ETV Bharat / state

ಅನರ್ಹರು ಅಸಹಾಯಕರು ಎಂದು ಸುಪ್ರಿಂ ತೀರ್ಪು ಸ್ವಾಗತಿಸಿದ ಗುಂಡೂರಾವ್

author img

By

Published : Sep 26, 2019, 8:03 PM IST

ಅವರ ಲಾಯರ್​ ವಾದ ಅಷ್ಟು ಚೆನ್ನಾಗಿದ್ದಿದ್ದರೆ ಸುಪ್ರಿಂ ಇವತ್ತೇ ಅನರ್ಹತೆ ರದ್ದುಗೊಳಿಸುತ್ತಿತ್ತು. ಅವರು ಶಾಸಕರಾಗಿಯೇ ಮುಂದುವರೆಯುತಿದ್ದರು, ಉಪಚುನಾವಣೆಯ ಅವಶ್ಯಕತೆ ಬರುತ್ತಿರಲಿಲ್ಲ. ಆದರೆ, ಸುಪ್ರೀಂಕೋರ್ಟ್​ನ ನ್ಯಾಯಾಧೀಶರಿಗೆ ನಮ್ಮ ಲಾಯರ್​​ ಮಾಡಿರುವ ವಾದ ಮನವರಿಕೆ ಆಗಿದೆ. ಜನರ ಮತಗಳನ್ನು ವ್ಯಾಪಾರಕ್ಕೆ ಬಳಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಸರಿಯಾದ ಶಿಕ್ಷೆಯಾಗುತ್ತೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು : ಸುಪ್ರಿಂ ತೀರ್ಪು ಸ್ವಾಗತ ಮಾಡುತ್ತೇನೆ. ಅನರ್ಹರು, ಅಸಹಾಯಕರು, ಅತೃಪ್ತರು ಶಾಸಕರ ಪರಿಸ್ಥಿತಿ ಅದೇ ಸ್ಥಿತಿಯಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅವರ ಲಾಯರ್​ ವಾದ ಅಷ್ಟು ಚೆನ್ನಾಗಿದ್ದಿದ್ದರೆ ಸುಪ್ರೀಂ ಇವತ್ತೇ ಅನರ್ಹತೆ ರದ್ದುಗೊಳಿಸುತ್ತಿತ್ತು. ಅವರು ಶಾಸಕರಾಗಿಯೇ ಮುಂದುವರೆಯುತ್ತಿದ್ದರು, ಉಪಚುನಾವಣೆಯ ಅವಶ್ಯಕತೆ ಬರುತ್ತಿರಲಿಲ್ಲ. ಆದರೆ, ಸುಪ್ರೀಂಕೋರ್ಟ್​ನ ನ್ಯಾಯಾಧೀಶರಿಗೆ ನಮ್ಮ ಲಾಯರ್​​ ಮಾಡಿರುವ ವಾದ ಮನವರಿಕೆಯಾಗಿದೆ. ಜನರ ಮತಗಳನ್ನು ವ್ಯಾಪಾರಕ್ಕೆ ಬಳಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಸರಿಯಾದ ಶಿಕ್ಷೆಯಾಗುತ್ತೆ.

ಸುಪ್ರೀಂಕೋರ್ಟ್​​ ತೀರ್ಪಿನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

ನಮ್ಮ ವಕೀಲರು ಮತ್ತು ಸ್ಪೀಕರ್ ಆದೇಶದ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದರು. ರಮೇಶ್ ಕುಮಾರ್ ನೀಡಿದ್ದ ತೀರ್ಪು ಕೋರ್ಟ್ ತಡೆಹಿಡಿದಿಲ್ಲ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮುಂದೆ ಬರುವ ತೀರ್ಪು ಇಡೀ ದೇಶಕ್ಕೆ ಮಾದರಿಯಾದ ತೀರ್ಪಾಗಿರುತ್ತದೆ. ರಿಲೀಫ್ ಏನು ಸಿಕ್ಕಿದೆ ಅನರ್ಹರಿಗೆ? ಇನ್ನೂ ಕೂಡ ಅವರು ಅನರ್ಹರೇ, ಅತೃಪ್ತರೇ, ಅಸಹಾಕಯರೇ. ಮುಂದಿನ ತಿಂಗಳ ಆಗಲಿ, ಕಾದು ನೋಡೋಣ, ಇದು ಸಂವಿಧಾನ ಪೀಠಕ್ಕೆ ಹೋಗಬೇಕೋ ಏನೋ ಗೊತ್ತಿಲ್ಲ ಎಂದರು.

ಬೆಂಗಳೂರು : ಸುಪ್ರಿಂ ತೀರ್ಪು ಸ್ವಾಗತ ಮಾಡುತ್ತೇನೆ. ಅನರ್ಹರು, ಅಸಹಾಯಕರು, ಅತೃಪ್ತರು ಶಾಸಕರ ಪರಿಸ್ಥಿತಿ ಅದೇ ಸ್ಥಿತಿಯಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅವರ ಲಾಯರ್​ ವಾದ ಅಷ್ಟು ಚೆನ್ನಾಗಿದ್ದಿದ್ದರೆ ಸುಪ್ರೀಂ ಇವತ್ತೇ ಅನರ್ಹತೆ ರದ್ದುಗೊಳಿಸುತ್ತಿತ್ತು. ಅವರು ಶಾಸಕರಾಗಿಯೇ ಮುಂದುವರೆಯುತ್ತಿದ್ದರು, ಉಪಚುನಾವಣೆಯ ಅವಶ್ಯಕತೆ ಬರುತ್ತಿರಲಿಲ್ಲ. ಆದರೆ, ಸುಪ್ರೀಂಕೋರ್ಟ್​ನ ನ್ಯಾಯಾಧೀಶರಿಗೆ ನಮ್ಮ ಲಾಯರ್​​ ಮಾಡಿರುವ ವಾದ ಮನವರಿಕೆಯಾಗಿದೆ. ಜನರ ಮತಗಳನ್ನು ವ್ಯಾಪಾರಕ್ಕೆ ಬಳಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಸರಿಯಾದ ಶಿಕ್ಷೆಯಾಗುತ್ತೆ.

ಸುಪ್ರೀಂಕೋರ್ಟ್​​ ತೀರ್ಪಿನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

ನಮ್ಮ ವಕೀಲರು ಮತ್ತು ಸ್ಪೀಕರ್ ಆದೇಶದ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದರು. ರಮೇಶ್ ಕುಮಾರ್ ನೀಡಿದ್ದ ತೀರ್ಪು ಕೋರ್ಟ್ ತಡೆಹಿಡಿದಿಲ್ಲ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮುಂದೆ ಬರುವ ತೀರ್ಪು ಇಡೀ ದೇಶಕ್ಕೆ ಮಾದರಿಯಾದ ತೀರ್ಪಾಗಿರುತ್ತದೆ. ರಿಲೀಫ್ ಏನು ಸಿಕ್ಕಿದೆ ಅನರ್ಹರಿಗೆ? ಇನ್ನೂ ಕೂಡ ಅವರು ಅನರ್ಹರೇ, ಅತೃಪ್ತರೇ, ಅಸಹಾಕಯರೇ. ಮುಂದಿನ ತಿಂಗಳ ಆಗಲಿ, ಕಾದು ನೋಡೋಣ, ಇದು ಸಂವಿಧಾನ ಪೀಠಕ್ಕೆ ಹೋಗಬೇಕೋ ಏನೋ ಗೊತ್ತಿಲ್ಲ ಎಂದರು.

Intro:newsBody:ಅನರ್ಹರು, ಅಸಹಾಯಕರು, ಅತೃಪ್ತರು ಶಾಸಕರ ಪರಿಸ್ಥಿತಿ ಅದೇ ಸ್ಥಿತಿಯಲ್ಲಿದೆ, ಸುಪ್ರಿಂ ತೀರ್ಪು ಸ್ವಾಗತ: ದಿನೇಶ್ ಗುಂಡೂರಾವ್

ಬೆಂಗಳೂರು: ಸುಪ್ರಿಂ ತೀರ್ಪು ಸ್ವಾಗತ ಮಾಡ್ತೇನೆ. ಅನರ್ಹರು, ಅಸಹಾಯಕರು, ಅತೃಪ್ತರು ಶಾಸಕರ ಪರಿಸ್ಥಿತಿ ಅದೇ ಸ್ಥಿತಿಯಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಅವಕಾಶ ಕೊಡಿ. ರಾಜೀನಾಮೆ ಅಂಗೀಕಾರ ಮಾಡದೇ ಇರುವುದು ಸರಿಯಲ್ಲ ಅಂತ ಅತೃಪ್ತರು ಹೇಳಿದ್ರು. ನಮ್ಮ ವಾದ ಖಂಡಿತವಾಗಿ ಸುಪ್ರಿಂ ಕೋರ್ಟ್ ಗೆ ಮನವರಿಕೆ ಆಗಿದೆ. ನಮ್ಮ ರಮೇಶ್ ಕುಮಾರ್ ನೀಡಿದ್ದ ತೀರ್ಪನ್ನು ಕೋರ್ಟ್ ತಡೆಹಿಡಿದಿಲ್ಲ. ಯಾರು ಜನರ ಮತಗಳನ್ನು ವ್ಯಾಪಾರಕ್ಕೆ ಬಳಸಿಕೊಂಡಿದ್ದರೋ ಅವರಿಗೆ ಪಾಠ ಕಲಿಸಿದ್ರು. ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಅವಕಾಶ ಕೊಡಬಾರದು ಅಂತ ರಮೇಶ್ ಕುಮಾರ್ ಆದೇಶ ಮಾಡಿದ್ರು ಎಂದು ವಿವರಿಸಿದರು.
ಸುಪ್ರಿಂ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳೋದು ಅನಿವಾರ್ಯ. ಈ ದ್ರೋಹಿಗಳಿದ್ದಾರಲ್ಲ, ರಾಜಕೀಯ ವ್ಯಭಿಚಾರ ಮಾಡುವವರಿಗೆ ಏನೂ ರಿಲೀಫ್ ಸಿಕ್ಕಿಲ್ಲ. ಆ ಖಾತೆ ಸಿಗತ್ತೆ, ಆ ಖಾತೆ ಸಿಗತ್ತೆ ಅಂದುಕೊಂಡವರ ಆಸೆ ಈಡೆರಿಲ್ಲ. ಈಗಿನ ಸ್ಪೀಕರ್ ಅವರ ಲಾಯರ್ ಕೂಡ ಬೇರೆ ರೀತಿ ವಾದ ಮಾಡಿದ್ದಾರೆ. ಬ್ಯಾಟರಿ ಆಫ್ ಲಾಯರ್ಸ್ ಇದ್ದರೂ ಅವರ ವಾದ ಅಷ್ಟು ಚೆನ್ನಾಗಿದ್ದಿದ್ದರೆ ಸುಪ್ರಿಂ ಇವತ್ತೇ ಅನರ್ಹತೆ ರದ್ದುಗೊಳಿಸುತ್ತಿತ್ತು. ನಮ್ಮ ವಕೀಲರು, ಸ್ಪೀಕರ್ ಆದೇಶದ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದಾರೆ. ರಮೇಶ್ ಕುಮಾರ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆ ಬರುವ ತೀರ್ಪು ಇಡೀ ದೇಶಕ್ಕೆ ಮಾದರಿಯಾದ ತೀರ್ಪಾಗಿರುತ್ತದೆ. ರಿಲೀಫ್ ಏನು ಸಿಕ್ಕಿದೆ ಅನರ್ಹರಿಗೆ? ಇನ್ನೂ ಕೂಡ ಅವರು ಅನರ್ಹರೇ, ಅತೃಪ್ತರೇ, ಅಸಹಾಕಯರೇ. ಮುಂದಿನ ತಿಂಗಳ ಆಗಲಿ, ಕಾದು ನೋಡೋಣ, ಇದು ಸಂವಿಧಾನ ಪೀಠಕ್ಕೆ ಹೋಗಬೇಕೋ ಏನೋ ಗೊತ್ತಿಲ್ಲ ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.