ETV Bharat / state

ಪಕ್ಷದ ಬಗ್ಗೆ ಸತ್ಯ ಹೇಳಿದ್ರೆ ಅಪರಾಧವಾಗುತ್ತಾ?: ರೋಷನ್ ಬೇಗ್ ಅಸಮಾಧಾನ

ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ರೋಷನ್ ಬೇಗ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

author img

By

Published : Jun 19, 2019, 12:11 PM IST

ಹಿರಿಯರ ಜತೆ ಚರ್ಚಿಸಿ ಮುಂದಿನ ನಿರ್ಧಾರ

ಬೆಂಗಳೂರು: ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ. ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿದರು.

ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನನ್ನು ಪಕ್ಷದಿಂದ ಅಮಾನತು ಮಾಡಿರುವ ಬಗೆಗಿನ ಆದೇಶ ಕಳೆದ ರಾತ್ರಿ ಕೈ ಸೇರಿದೆ. ಪಕ್ಷದ ಅಭಿಪ್ರಾಯ ಹಾಗು ಜನ ಏನು ಹೇಳುತ್ತಿದ್ದಾರೋ ಅದನ್ನು ನಾನು ಹೇಳಿದ್ದೇನೆ ಅಷ್ಟೇ. ಹಾಗಂತ ಸತ್ಯ ಹೇಳಿದರೆ ಅಪರಾಧವಾಗುತ್ತಾ? ನಾನು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಈವರೆಗೂ ಏನೂ ಹೇಳಲಿಲ್ಲ ಎಂದರು.

ಪಕ್ಷದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ ಹಾಗೂ ಎಚ್.ಕೆ. ಪಾಟೀಲ್ ಅವರೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ದಿಲ್ಲಿಗೆ ತೆರಳಬೇಕೇ, ಬೇಡವೇ ಎಂಬ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಕೋಲಾರದಲ್ಲಿ ಮುನಿಯಪ್ಪ ವಿರುದ್ಧ ನೇರ ಹೇಳಿಕೆ ನೀಡುವವರಿಗೆ, ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ನೀಡಿದವರ ಬಗ್ಗೆ ಯಾರೂ ಮಾತಾಡುವುದು ಬೇಡವೇ? ಎಂದು ಸಿದ್ದರಾಮಯ್ಯ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಹಿರಿಯರ ಜತೆ ಚರ್ಚಿಸಿ ಮುಂದಿನ ನಿರ್ಧಾರ- ರೋಷನ್ ಬೇಗ್

ತುಮಕೂರಿನಲ್ಲಿ ಸಂಸದರಾಗಿದ್ದ ಮುದ್ದಹನುಮೇಗೌಡರಿಗೆ ಮೋಸ ಮಾಡಿಬಲಿ‌ಕೊಟ್ಟಿರಿ. ಇದು ಯಾವ ನ್ಯಾಯ? ನಾನು ಪಕ್ಷದಲ್ಲೇ ಇರುತ್ತೇನೆ. ಎಲ್ಲೂ ಹೋಗಲ್ಲ. ಪಕ್ಷದಲ್ಲಿ ಸತ್ಯ ಹೇಳಿದರೆ ಅಪರಾಧವಾಗುತ್ತದೆ. ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ದನಿಯಾಗಿದ್ದು ತಪ್ಪಾ? ಈ ಬಗ್ಗೆ ರಾಹುಲ್ ಗಾಂಧಿ ವಿವರಿಸುವುದಾಗಿ ಅವರು ಇದೇ ವೇಳೆ ಹೇಳಿದ್ರು.

ಬೆಂಗಳೂರು: ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ. ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿದರು.

ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನನ್ನು ಪಕ್ಷದಿಂದ ಅಮಾನತು ಮಾಡಿರುವ ಬಗೆಗಿನ ಆದೇಶ ಕಳೆದ ರಾತ್ರಿ ಕೈ ಸೇರಿದೆ. ಪಕ್ಷದ ಅಭಿಪ್ರಾಯ ಹಾಗು ಜನ ಏನು ಹೇಳುತ್ತಿದ್ದಾರೋ ಅದನ್ನು ನಾನು ಹೇಳಿದ್ದೇನೆ ಅಷ್ಟೇ. ಹಾಗಂತ ಸತ್ಯ ಹೇಳಿದರೆ ಅಪರಾಧವಾಗುತ್ತಾ? ನಾನು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಈವರೆಗೂ ಏನೂ ಹೇಳಲಿಲ್ಲ ಎಂದರು.

ಪಕ್ಷದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ ಹಾಗೂ ಎಚ್.ಕೆ. ಪಾಟೀಲ್ ಅವರೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ದಿಲ್ಲಿಗೆ ತೆರಳಬೇಕೇ, ಬೇಡವೇ ಎಂಬ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಕೋಲಾರದಲ್ಲಿ ಮುನಿಯಪ್ಪ ವಿರುದ್ಧ ನೇರ ಹೇಳಿಕೆ ನೀಡುವವರಿಗೆ, ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ನೀಡಿದವರ ಬಗ್ಗೆ ಯಾರೂ ಮಾತಾಡುವುದು ಬೇಡವೇ? ಎಂದು ಸಿದ್ದರಾಮಯ್ಯ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಹಿರಿಯರ ಜತೆ ಚರ್ಚಿಸಿ ಮುಂದಿನ ನಿರ್ಧಾರ- ರೋಷನ್ ಬೇಗ್

ತುಮಕೂರಿನಲ್ಲಿ ಸಂಸದರಾಗಿದ್ದ ಮುದ್ದಹನುಮೇಗೌಡರಿಗೆ ಮೋಸ ಮಾಡಿಬಲಿ‌ಕೊಟ್ಟಿರಿ. ಇದು ಯಾವ ನ್ಯಾಯ? ನಾನು ಪಕ್ಷದಲ್ಲೇ ಇರುತ್ತೇನೆ. ಎಲ್ಲೂ ಹೋಗಲ್ಲ. ಪಕ್ಷದಲ್ಲಿ ಸತ್ಯ ಹೇಳಿದರೆ ಅಪರಾಧವಾಗುತ್ತದೆ. ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ದನಿಯಾಗಿದ್ದು ತಪ್ಪಾ? ಈ ಬಗ್ಗೆ ರಾಹುಲ್ ಗಾಂಧಿ ವಿವರಿಸುವುದಾಗಿ ಅವರು ಇದೇ ವೇಳೆ ಹೇಳಿದ್ರು.

Intro:ಹಿರಿಯರ ಜತೆ ಚರ್ಚಿಸಿ ಮುಂದಿನ ನಿರ್ಧಾರ: ರೋಷನ್ ಬೇಗ್

ಬೆಂಗಳೂರು: ಪಕ್ಷದ ಶಿಸ್ತಿನ ಸಿಪಾಯಿ ನಾನು, ಕಾಂಗ್ರೆಸ್ ಹಿರಿಯ ನಾಯಕರ ಜತೆ ಚರ್ಚಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.
ಬೆಂಗಳೂರಿನ ಫ್ರೇಜರ್ಟೌನ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ಪಕ್ಷದ ಬಗ್ಗೆ ಮಾತಾಡುತ್ತೇನೆ. ನಿನ್ನೆ ರಾತ್ರಿ ಅಮಾನತು ಮಾಡಿದ ಆದೇಶ ಕೈಸೇರಿದೆ. ಪಕ್ಷದ ಅಭಿಪ್ರಾಯ ಜನ ಏನು ಹೇಳುತ್ತಿದ್ದಾರೋ ಅದನ್ನು ನಾನು ಹೇಳಿದ್ದೇನೆ. ಸತ್ಯ ಹೇಳಿದರೆ ಅಪರಾಧವಾ? ರಾಹುಲ್ ಬಗ್ಗೆ ಇಂದಿನ, ಈಗಿನವರೆಗೂ ನಾನೊಬ್ಬ ನಿಷ್ಟಾವಂತ ಪಕ್ಷದ ಕಾರ್ಯಕರ್ತ ಎಂದು ಹೇಳಿದರು.
ನಿಜಾಂಶ ಹೇಳಿದ್ದಕ್ಕೆ ಕ್ರಮ ಕೈಗೊಂಡರೆ ಹೇಗೆ? ಪಕ್ಷದಲ್ಲಿ ಹಿರಿಯರಿದ್ದಾರೆ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ರಾಮಲಿಂಗರೆಡ್ಡಿ ಹಾಗೂ ಎಚ್.ಕೆ. ಪಾಟೀಲ್ ಅವರೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ದಿಲ್ಲಿಗೆ ತೆರಳಬೇಕೇ ಬೇಡವೇ ಎಂಬ ನಿರ್ಧಾರ ಕೈಗೊಳ್ಳುತ್ತೇನೆ. ಕೋಲಾರದಲ್ಲಿ ಮುನಿಯಪ್ಪ ವಿರುದ್ಧ ನೇರ ಹೇಳಿಕೆ ನೀಡುವವರಿಗೆ, ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ನೀಡಿದವರಿಗೆ, 36 ಸಾವಿರ ಲೀಡ್ ಚಾಮುಂಡೇಶ್ವರಿ, ಹಾಗೂ 9 ಸಾವಿರ ಬದಾಮಿಯಲ್ಲಿ ಹಿನ್ನಡೆ ಆಗಿದೆ. ಈ ಬಗ್ಗೆ ಯಾರೂ ಮಾತಾಡುವುದು ಬೇಡವೇ? ಎಂದು ಸಿದ್ದರಾಮಯ್ಯ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಪಕ್ಷದ ಸೋಲಿಗೆ ಎಲ್ಲರನ್ನೂ ಕರೆಸಿ ಮಾತಾಡಿ. ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಕೇಳಿ. ನಾನು ಪಕ್ಷದ ಪರವಾಗಿದ್ದೇನೆ. ತಪ್ಪು ಮಾತಾಡಿಲ್ಲ. ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಸಂಸದರಾಗಿದ್ದ ಮುದ್ದ ಹನುಮೇಗೌಡರಿಗೆ ಮೋಸ ಮಾಡಿಬಲಿ‌ಕೊಟ್ಟಿರಿ. ಇದು ಯಾವ ನ್ಯಾಯ? ನಾನು ಪಕ್ಷದಲ್ಲೇ ಇರುತ್ತೇನೆ. ಎಲ್ಲೂ ಹೋಗಲ್ಲ. ಸತ್ಯ ಹೇಳಿದರೆ ಅಪರಾಧ ವಾಗುತ್ತದೆ. ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ದನಿಯಾಗಿದ್ದು ತಪ್ಪಾ? ರಾಹುಲ್ ಗೆ ವಿವರಿಸುತ್ತೇನೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಇಷ್ಟು ಶೋಚನೀಯ ಸ್ಥಿತಿ ತಲುಪಿದ್ದಕ್ಕೆ ಬೇಸರವಾಯಿತು. ಸತ್ಯ ಹೇಳಿದ್ದೇ ಅಪರಾಧವಾದರೆ, ನಾನು ಹೀಗೇ ಇರುತ್ತೇನೆ.
ನಾನು ಕಾರ್ಯಕರ್ತರ ಅಭಿಪ್ರಾಯ ಹೇಳಿದ್ದೇನೆ.
ರಮೇಶ್ ಜಾರಕಿಹೊಳಿ, ತುಮಕೂರಲ್ಲಿ ರಾಜಣ್ಣ, ಕೋಲಾರದಲ್ಲಿ ಮಾತನಾಡಿದ ನಾಯಕರು ನೀರು ಕುಡಿಯುವುದು ಬೇಡವಾ? ನಾನೊಬ್ಬನೇ ನೀರು ಕುಡಿಯಬೇಕಾ? ಎಂದು ಸಿದ್ದರಾಮಯ್ಯಗೆ ಪ್ರಶ್ನೆ ಹಾಕಿದರು.
ರಾಹುಲ್ ಗೆ ಶುಭಾಶಯ
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಹುಟ್ಟು ಹಬ್ಬದ ಶುಭಾಶಯ ಸಲ್ಲಿಸುತ್ತೇನೆ. ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯಲಿ ಎಂದು ಆಶಿಸಿದರು.Body:newsConclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.