
ಮೃತ ಬಾಲಕ ದುರ್ಗೇಶ್

ಇಲ್ಲಿನ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಮಲ್ಲಪ್ಪ ಎಂಬ ದಂಪತಿ ಮಗ ದುರ್ಗೇಶ್ (5) ನಾಯಿ ದಾಳಿಯಿಂದ ಮೃತಪಟ್ಟಿದ್ದಾನೆ.

ಹತ್ತಿರದ ಆಚಾರ್ಯ ಕಾಲೇಜು ಹಿಂಭಾಗದಲ್ಲಿ ಮಲ್ಲಪ್ಪ ದಂಪತಿ ಕೂಲಿ ಕೆಲಸ ಮಾಡುತ್ತಿದ್ದರು. ಬಾಲಕ ಹತ್ತಿರದ ಸ್ಥಳದಲ್ಲಿ ಆಟವಾಡುತ್ತಿದ್ದಾಗ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಸುಮಾರು 8-10 ಬೀದಿ ನಾಯಿಗಳು ದಾಳಿ ಮಾಡಿವೆ. ಇದರಿಂದ ತೀವ್ರ ಗಾಯಗಳಾಗಿದ್ದು, ಬಾಲಕ ಮೃತಪಟ್ಟಿದ್ದಾನೆ.

ಮಲ್ಲಪ್ಪ ಪೋಷಕರು ಕಲಬುರಗಿ ಮೂಲದವರೆಂದು ತಿಳಿದು ಬಂದಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಪ್ತಗಿರಿ ಆಸ್ಪತ್ರೆಗೆ‌ ಕೊಂಡೊಯ್ಯಲಾಗಿದೆ‌. ಸೋಲದೇವನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರು: ಬೀದಿ ನಾಯಿಗಳ ದಾಳಿಯಿಂದ ಸ್ಥಳದಲ್ಲಿಯೇ ಬಾಲಕ ಅಸುನೀಗಿರುವ ಘಟನೆ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.

bgl
ಮೃತ ಬಾಲಕ ದುರ್ಗೇಶ್

ಇಲ್ಲಿನ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಮಲ್ಲಪ್ಪ ಎಂಬ ದಂಪತಿ ಮಗ ದುರ್ಗೇಶ್ (5) ನಾಯಿ ದಾಳಿಯಿಂದ ಮೃತಪಟ್ಟಿದ್ದಾನೆ.

ಹತ್ತಿರದ ಆಚಾರ್ಯ ಕಾಲೇಜು ಹಿಂಭಾಗದಲ್ಲಿ ಮಲ್ಲಪ್ಪ ದಂಪತಿ ಕೂಲಿ ಕೆಲಸ ಮಾಡುತ್ತಿದ್ದರು. ಬಾಲಕ ಹತ್ತಿರದ ಸ್ಥಳದಲ್ಲಿ ಆಟವಾಡುತ್ತಿದ್ದಾಗ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಸುಮಾರು 8-10 ಬೀದಿ ನಾಯಿಗಳು ದಾಳಿ ಮಾಡಿವೆ. ಇದರಿಂದ ತೀವ್ರ ಗಾಯಗಳಾಗಿದ್ದು, ಬಾಲಕ ಮೃತಪಟ್ಟಿದ್ದಾನೆ.

ಮಲ್ಲಪ್ಪ ಪೋಷಕರು ಕಲಬುರಗಿ ಮೂಲದವರೆಂದು ತಿಳಿದು ಬಂದಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಪ್ತಗಿರಿ ಆಸ್ಪತ್ರೆಗೆ‌ ಕೊಂಡೊಯ್ಯಲಾಗಿದೆ‌. ಸೋಲದೇವನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Intro:Dogs killed boyBody:ಬೆಂಗಳೂರಿನಲ್ಲಿ ನಾಯಿ ಕಚ್ಚಿ ಬಾಲಕ ಸಾವನ್ನಪ್ಪಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

೫ ವರ್ಷದ ದುರ್ಗೇಶ್ ಮೃತ ಬಾಲಕ.ಮಧ್ಯಾಹ್ನ ೨ರ ವೇಳೆ‌ ಆಟ ಆಡುತ್ತಿರುವ ಸಂದರ್ಭದಲ್ಲಿ ನಾಯಿಗಳು ದಾಳಿ ಮಾಡಿವೆ ,ಆಚಾರ್ಯ ಕಾಲೇಜ್‌ನ ಹಿಂಭಾಗದಲ್ಲಿ ಪೋಷಕರು ಕೂಲಿ ಕೆಲಸ ಮಾಡುತ್ತಿದ್ದರು,ಈ ವೇಳೆ ೮ರಿಂದ ೧೦ ನಾಯಿಗಳು ಬಾಲಕನ ಮೇಲೆ ಎರಗಿದ ಕಾರಣ ಬಾಲಕ ಸ್ಥಳದಲ್ಲೇ‌ ಮೃತನಾಗಿದ್ದಾನೆ

ಮೃತ ಬಾಲಕ ದುರ್ಗೇಶ್ ಮಲ್ಲಪ್ಪ ಎಂಬ ದಂಪತಿಗಳ ಮಗ.ತಾಯಿಯೊಂದಿಗೆ
ಕೆಲಸದ ಬಳಿ ಹೋದಾಗ ನಡೆದಿದೆ,ಬಿಲ್ಡಿಂಗ್ ಕನ್ಸ್ ಟ್ರಕ್ಷನ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದುರ್ಗೇಶ್ ತಾಯಿ.ಮಲ್ಲಪ್ಪ ಹಾಗೂ ಕುಟುಂಬ ಗುಲ್ಬರ್ಗ ಮೂಲದವರು ಎಂದು ತಿಳಿದು ಬಂದಿದೆ ಸದ್ಯ
ಮರಣೋತ್ತರ ಪರೀಕ್ಷೆಗಾಗಿ ಸಪ್ತಗಿರಿ ಆಸ್ಪತ್ರೆಗೆ‌ ಬಾಲಕನ ಶವ ಕೊಂಡೊಯ್ಯಲಾಗಿದೆ‌.Conclusion:Only photos attached

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.