ETV Bharat / state

ಸಾರಿಗೆ ಕ್ಷೇತ್ರದ ಎರಡು ಸಮಸ್ಯೆಗಳ ಪರಿಷತ್ತಿಗೆ ಲಿಖಿತ ಉತ್ತರ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ - DCM Laxman Sawadi gave a written reply,

ಸಾರಿಗೆ ಕ್ಷೇತ್ರದ ಎರಡು ಸಮಸ್ಯೆಗಳ ಪರಿಷತ್ತಿಗೆ ಡಿಸಿಎಂ ಲಕ್ಷ್ಮಣ್ ಸವದಿ ಲಿಖಿತ ಉತ್ತರ ನೀಡಿದ್ದಾರೆ.

DCM Laxman Sawadi, DCM Laxman Sawadi gave a written reply, transport problem, transport issue, ಡಿಸಿಎಂ ಲಕ್ಷ್ಮಣ್​ ಸವದಿ, ಡಿಸಿಎಂ ಲಕ್ಷಣ್​ ಸವದಿ ಸುದ್ದಿ, ಪ್ರತಿಭಟನಾಕಾರರಿಗೆ ಲಿಖಿತ ಉತ್ತರ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ,
ಸಾರಿಗೆ ಕ್ಷೇತ್ರದ ಎರಡು ಸಮಸ್ಯೆಗಳ ಪರಿಷತ್ತಿಗೆ ಲಿಖಿತ ಉತ್ತರ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ
author img

By

Published : Mar 6, 2020, 11:57 PM IST

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವಿಶೇಷ ಬೇಡಿಕೆಯ ಸಾಧಕ-ಬಾಧಕಗಳು ಮತ್ತು ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ವಿಚಾರಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಸಾರಿಗೆ ಸಚಿವ/ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ನಿಯಮ-330ಎ ರಡಿಯಲ್ಲಿನ ಗಮನ ಸೆಳೆಯುವ ಸೂಚನೆಗೆ ಲಿಖಿತ ಉತ್ತರ ನೀಡಿರುವ ಅವರು, ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಸ್ತೆ ಸಾರಿಗೆ ನಿಗಮಗಳ ಕಾಯ್ದೆ-1950 ರಡಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳಾಗಿರುತ್ತವೆ. ಇದೇ ಮಾದರಿಯ ಬಹಳಷ್ಟು ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳು ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುತ್ತವೆ. ರಸ್ತೆ ಸಾರಿಗೆ ನಿಗಮಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ ಹಾಗೂ ಇತರೆ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನಿಗಮಗಳು ತಮ್ಮ ಆಂತರಿಕ ಮೂಲಗಳಿಂದಲೇ ಭರಿಸಬೇಕಿದೆ. ರಾಜ್ಯ ರಸ್ತೆ ಸಾರಿಗೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ನಿಗಮಗಳ ನೌಕರರ ಕೆಲವು ಒಕ್ಕೂಟಗಳು ಮತ್ತು ಸಂಘಗಳು ಇತ್ತೀಚಿನ ದಿನಗಳಲ್ಲಿ ಒತ್ತಾಯಿಸುತ್ತಿರುವುದು ಹಾಗೂ ಆ ಕುರಿತು ಸರ್ಕಾರ ಮತ್ತು ಆಡಳಿತ ವರ್ಗದ ಮೇಲೆ ಒತ್ತಡ ತರುವ ಸಲುವಾಗಿ ಶಾಂತಿಯುತ ಚಳುವಳಿ/ಸತ್ಯಾಗ್ರಹಗಳನ್ನು ಆಯೋಜಿಸಿರುವುದು ನಿಜ ಎಂದು ಹೇಳಿದ್ದಾರೆ.

ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 4 ನಿಗಮಗಳ ನೌಕರರುಗಳು ತಮ್ಮ ಬಹುದಿನಗಳ ಬೇಡಿಕೆಯಾದಂತಹ ತಮ್ಮನ್ನು ರಾಜ್ಯ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಾಡೋಜ ಡಾ. ಪಾಟೀಲ್ ಪುಟ್ಟಪ್ಪರವರ ನೇತೃತ್ವದಲ್ಲಿ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರವೇದಿಕೆ ನೇತೃತ್ವದಲ್ಲಿ ಈ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಲಿಂಗಾಯಿತ ಪಂಚಮಶಾಲಿ ಪೀಠದ ಜಯಮೃತ್ಯಂಜಯ ಸ್ವಾಮೀಜಿರವರು ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ನೌಕರರ ಬೇಡಿಕೆಗೆ ಬೆಂಬಲವನ್ನು ಸೂಚಿಸುತ್ತಾ ನೌಕರರ ಬೇಡಿಕೆಯನ್ನು ಈಡೇರಿಸುವಂತೆ ನಡೆಸುತ್ತಿರುವ ಪ್ರತಿಭಟನೆ ಸರ್ಕಾರದ ಗಮನಕ್ಕೆ ತರುವ ಪ್ರಶ್ನೆಯನ್ನು ಶ್ರೀಕಂಠೇಗೌಡರು ಪ್ರಸ್ತಾಪಿಸಿದ್ದರು.

ಸಾರಿಗೆ ಸಂಸ್ಥೆ ಸಮಸ್ಯೆ..

ಪರಿಷತ್ ಕಾಂಗ್ರೆಸ್ ಸದಸ್ಯ ಡಾ. ಜಯಮಾಲಾ ನಿಯಮ-330ಎ ರಡಿಯಲ್ಲಿನ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿರುವ ಡಿಸಿಎಂ ಲಕ್ಷ್ಮಣ್ ಸವದಿ, ಸಹಕಾರ ಸಾರಿಗೆ ಸಂಸ್ಥೆಯ ವಾಹನಗಳನ್ನು ಕಳೆದ ಫೆ.16 ರಿಂದ ಸ್ಥಗಿತಗೊಳಿಸಿರುವ ಕಾರಣ ಕ.ರಾ.ರ.ಸಾ.ನಿಗಮದ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಮಂಗಳೂರು ವಿಭಾಗಗಳ ವತಿಯಿಂದ ಕೊಪ್ಪದಿಂದ ಶಿವಮೊಗ್ಗ, ತೀರ್ಥಹಳ್ಳಿ, ಮೇಲಾಲ್, ಬಾಳೇಹೊನ್ನೂರು, ಮೂಡಬೂರು, ಮಲ್ಲಂದೂರು, ಕಟ್ಟಿನಮನೆ, ಶೃಂಗೇರಿ-ಕೊಪ್ಪ-ಶಿವಮೊಗ್ಗ, ಉಡುಪಿ-ಶೃಂಗೇರಿ-ಬಾಳೇಹೊನ್ನೂರು, ಉಡುಪಿ-ಶೃಂಗೇರಿ-ಚಿಕ್ಕಮಗಳೂರು, ಉಡುಪಿ-ಕೊಪ್ಪ-ಬಿರೂರು ಮಾರ್ಗಗಳಲ್ಲಿ ಒಟ್ಟು 16 ಬಸ್‌ಗಳಿಂದ 56 ಸುತ್ತುವಳಿಗಳನ್ನು ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಅವಶ್ಯಕತೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

DCM Laxman Sawadi, DCM Laxman Sawadi gave a written reply, transport problem, transport issue, ಡಿಸಿಎಂ ಲಕ್ಷ್ಮಣ್​ ಸವದಿ, ಡಿಸಿಎಂ ಲಕ್ಷಣ್​ ಸವದಿ ಸುದ್ದಿ, ಪ್ರತಿಭಟನಾಕಾರರಿಗೆ ಲಿಖಿತ ಉತ್ತರ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ,
ಸಾರಿಗೆ ಕ್ಷೇತ್ರದ ಎರಡು ಸಮಸ್ಯೆಗಳ ಪರಿಷತ್ತಿಗೆ ಲಿಖಿತ ಉತ್ತರ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ

ಜಯಮಾಲಾ ಕೇಳಿದ ಪ್ರಶ್ನೆ..

ಮಲೆನಾಡು ಭಾಗದ ಜೀವನಾಡಿಯಾಗಿ ಸಾರ್ವಜನಿಕ ಸಂಪರ್ಕ ಕಲ್ಪಿಸಲು ಕಳೆದ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸಹಕಾರ ಸಾರಿಗೆ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದು ಇದರಿಂದಾಗಿ ಮಲೆನಾಡಿನ ಹಾಗೂ ಕರಾವಳಿ ಭಾಗದ ಶಿವಮೊಗ್ಗ ಚಿಕ್ಕಮಗಳೂರು ಮಂಗಳೂರು ಉಡುಪಿ ಮತ್ತು ಕೆಲಭಾಗದಲ್ಲಿರುವ ಗುಡ್ಡಗಾಡು ಪ್ರದೇಶದಿಂದ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಪ್ರಯಾಣಿಸಲು ಅನಾನುಕೂಲವಾಗುತ್ತಿದೆ ಸಂಗತಿಯನ್ನು ಸದನದ ಗಮನಕ್ಕೆ ತಂದಿದ್ದರು.

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವಿಶೇಷ ಬೇಡಿಕೆಯ ಸಾಧಕ-ಬಾಧಕಗಳು ಮತ್ತು ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ವಿಚಾರಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಸಾರಿಗೆ ಸಚಿವ/ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ನಿಯಮ-330ಎ ರಡಿಯಲ್ಲಿನ ಗಮನ ಸೆಳೆಯುವ ಸೂಚನೆಗೆ ಲಿಖಿತ ಉತ್ತರ ನೀಡಿರುವ ಅವರು, ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಸ್ತೆ ಸಾರಿಗೆ ನಿಗಮಗಳ ಕಾಯ್ದೆ-1950 ರಡಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳಾಗಿರುತ್ತವೆ. ಇದೇ ಮಾದರಿಯ ಬಹಳಷ್ಟು ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳು ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುತ್ತವೆ. ರಸ್ತೆ ಸಾರಿಗೆ ನಿಗಮಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ ಹಾಗೂ ಇತರೆ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನಿಗಮಗಳು ತಮ್ಮ ಆಂತರಿಕ ಮೂಲಗಳಿಂದಲೇ ಭರಿಸಬೇಕಿದೆ. ರಾಜ್ಯ ರಸ್ತೆ ಸಾರಿಗೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ನಿಗಮಗಳ ನೌಕರರ ಕೆಲವು ಒಕ್ಕೂಟಗಳು ಮತ್ತು ಸಂಘಗಳು ಇತ್ತೀಚಿನ ದಿನಗಳಲ್ಲಿ ಒತ್ತಾಯಿಸುತ್ತಿರುವುದು ಹಾಗೂ ಆ ಕುರಿತು ಸರ್ಕಾರ ಮತ್ತು ಆಡಳಿತ ವರ್ಗದ ಮೇಲೆ ಒತ್ತಡ ತರುವ ಸಲುವಾಗಿ ಶಾಂತಿಯುತ ಚಳುವಳಿ/ಸತ್ಯಾಗ್ರಹಗಳನ್ನು ಆಯೋಜಿಸಿರುವುದು ನಿಜ ಎಂದು ಹೇಳಿದ್ದಾರೆ.

ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 4 ನಿಗಮಗಳ ನೌಕರರುಗಳು ತಮ್ಮ ಬಹುದಿನಗಳ ಬೇಡಿಕೆಯಾದಂತಹ ತಮ್ಮನ್ನು ರಾಜ್ಯ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಾಡೋಜ ಡಾ. ಪಾಟೀಲ್ ಪುಟ್ಟಪ್ಪರವರ ನೇತೃತ್ವದಲ್ಲಿ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರವೇದಿಕೆ ನೇತೃತ್ವದಲ್ಲಿ ಈ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಲಿಂಗಾಯಿತ ಪಂಚಮಶಾಲಿ ಪೀಠದ ಜಯಮೃತ್ಯಂಜಯ ಸ್ವಾಮೀಜಿರವರು ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ನೌಕರರ ಬೇಡಿಕೆಗೆ ಬೆಂಬಲವನ್ನು ಸೂಚಿಸುತ್ತಾ ನೌಕರರ ಬೇಡಿಕೆಯನ್ನು ಈಡೇರಿಸುವಂತೆ ನಡೆಸುತ್ತಿರುವ ಪ್ರತಿಭಟನೆ ಸರ್ಕಾರದ ಗಮನಕ್ಕೆ ತರುವ ಪ್ರಶ್ನೆಯನ್ನು ಶ್ರೀಕಂಠೇಗೌಡರು ಪ್ರಸ್ತಾಪಿಸಿದ್ದರು.

ಸಾರಿಗೆ ಸಂಸ್ಥೆ ಸಮಸ್ಯೆ..

ಪರಿಷತ್ ಕಾಂಗ್ರೆಸ್ ಸದಸ್ಯ ಡಾ. ಜಯಮಾಲಾ ನಿಯಮ-330ಎ ರಡಿಯಲ್ಲಿನ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿರುವ ಡಿಸಿಎಂ ಲಕ್ಷ್ಮಣ್ ಸವದಿ, ಸಹಕಾರ ಸಾರಿಗೆ ಸಂಸ್ಥೆಯ ವಾಹನಗಳನ್ನು ಕಳೆದ ಫೆ.16 ರಿಂದ ಸ್ಥಗಿತಗೊಳಿಸಿರುವ ಕಾರಣ ಕ.ರಾ.ರ.ಸಾ.ನಿಗಮದ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಮಂಗಳೂರು ವಿಭಾಗಗಳ ವತಿಯಿಂದ ಕೊಪ್ಪದಿಂದ ಶಿವಮೊಗ್ಗ, ತೀರ್ಥಹಳ್ಳಿ, ಮೇಲಾಲ್, ಬಾಳೇಹೊನ್ನೂರು, ಮೂಡಬೂರು, ಮಲ್ಲಂದೂರು, ಕಟ್ಟಿನಮನೆ, ಶೃಂಗೇರಿ-ಕೊಪ್ಪ-ಶಿವಮೊಗ್ಗ, ಉಡುಪಿ-ಶೃಂಗೇರಿ-ಬಾಳೇಹೊನ್ನೂರು, ಉಡುಪಿ-ಶೃಂಗೇರಿ-ಚಿಕ್ಕಮಗಳೂರು, ಉಡುಪಿ-ಕೊಪ್ಪ-ಬಿರೂರು ಮಾರ್ಗಗಳಲ್ಲಿ ಒಟ್ಟು 16 ಬಸ್‌ಗಳಿಂದ 56 ಸುತ್ತುವಳಿಗಳನ್ನು ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಅವಶ್ಯಕತೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

DCM Laxman Sawadi, DCM Laxman Sawadi gave a written reply, transport problem, transport issue, ಡಿಸಿಎಂ ಲಕ್ಷ್ಮಣ್​ ಸವದಿ, ಡಿಸಿಎಂ ಲಕ್ಷಣ್​ ಸವದಿ ಸುದ್ದಿ, ಪ್ರತಿಭಟನಾಕಾರರಿಗೆ ಲಿಖಿತ ಉತ್ತರ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ,
ಸಾರಿಗೆ ಕ್ಷೇತ್ರದ ಎರಡು ಸಮಸ್ಯೆಗಳ ಪರಿಷತ್ತಿಗೆ ಲಿಖಿತ ಉತ್ತರ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ

ಜಯಮಾಲಾ ಕೇಳಿದ ಪ್ರಶ್ನೆ..

ಮಲೆನಾಡು ಭಾಗದ ಜೀವನಾಡಿಯಾಗಿ ಸಾರ್ವಜನಿಕ ಸಂಪರ್ಕ ಕಲ್ಪಿಸಲು ಕಳೆದ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸಹಕಾರ ಸಾರಿಗೆ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದು ಇದರಿಂದಾಗಿ ಮಲೆನಾಡಿನ ಹಾಗೂ ಕರಾವಳಿ ಭಾಗದ ಶಿವಮೊಗ್ಗ ಚಿಕ್ಕಮಗಳೂರು ಮಂಗಳೂರು ಉಡುಪಿ ಮತ್ತು ಕೆಲಭಾಗದಲ್ಲಿರುವ ಗುಡ್ಡಗಾಡು ಪ್ರದೇಶದಿಂದ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಪ್ರಯಾಣಿಸಲು ಅನಾನುಕೂಲವಾಗುತ್ತಿದೆ ಸಂಗತಿಯನ್ನು ಸದನದ ಗಮನಕ್ಕೆ ತಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.