ETV Bharat / state

ಜಯಂತಿ ಹೆಸರಲ್ಲಿ ಕೋಟಿ ಲೂಟಿ? ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ದೂರು

ಗಣ್ಯ ವ್ಯಕ್ತಿಗಳ ಜಯಂತಿಯನ್ನು ಜಿಲ್ಲಾ‌ ಮಟ್ಟದಲ್ಲಿ‌ ಆಚರಿಸಿದ್ದೇವೆ ಎಂದು ಹೇಳಿ ಅಧಿಕಾರಿಗಳು 2013-2018 ರವರೆಗೆ ಒಟ್ಟಾರೆ 17.65 ಕೋಟಿ ರೂ.ಖರ್ಚು ಮಾಡಿದ್ದಾರೆ. ಜಯಂತಿ ಆಚರಿಸದೆ ಅಧಿಕಾರಿಗಳು ಹಣ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಆರ್‌ ಟಿ ಐ ಕಾರ್ಯಕರ್ತರು ಮಾಹಿತಿ ಸಂಗ್ರಹಿಸಿ ಆರೋಪಿಸಿದ್ದಾರೆ.

author img

By

Published : Apr 30, 2019, 8:43 PM IST

ಸಿಎಸ್​​ಗೆ ದೂರು

ಬೆಂಗಳೂರು: ರಾಜ್ಯ ಸರ್ಕಾರ ಐತಿಹಾಸಿಕ, ಧಾರ್ಮಿಕ, ಪೌರಾಣಿಕ ಹಾಗು ಸಾಂಸ್ಕೃತಿಕ ಹಿನ್ನೆಲೆಯಿರುವ ಮಹಾನುಭಾವರುಗಳಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಆದ್ರೆ, ಈ ಕಾರ್ಯಕ್ರಮಗಳ ಹೆಸರಲ್ಲಿ ತೆರಿಗೆದಾರರ ದುಡ್ಡು ಅಧಿಕಾರಿಗಳ ಜೇಬು ಸೇರುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಸಂಬಂಧ ಆರ್​​ಟಿಐ (ಮಾಹಿತಿ ಹಕ್ಕು ಕಾಯ್ದೆ) ಮೂಲಕ ಮರಿಲಿಂಗೇಗೌಡ‌ ಮಾಲಿ ಪಾಟೀಲ್ ಅಂಕಿಅಂಶಗಳ ಸಮೇತ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಪ್ರಕಾರ, 2013ರಿಂದ 2018ವರೆಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಯಂತಿಗಳ ಹೆಸರಲ್ಲಿ ಒಟ್ಟು 17.65 ಕೋಟಿ ರೂ. ಖರ್ಚು ಮಾಡಿರುವುದು ಗೊತ್ತಾಗಿದೆ.

ಅಧಿಕಾರಿಗಳು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆ ಮಾಡಿದ್ದೇವೆ ಎಂದು ದಾಖಲೆಯಲ್ಲಿ ತೋರಿಸಿದ್ದಾರೆ. ಆದ್ರೆ, ನಿಜವಾಗಿಯೂ ಈ ಜಯಂತಿ ಆಚರಣೆಗಳು ನಡೆದಿರುವ ಬಗ್ಗೆ ಅನುಮಾನ ಮೂಡಿದೆ ಎಂಬುದು ಅವರ ಆರೋಪ.

ಗಣ್ಯ ವ್ಯಕ್ತಿಗಳ ಜಯಂತಿ ಆಚರಣೆಗೆ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಮರಿಲಿಂಗೇಗೌಡ‌ ಮಾಲಿ ಪಾಟೀಲ್ ದೂರು ನೀಡಿದ್ದಾರೆ.

ಯಾವ ಜಯಂತಿಗೆ ಎಷ್ಟು ಖರ್ಚು?:

  • ದೇವರ ದಾಸಿಮಯ್ಯ ಜಯಂತಿ- 69 ಲಕ್ಷ
  • ಭಗವಾನ್ ಮಹಾವೀರ ಜಯಂತಿ- 69 ಲಕ್ಷ
  • ಅಕ್ಕಮಹಾದೇವಿ ಜಯಂತಿ -10 ಲಕ್ಷ
  • ಬಸವ ಜಯಂತಿ -69 ಲಕ್ಷ
  • ಶಂಕರ ಜಯಂತಿ- 10 ಲಕ್ಷ
  • ಭಗೀರಥ ಜಯಂತಿ- 69 ಲಕ್ಷ
  • ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ -15 ಲಕ್ಷ
  • ಶ್ರೀ ಕೃಷ್ಣ ಜಯಂತಿ- 69 ಲಕ್ಷ
  • ಬ್ರಹ್ಮಶ್ರೀ ನಾರಾಯಣಗುರು ಜಯಂತಿ- 69 ಲಕ್ಷ
  • ವಿಶ್ವಕರ್ಮ ಜಯಂತಿ- 69 ಲಕ್ಷ
  • ಟಿಪ್ಪು ಸುಲ್ತಾನ್ ಜಯಂತಿ- 69 ಲಕ್ಷ
  • ಕನಕ ಜಯಂತಿ- 69 ಲಕ್ಷ
  • ಸಿದ್ದರಾಮ‌ ಜಯಂತಿ- 69 ಲಕ್ಷ
  • ಅಂಬಿಗರ ಚೌಡಯ್ಯ ಜಯಂತಿ- 69 ಲಕ್ಷ
  • ವಾಲ್ಮೀಕಿ ಜಯಂತಿ- 69 ಲಕ್ಷ
  • ಶಿವಾಜಿ ಜಯಂತಿ -69 ಲಕ್ಷ
  • ದಲಿತ ವಚನಕಾರರ ಜಯಂತಿ- 69 ಲಕ್ಷ
  • ಸರ್ವಜ್ಞ ಜಯಂತಿ -69 ಲಕ್ಷ
  • ವಿವೇಕಾನಂದ ಜಯಂತಿ- 40 ಲಕ್ಷ

ಬೆಂಗಳೂರು: ರಾಜ್ಯ ಸರ್ಕಾರ ಐತಿಹಾಸಿಕ, ಧಾರ್ಮಿಕ, ಪೌರಾಣಿಕ ಹಾಗು ಸಾಂಸ್ಕೃತಿಕ ಹಿನ್ನೆಲೆಯಿರುವ ಮಹಾನುಭಾವರುಗಳಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಆದ್ರೆ, ಈ ಕಾರ್ಯಕ್ರಮಗಳ ಹೆಸರಲ್ಲಿ ತೆರಿಗೆದಾರರ ದುಡ್ಡು ಅಧಿಕಾರಿಗಳ ಜೇಬು ಸೇರುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಸಂಬಂಧ ಆರ್​​ಟಿಐ (ಮಾಹಿತಿ ಹಕ್ಕು ಕಾಯ್ದೆ) ಮೂಲಕ ಮರಿಲಿಂಗೇಗೌಡ‌ ಮಾಲಿ ಪಾಟೀಲ್ ಅಂಕಿಅಂಶಗಳ ಸಮೇತ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಪ್ರಕಾರ, 2013ರಿಂದ 2018ವರೆಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಯಂತಿಗಳ ಹೆಸರಲ್ಲಿ ಒಟ್ಟು 17.65 ಕೋಟಿ ರೂ. ಖರ್ಚು ಮಾಡಿರುವುದು ಗೊತ್ತಾಗಿದೆ.

ಅಧಿಕಾರಿಗಳು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆ ಮಾಡಿದ್ದೇವೆ ಎಂದು ದಾಖಲೆಯಲ್ಲಿ ತೋರಿಸಿದ್ದಾರೆ. ಆದ್ರೆ, ನಿಜವಾಗಿಯೂ ಈ ಜಯಂತಿ ಆಚರಣೆಗಳು ನಡೆದಿರುವ ಬಗ್ಗೆ ಅನುಮಾನ ಮೂಡಿದೆ ಎಂಬುದು ಅವರ ಆರೋಪ.

ಗಣ್ಯ ವ್ಯಕ್ತಿಗಳ ಜಯಂತಿ ಆಚರಣೆಗೆ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಮರಿಲಿಂಗೇಗೌಡ‌ ಮಾಲಿ ಪಾಟೀಲ್ ದೂರು ನೀಡಿದ್ದಾರೆ.

ಯಾವ ಜಯಂತಿಗೆ ಎಷ್ಟು ಖರ್ಚು?:

  • ದೇವರ ದಾಸಿಮಯ್ಯ ಜಯಂತಿ- 69 ಲಕ್ಷ
  • ಭಗವಾನ್ ಮಹಾವೀರ ಜಯಂತಿ- 69 ಲಕ್ಷ
  • ಅಕ್ಕಮಹಾದೇವಿ ಜಯಂತಿ -10 ಲಕ್ಷ
  • ಬಸವ ಜಯಂತಿ -69 ಲಕ್ಷ
  • ಶಂಕರ ಜಯಂತಿ- 10 ಲಕ್ಷ
  • ಭಗೀರಥ ಜಯಂತಿ- 69 ಲಕ್ಷ
  • ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ -15 ಲಕ್ಷ
  • ಶ್ರೀ ಕೃಷ್ಣ ಜಯಂತಿ- 69 ಲಕ್ಷ
  • ಬ್ರಹ್ಮಶ್ರೀ ನಾರಾಯಣಗುರು ಜಯಂತಿ- 69 ಲಕ್ಷ
  • ವಿಶ್ವಕರ್ಮ ಜಯಂತಿ- 69 ಲಕ್ಷ
  • ಟಿಪ್ಪು ಸುಲ್ತಾನ್ ಜಯಂತಿ- 69 ಲಕ್ಷ
  • ಕನಕ ಜಯಂತಿ- 69 ಲಕ್ಷ
  • ಸಿದ್ದರಾಮ‌ ಜಯಂತಿ- 69 ಲಕ್ಷ
  • ಅಂಬಿಗರ ಚೌಡಯ್ಯ ಜಯಂತಿ- 69 ಲಕ್ಷ
  • ವಾಲ್ಮೀಕಿ ಜಯಂತಿ- 69 ಲಕ್ಷ
  • ಶಿವಾಜಿ ಜಯಂತಿ -69 ಲಕ್ಷ
  • ದಲಿತ ವಚನಕಾರರ ಜಯಂತಿ- 69 ಲಕ್ಷ
  • ಸರ್ವಜ್ಞ ಜಯಂತಿ -69 ಲಕ್ಷ
  • ವಿವೇಕಾನಂದ ಜಯಂತಿ- 40 ಲಕ್ಷ
Intro:Jayanthi expenditureBody:KN_BNG_02_30_JAYANTHIEXPENDITURE_RTI_SCRIPT_VENKAT_7201951

ಜಯಂತಿಗಳ ಹೆಸರಲ್ಲಿ ಕೋಟಿ ಕೋಟಿ ಲೂಟಿ?; ತನಿಖೆ ನಡೆಸುವಂತೆ ಸಿಎಸ್ ಗೆ ದೂರು

ಬೆಂಗಳೂರು: ‌ಜಯಂತಿ ಹೆಸರಲ್ಲಿ ಅಧಿಕಾರಿಗಳು ಕೋಟಿ‌ ಕೋಟಿ ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಆರ್ ಟಿಐ ಕಾರ್ಯಕರ್ತರೊಬ್ಬರು ಆರ್ ಟಿಐ‌‌ ಮೂಲಕ‌‌ ಮಾಹಿತಿ ಪಡೆದು, ಜಯಂತಿ ಹೆಸರಲ್ಲಿ ಸರ್ಕಾರ ಮಾಡಿರುವ ಖರ್ಚುಗಳ ಬಗ್ಗೆ ಮಾಹಿತಿ ಕಲೆ‌ ಹಾಕಿದ್ದಾರೆ. 2013 ರಿಂದ 2018 ವರೆಗೆ ನಡೆದ ಗಣ್ಯರ ಜಯಂತಿ ಗಳ ದಾಖಲೆ ಸಂಗ್ರಹಿಸಿದ್ದು, ಅದರ ಪ್ರಕಾರ ಸಿದ್ದು ಸರ್ಕಾರದ ವೇಳೆ ಜಯಂತಿಗಳ ಹೆಸರಲ್ಲಿ ಒಟ್ಟು 17.65 ಕೋಟಿ ರೂ. ಖರ್ಚಾಗಿರುವುದು ಬಯಲಾಗಿದೆ.

ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆ ಮಾಡಿದ್ದೇವೆ ಅಂತ ದಾಖಲೆಯಲ್ಲಿ ತೋರಿಸಿದ್ದಾರೆ. ಆದ್ರೆ ನಿಜವಾಗಿಯೂ ಈ ಜಯಂತಿ ಆಚರಣೆಗಳು ನಡೆದಿರುವ ಬಗ್ಗೆ ಅನುಮಾನ ಮೂಡಿದೆ ಎಂದು ಆರೋಪಿಸಿದ್ದಾರೆ.

ಗಣ್ಯ ವ್ಯಕ್ತಿಗಳ ಜಯಂತಿ ಆಚರಣೆಗೆ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿದ್ದು, ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಆರ್ ಟಿಐ ಕಾರ್ಯಕರ್ತ ಮರಿಲಿಂಗೇಗೌಡ‌ ಮಾಲಿ ಪಾಟೀಲ್ ಎಂಬವರು ದೂರು ನೀಡಿದ್ದಾರೆ.

ರಾಜ್ಯದ ಜನತೆಗೆ ಬಸವ ಜಯಂತಿ, ಕನಕ ಜಯಂತಿ, ಟಿಪ್ಪು ಜಯಂತಿ, ಟಿಪ್ಪು ಜಯಂತಿ, ಅಂಬೇಡ್ಕರ್ ಜಯಂತಿ, ವಾಲ್ಮಿಕಿ ಜಯಂತಿಯನ್ನು ಸರ್ಕಾರವು ವಿಧಾನಸೌಧದಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವುದು ಗೊತ್ತಿದೆ. ಆದರೆ ಅನೇಕ ಗಣ್ಯ ವ್ಯಕ್ತಿಗಳ ಜಯಂತಿಯನ್ನು ಜಿಲ್ಲಾ‌ ಮಟ್ಟದಲ್ಲಿ‌ ಆಚರಿಸಿದ್ದೇವೆ ಎಂದು ಹೇಳಿ ಅಧಿಕಾರಿಗಳು 2013-2018ರವರೆಗೆ ಒಟ್ಟಾರೆ 17.65 ಕೋಟಿ ರೂ.ವನ್ನು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಭರಿಸಿದೆ. ಅನೇಕ ಗಣ್ಯರ ಹೆಸರಲ್ಲಿ ಜಯಂತಿ ಆಚರಿಸದೆ ಅಧಿಕಾರಿಗಳು ಹಣ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಆರೋಪಿಸಿದ್ದಾರೆ.

ಯಾವ ಜಯಂತಿಗೆ ಎಷ್ಟು ಖರ್ಚು?:

ದೇವರ ದಾಸಿಮಯ್ಯ ಜಯಂತಿ 69 ಲಕ್ಷ

ಭಗವಾನ್ ಮಹವೀರ್ ಜಯಂತಿ 69 ಲಕ್ಷ

ಅಕ್ಕಮಹಾದೇವಿ ಜಯಂತಿ 10 ಲಕ್ಷ

ಬಸವ ಜಯಂತಿ 69 ಲಕ್ಷ

ಶಂಕರ ಜಯಂತಿ 10 ಲಕ್ಷ

ಭಗೀರಥ ಜಯಂತಿ 69 ಲಕ್ಷ

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ 15 ಲಕ್ಷ

ಶ್ರೀ ಕೃಷ್ಣ ಜಯಂತಿ 69 ಲಕ್ಷ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ 69 ಲಕ್ಷ

ವಿಶ್ವಕರ್ಮ ಜಯಂತಿ 69 ಲಕ್ಷ

ಟಿಪ್ಪು ಸುಲ್ತಾನ್ ಜಯಂತಿ 69 ಲಕ್ಷ

ಕನಕ ಜಯಂತಿ 69 ಲಕ್ಷ

ಸಿದ್ದರಾಮ‌ ಜಯಂತಿ 69 ಲಕ್ಷ

ಅಂಬಿಗರ ಚೌಡಯ್ಯ ಜಯಂತಿ 69 ಲಕ್ಷ

ವಾಲ್ಮೀಕಿ ಜಯಂತಿ 69 ಲಕ್ಷ

ಶಿವಾಜಿ ಜಯಂತಿ 69ಲಕ್ಷ

ದಲಿತ ವಚನಕಾರರ ಜಯಂತಿ 69 ಲಕ್ಷ

ಸರ್ವಜ್ಞ ಜಯಂತಿ 69 ಲಕ್ಷ

ಭಗೀರಥ ಜಯಂತಿ 69 ಲಕ್ಷ

ವಿವೇಕಾನಂದ ಜಯಂತಿ 40 ಲಕ್ಷConclusion:Venakat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.