ETV Bharat / state

ಬೆಂಗಳೂರಿನ ರೆಸಾರ್ಟ್​​ನಲ್ಲಿ ಮಧ್ಯಪ್ರದೇಶ ಶಾಸಕರು... ಯೂತ್​ ಕಾಂಗ್ರೆಸ್​​ನಿಂದ ಪ್ರೊಟೆಸ್ಟ್​

author img

By

Published : Mar 11, 2020, 1:02 PM IST

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಕ್ಷಣಕ್ಷಣಕ್ಕೂ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್​ನ 19 ಶಾಸಕರು ಬೆಂಗಳೂರಿನ ಪ್ರೆಸ್ಟೀಜ್​ ಗಾಲ್ಫ್​ ಶೈರ್​​​ರೆಸಾರ್ಟ್​​ನಲ್ಲಿ ವಾಸ್ತವ್ಯ ಹೂಡಿದ್ದಾರೆ.

congress protest infront of prestige galf resort
ಯೂತ್​ ಕಾಂಗ್ರೆಸ್​​ನಿಂದ ಪ್ರೊಟೆಸ್ಟ್​

ಬೆಂಗಳೂರು: ಮಧ್ಯಪ್ರದೇಶ ಕಾಂಗ್ರೆಸ್‌ನ 19 ಶಾಸಕರು ದೇವನಹಳ್ಳಿ ತಾಲೂಕಿನ ನಂದಿಬೆಟ್ಟ ಸಮೀಪದಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್​ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಇದೀಗ ಕಮಲ್​ನಾಥ್​ ಸರ್ಕಾರ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಇದರ ಬೆನ್ನಲ್ಲೇ ರೆಸಾರ್ಟ್​​ ಮುಂದುಗಡೆ ಯೂತ್​ ಕಾಂಗ್ರೆಸ್​​​ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ಯೂತ್​ ಕಾಂಗ್ರೆಸ್​​ನಿಂದ ಪ್ರೊಟೆಸ್ಟ್​

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್​​​ ರೆಸಾರ್ಟ್​​ನಲ್ಲಿ ಸಚಿವರೂ ಸೇರಿದಂತೆ 19 ಶಾಸಕರು ತಂಗಿದ್ದು, ತಮಗೆ ಎಸ್ಕಾರ್ಟ್ ಒದಗಿಸಬೇಕೆಂದು ಸಹಿ ಮಾಡಿದ ಪತ್ರವನ್ನು ಸಲ್ಲಿಸಿದ್ದರು.ಕಾಂಗ್ರೆಸ್​ನ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ನಿನ್ನೆ ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಎಲ್ಲ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪೊಲೀಸ್​ ಸರ್ಪಗಾವಲು:

ಶಾಸಕರು ಉಳಿದುಕೊಂಡಿರುವ ರೆಸಾರ್ಟ್​ಗೆ ಇದೀಗ ಪೊಲೀಸ್​ ಭದ್ರತೆ ಒದಗಿಸಲಾಗಿದ್ದು, ರೆಸಾರ್ಟ್​​ ಗೇಟ್​ಗಳ ಸುತ್ತ ಬ್ಯಾರಿಕೇಡ್​ ಹಾಕಲಾಗಿದೆ. ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ಸೆಕ್ಯೂರಿಟಿ ನೀಡಲಾಗಿದ್ದು, ಐವರು ಸಬ್​​ಇನ್ಸ್​​ಪೆಕ್ಟರ್​, ಇಬ್ಬರು ಸರ್ಕಲ್​​ ಇನ್ಸ್​ಪೆಕ್ಟರ್​ ಹಾಗೂ ಎರಡು ಕೆಸ್​​ಎಸ್​ಆರ್​ಪಿ ತುಕಡಿ ನಿಯೋಜಿಸಲಾಗಿದೆ.

ಬೆಂಗಳೂರು: ಮಧ್ಯಪ್ರದೇಶ ಕಾಂಗ್ರೆಸ್‌ನ 19 ಶಾಸಕರು ದೇವನಹಳ್ಳಿ ತಾಲೂಕಿನ ನಂದಿಬೆಟ್ಟ ಸಮೀಪದಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್​ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಇದೀಗ ಕಮಲ್​ನಾಥ್​ ಸರ್ಕಾರ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಇದರ ಬೆನ್ನಲ್ಲೇ ರೆಸಾರ್ಟ್​​ ಮುಂದುಗಡೆ ಯೂತ್​ ಕಾಂಗ್ರೆಸ್​​​ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ಯೂತ್​ ಕಾಂಗ್ರೆಸ್​​ನಿಂದ ಪ್ರೊಟೆಸ್ಟ್​

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್​​​ ರೆಸಾರ್ಟ್​​ನಲ್ಲಿ ಸಚಿವರೂ ಸೇರಿದಂತೆ 19 ಶಾಸಕರು ತಂಗಿದ್ದು, ತಮಗೆ ಎಸ್ಕಾರ್ಟ್ ಒದಗಿಸಬೇಕೆಂದು ಸಹಿ ಮಾಡಿದ ಪತ್ರವನ್ನು ಸಲ್ಲಿಸಿದ್ದರು.ಕಾಂಗ್ರೆಸ್​ನ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ನಿನ್ನೆ ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಎಲ್ಲ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪೊಲೀಸ್​ ಸರ್ಪಗಾವಲು:

ಶಾಸಕರು ಉಳಿದುಕೊಂಡಿರುವ ರೆಸಾರ್ಟ್​ಗೆ ಇದೀಗ ಪೊಲೀಸ್​ ಭದ್ರತೆ ಒದಗಿಸಲಾಗಿದ್ದು, ರೆಸಾರ್ಟ್​​ ಗೇಟ್​ಗಳ ಸುತ್ತ ಬ್ಯಾರಿಕೇಡ್​ ಹಾಕಲಾಗಿದೆ. ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ಸೆಕ್ಯೂರಿಟಿ ನೀಡಲಾಗಿದ್ದು, ಐವರು ಸಬ್​​ಇನ್ಸ್​​ಪೆಕ್ಟರ್​, ಇಬ್ಬರು ಸರ್ಕಲ್​​ ಇನ್ಸ್​ಪೆಕ್ಟರ್​ ಹಾಗೂ ಎರಡು ಕೆಸ್​​ಎಸ್​ಆರ್​ಪಿ ತುಕಡಿ ನಿಯೋಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.