ETV Bharat / state

ಬಿಜೆಪಿ ಜತೆ ಗುರುತಿಸಿಕೊಂಡಿರೋ ಕೈ ಕಾರ್ಪೊರೇಟರ್ಸ್‌ ಉಚ್ಛಾಟಿಸುತ್ತೇವೆ.. ಅಬ್ದುಲ್ ವಾಜಿದ್ - ಶಿವಾಜಿನಗರದಲ್ಲಿ ರೋಷನ್ ಬೇಗ್

ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್​ ಕಾರ್ಪೊರೇಟರ್ಸ್​ ಬಿಜೆಪಿಯೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಪಾಲಿಕೆ ಸದಸ್ಯರ‌ನ್ನು ಕಾಂಗ್ರೆಸ್​ನಿಂದ ಉಚ್ಛಾಟಿಸಲಾಗುವುದು ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ಹೇಳಿದ್ದಾರೆ.

ಅಬ್ದುಲ್ ವಾಜಿದ್
author img

By

Published : Nov 18, 2019, 6:01 PM IST

ಬೆಂಗಳೂರು: ಬೆಂಗಳೂರು ವ್ಯಾಪ್ತಿಯ ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರುತ್ತಿದ್ದಂತೇ, ಪಾಲಿಕೆಯ ಕೆಲ ಸದಸ್ಯರು ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ಯದ್ರಲ್ಲೇ ಉಪಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಚಾರದ ವೇಳೆಯೂ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಪಾಲಿಕೆ ಸದಸ್ಯರ‌ನ್ನು ಕಾಂಗ್ರೆಸ್​ನಿಂದ ಉಚ್ಛಾಟಿಸಲಾಗುವುದು ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ತಿಳಿಸಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಬೈರತಿ ಬಸವರಾಜ್‌ ಜೊತೆಗೆ ಕಾಂಗ್ರೆಸ್‌ನ ಪಾಲಿಕೆ ಸದಸ್ಯರಾದ ಕೆಆರ್‌ಪುರಂ ಕ್ಷೇತ್ರದ ಬಸವನಪುರ ವಾರ್ಡ್‌ನ ಜಯಪ್ರಕಾಶ್, ದೇವಸಂದ್ರ ವಾರ್ಡ್‌ನ ಶ್ರೀಕಾಂತ್‌ಗೌಡ, ನಾರಾಯಣ್‌ಪುರ ವಾರ್ಡ್‌ನ ಸುರೇಶ್, ವಿಜ್ಞಾನನಗರ ವಾರ್ಡ್‌ನ ಎಸ್ ಜಿ ನಾಗರಾಜ್ ಗುರುತಿಸಿಕೊಂಡಿದ್ದಾರೆ. ಇನ್ನು, ಯಶವಂತಪುರ ಕ್ಷೇತ್ರದಲ್ಲಿ ಆರ್ಯ ಶ್ರೀನಿವಾಸ್, ಉಲ್ಲಾಳ ರಾಜಣ್ಣ, ವಾಸುದೇವ್ ಕೂಡ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಬಿಬಿಎಂಪಿ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್..

ಇನ್ನು, ಆರ್‌ಆರ್‌ನಗರದಲ್ಲಿಯೂ ಮುನಿರತ್ನ ಬೆಂಬಲಿಗರಾದ ಎನ್​​ಟಿಆರ್, ವೇಲು ನಾಯ್ಕರ್, ಜಾನಿ ಅಲಿಯಾಸ್ ಶ್ರೀನಿವಾಸ್ ಮೂರ್ತಿ ಕೂಡ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚು. ಶಿವಾಜಿನಗರದಲ್ಲಿ ರೋಷನ್ ಬೇಗ್ ಬೆಂಬಲಿಗರಾದ ಗುಣಶೇಖರ್, ಮಹ್ಮದ್ ಜಮೀರ್‌ ಶಾ,ಶಕೀಲ್ ಅಹ್ಮದ್ ಕೂಡ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್​ರನ್ನು ಬೆಂಬಲಿಸೋದು ಅನುಮಾನ ಎನ್ನಲಾಗ್ತಿದೆ.

ಈ ಬಗ್ಗೆ ಮಾತನಾಡಿದ ಪಾಲಿಕೆ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್, ಸುಮಾರು ಪಾಲಿಕೆ ಸದಸ್ಯರು ಅನರ್ಹ ಶಾಸಕರ ಜೊತೆ ಹೋಗಿ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆ ಶಾಸಕರ ಜೊತೆ ಓಡಾಡುತ್ತಿದ್ದಾರೆ. ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಾಹಿತಿ ತಗೊಂಡು, ರಾಜ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್​​ಗೆ ವರದಿ ನೀಡಲಾಗುವುದು. ಪಕ್ಷ ಉಚ್ಛಾಟನೆ ಮಾಡುವಂತೆ ಮನವಿ ಮಾಡುತ್ತೇವೆ. ಪಕ್ಷದ ಉಚ್ಛಾಟನೆ ಆದ ಮೇಲೆ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಪಾಲಿಕೆ ಸದಸ್ಯ ಸ್ಥಾನ ರದ್ದು ಮಾಡಿಸಲಾಗುವುದು ಎಂದರು.

ಬೆಂಗಳೂರು: ಬೆಂಗಳೂರು ವ್ಯಾಪ್ತಿಯ ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರುತ್ತಿದ್ದಂತೇ, ಪಾಲಿಕೆಯ ಕೆಲ ಸದಸ್ಯರು ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ಯದ್ರಲ್ಲೇ ಉಪಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಚಾರದ ವೇಳೆಯೂ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಪಾಲಿಕೆ ಸದಸ್ಯರ‌ನ್ನು ಕಾಂಗ್ರೆಸ್​ನಿಂದ ಉಚ್ಛಾಟಿಸಲಾಗುವುದು ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ತಿಳಿಸಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಬೈರತಿ ಬಸವರಾಜ್‌ ಜೊತೆಗೆ ಕಾಂಗ್ರೆಸ್‌ನ ಪಾಲಿಕೆ ಸದಸ್ಯರಾದ ಕೆಆರ್‌ಪುರಂ ಕ್ಷೇತ್ರದ ಬಸವನಪುರ ವಾರ್ಡ್‌ನ ಜಯಪ್ರಕಾಶ್, ದೇವಸಂದ್ರ ವಾರ್ಡ್‌ನ ಶ್ರೀಕಾಂತ್‌ಗೌಡ, ನಾರಾಯಣ್‌ಪುರ ವಾರ್ಡ್‌ನ ಸುರೇಶ್, ವಿಜ್ಞಾನನಗರ ವಾರ್ಡ್‌ನ ಎಸ್ ಜಿ ನಾಗರಾಜ್ ಗುರುತಿಸಿಕೊಂಡಿದ್ದಾರೆ. ಇನ್ನು, ಯಶವಂತಪುರ ಕ್ಷೇತ್ರದಲ್ಲಿ ಆರ್ಯ ಶ್ರೀನಿವಾಸ್, ಉಲ್ಲಾಳ ರಾಜಣ್ಣ, ವಾಸುದೇವ್ ಕೂಡ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಬಿಬಿಎಂಪಿ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್..

ಇನ್ನು, ಆರ್‌ಆರ್‌ನಗರದಲ್ಲಿಯೂ ಮುನಿರತ್ನ ಬೆಂಬಲಿಗರಾದ ಎನ್​​ಟಿಆರ್, ವೇಲು ನಾಯ್ಕರ್, ಜಾನಿ ಅಲಿಯಾಸ್ ಶ್ರೀನಿವಾಸ್ ಮೂರ್ತಿ ಕೂಡ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚು. ಶಿವಾಜಿನಗರದಲ್ಲಿ ರೋಷನ್ ಬೇಗ್ ಬೆಂಬಲಿಗರಾದ ಗುಣಶೇಖರ್, ಮಹ್ಮದ್ ಜಮೀರ್‌ ಶಾ,ಶಕೀಲ್ ಅಹ್ಮದ್ ಕೂಡ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್​ರನ್ನು ಬೆಂಬಲಿಸೋದು ಅನುಮಾನ ಎನ್ನಲಾಗ್ತಿದೆ.

ಈ ಬಗ್ಗೆ ಮಾತನಾಡಿದ ಪಾಲಿಕೆ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್, ಸುಮಾರು ಪಾಲಿಕೆ ಸದಸ್ಯರು ಅನರ್ಹ ಶಾಸಕರ ಜೊತೆ ಹೋಗಿ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆ ಶಾಸಕರ ಜೊತೆ ಓಡಾಡುತ್ತಿದ್ದಾರೆ. ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಾಹಿತಿ ತಗೊಂಡು, ರಾಜ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್​​ಗೆ ವರದಿ ನೀಡಲಾಗುವುದು. ಪಕ್ಷ ಉಚ್ಛಾಟನೆ ಮಾಡುವಂತೆ ಮನವಿ ಮಾಡುತ್ತೇವೆ. ಪಕ್ಷದ ಉಚ್ಛಾಟನೆ ಆದ ಮೇಲೆ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಪಾಲಿಕೆ ಸದಸ್ಯ ಸ್ಥಾನ ರದ್ದು ಮಾಡಿಸಲಾಗುವುದು ಎಂದರು.

Intro:ಅನರ್ಹ ಶಾಸಕರ ಜೊತೆ ಬಿಜೆಪಿಯಲ್ಲಿ ಗುರುತಿಸಿಕೊಂಡಿರೋ ಕಾಂಗ್ರೆಸ್ ಕಾರ್ಪೋರೇಟರ್ಸ್ ನ ಪಕ್ಷದಿಂದ ಉಚ್ಛಾಟಿಸುತ್ತೇವೆ - ಅಬ್ದುಲ್ ವಾಜಿದ್.


ಬೆಂಗಳೂರು: ಬೆಂಗಳೂರು ವ್ಯಾಪ್ತಿಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ, ಬಿಜೆಪಿ ಪಕ್ಷ ಸೇರುತ್ತಿದ್ದಂತೇ, ಬೆಂಬಲಿಗ ಪಾಲಿಕೆ ಸದಸ್ಯರೂ, ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಸಧ್ಯದಲ್ಲೇ ಉಪಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಚಾರದ ವೇಳೆಯೂ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹಾ ಪಾಲಿಕೆ ಸದಸ್ಯರ‌ನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಲಾಗುವುದು ಎಂದು ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ತಿಳಿಸಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿ ಅಬ್ಯರ್ಥಿಯಾಗಿರುವ ಭೈರತಿ ಸುರೇಶ್ ಜೊತೆಗೆ ಕಾಂಗ್ರೆಸ್ ಪಾಲಿಕೆ ಸದಸ್ಯರಾದ ಕೆ.ಆರ್ ಪುರಂ ಕ್ಷೇತ್ರದ ಬಸವನಪುರ ವಾರ್ಡ್ ಜಯಪ್ರಕಾಶ್, ದೇವಸಂದ್ರ ವಾರ್ಡ್ ಶ್ರೀಕಾಂತ್ ಗೌಡ, ನಾರಾಯಣ್ ಪುರ ವಾರ್ಡ್ ಸುರೇಶ್, ವಿಜ್ಞಾನ ನಗರ ವಾರ್ಡ್ ಎಸ್ ಜಿ ನಾಗರಾಜ್ ಗುರುತಿಸಿಕೊಂಡಿದ್ದಾರೆ.
ಇನ್ನು ಯಶವಂತಪುರ ಕ್ಷೇತ್ರದಲ್ಲಿ ಆರ್ಯ ಶ್ರೀನಿವಾಸ್, ಉಲ್ಲಾಳ ರಾಜಣ್ಣ, ವಾಸುದೇವ್ ಕೂಡಾ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇನ್ನುಆರ್ ಆರ್ ನಗರದಲ್ಲಿಯೂ ಮುನಿರತ್ನ ಬೆಂಬಲಿಗರಾದ ಎನ್ ಟಿ ಆರ್, ವೇಲು ನಾಯ್ಕರ್, ಜಾನಿ ಅಲಿಯಾಸ್ ಶ್ರೀನಿವಾಸ್ ಮೂರ್ತಿ ಕೂಡಾ ಬಿಜೆಪಿಗೇ ಬೆಂಬಲ ನೀಡುವ ಸಾಧ್ಯತೆ ಹೆಚ್ಚು.
ಶಿವಾಜಿನಗರದಲ್ಲಿ ರೋಷನ್ ಬೇಗ್ ಬೆಂಬಲಿಗರಾದ ಗುಣಶೇಖರ್, ಮಹ್ಮದ್ ಜಮೀರ್ ಶಾ,
ಶಕೀಲ್ ಅಹ್ಮದ್ ಕೂಡಾ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ರನ್ನು ಬೆಂಬಲಿಸೋದು ಅನುಮಾನ ಎನ್ನಲಾಗ್ತಿದೆ.
ಈ ಬಗ್ಗೆ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕ ಅಬ್ದುಲ್ ವಾಜಿದ್, ಸುಮಾರು ಪಾಲಿಕೆ ಸದಸ್ಯರು ಅನರ್ಹ ಶಾಸಕರ ಜೊತೆ ಹೋಗಿ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆ ಶಾಸಕರ ಜೊತೆ ಓಡಾಡುತ್ತಿದ್ದಾರೆ. ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಾಹಿತಿ ತಗೊಂಡು , ರಾಜ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್ ಗೆ ವರದಿ ನೀಡಲಾಗುವುದು. ಪಕ್ಷ ಉಚ್ಛಾಟನೆ ಮಾಡುವಂತೆ ಮನವಿ ಮಾಡುತ್ತೇವೆ. ಪಕ್ಷದ ಉಚ್ಛಾಟನೆ ಆದ ಮೇಲೆ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಪಾಲಿಕೆ ಸದಸ್ಯ ಸ್ಥಾನ ರದ್ದು ಮಾಡಿಸಲಾಗುವುದು ಎಂದರು.
ಇನ್ನು ಮಹಾಲಕ್ಷ್ಮಿ ಲೇಔಟ್ ನ ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯರಾದ ಹೇಮಲತಾ ಗೋಪಾಲಯ್ಯ ಹಾಗೂ, ಮಹಾದೇವ್ ಈಗಾಗಲೇ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ಜೆಡಿಎಸ್ ಪಕ್ಷ ಏನು ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ಆದ್ರೆ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರನ್ನು ಪಕ್ಷದಿಂದ ಉಚ್ಛಾಟಿಸಿದರೂ ಹೆಚ್ಚಿನ ನಷ್ಟವಾಗೋದಿಲ್ಲ. ಎಂತೂ ಬಿಬಿಎಂಪಿ ಸದಸ್ಯತ್ವದ ಅವಧಿ ಆರುತಿಂಗಳಲ್ಲಿ ಮುಗಿಯಲಿದೆ.




ಸೌಮ್ಯಶ್ರೀ
Kn_bng_02_corporates_disqualify_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.