ETV Bharat / state

ಪೌರತ್ವ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ.. ಕಾಂಗ್ರೆಸ್​ ನಾಯಕರಿಗೆ ಸಿ ಟಿ ರವಿ ಸವಾಲು

author img

By

Published : Dec 20, 2019, 7:21 PM IST

ಶಾಂತವಾಗಿದ್ದ ಕರ್ನಾಟಕವನ್ನ ಸಿಎಎ ಹೋರಾಟದ ನೆಪದಲ್ಲಿ ಪ್ರಚೋದನೆ‌ ಮಾಡಿರೋದು ಕಾಂಗ್ರೆಸ್. ಹೊತ್ತಿ ಉರಿಯೋ ಹೇಳಿಕೆ ಕೊಟ್ಟಿದ್ದು ಕಾಂಗ್ರೆಸ್‌ನ ಮಾಜಿ ‌ಸಚಿವ ಯು ಟಿ ಖಾದರ್. ಕಂಡವರ ಮಕ್ಕಳನ್ನ ಗುಂಡಿಗೆ ತಳ್ಳಿ ರಾಜಕಾರಣ ಮಾಡೋದು ಕಾಂಗ್ರೆಸ್‌ನವರು ಎಂದು ಸಚಿವ ಸಿ ಟಿ ರವಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

C.T Ravi
ಸಿ.ಟಿ ರವಿ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಬಿಜೆಪಿ ಪರ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ. ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ನಾಯಕರು ಯಾರನ್ನು ಬೇಕಾದರೂ ಕಳುಹಿಸಲಿ. ದಾಖಲೆ ಸಮೇತ ಚರ್ಚೆಗೆ ಸಿದ್ದನಿದ್ದೇನೆ ಎಂದು ಕಾಂಗ್ರೆಸ್​ಗೆ ಸಚಿವ ಸಿ ಟಿ ರವಿ ಸವಾಲೆಸೆದಿದ್ದಾರೆ.

ಸಚಿವ ಸಿ ಟಿ ರವಿ..

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಪೊಲೀಸ್ ಇಲಾಖೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರು ಕೆಲಸ ಮಾಡಿದ್ದಾರೆ. ಶಾಂತವಾಗಿದ್ದ ಕರ್ನಾಟಕವನ್ನ ಸಿಎಎ ಹೋರಾಟದ ನೆಪದಲ್ಲಿ ಪ್ರಚೋದನೆ‌ ಮಾಡಿದ್ದು ಕಾಂಗ್ರೆಸ್. ಹೊತ್ತಿ ಉರಿಯೋ ಹೇಳಿಕೆ ಕೊಟ್ಟಿದ್ದು ಕಾಂಗ್ರೆಸ್​ನ ಮಾಜಿ ‌ಸಚಿವ ಯು ಟಿ ಖಾದರ್ ಕಂಡವರ ಮಕ್ಕಳನ್ನ ಗುಂಡಿಗೆ ತಳ್ಳಿ ರಾಜಕಾರಣ ಮಾಡೋದು ಕಾಂಗ್ರೆಸ್‌ನವರು ಎಂದು ವಾಗ್ದಾಳಿ ನಡೆಸಿದರು.

ಒಬ್ಬನೇ ಒಬ್ಬ ಕಾಂಗ್ರೆಸ್ ಮುಖಂಡ ಕೂಡ ಖಾದರ್ ಹೇಳಿಕೆ ತಪ್ಪು ಅಂತಾ ಹೇಳಿಲ್ಲ. ಇದನ್ನೆಲ್ಲ ನೋಡಿದರೆ ಎಲ್ಲರೂ ಸೇರಿ ಸಂಚು ಮಾಡಿದ್ದಾರೆ. ಎಲ್ಲರೂ ಸೇರಿ ಖಾದರ್ ಮೂಲಕ ಹೇಳಿಕೆಯನ್ನ ಕೊಡಿಸಿದ್ದಾರೆ. ಖಾದರ್ ಅವರ ಹೇಳಿಕೆ ತಪ್ಪು ಅಂತಾ ಸಿದ್ದರಾಮಯ್ಯ , ದಿನೇಶ್ ಗುಂಡೂರಾವ್ ಎಲ್ಲಾದ್ರೂ ಒಂದು ಟ್ವೀಟ್ ಮಾಡಿದ್ರಾ.. ಎಲ್ಲದಕ್ಕೂ‌ ಮಾತನಾಡುವ ಉಗ್ರಪ್ಪ ಮಾತನಾಡಲಿಲ್ಲ. ಎಲ್ಲಾ ಸಂಚು ಮಾಡಿ ಖಾದರ್ ಬಳಿ ಈ ಹೇಳಿಕೆಯನ್ನ ಕೊಡಿಸಿದ್ದಾರೆ. ಇದರಲ್ಲಿ ಎಲ್ಲರೂ ಒಳಗೊಂಡಿದ್ದಾರೆ ಎಂದು ಆರೋಪಿಸಿದರು.

ಪೌರತ್ವ ವಿಚಾರ ಸಂಬಂಧ ಹಿಂದೆ ರಾಜೀವ್ ಗಾಂಧಿ ನೀಡಿದ್ದ ಹೇಳಿಕೆ, ಮನಮೋಹನ್ ಸಿಂಗ್ ನೀಡಿದ್ದ ಹೇಳಿಕೆ ನೀವು ಮರೆತಿದ್ದೀರಿ ಎನಿಸಲಿದೆ. ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ದಾಖಲೆಗೆ ಸಿದ್ದನಿದ್ದೇನೆ. ಯಾರನ್ನು ಬೇಕಾದರೂ ಚರ್ಚೆಗೆ ಕಳುಹಿಸಿ ಎಂದು ಸವಾಲೆಸೆದರು.

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಬಿಜೆಪಿ ಪರ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ. ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ನಾಯಕರು ಯಾರನ್ನು ಬೇಕಾದರೂ ಕಳುಹಿಸಲಿ. ದಾಖಲೆ ಸಮೇತ ಚರ್ಚೆಗೆ ಸಿದ್ದನಿದ್ದೇನೆ ಎಂದು ಕಾಂಗ್ರೆಸ್​ಗೆ ಸಚಿವ ಸಿ ಟಿ ರವಿ ಸವಾಲೆಸೆದಿದ್ದಾರೆ.

ಸಚಿವ ಸಿ ಟಿ ರವಿ..

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಪೊಲೀಸ್ ಇಲಾಖೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರು ಕೆಲಸ ಮಾಡಿದ್ದಾರೆ. ಶಾಂತವಾಗಿದ್ದ ಕರ್ನಾಟಕವನ್ನ ಸಿಎಎ ಹೋರಾಟದ ನೆಪದಲ್ಲಿ ಪ್ರಚೋದನೆ‌ ಮಾಡಿದ್ದು ಕಾಂಗ್ರೆಸ್. ಹೊತ್ತಿ ಉರಿಯೋ ಹೇಳಿಕೆ ಕೊಟ್ಟಿದ್ದು ಕಾಂಗ್ರೆಸ್​ನ ಮಾಜಿ ‌ಸಚಿವ ಯು ಟಿ ಖಾದರ್ ಕಂಡವರ ಮಕ್ಕಳನ್ನ ಗುಂಡಿಗೆ ತಳ್ಳಿ ರಾಜಕಾರಣ ಮಾಡೋದು ಕಾಂಗ್ರೆಸ್‌ನವರು ಎಂದು ವಾಗ್ದಾಳಿ ನಡೆಸಿದರು.

ಒಬ್ಬನೇ ಒಬ್ಬ ಕಾಂಗ್ರೆಸ್ ಮುಖಂಡ ಕೂಡ ಖಾದರ್ ಹೇಳಿಕೆ ತಪ್ಪು ಅಂತಾ ಹೇಳಿಲ್ಲ. ಇದನ್ನೆಲ್ಲ ನೋಡಿದರೆ ಎಲ್ಲರೂ ಸೇರಿ ಸಂಚು ಮಾಡಿದ್ದಾರೆ. ಎಲ್ಲರೂ ಸೇರಿ ಖಾದರ್ ಮೂಲಕ ಹೇಳಿಕೆಯನ್ನ ಕೊಡಿಸಿದ್ದಾರೆ. ಖಾದರ್ ಅವರ ಹೇಳಿಕೆ ತಪ್ಪು ಅಂತಾ ಸಿದ್ದರಾಮಯ್ಯ , ದಿನೇಶ್ ಗುಂಡೂರಾವ್ ಎಲ್ಲಾದ್ರೂ ಒಂದು ಟ್ವೀಟ್ ಮಾಡಿದ್ರಾ.. ಎಲ್ಲದಕ್ಕೂ‌ ಮಾತನಾಡುವ ಉಗ್ರಪ್ಪ ಮಾತನಾಡಲಿಲ್ಲ. ಎಲ್ಲಾ ಸಂಚು ಮಾಡಿ ಖಾದರ್ ಬಳಿ ಈ ಹೇಳಿಕೆಯನ್ನ ಕೊಡಿಸಿದ್ದಾರೆ. ಇದರಲ್ಲಿ ಎಲ್ಲರೂ ಒಳಗೊಂಡಿದ್ದಾರೆ ಎಂದು ಆರೋಪಿಸಿದರು.

ಪೌರತ್ವ ವಿಚಾರ ಸಂಬಂಧ ಹಿಂದೆ ರಾಜೀವ್ ಗಾಂಧಿ ನೀಡಿದ್ದ ಹೇಳಿಕೆ, ಮನಮೋಹನ್ ಸಿಂಗ್ ನೀಡಿದ್ದ ಹೇಳಿಕೆ ನೀವು ಮರೆತಿದ್ದೀರಿ ಎನಿಸಲಿದೆ. ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ದಾಖಲೆಗೆ ಸಿದ್ದನಿದ್ದೇನೆ. ಯಾರನ್ನು ಬೇಕಾದರೂ ಚರ್ಚೆಗೆ ಕಳುಹಿಸಿ ಎಂದು ಸವಾಲೆಸೆದರು.

Intro:


ಬೆಂಗಳೂರು: ಪೌರತ್ವ ವಿಚಾರವಾಗಿ ಬಿಜೆಪಿ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ, ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ನಾಯಕರು ಯಾರನ್ನು ಬೇಕಾದವರೂ ಕಳುಹಿಸಲಿ ದಾಖಲೆ ಸಮೇತ ಚರ್ಚೆಗೆ ಸಿದ್ದನಿದ್ದೇನೆ ಎಂದು ಕಾಂಗ್ರೆಸ್ ಗೆ ಸಚಿವ ಸಿ.ಟಿ.ರವಿ ಸವಾಲೆಸೆದಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕರ್ನಾಟಕ ಪೋಲಿಸ್ ಇಲಾಖೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.ಕರ್ನಾಟಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಪೋಲಿಸ್ ಕೆಲಸ ಮಾಡಿದ್ದಾರೆ, ಶಾಂತವಾಗಿದ್ದ ಕರ್ನಾಟಕವನ್ನ ಸಿಎಎ ಹೋರಾಟದ ನೆಪದಲ್ಲಿ ಪ್ರಚೋದನೆ‌ ಮಾಡಿದ್ದು ಕಾಂಗ್ರೆಸ್.ಹೊತ್ತಿ ಉರಿಯೋ ಹೇಳಿಕೆ ಕೊಟ್ಟಿದ್ದು ಕಾಂಗ್ರೆಸ್ ನ ಮಾಜಿ‌ಸಚಿವ ಯುಟಿ ಖಾದರ್,ಕಂಡವರ ಮಕ್ಕಳನ್ನ‌ ಗುಂಡಿಗೆ ತೆರಳಿ ರಾಜಕಾರಣ ಮಾಡೋದು ಕಾಂಗ್ರೆಸ್ ನವರು ಎಂದು ವಾಗ್ದಾಳಿ ನಡೆಸಿದರು.

ಒಬ್ಬನೇ ಒಬ್ಬ ಕಾಂಗ್ರೆಸ್ ಮುಖಂಡ ಕೂಡ ಖಾದರ್ ಹೇಳಿಕೆ ತಪ್ಪು ಅಂತ ಹೇಳಿಲ್ಲ, ಇದನ್ನೆಲ್ಲ ನೋಡಿದರೆ ಎಲ್ಲರೂ ಸೇರಿ ಸಂಚು ಮಾಡಿದ್ದಾರೆ.ಎಲ್ಲರು ಸೇರಿ ಖಾದರ್ ಮೂಲಕ ಹೇಳಿಕೆಯನ್ನ ಕೊಡಿಸಿದ್ದಾರೆ.ಖಾದರ್ ಅವರ ಹೇಳಿಕೆ ತಪ್ಪು ಅಂತ ಸಿದ್ದರಾಮಯ್ಯ , ದಿನೇಶ್ ಗುಂಡೂರಾವ್ ಎಲ್ಲಾದ್ರು ಒಂದು ಟ್ವಿಟ್ ಮಾಡಿದ್ರಾ.ಎಲ್ಲದಕ್ಕೂ‌ ಮಾತನಾಡುವ ಉಗ್ರಪ್ಪ ಮಾತನಾಡಲಿಲ್ಲ ಎಲ್ಲಾ ಸಂಚು ಮಾಡಿ ಖಾದರ್ ಬಳಿ ಈ ಹೇಳಿಕೆಯನ್ನ ಕೊಡಿಸಿದ್ದಾರೆ. ಇದರಲ್ಲಿ ಎಲ್ಲರು ಇನ್ವಾಲವ್ ಆಗಿದ್ದಾರೆ ಎಂದು ಆರೋಪಿಸಿದರು.

ಪೌರತ್ವ ವಿಚಾರ ಸಂಬಂಧ ಹಿಂದೆ ರಾಜೀವ್ ಗಾಂಧಿ ನೀಡಿದ್ದ ಹೇಳಿಕೆ, ಮನಮೋಹನ್ ಸಿಂಗ್ ನೀಡಿದ್ದ ಹೇಳಿಕೆ ನೀವು ಮರೆತಿದ್ದೀರಿ ಎನಿಸಲಿದೆ,ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ದಾಖಲೆಗೆ ಸಿದ್ದನಿದ್ದೇನೆ ಯಾರನ್ನು ಬೇಕಾದರೂ ಚರ್ಚೆಗೆ ಕಳುಹಿಸಿ ಎಂದು ಸವಾಲೆಸೆದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.