ETV Bharat / state

ಕ್ಯಾಮೆರಾಗಳು ಕಂಡಂತೆ ಕೋವಿಡ್ ಲಾಕ್‌ಡೌನ್‌ ಕ್ಷಣಗಳು.. ಫೋಟೋ ಜರ್ನಲಿಸ್ಟ್​​ಗಳನ್ನ ಪ್ರಶಂಸಿಸಿದ ಸಿಎಂ..

author img

By

Published : Nov 27, 2020, 4:49 PM IST

ಸದಾ ಜನಜಂಗುಳಿ ಹಾಗೂ ವಾಹನಗಳಿ‌ಂದ ಗಿಜುಗುಡುತ್ತಿದ್ದ ನಗರದ ಹೃದಯ ಭಾಗ ಮೆಜೆಸ್ಟಿಕ್ ವಾಹನಗಳಿಲ್ಲದೆ ಖಾಲಿ ಇರುವ ಚಿತ್ರ. ಹೀಗೆ ಹತ್ತು ಹಲವು ಛಾಯಾಚಿತ್ರಗಳನ್ನು ಇಂದು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್​ ವತಿಯಿಂದ ಆಯೋಜಿಸಿದ್ದ ಕೋವಿಡ್ -19 ಛಾಯಾಚಿತ್ರ ಪ್ರದರ್ಶನದಲ್ಲಿರಿಸಲಾಗಿತ್ತು..

hotojournalists-acclaimed-cm-news
ಫೋಟೋ ಜರ್ನಲಿಸ್ಟ್​​ಗಳನ್ನ ಪ್ರಶಂಸಿಸಿದ ಸಿಎಂ..

ಬೆಂಗಳೂರು : ನಿತ್ಯ ಪತ್ರಿಕೆಗಳಲ್ಲಿ ಹಲವಾರು ಛಾಯಾಚಿತ್ರಗಳನ್ನು ಕಾಣುತ್ತೇವೆ. ಅದರಲ್ಲಿ ಎಷ್ಟೋ ಚಿತ್ರಪಟಗಳು ಜನರ ಮೆಚ್ಚುಗೆಗೆ ಪಾತ್ರವಾಗಿರುತ್ತವೆ. ಅಂತಹ ಚಿತ್ರಗಳನ್ನು ಕ್ಲಿಕ್ಕಿಸಿದ ಫೋಟೋ ಜರ್ನಲಿಸ್ಟ್​ಗಳ ಪಟಗಳನ್ನು ನಗರದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಫೋಟೋ ಜರ್ನಲಿಸ್ಟ್​​ಗಳನ್ನ ಪ್ರಶಂಸಿದ ಸಿಎಂ..

ಕೊರೊನಾ ಇಡೀ ವಿಶ್ವವನ್ನೇ ನಡುಗಿಸಿದೆ. ಪ್ರತಿ ಕ್ಷಣ ಉಸಿರಾಡೋದಕ್ಕೂ ಭಯ ಪಡುವಂತಾಗಿದೆ. ಈ ಸಮಯದಲ್ಲಿ ಪ್ರಜೆಗಳ ಹಿತದೃಷ್ಠಿಗಾಗಿ ಪ್ರಧಾನಿ ಕೂಡ‌ ದೇಶದೆಲ್ಲಡೆ ಲಾಕ್‌ಡೌನ್ ಘೋಷಿಸಿದ್ದರು.‌ ಲಾಕ್‌ಡೌನ್ ಸಮಯದಲ್ಲಿ ಪೊಲೀಸರು, ಪೌರ ಕಾರ್ಮಿಕರು, ವೈದ್ಯರು ಜನರ ಒಳಿತಿಗಾಗಿ ಕೊರೊನಾ ಭಯ ಬಿಟ್ಟು ಕಾರ್ಯ‌ ನಿರ್ವಹಿಸಿದ್ದಾರೆ.

ಇವರ ಜೊತೆ‌ ಜೊತೆಗೆ ಮಾಧ್ಯಮದವರು ಕೂಡ ಪ್ರತಿಕ್ಷಣದ ಸುದ್ದಿಯನ್ನ ಜನರಿಗೆ ತಲುಪಿಸುವಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಪತ್ರಿಕಾ‌ ಮಾಧ್ಯಮದ ಛಾಯಾಗ್ರಾಹಕರು ತಮ್ಮ ಕೆಲಸದ ಅವಧಿಯಲ್ಲಿ ತಾವು ಕ್ಲಿಕ್ಕಿಸಿದ‌ ವಿಭಿನ್ನ ಛಾಯಾಚಿತ್ರಗಳನ್ನ ನಗರದ ಚಿತ್ರಕಲಾ‌ ಪರಿಷತ್‌ನಲ್ಲಿ ಪ್ರದರ್ಶನಕ್ಕಿರಿಸಿದ್ದರು.

ಸಾಮಾಜಿಕ‌ ಅಂತರ‌ ಕಾಯ್ದುಕೊಳ್ಳಲು‌ ಜನರು ಬಿರು ಬಿಸಿಲಿನಲ್ಲಿ ಕಾಯಲು ಆಗದೇ ತಮ್ಮ ಪಾದರಕ್ಷೆಗಳನ್ನ ಸಾಲಿನಲ್ಲಿ‌ ಇರಿಸಿ‌ರುವ ಚಿತ್ರ. ಲಾಕ್‌ಡೌನ್ ಸಮಯದಲ್ಲಿ ಮನೆ‌ ಬಾಡಿಗೆ ಕಟ್ಟಲಾಗದೇ ಊರು ಬಿಟ್ಟು ಹೊಗುತ್ತಿರುವ ಜನರು. ಪ್ರತಿಮೆಗಳಿಗೂ ಮಾಸ್ಕ್ ಹಾಕಿ ಎಲ್ಲರೂ ಧರಿಸಬೇಕೆಂದು ಜಾಗೃತಿ‌ ಮೂಡಿಸುವ ಚಿತ್ರ.

ಸದಾ ಜನಜಂಗುಳಿ ಹಾಗೂ ವಾಹನಗಳಿ‌ಂದ ಗಿಜುಗುಡುತ್ತಿದ್ದ ನಗರದ ಹೃದಯ ಭಾಗ ಮೆಜೆಸ್ಟಿಕ್ ವಾಹನಗಳಿಲ್ಲದೆ ಖಾಲಿ ಇರುವ ಚಿತ್ರ. ಹೀಗೆ ಹತ್ತು ಹಲವು ಛಾಯಾಚಿತ್ರಗಳನ್ನು ಇಂದು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್​ ವತಿಯಿಂದ ಆಯೋಜಿಸಿದ್ದ ಕೋವಿಡ್ -19 ಛಾಯಾಚಿತ್ರ ಪ್ರದರ್ಶನದಲ್ಲಿರಿಸಲಾಗಿತ್ತು.

ಈ ಪ್ರದರ್ಶನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದರು. ಇದರಲ್ಲಿ 80ಕ್ಕೂ ಹೆಚ್ಚು ವಾರ್ತಾ ಛಾಯಾಗ್ರಾಹಕರು ಕ್ಲಿಕ್ಕಿಸಿದ್ದ 115ಕ್ಕೂ ಅಧಿಕ ಛಾಯಾಚಿತ್ರಗಳನ್ನ ಪ್ರದರ್ಶನಕ್ಕಿಡಲಾಗಿತ್ತು. ಪ್ರತಿ ಛಾಯಾಚಿತ್ರಗಳನ್ನ ವೀಕ್ಷಿಸಿ ಛಾಯಾಗ್ರಾಹಕರನ್ನ ಸಿಎಂ ಪ್ರಶಂಸಿಸಿದರು.

ಭಾನುವಾರದವರೆಗೆ ಈ ಪ್ರರ್ದಶನವಿದ್ದು, ಫೋಟೋ ಜರ್ನಲಿಸ್ಟ್​​ಗಳು ಒಂದು ಸೂಕ್ತ ಚಿತ್ರಕ್ಕಾಗಿ ಹೇಗೆಲ್ಲ ಸಾಹಸ ಮಾಡುತ್ತಾರೆ ಎಂದು ನೀವೂ ಒಮ್ಮೆ ನೋಡಬಹುದು.

ಇದನ್ನೂ ಓದಿ: ಸಿಲಿಕಾನ್​ ಸಿಟಿಯಲ್ಲಿ ಕಲಾ ಪ್ರಿಯರನ್ನು ಆಕರ್ಷಿಸುತ್ತಿವೆ ಗ್ರಾಫಿಕ್ ಪ್ರಿಂಟ್ ಕಲಾಕೃತಿಗಳು

ಬೆಂಗಳೂರು : ನಿತ್ಯ ಪತ್ರಿಕೆಗಳಲ್ಲಿ ಹಲವಾರು ಛಾಯಾಚಿತ್ರಗಳನ್ನು ಕಾಣುತ್ತೇವೆ. ಅದರಲ್ಲಿ ಎಷ್ಟೋ ಚಿತ್ರಪಟಗಳು ಜನರ ಮೆಚ್ಚುಗೆಗೆ ಪಾತ್ರವಾಗಿರುತ್ತವೆ. ಅಂತಹ ಚಿತ್ರಗಳನ್ನು ಕ್ಲಿಕ್ಕಿಸಿದ ಫೋಟೋ ಜರ್ನಲಿಸ್ಟ್​ಗಳ ಪಟಗಳನ್ನು ನಗರದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಫೋಟೋ ಜರ್ನಲಿಸ್ಟ್​​ಗಳನ್ನ ಪ್ರಶಂಸಿದ ಸಿಎಂ..

ಕೊರೊನಾ ಇಡೀ ವಿಶ್ವವನ್ನೇ ನಡುಗಿಸಿದೆ. ಪ್ರತಿ ಕ್ಷಣ ಉಸಿರಾಡೋದಕ್ಕೂ ಭಯ ಪಡುವಂತಾಗಿದೆ. ಈ ಸಮಯದಲ್ಲಿ ಪ್ರಜೆಗಳ ಹಿತದೃಷ್ಠಿಗಾಗಿ ಪ್ರಧಾನಿ ಕೂಡ‌ ದೇಶದೆಲ್ಲಡೆ ಲಾಕ್‌ಡೌನ್ ಘೋಷಿಸಿದ್ದರು.‌ ಲಾಕ್‌ಡೌನ್ ಸಮಯದಲ್ಲಿ ಪೊಲೀಸರು, ಪೌರ ಕಾರ್ಮಿಕರು, ವೈದ್ಯರು ಜನರ ಒಳಿತಿಗಾಗಿ ಕೊರೊನಾ ಭಯ ಬಿಟ್ಟು ಕಾರ್ಯ‌ ನಿರ್ವಹಿಸಿದ್ದಾರೆ.

ಇವರ ಜೊತೆ‌ ಜೊತೆಗೆ ಮಾಧ್ಯಮದವರು ಕೂಡ ಪ್ರತಿಕ್ಷಣದ ಸುದ್ದಿಯನ್ನ ಜನರಿಗೆ ತಲುಪಿಸುವಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಪತ್ರಿಕಾ‌ ಮಾಧ್ಯಮದ ಛಾಯಾಗ್ರಾಹಕರು ತಮ್ಮ ಕೆಲಸದ ಅವಧಿಯಲ್ಲಿ ತಾವು ಕ್ಲಿಕ್ಕಿಸಿದ‌ ವಿಭಿನ್ನ ಛಾಯಾಚಿತ್ರಗಳನ್ನ ನಗರದ ಚಿತ್ರಕಲಾ‌ ಪರಿಷತ್‌ನಲ್ಲಿ ಪ್ರದರ್ಶನಕ್ಕಿರಿಸಿದ್ದರು.

ಸಾಮಾಜಿಕ‌ ಅಂತರ‌ ಕಾಯ್ದುಕೊಳ್ಳಲು‌ ಜನರು ಬಿರು ಬಿಸಿಲಿನಲ್ಲಿ ಕಾಯಲು ಆಗದೇ ತಮ್ಮ ಪಾದರಕ್ಷೆಗಳನ್ನ ಸಾಲಿನಲ್ಲಿ‌ ಇರಿಸಿ‌ರುವ ಚಿತ್ರ. ಲಾಕ್‌ಡೌನ್ ಸಮಯದಲ್ಲಿ ಮನೆ‌ ಬಾಡಿಗೆ ಕಟ್ಟಲಾಗದೇ ಊರು ಬಿಟ್ಟು ಹೊಗುತ್ತಿರುವ ಜನರು. ಪ್ರತಿಮೆಗಳಿಗೂ ಮಾಸ್ಕ್ ಹಾಕಿ ಎಲ್ಲರೂ ಧರಿಸಬೇಕೆಂದು ಜಾಗೃತಿ‌ ಮೂಡಿಸುವ ಚಿತ್ರ.

ಸದಾ ಜನಜಂಗುಳಿ ಹಾಗೂ ವಾಹನಗಳಿ‌ಂದ ಗಿಜುಗುಡುತ್ತಿದ್ದ ನಗರದ ಹೃದಯ ಭಾಗ ಮೆಜೆಸ್ಟಿಕ್ ವಾಹನಗಳಿಲ್ಲದೆ ಖಾಲಿ ಇರುವ ಚಿತ್ರ. ಹೀಗೆ ಹತ್ತು ಹಲವು ಛಾಯಾಚಿತ್ರಗಳನ್ನು ಇಂದು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್​ ವತಿಯಿಂದ ಆಯೋಜಿಸಿದ್ದ ಕೋವಿಡ್ -19 ಛಾಯಾಚಿತ್ರ ಪ್ರದರ್ಶನದಲ್ಲಿರಿಸಲಾಗಿತ್ತು.

ಈ ಪ್ರದರ್ಶನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದರು. ಇದರಲ್ಲಿ 80ಕ್ಕೂ ಹೆಚ್ಚು ವಾರ್ತಾ ಛಾಯಾಗ್ರಾಹಕರು ಕ್ಲಿಕ್ಕಿಸಿದ್ದ 115ಕ್ಕೂ ಅಧಿಕ ಛಾಯಾಚಿತ್ರಗಳನ್ನ ಪ್ರದರ್ಶನಕ್ಕಿಡಲಾಗಿತ್ತು. ಪ್ರತಿ ಛಾಯಾಚಿತ್ರಗಳನ್ನ ವೀಕ್ಷಿಸಿ ಛಾಯಾಗ್ರಾಹಕರನ್ನ ಸಿಎಂ ಪ್ರಶಂಸಿಸಿದರು.

ಭಾನುವಾರದವರೆಗೆ ಈ ಪ್ರರ್ದಶನವಿದ್ದು, ಫೋಟೋ ಜರ್ನಲಿಸ್ಟ್​​ಗಳು ಒಂದು ಸೂಕ್ತ ಚಿತ್ರಕ್ಕಾಗಿ ಹೇಗೆಲ್ಲ ಸಾಹಸ ಮಾಡುತ್ತಾರೆ ಎಂದು ನೀವೂ ಒಮ್ಮೆ ನೋಡಬಹುದು.

ಇದನ್ನೂ ಓದಿ: ಸಿಲಿಕಾನ್​ ಸಿಟಿಯಲ್ಲಿ ಕಲಾ ಪ್ರಿಯರನ್ನು ಆಕರ್ಷಿಸುತ್ತಿವೆ ಗ್ರಾಫಿಕ್ ಪ್ರಿಂಟ್ ಕಲಾಕೃತಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.