ETV Bharat / state

ಎಂಥಾ ಕಿಲಾಡಿಗಳು ನೋಡಿ... ಇವರು ವಂಚಿಸಿದ್ದು ಸಾಮಾನ್ಯರಿಗಲ್ಲ ಶಾಸಕನ ಪತ್ನಿಗೆ - fraud in MLA name

ಮಾಜಿ ಶಾಸಕರ ಹೆಸರು ಹೇಳಿಕೊಂಡು, ನಾವು ಶಾಸಕರಿಗೆ ತುಂಬಾ ಆತ್ಮೀಯರು ಎಂದು ಹೇಳಿಕೊಂಡು ಸಾರ್ವಜನಿಕರ ಬಳಿ ದಂಪತಿಗಳು ವಂಚನೆ ಮಾಡಿದ್ದಾರೆ. ಇನ್ನು ಈ ಕುರಿತು ಮಾಜಿ ಶಾಸಕರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಂಚನೆ ಮಾಡಿದ ದಂಪತಿಗಳು
author img

By

Published : Nov 2, 2019, 10:15 AM IST

Updated : Nov 2, 2019, 10:24 AM IST

ಬೆಂಗಳೂರು: ಮಾಜಿ ಶಾಸಕರ ಕುಟುಂಬದ ಆಪ್ತರು ಎಂದು ಹೇಳಿಕೊಂಡು ಹತ್ತಾರು ಜನರಿಗೆ ದಂಪತಿಯು ವಂಚನೆ ಎಸಗಿದ್ದಾರೆ ಎಂದು ಮಾಜಿ ಶಾಸಕ ಆರ್.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ಕಲಾಸಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ.

ಬಸವನಗುಡಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ಶ್ರೀದೇವಿ ಈಕೆಯ ಗಂಡ ಸದಾಶಿವ ಎಂಬುವವರು ವಂಚನೆ ಎಸಗಿದ್ದಾರೆ ಎಂಬ ಆರೋಪದಡಿ ನೀಡಿದ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿ ಕೊಂಡಿದ್ದು, ಸದ್ಯ ದಂಪತಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ: ಮಾಜಿ ಶಾಸಕರಾದ ಆರ್.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ನನಗೆ ಪರಿಚಯಸ್ಥರು ಎಂದು ಹೇಳಿಕೊಂಡು ಶ್ರೀದೇವಿ ಹಾಗೂ ಸದಾಶಿವ ಸಾರ್ವಜನಿಕರ ಬಳಿ ಲಕ್ಷಾಂತರ ಸಾಲ ಪಡೆದಿದ್ದರು. ಅದಲ್ಲದೆ, 30 ವರ್ಷಗಳಿಂದ ಪರಚಿತರಾಗಿದ್ದ ಮಮತಾ ದೇವರಾಜ್ ಬಳಿಯೂ ಮಗಳ ಮದುವೆ, ಅನಾರೋಗ್ಯ ವಿಚಾರ ಹೀಗೆ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ 85 ಲಕ್ಷ ರೂ. ಹಾಗೂ 40 ಲಕ್ಷ ರೂ.ಮೌಲ್ಯದ ಒಡವೆ ಪಡೆದುಕೊಂಡಿದ್ದಾರೆ.‌ ನೀಡಿದ ಸಾಲ ವಾಪಸ್ ಕೇಳಿದಾಗ ಆರೋಪಿ ಸದಾಶಿವ್ ಎರಡು ನಕಲಿ ಚೆಕ್ ನೀಡಿ ವಂಚಿಸಿದ್ದಾನೆ. ಹಣ ಕೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಸಿದ್ದಾನೆ ಎಂದು ದೂರಿನಲ್ಲಿ ಮಮತಾ ದೇವರಾಜ್ ಆರೋಪಿಸಿದ್ದಾರೆ.

ಬೆಂಗಳೂರು: ಮಾಜಿ ಶಾಸಕರ ಕುಟುಂಬದ ಆಪ್ತರು ಎಂದು ಹೇಳಿಕೊಂಡು ಹತ್ತಾರು ಜನರಿಗೆ ದಂಪತಿಯು ವಂಚನೆ ಎಸಗಿದ್ದಾರೆ ಎಂದು ಮಾಜಿ ಶಾಸಕ ಆರ್.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ಕಲಾಸಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ.

ಬಸವನಗುಡಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ಶ್ರೀದೇವಿ ಈಕೆಯ ಗಂಡ ಸದಾಶಿವ ಎಂಬುವವರು ವಂಚನೆ ಎಸಗಿದ್ದಾರೆ ಎಂಬ ಆರೋಪದಡಿ ನೀಡಿದ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿ ಕೊಂಡಿದ್ದು, ಸದ್ಯ ದಂಪತಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ: ಮಾಜಿ ಶಾಸಕರಾದ ಆರ್.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ನನಗೆ ಪರಿಚಯಸ್ಥರು ಎಂದು ಹೇಳಿಕೊಂಡು ಶ್ರೀದೇವಿ ಹಾಗೂ ಸದಾಶಿವ ಸಾರ್ವಜನಿಕರ ಬಳಿ ಲಕ್ಷಾಂತರ ಸಾಲ ಪಡೆದಿದ್ದರು. ಅದಲ್ಲದೆ, 30 ವರ್ಷಗಳಿಂದ ಪರಚಿತರಾಗಿದ್ದ ಮಮತಾ ದೇವರಾಜ್ ಬಳಿಯೂ ಮಗಳ ಮದುವೆ, ಅನಾರೋಗ್ಯ ವಿಚಾರ ಹೀಗೆ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ 85 ಲಕ್ಷ ರೂ. ಹಾಗೂ 40 ಲಕ್ಷ ರೂ.ಮೌಲ್ಯದ ಒಡವೆ ಪಡೆದುಕೊಂಡಿದ್ದಾರೆ.‌ ನೀಡಿದ ಸಾಲ ವಾಪಸ್ ಕೇಳಿದಾಗ ಆರೋಪಿ ಸದಾಶಿವ್ ಎರಡು ನಕಲಿ ಚೆಕ್ ನೀಡಿ ವಂಚಿಸಿದ್ದಾನೆ. ಹಣ ಕೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಸಿದ್ದಾನೆ ಎಂದು ದೂರಿನಲ್ಲಿ ಮಮತಾ ದೇವರಾಜ್ ಆರೋಪಿಸಿದ್ದಾರೆ.

Intro:Body:ಮಾಜಿ ಶಾಸಕನ ಪತ್ನಿಯಿಂದ ಲಕ್ಷಾಂತರ ರೂ.ಸಾಲ ಪಡೆದು ವಂಚನೆ: ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು: ಮಾಜಿ ಶಾಸಕರ ಕುಟುಂಬದ ಆಪ್ತರು ಎಂದು ಹೇಳಿಕೊಂಡು ಹತ್ತಾರು ಜನರಿಗೆ ದಂಪತಿಯು ವಂಚನೆ ಎಸಗಿರುವ ಆರೋಪಡಡಿ ಮಾಜಿ ಶಾಸಕ ಆರ್.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ಕಲಾಸಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ
ಬಸವನಗುಡಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ಶ್ರೀದೇವಿ ಈಕೆಯ ಗಂಡ ಸದಾಶಿವ ಎಂಬುವರು ವಂಚನೆ ಎಸಗಿರುವ ಆರೋಪದಡಿ ನೀಡಿದ ದೂರಿನ್ವನಯ ಪೊಲೀಸರು ಎಫ್ಆರ್ ದಾಖಲಿಸಿ ಕೊಂಡಿದ್ದಾರೆ.‌ ಸದ್ಯ ದಂಪತಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಜಿ ಶಾಸಕರಾದ ಆರ್.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ನನಗೆ ಪರಿಚಯಸ್ಥರು ಎಂದು ಹೇಳಿಕೊಂಡು ಸಾರ್ವಜನಿಕರಗೆ ಲಕ್ಷಾಂತರ ಸಾಲ ಪಡೆದಿದ್ದರು.
ಇಂಟೆರೆಸ್ಟಿಂಗ್ ವಿಷ್ಯ ವೆಂದರೆ 30 ವರ್ಷಗಳಿಂದ ಪರಚಿತರಾಗಿದ್ದ ಮಮತಾ ದೇವರಾಜ್ ಬಳಿಯು ಮಗಳ ಮದುವೆ, ಅನಾರೋಗ್ಯ ವಿಚಾರ ಹೀಗೆ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ 85 ಲಕ್ಷ ರೂ. ಹಣ ಹಾಗೂ 40 ಲಕ್ಷ ರೂ.ಮೌಲ್ಯದ ಒಡವೆ ಪಡೆದುಕೊಂಡಿದ್ದಾರೆ.‌ ನೀಡಿದ ಸಾಲ ವಾಪಸ್ ನೀಡುವಂತೆ ಕೇಳಿದಾಗ ಆರೋಪಿ ನಕಲಿ ಸದಾಶಿವ್ ಎರಡು ಚೆಕ್ ನೀಡಿ ವಂಚಿಸಿದ್ದಾನೆ. ಹಣ ಕೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಮಮತಾ ದೇವರಾಜ್ ಆರೋಪಿಸಿದ್ದಾರೆ..Conclusion:
Last Updated : Nov 2, 2019, 10:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.