ETV Bharat / state

ಕೊರೊನಾ ವಾರಿಯರ್ಸ್​​ಗೆ ಧೈರ್ಯ ತುಂಬಿದ ನಗರ ಪೊಲೀಸ್​​ ಆಯುಕ್ತ ಭಾಸ್ಕರ್​ ರಾವ್​​ - The Corona Warriors

ಕೊರೊನಾ ವಿರುದ್ಧ ಹಗಲು ರಾತ್ರಿ ತಮ್ಮ ಪ್ರಾನವನ್ನೇ ಪಣಕ್ಕಿಟ್ಟು ಕೊರೊನಾ ವಾರಿಯರ್ಸ್ ಹೋರಾಟ ಮಾಡುತ್ತಿದ್ದರೆ, ಕೆಲವರು ಅವರ ಮೇಲೆ ಹಲ್ಲೆ ಮಾಡಿ ಅಮಾನವೀಯವಾಗಿ ನಡೆದುಕೊಂಡ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆ ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್, ಕೊರೊನಾ ವಾರಿಯರ್ಸ್​ಗೆ​ಧೈರ್ಯ ತುಂಬಿದ್ದಾರೆ.

Commissioner Bhaskar Rao encourageous the Corona Warriors
ಕೊರೊನಾ ವಾರಿಯರ್ಸ್​​ಗೆ ಧೈರ್ಯ ತುಂಬಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​​
author img

By

Published : May 13, 2020, 11:13 PM IST

ಬೆಂಗಳೂರು: ನಗರದಲ್ಲಿರುವ ಕೊರೊನಾ ವಾರಿಯರ್ಸ್​ಗೆ ಅಪಾರ್ಟ್​​ಮೆಂಟ್, ಸ್ಥಳೀಯ‌ ನಿವಾಸಿಗಳು ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಗರದಲ್ಲಿ ಸೋಂಕಿತರನ್ನು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಆಗ ಕೊರೊನಾ ವಾರಿಯರ್ಸ್‌ ತಮ್ಮ ಅಳಲು ತೋಡಿಕೊಂಡು, ನಮಗೆ ಅಪಾರ್ಟ್​ಮೆಂಟ್​​ಗಳಲ್ಲಿ ಲಿಫ್ಟ್ ಬಳಸುವುದಕ್ಕೆ ಅವಕಾಶ‌ ನೀಡುತ್ತಿಲ್ಲ. ಕಸ ಸಂಗ್ರಹದ ಡಸ್ಟ್ ಬಿನ್ ಬಳಸುವುದಕ್ಕೂ ಬೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ಟೀಟ್ ಮಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​, ರೆಸಿಡೆನ್ಸಿ ವೆಲ್​ಫೇರ್ ಅಸೋಸಿಯೇಷನ್ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಬೇಕು. ಕೊರೊನಾ ವಾರಿಯರ್ಸ್​ಗಳನ್ನು ಈ ರೀತಿ ನಡೆಸಿಕೊಳ್ಳದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು: ನಗರದಲ್ಲಿರುವ ಕೊರೊನಾ ವಾರಿಯರ್ಸ್​ಗೆ ಅಪಾರ್ಟ್​​ಮೆಂಟ್, ಸ್ಥಳೀಯ‌ ನಿವಾಸಿಗಳು ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಗರದಲ್ಲಿ ಸೋಂಕಿತರನ್ನು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಆಗ ಕೊರೊನಾ ವಾರಿಯರ್ಸ್‌ ತಮ್ಮ ಅಳಲು ತೋಡಿಕೊಂಡು, ನಮಗೆ ಅಪಾರ್ಟ್​ಮೆಂಟ್​​ಗಳಲ್ಲಿ ಲಿಫ್ಟ್ ಬಳಸುವುದಕ್ಕೆ ಅವಕಾಶ‌ ನೀಡುತ್ತಿಲ್ಲ. ಕಸ ಸಂಗ್ರಹದ ಡಸ್ಟ್ ಬಿನ್ ಬಳಸುವುದಕ್ಕೂ ಬೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ಟೀಟ್ ಮಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​, ರೆಸಿಡೆನ್ಸಿ ವೆಲ್​ಫೇರ್ ಅಸೋಸಿಯೇಷನ್ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಬೇಕು. ಕೊರೊನಾ ವಾರಿಯರ್ಸ್​ಗಳನ್ನು ಈ ರೀತಿ ನಡೆಸಿಕೊಳ್ಳದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.