ETV Bharat / state

ಕೊರೊನಾ ವರದಿ ಪಾಸಿಟಿವ್​: ಹೆದರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ - corona infected Suicide in Bangalore news3

ಇಂದು ಮಧ್ಯಾಹ್ನದವರೆಗೆ ಕಾಣದೆ ಇರುವುದನ್ನು ನೋಡಿದ ಅಣ್ಣನ ಮಗ ಮನೆ ಮಹಡಿ ಮೇಲೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
author img

By

Published : Jul 21, 2020, 5:23 PM IST

ಬೆಂಗಳೂರು : ಸಿಲಿಕಾ‌ನ್ ಸಿಟಿಯಲ್ಲಿ 54 ವರ್ಷದ ವ್ಯಕ್ತಿ ಕೊರೊನಾ ಪಾಸಿಟಿವ್ ಬಂದ ಕಾರಣ ಬ್ಲೇಡ್​ನಿಂದ ಕೈ ಮತ್ತು ಕಾಲಿನ ನರಗಳನ್ನು ತುಂಡರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮತ್ತಿಕೆರೆಯ 2 ನೇ ಮುಖ್ಯರಸ್ತೆಯ ದೇವಸಂದ್ರ ನಿವಾಸಿ ಆತ್ಮಹತ್ಯೆಗೆ ಶರಣಾದವರು. ಕೊರೊನಾ ಲಕ್ಷಣ ಇರುವ ಕಾರಣ ಇವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ನಿನ್ನೆ ರಾತ್ರಿ ಪಾಸಿಟಿವ್ ರಿಪೋರ್ಟ್​ ಬಂದಿದೆ ಎಂದು ಆರೋಗ್ಯ ಇಲಾಖೆಯಿಂದ ಕರೆ ಬಂದಿತ್ತು. ಈ ಕುರಿತು ಫೋನ್​ನಲ್ಲಿ ಮಾತನಾಡಿದ ಬಳಿಕ ಮಧ್ಯರಾತ್ರಿ ಮನೆಯ ಮಹಡಿ ಮೇಲೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನದವರೆಗೆ ಕಾಣದೆ ಇರುವುದನ್ನು ನೋಡಿದ ಅಣ್ಣನ ಮಗ ಮನೆ ಮಹಡಿ ಮೇಲೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಡಲೇ ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಎಮ್​.ಎಸ್​.ರಾಮಯ್ಯ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದಾರೆ.

ಪ್ರಾಥಮಿಕ ತನಿಖೆ ವೇಳೆ ಈತ ಯಶವಂತಪುರದಲ್ಲಿ ಬೀಡ ಅಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದ. ಆದರೆ ಕಳೆದ ಒಂದು ವಾರದ ಹಿಂದೆ ಈತನ ಅಣ್ಣ ಸೋಂಕು ತಗುಲಿ ಐಸೊಲೇಷನ್​ನಲ್ಲಿದ್ದರು. ಇವರಿಂದ ಈತನಿಗೂ ಕೊರೊನಾ ತಗುಲಿದೆ ಎಂದು ತಿಳಿದುಬಂದಿದೆ.

ಈ ಕುರಿತು ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು : ಸಿಲಿಕಾ‌ನ್ ಸಿಟಿಯಲ್ಲಿ 54 ವರ್ಷದ ವ್ಯಕ್ತಿ ಕೊರೊನಾ ಪಾಸಿಟಿವ್ ಬಂದ ಕಾರಣ ಬ್ಲೇಡ್​ನಿಂದ ಕೈ ಮತ್ತು ಕಾಲಿನ ನರಗಳನ್ನು ತುಂಡರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮತ್ತಿಕೆರೆಯ 2 ನೇ ಮುಖ್ಯರಸ್ತೆಯ ದೇವಸಂದ್ರ ನಿವಾಸಿ ಆತ್ಮಹತ್ಯೆಗೆ ಶರಣಾದವರು. ಕೊರೊನಾ ಲಕ್ಷಣ ಇರುವ ಕಾರಣ ಇವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ನಿನ್ನೆ ರಾತ್ರಿ ಪಾಸಿಟಿವ್ ರಿಪೋರ್ಟ್​ ಬಂದಿದೆ ಎಂದು ಆರೋಗ್ಯ ಇಲಾಖೆಯಿಂದ ಕರೆ ಬಂದಿತ್ತು. ಈ ಕುರಿತು ಫೋನ್​ನಲ್ಲಿ ಮಾತನಾಡಿದ ಬಳಿಕ ಮಧ್ಯರಾತ್ರಿ ಮನೆಯ ಮಹಡಿ ಮೇಲೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನದವರೆಗೆ ಕಾಣದೆ ಇರುವುದನ್ನು ನೋಡಿದ ಅಣ್ಣನ ಮಗ ಮನೆ ಮಹಡಿ ಮೇಲೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಡಲೇ ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಎಮ್​.ಎಸ್​.ರಾಮಯ್ಯ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದಾರೆ.

ಪ್ರಾಥಮಿಕ ತನಿಖೆ ವೇಳೆ ಈತ ಯಶವಂತಪುರದಲ್ಲಿ ಬೀಡ ಅಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದ. ಆದರೆ ಕಳೆದ ಒಂದು ವಾರದ ಹಿಂದೆ ಈತನ ಅಣ್ಣ ಸೋಂಕು ತಗುಲಿ ಐಸೊಲೇಷನ್​ನಲ್ಲಿದ್ದರು. ಇವರಿಂದ ಈತನಿಗೂ ಕೊರೊನಾ ತಗುಲಿದೆ ಎಂದು ತಿಳಿದುಬಂದಿದೆ.

ಈ ಕುರಿತು ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.