ETV Bharat / state

ರೈಲನ್ನೇ ನಂಬಿಕೊಂಡು ಹಳಿತಪ್ಪಿದ ಕೂಲಿಕಾರ್ಮಿಕರ ಬದುಕು!

author img

By

Published : Sep 6, 2020, 4:35 PM IST

ಕೊರೊನಾ ಲಾಕ್​​ಡೌನ್​ನಿಂದ ಭಾರತೀಯ ರೈಲ್ವೆ ಸೇವೆಗಳು ಇದೇ ಮೊದಲ ಬಾರಿಗೆ ಸ್ಥಗಿತಗೊಂಡಿದ್ದವು. ಆರು ತಿಂಗಳಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ರೈಲ್ವೆ ಪ್ರಯಾಣಿಕರನ್ನೇ ನಂಬಿ ಜೀವನ ಸಾಗಿಸುತ್ತಿದ್ದ, ಕೂಲಿಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಹಮಾಲಿ ಕಾರ್ಮಿಕರು, ಟೀ ಮಾರುವವರ ಬದುಕು ಇದೀಗ ಹಳಿ ತಪ್ಪಿದಂತಾಗಿದೆ.

ಭಾರತೀಯ ರೈಲ್ವೆ ಸೇವೆ ಸ್ಥಗಿತ
ಭಾರತೀಯ ರೈಲ್ವೆ ಸೇವೆ ಸ್ಥಗಿತ

ಬೆಂಗಳೂರು: ದೇಶದ ಅನೇಕ ನಗರ, ಪಟ್ಟಣಗಳನ್ನು ತಲುಪುವ ಭಾರತೀಯ ರೈಲ್ವೆ ಸೇವೆ, ಇದೇ ಮೊದಲ ಬಾರಿಗೆ ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿತ್ತು. ಮಾರ್ಚ್​ನಲ್ಲಿ ಸ್ಥಗಿತವಾದ ಪ್ರಯಾಣಿಕ ರೈಲ್ವೆ ಸೇವೆಗಳು ಆರು ತಿಂಗಳಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ವಿಶೇಷ ರೈಲುಗಳು, ವಲಸೆ ಕಾರ್ಮಿಕರನ್ನು ಊರುಗಳಿಗೆ ತಲುಪಿಸುವ ಶ್ರಮಿಕ ರೈಲುಗಳ ಓಡಾಟ ಮಾತ್ರ ನಡೆಯುತ್ತಿದೆ.

ಇದರಿಂದ ರೈಲ್ವೆ ಪ್ರಯಾಣಿಕರನ್ನೇ ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದ ರಾಜ್ಯದ ಸಾವಿರಾರು ಕೂಲಿಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಹಮಾಲಿ ಕಾರ್ಮಿಕರು, ಟೀ ಮಾರುವವರ ಬದುಕು ಹಳಿ ತಪ್ಪಿದಂತಾಗಿದೆ. ಪ್ರತಿನಿತ್ಯ ಓಡಾಡುವ ಪ್ರಯಾಣಿಕರ ಭಾರವಾದ ಲಗೇಜು, ಇತರ ಸರಕು ಹೊರಲೆಂದೇ ಕೆಂಪು ಶರ್ಟ್ ಧರಿಸಿ ಹಮಾಲಿ ಮಾಡುತ್ತಿದ್ದ ಕಾರ್ಮಿಕರಿಗೆ ಈಗ ಕೆಲಸ ವಿಲ್ಲದಂತಾಗಿದೆ. ಇತರರ ಭಾರ ಹೊತ್ತು ತಮ್ಮ ಜೀವನದ ಬಂಡಿ ಸಾಗಿಸುತ್ತಿರುತ್ತಾರೆ. ಆದರೆ ಏಕಾಏಕಿ ಬಂದ ಕೊರೊನಾ ಇವರ ಜೀವನದ ದಿಕ್ಕನ್ನೇ ಬದಲಿಸಿದೆ. ಕೆಲಸವಿಲ್ಲದ ಕಾರಣ ಒಂದು ಹೊತ್ತು ಊಟದ ಸಂಪಾದನೆಯೂ ಆಗದೆ, ಬಿಸ್ಕೇಟ್​, ನೀರು ಕುಡಿದು ಜೀವನ ಸಾಗಿಸುವಂತಾಗಿದೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಯಶವಂತಪುರ ರೈಲ್ವೆ ನಿಲ್ದಾಣದ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, 12 ವರ್ಷದಿಂದ ಹಮಾಲಿಯಾಗಿ ದುಡಿಯುತ್ತಿದ್ದೇನೆ. ರೈಲ್ವೆ ಇಲಾಖೆಯ ಅಧಿಕಾರಿಗಳೇ ಒಂದೆರಡು ಬಾರಿ ರೇಷನ್ ಕಿಟ್ ಕೊಟ್ಟು ಸಹಾಯ ಮಾಡಿದ್ರು. ಲಾಕ್​ಡೌನ್ ನಂತರ ಕೇವಲ ಒಂದೇ ಒಂದು ಟ್ರೈನ್ ಬಿಟ್ಟಿದ್ದರು. ಕಲ್ಕತ್ತಾ, ದೆಹಲಿ, ಶಿವಮೊಗ್ಗ ಎಕ್ಸ್‌ಪ್ರೆಸ್ ಅಂತ ಬಿಟ್ಟಿದ್ರು. ಈ ಮೂರು ಗಾಡಿಯನ್ನು ನಂಬಿಕೊಂಡು ನಾವು ಜೀವನ ಸಾಗಿಸೋದಕ್ಕೆ ಆಗೋದಿಲ್ಲ. ಒಂದು ಹೊತ್ತು ಊಟವೂ ಇಲ್ಲದೆ ಮಲಗಿದ ದಿನಗಳಿವೆ. ಈಗ ಈ ತಿಂಗಳ ಏಳನೇ ತಾರೀಕಿನಿಂದ ರೈಲು ಆರಂಭ ಆಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದೇವೆ ಎಂದರು.

ರೈಲ್ವೆಯನ್ನೇ ನಂಬಿಕೊಂಡು ಹಳಿತಪ್ಪಿದ ಕೂಲಿಕಾರ್ಮಿಕರ ಬದುಕು

ರಾಜ್ಯ ಸರ್ಕಾರ ಈವರೆಗೆ ಏನೂ ಸಹಾಯ ಮಾಡಿಲ್ಲ. ಸರ್ಕಾರದ ಡಿ ಗ್ರೂಪ್ ಕೆಲಸ ಕೊಡುತ್ತೇವೆ ಅಂತ ಹೇಳಿದ್ರು, ಆದ್ರೆ ಇನ್ನೂ ಏನೂ ಆಗಿಲ್ಲ. ಇಂತಹ ಪರಿಸ್ಥಿತಿ ಮತ್ತೆ ಬಂದರೆ ಕಷ್ಟ ಇದೆ. ನಮಗೆ ಡಿ ಗ್ರೂಪ್ ಕೆಲಸ ಕೊಟ್ಟರೆ ತುಂಬಾ ಸಹಾಯವಾಗಲಿದೆ. ಈಗ ಓಡಾಡ್ತಿರುವ ಒಂದೊಂದು ರೈಲಿನಿಂದ ಇನ್ನೂರು-ಮುನ್ನೂರು ದುಡಿಯುವುದೇ ದೊಡ್ಡ ಸಮಸ್ಯೆ ಇದೆ. ಈಗಾಗಲೇ 66 ಜನ ಕಾರ್ಮಿಕರಲ್ಲಿ ಕೇವಲ ಇಪ್ಪತ್ತು ಜನ ಮಾತ್ರ ಇದ್ದೇವೆ. ಉಳಿದವರು ಕೆಲಸ ಬಿಟ್ಟು ಊರುಗಳಿಗೆ ಹೋಗಿದ್ದಾರೆ. ಇಲ್ಲೇ ಇರುವ ಇಪ್ಪತ್ತು ಜನ ದುಡಿಮೆ ಇಲ್ಲದೆ, ಮನೆ ನಡೆಸಲು, ಮಕ್ಕಳಿಗೆ ಶಿಕ್ಷಣ ಕೊಡಿಸಲು ಪರದಾಡ್ತಿದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಬೆಂಗಳೂರು ಡಿವಿಷನ್ ಅತ್ಯಂತ ದೊಡ್ಡದಾಗಿದ್ದು, ಯಶವಂತಪುರದಲ್ಲಿ 66 ಹಮಾಲಿ ಕಾರ್ಮಿಕರು, ಸಿಟಿ ರೈಲ್ವೆ ನಿಲ್ದಾಣದಲ್ಲಿ 364 ಮಂದಿ, ಹಾಗೂ ಕಂಟೋನ್ಮೆಂಟ್, ಕೆ.ಆರ್ ಪುರಂ ಪೂರ್ವ ವಿಭಾಗದ ರೈಲ್ವೆ ನಿಲ್ದಾಣಗಳನ್ನೂ ಸೇರಿಸಿದ್ರೆ 1500 ರವರೆಗೆ ಹಮಾಲಿ ಕಾರ್ಮಿಕರು ಕೆಲಸ ಮಾಡ್ತಿದ್ದಾರೆ ಎಂದರು.

ಶಟರ್ ಎಳೆದ ಅಂಗಡಿ-ಮುಂಗಟ್ಟುಗಳು:

ಇನ್ನು ರೈಲ್ವೆ ನಿಲ್ದಾಣಗಳಲ್ಲಿ ಓಡಾಡುವ ಸಾವಿರಾರು ಪ್ರಯಾಣಿಕರನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಟೀ ಮಾರುವವರು ಈಗ ಕಣ್ಣಿಗೆ ಕಾಣುತ್ತಿಲ್ಲ. ಜನರೇ ಇಲ್ಲದ ಕಾರಣ ತಮಗೂ ಟೀ, ಕಾಫಿ ವ್ಯಾಪಾರ ಆಗದೆ ಸಣ್ಣಪುಟ್ಟ ವ್ಯಾಪಾರಿಗಳು ಟೀ ಮಾರುವುದನ್ನೇ ನಿಲ್ಲಿಸಿದ್ದಾರೆ.ರೈಲ್ವೆ ನಿಲ್ದಾಣದ ಮುಂದಿನ ಅಂಗಡಿ ಮುಂಗಟ್ಟುಗಳು ಶಟರ್ ಎಳೆದಿವೆ. ಹೋಟೆಲ್​​ಗಳೂ ಬಾಗಿಲು ಮುಚ್ಚಿವೆ. ಇ ಟಿಕೆಟ್ ಬುಕ್ ಮಾಡಿಕೊಡುತ್ತಿದ್ದ ಶಾಪ್ ಗಳೂ ಈಗ ಬಾಗಿಲು ಮುಚ್ಚಿವೆ.

ಪ್ರಯಾಣಿಕರೂ ಇಲ್ಲ- ಪರಿಹಾರವೂ ಇಲ್ಲ:

ರೈಲ್ವೆ ನಿಲ್ದಾಣದ ಆಟೋ- ಟ್ಯಾಕ್ಸಿ ಚಾಲಕರ ಗೋಳು ಕೇಳುವವರಿಲ್ಲ. ರೈಲ್ವೆ ನಿಲ್ದಾಣಕ್ಕೆ ಈಗ ಕೇವಲ ಕಾರ್ಮಿಕರು ಓಡಾಡುತ್ತಿದ್ದಾರೆ. ಆದ್ರೆ ಅವರು ಆಟೋ, ಕಾರ್ ಹತ್ತುವುದಿಲ್ಲ. ಬಸ್​ನಲ್ಲೇ ಹೋಗುತ್ತಾರೆ. ಪ್ಯಾಸೆಂಜರ್ ರೈಲುಗಳು ಆರಂಭವಾಗುವ ತನಕ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂದು ಬೇಸರ ವ್ಯಕ್ತಪಡಿಸಿದ್ರು. ರಾಜ್ಯ ಸರ್ಕಾರ ದಿನನಿತ್ಯದ ದುಡಿಮೆಯನ್ನೇ ನಂಬಿಕೊಂಡು ಬದುಕುತ್ತಿದ್ದ ಆಟೋ-ಟ್ಯಾಕ್ಸಿ ಚಾಲಕರಿಗೆ ಮಾಸಿಕ ಐದು ಸಾವಿರ ಪ್ರೋತ್ಸಾಹ ಧನ ಘೋಷಿಸಿತ್ತು. ಆದ್ರೆ ಆನ್ ಲೈನ್ ದೋಷ, ತಾಂತ್ರಿಕ ಸಮಸ್ಯೆಗಳಿಂದ ಇನ್ನೂ ಬಹುತೇಕರಿಗೆ ಈ ಪರಿಹಾರದ ಹಣ ಸಿಕ್ಕಿಲ್ಲ.

ಈಟಿವಿ ಭಾರತ ಜೊತೆ ಮಾತನಾಡಿದ ಟ್ಯಾಕ್ಸಿ ಚಾಲಕ ಜಾವೇದ್, ಮೊದಲೇ ಸಾಲದಲ್ಲಿ ಇದ್ದೆವು. ಈಗ ಹೆಚ್ಚು ಸಾಲ ಆಗಿಬಿಟ್ಟಿದೆ. ಹೆಂಡ್ತಿ, ಮಕ್ಕಳಿದಾರೆ. ಇಲ್ಲಾಂದ್ರೆ ಊರು ಬಿಟ್ಟು ಓಡಿ ಹೋಗುವ ಪರಿಸ್ಥಿತಿಗೆ ನಾವು ತಲುಪಿದ್ದೇವೆ. ಸರ್ಕಾರ ಘೋಷಿಸಿದ ಪರಿಹಾರ ಕೇವಲ ಶೇ. 20-30 ಜನರಿಗಷ್ಟೇ ತಲುಪಿದೆ. ಆಧಾರ್ ಲಿಂಕ್ ಮಾಡಿ ಅಂತ ಕೇಳ್ತಾರೆ. ಏನೇನೋ ನೆಪ ಹೇಳಿ ವಾಪಸ್ ಕಳಿಸ್ತಾರೆ. ಪರಿಹಾರ ಮಾತ್ರ ಸಿಕ್ಕಿಲ್ಲ. ಯಶವಂತಪುರದಲ್ಲೇ 500 ಮಂದಿ ಆಟೋ, ಟ್ಯಾಕ್ಸಿ ಕೆಲಸ ಮಾಡ್ತಿದ್ರು. ಒಂದು ಬಾರಿಗೆ 1200, 1300 ಪ್ರಯಾಣಿಕರು ಬರುತ್ತಿದ್ರು. ಆದ್ರೆ ಈಗ ಕೇವಲ ಕಾರ್ಮಿಕರು ಬರುತ್ತಿದ್ದಾರೆ. ಇನ್ನಾದ್ರು ಪರಿಸ್ಥಿತಿ ಸರಿಹೋಗುತ್ತಾ ಎಂದು ನೋಡ್ಬೇಕಾಗಿದೆ ಎಂದು ಜಾವೇದ್ ತಿಳಿಸಿದರು.

ಒಟ್ಟಿನಲ್ಲಿ ಆದಿನದ ಬದುಕಿಗೆ ಅಂದೇ ದುಡಿದು ತಿನ್ನುತ್ತಿದ್ದ ಕೂಲಿ ಕಾರ್ಮಿಕರ ಬದುಕು ಲಾಕ್​​​ಡೌನ್​ನಿಂದಾಗಿ ಮತ್ತಷ್ಟು ಅಸಹಾಯಕ ಪರಿಸ್ಥಿತಿಗೆ ತಳ್ಳಲ್ಪಟ್ಟಿದೆ. ಸರ್ಕಾರದ ಡಿ ಗ್ರೂಪ್ ಕೆಲಸ, ಪರಿಹಾರ ಧನಕ್ಕಾಗಿ ಎದುರು ನೋಡುತ್ತಿದ್ದಾರೆ.

ಬೆಂಗಳೂರು: ದೇಶದ ಅನೇಕ ನಗರ, ಪಟ್ಟಣಗಳನ್ನು ತಲುಪುವ ಭಾರತೀಯ ರೈಲ್ವೆ ಸೇವೆ, ಇದೇ ಮೊದಲ ಬಾರಿಗೆ ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿತ್ತು. ಮಾರ್ಚ್​ನಲ್ಲಿ ಸ್ಥಗಿತವಾದ ಪ್ರಯಾಣಿಕ ರೈಲ್ವೆ ಸೇವೆಗಳು ಆರು ತಿಂಗಳಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ವಿಶೇಷ ರೈಲುಗಳು, ವಲಸೆ ಕಾರ್ಮಿಕರನ್ನು ಊರುಗಳಿಗೆ ತಲುಪಿಸುವ ಶ್ರಮಿಕ ರೈಲುಗಳ ಓಡಾಟ ಮಾತ್ರ ನಡೆಯುತ್ತಿದೆ.

ಇದರಿಂದ ರೈಲ್ವೆ ಪ್ರಯಾಣಿಕರನ್ನೇ ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದ ರಾಜ್ಯದ ಸಾವಿರಾರು ಕೂಲಿಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಹಮಾಲಿ ಕಾರ್ಮಿಕರು, ಟೀ ಮಾರುವವರ ಬದುಕು ಹಳಿ ತಪ್ಪಿದಂತಾಗಿದೆ. ಪ್ರತಿನಿತ್ಯ ಓಡಾಡುವ ಪ್ರಯಾಣಿಕರ ಭಾರವಾದ ಲಗೇಜು, ಇತರ ಸರಕು ಹೊರಲೆಂದೇ ಕೆಂಪು ಶರ್ಟ್ ಧರಿಸಿ ಹಮಾಲಿ ಮಾಡುತ್ತಿದ್ದ ಕಾರ್ಮಿಕರಿಗೆ ಈಗ ಕೆಲಸ ವಿಲ್ಲದಂತಾಗಿದೆ. ಇತರರ ಭಾರ ಹೊತ್ತು ತಮ್ಮ ಜೀವನದ ಬಂಡಿ ಸಾಗಿಸುತ್ತಿರುತ್ತಾರೆ. ಆದರೆ ಏಕಾಏಕಿ ಬಂದ ಕೊರೊನಾ ಇವರ ಜೀವನದ ದಿಕ್ಕನ್ನೇ ಬದಲಿಸಿದೆ. ಕೆಲಸವಿಲ್ಲದ ಕಾರಣ ಒಂದು ಹೊತ್ತು ಊಟದ ಸಂಪಾದನೆಯೂ ಆಗದೆ, ಬಿಸ್ಕೇಟ್​, ನೀರು ಕುಡಿದು ಜೀವನ ಸಾಗಿಸುವಂತಾಗಿದೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಯಶವಂತಪುರ ರೈಲ್ವೆ ನಿಲ್ದಾಣದ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, 12 ವರ್ಷದಿಂದ ಹಮಾಲಿಯಾಗಿ ದುಡಿಯುತ್ತಿದ್ದೇನೆ. ರೈಲ್ವೆ ಇಲಾಖೆಯ ಅಧಿಕಾರಿಗಳೇ ಒಂದೆರಡು ಬಾರಿ ರೇಷನ್ ಕಿಟ್ ಕೊಟ್ಟು ಸಹಾಯ ಮಾಡಿದ್ರು. ಲಾಕ್​ಡೌನ್ ನಂತರ ಕೇವಲ ಒಂದೇ ಒಂದು ಟ್ರೈನ್ ಬಿಟ್ಟಿದ್ದರು. ಕಲ್ಕತ್ತಾ, ದೆಹಲಿ, ಶಿವಮೊಗ್ಗ ಎಕ್ಸ್‌ಪ್ರೆಸ್ ಅಂತ ಬಿಟ್ಟಿದ್ರು. ಈ ಮೂರು ಗಾಡಿಯನ್ನು ನಂಬಿಕೊಂಡು ನಾವು ಜೀವನ ಸಾಗಿಸೋದಕ್ಕೆ ಆಗೋದಿಲ್ಲ. ಒಂದು ಹೊತ್ತು ಊಟವೂ ಇಲ್ಲದೆ ಮಲಗಿದ ದಿನಗಳಿವೆ. ಈಗ ಈ ತಿಂಗಳ ಏಳನೇ ತಾರೀಕಿನಿಂದ ರೈಲು ಆರಂಭ ಆಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದೇವೆ ಎಂದರು.

ರೈಲ್ವೆಯನ್ನೇ ನಂಬಿಕೊಂಡು ಹಳಿತಪ್ಪಿದ ಕೂಲಿಕಾರ್ಮಿಕರ ಬದುಕು

ರಾಜ್ಯ ಸರ್ಕಾರ ಈವರೆಗೆ ಏನೂ ಸಹಾಯ ಮಾಡಿಲ್ಲ. ಸರ್ಕಾರದ ಡಿ ಗ್ರೂಪ್ ಕೆಲಸ ಕೊಡುತ್ತೇವೆ ಅಂತ ಹೇಳಿದ್ರು, ಆದ್ರೆ ಇನ್ನೂ ಏನೂ ಆಗಿಲ್ಲ. ಇಂತಹ ಪರಿಸ್ಥಿತಿ ಮತ್ತೆ ಬಂದರೆ ಕಷ್ಟ ಇದೆ. ನಮಗೆ ಡಿ ಗ್ರೂಪ್ ಕೆಲಸ ಕೊಟ್ಟರೆ ತುಂಬಾ ಸಹಾಯವಾಗಲಿದೆ. ಈಗ ಓಡಾಡ್ತಿರುವ ಒಂದೊಂದು ರೈಲಿನಿಂದ ಇನ್ನೂರು-ಮುನ್ನೂರು ದುಡಿಯುವುದೇ ದೊಡ್ಡ ಸಮಸ್ಯೆ ಇದೆ. ಈಗಾಗಲೇ 66 ಜನ ಕಾರ್ಮಿಕರಲ್ಲಿ ಕೇವಲ ಇಪ್ಪತ್ತು ಜನ ಮಾತ್ರ ಇದ್ದೇವೆ. ಉಳಿದವರು ಕೆಲಸ ಬಿಟ್ಟು ಊರುಗಳಿಗೆ ಹೋಗಿದ್ದಾರೆ. ಇಲ್ಲೇ ಇರುವ ಇಪ್ಪತ್ತು ಜನ ದುಡಿಮೆ ಇಲ್ಲದೆ, ಮನೆ ನಡೆಸಲು, ಮಕ್ಕಳಿಗೆ ಶಿಕ್ಷಣ ಕೊಡಿಸಲು ಪರದಾಡ್ತಿದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಬೆಂಗಳೂರು ಡಿವಿಷನ್ ಅತ್ಯಂತ ದೊಡ್ಡದಾಗಿದ್ದು, ಯಶವಂತಪುರದಲ್ಲಿ 66 ಹಮಾಲಿ ಕಾರ್ಮಿಕರು, ಸಿಟಿ ರೈಲ್ವೆ ನಿಲ್ದಾಣದಲ್ಲಿ 364 ಮಂದಿ, ಹಾಗೂ ಕಂಟೋನ್ಮೆಂಟ್, ಕೆ.ಆರ್ ಪುರಂ ಪೂರ್ವ ವಿಭಾಗದ ರೈಲ್ವೆ ನಿಲ್ದಾಣಗಳನ್ನೂ ಸೇರಿಸಿದ್ರೆ 1500 ರವರೆಗೆ ಹಮಾಲಿ ಕಾರ್ಮಿಕರು ಕೆಲಸ ಮಾಡ್ತಿದ್ದಾರೆ ಎಂದರು.

ಶಟರ್ ಎಳೆದ ಅಂಗಡಿ-ಮುಂಗಟ್ಟುಗಳು:

ಇನ್ನು ರೈಲ್ವೆ ನಿಲ್ದಾಣಗಳಲ್ಲಿ ಓಡಾಡುವ ಸಾವಿರಾರು ಪ್ರಯಾಣಿಕರನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಟೀ ಮಾರುವವರು ಈಗ ಕಣ್ಣಿಗೆ ಕಾಣುತ್ತಿಲ್ಲ. ಜನರೇ ಇಲ್ಲದ ಕಾರಣ ತಮಗೂ ಟೀ, ಕಾಫಿ ವ್ಯಾಪಾರ ಆಗದೆ ಸಣ್ಣಪುಟ್ಟ ವ್ಯಾಪಾರಿಗಳು ಟೀ ಮಾರುವುದನ್ನೇ ನಿಲ್ಲಿಸಿದ್ದಾರೆ.ರೈಲ್ವೆ ನಿಲ್ದಾಣದ ಮುಂದಿನ ಅಂಗಡಿ ಮುಂಗಟ್ಟುಗಳು ಶಟರ್ ಎಳೆದಿವೆ. ಹೋಟೆಲ್​​ಗಳೂ ಬಾಗಿಲು ಮುಚ್ಚಿವೆ. ಇ ಟಿಕೆಟ್ ಬುಕ್ ಮಾಡಿಕೊಡುತ್ತಿದ್ದ ಶಾಪ್ ಗಳೂ ಈಗ ಬಾಗಿಲು ಮುಚ್ಚಿವೆ.

ಪ್ರಯಾಣಿಕರೂ ಇಲ್ಲ- ಪರಿಹಾರವೂ ಇಲ್ಲ:

ರೈಲ್ವೆ ನಿಲ್ದಾಣದ ಆಟೋ- ಟ್ಯಾಕ್ಸಿ ಚಾಲಕರ ಗೋಳು ಕೇಳುವವರಿಲ್ಲ. ರೈಲ್ವೆ ನಿಲ್ದಾಣಕ್ಕೆ ಈಗ ಕೇವಲ ಕಾರ್ಮಿಕರು ಓಡಾಡುತ್ತಿದ್ದಾರೆ. ಆದ್ರೆ ಅವರು ಆಟೋ, ಕಾರ್ ಹತ್ತುವುದಿಲ್ಲ. ಬಸ್​ನಲ್ಲೇ ಹೋಗುತ್ತಾರೆ. ಪ್ಯಾಸೆಂಜರ್ ರೈಲುಗಳು ಆರಂಭವಾಗುವ ತನಕ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂದು ಬೇಸರ ವ್ಯಕ್ತಪಡಿಸಿದ್ರು. ರಾಜ್ಯ ಸರ್ಕಾರ ದಿನನಿತ್ಯದ ದುಡಿಮೆಯನ್ನೇ ನಂಬಿಕೊಂಡು ಬದುಕುತ್ತಿದ್ದ ಆಟೋ-ಟ್ಯಾಕ್ಸಿ ಚಾಲಕರಿಗೆ ಮಾಸಿಕ ಐದು ಸಾವಿರ ಪ್ರೋತ್ಸಾಹ ಧನ ಘೋಷಿಸಿತ್ತು. ಆದ್ರೆ ಆನ್ ಲೈನ್ ದೋಷ, ತಾಂತ್ರಿಕ ಸಮಸ್ಯೆಗಳಿಂದ ಇನ್ನೂ ಬಹುತೇಕರಿಗೆ ಈ ಪರಿಹಾರದ ಹಣ ಸಿಕ್ಕಿಲ್ಲ.

ಈಟಿವಿ ಭಾರತ ಜೊತೆ ಮಾತನಾಡಿದ ಟ್ಯಾಕ್ಸಿ ಚಾಲಕ ಜಾವೇದ್, ಮೊದಲೇ ಸಾಲದಲ್ಲಿ ಇದ್ದೆವು. ಈಗ ಹೆಚ್ಚು ಸಾಲ ಆಗಿಬಿಟ್ಟಿದೆ. ಹೆಂಡ್ತಿ, ಮಕ್ಕಳಿದಾರೆ. ಇಲ್ಲಾಂದ್ರೆ ಊರು ಬಿಟ್ಟು ಓಡಿ ಹೋಗುವ ಪರಿಸ್ಥಿತಿಗೆ ನಾವು ತಲುಪಿದ್ದೇವೆ. ಸರ್ಕಾರ ಘೋಷಿಸಿದ ಪರಿಹಾರ ಕೇವಲ ಶೇ. 20-30 ಜನರಿಗಷ್ಟೇ ತಲುಪಿದೆ. ಆಧಾರ್ ಲಿಂಕ್ ಮಾಡಿ ಅಂತ ಕೇಳ್ತಾರೆ. ಏನೇನೋ ನೆಪ ಹೇಳಿ ವಾಪಸ್ ಕಳಿಸ್ತಾರೆ. ಪರಿಹಾರ ಮಾತ್ರ ಸಿಕ್ಕಿಲ್ಲ. ಯಶವಂತಪುರದಲ್ಲೇ 500 ಮಂದಿ ಆಟೋ, ಟ್ಯಾಕ್ಸಿ ಕೆಲಸ ಮಾಡ್ತಿದ್ರು. ಒಂದು ಬಾರಿಗೆ 1200, 1300 ಪ್ರಯಾಣಿಕರು ಬರುತ್ತಿದ್ರು. ಆದ್ರೆ ಈಗ ಕೇವಲ ಕಾರ್ಮಿಕರು ಬರುತ್ತಿದ್ದಾರೆ. ಇನ್ನಾದ್ರು ಪರಿಸ್ಥಿತಿ ಸರಿಹೋಗುತ್ತಾ ಎಂದು ನೋಡ್ಬೇಕಾಗಿದೆ ಎಂದು ಜಾವೇದ್ ತಿಳಿಸಿದರು.

ಒಟ್ಟಿನಲ್ಲಿ ಆದಿನದ ಬದುಕಿಗೆ ಅಂದೇ ದುಡಿದು ತಿನ್ನುತ್ತಿದ್ದ ಕೂಲಿ ಕಾರ್ಮಿಕರ ಬದುಕು ಲಾಕ್​​​ಡೌನ್​ನಿಂದಾಗಿ ಮತ್ತಷ್ಟು ಅಸಹಾಯಕ ಪರಿಸ್ಥಿತಿಗೆ ತಳ್ಳಲ್ಪಟ್ಟಿದೆ. ಸರ್ಕಾರದ ಡಿ ಗ್ರೂಪ್ ಕೆಲಸ, ಪರಿಹಾರ ಧನಕ್ಕಾಗಿ ಎದುರು ನೋಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.