ETV Bharat / state

ಹುಟ್ಟುಹಬ್ಬದ ದಿನವೇ ಸಿಎಂ ಯಡಿಯೂರಪ್ಪ 'ಕಾವೇರಿ'ಗೆ ಪ್ರವೇಶ! - ಕಾವೇರಿ ನಿವಾಸದಲ್ಲಿ ಬಿಎಸ್​​ವೈ ಪೂಜೆ

ನಾಳೆ ಸರ್ಕಾರಿ ಬಂಗಲೆ ಪೂಜಾ ಕಾರ್ಯ ನೆರವೇರಿಸಿದರೂ ನಾಳೆಯಿಂದಲೇ ಸರ್ಕಾರಿ ನಿವಾಸದಲ್ಲಿ ಸಿಎಂ ವಾಸ್ತವ್ಯ ಸಾಧ್ಯತೆ ಕಡಿಮೆ ಇದೆ. ಬಜೆಟ್ ತಯಾರಿಯಲ್ಲಿ ತೊಡಗಿರುವ ಸಿಎಂ ಬಜೆಟ್ ಮಂಡನೆ ನಂತರ ಕಾವೇರಿ ನಿವಾಸಕ್ಕೆ‌ ಪೂರ್ಣ ಪ್ರಮಾಣದಲ್ಲಿ ವಾಸ್ತವ್ಯ ಸ್ಥಳಾಂತರ ಮಾಡಲಿದ್ದಾರೆ ಎನ್ನಲಾಗಿದೆ.

CM_KAVERI_HOUSE_ POOJA_PREPARATION
ಕಾವೇರಿ ನಿವಾಸಕ್ಕೆ ನಾಳೆ ಸಿಎಂ ಪ್ರವೇಶ
author img

By

Published : Feb 26, 2020, 2:58 PM IST

ಬೆಂಗಳೂರು : ಹುಟ್ಟುಹಬ್ಬದ ದಿನದಂದೇ ಸರ್ಕಾರಿ ಬಂಗಲೆಗೆ ಗೃಹ ಪ್ರವೇಶ ನಡೆಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಿದ್ಧತೆ ನಡೆಸಿದ್ದು, ನಾಳೆ ಕಾವೇರಿ ನಿವಾಸದಲ್ಲಿ ಪೂಜಾ ಕೈಂಕರ್ಯ ನಡೆಸಲಿದ್ದಾರೆ.

ಸರ್ಕಾರಿ ಬಂಗಲೆ ಕಾವೇರಿಗೆ ನಾಳೆ ಸಿಎಂ ಅಧಿಕೃತ ಪ್ರವೇಶ..

ನಾಳೆ ಸಿಎಂ ಯಡಿಯೂರಪ್ಪ ಅವರ 78ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಧಿಕೃತ ನಿವಾಸ ಕಾವೇರಿ ಬಂಗಲೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಕಾವೇರಿ ನಿವಾಸದ ರಸ್ತೆಗೆ ಡಾಂಬರೀಕರಣ, ನಿವಾಸದ ಗೋಡೆಗೆ ಸುಣ್ಣ ಬಣ್ಣ ಬಳಿದು ಪೀಠೋಪಕರಣಗಳ‌ ದುರಸ್ಥಿ ಕಾರ್ಯ ಪೂರ್ಣಗೊಳಿಸಲಾಗಿದೆ. ನಾಳೆ ಬೆಳಗ್ಗೆಯೇ ನಿವಾಸದಲ್ಲಿ ಕುಟುಂಬ ಸದಸ್ಯರ ಜೊತೆಯಲ್ಲಿ ಪೂಜಾ ಕೈಂಕರ್ಯ,‌ ಹೋಮ, ಹವನ ನಡೆಸಲಿದ್ದಾರೆ.

ನಾಳೆ ಸರ್ಕಾರಿ ಬಂಗಲೆ ಪೂಜಾ ಕಾರ್ಯ ನೆರವೇರಿಸಿದರೂ ನಾಳೆಯಿಂದಲೇ ಸರ್ಕಾರಿ ನಿವಾಸದಲ್ಲಿ ಸಿಎಂ ವಾಸ್ತವ್ಯ ಸಾಧ್ಯತೆ ಕಡಿಮೆ ಇದೆ. ಬಜೆಟ್ ತಯಾರಿಯಲ್ಲಿ ತೊಡಗಿರುವ ಸಿಎಂ ಬಜೆಟ್ ಮಂಡನೆ ನಂತರ ಕಾವೇರಿ ನಿವಾಸಕ್ಕೆ‌ ಪೂರ್ಣ ಪ್ರಮಾಣದಲ್ಲಿ ವಾಸ್ತವ್ಯ ಸ್ಥಳಾಂತರ ಮಾಡಲಿದ್ದಾರೆ ಎನ್ನಲಾಗಿದೆ.

ಕಾವೇರಿ ನಿವಾಸದ ಮುಂದೆ ಸಂಚಾರ ನಿರ್ಬಂಧ: ನಾಳೆ ಮನೆ ಪ್ರವೇಶ ಹಿನ್ನೆಲೆಯಲ್ಲಿ ಸಾರ್ವಜನಿಕರು, ಮಾಧ್ಯಮಗಳಿಗೆ ಕಾವೇರಿ ನಿವಾಸದ ಮುಂದೆ ಹೋಗಲು ಇವತ್ತಿನಿಂದಲೇ ಪೊಲೀಸರು ಪ್ರವೇಶ ನಿರ್ಬಂಧ ವಿಧಿಸಿದ್ದಾರೆ.

ಬೆಂಗಳೂರು : ಹುಟ್ಟುಹಬ್ಬದ ದಿನದಂದೇ ಸರ್ಕಾರಿ ಬಂಗಲೆಗೆ ಗೃಹ ಪ್ರವೇಶ ನಡೆಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಿದ್ಧತೆ ನಡೆಸಿದ್ದು, ನಾಳೆ ಕಾವೇರಿ ನಿವಾಸದಲ್ಲಿ ಪೂಜಾ ಕೈಂಕರ್ಯ ನಡೆಸಲಿದ್ದಾರೆ.

ಸರ್ಕಾರಿ ಬಂಗಲೆ ಕಾವೇರಿಗೆ ನಾಳೆ ಸಿಎಂ ಅಧಿಕೃತ ಪ್ರವೇಶ..

ನಾಳೆ ಸಿಎಂ ಯಡಿಯೂರಪ್ಪ ಅವರ 78ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಧಿಕೃತ ನಿವಾಸ ಕಾವೇರಿ ಬಂಗಲೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಕಾವೇರಿ ನಿವಾಸದ ರಸ್ತೆಗೆ ಡಾಂಬರೀಕರಣ, ನಿವಾಸದ ಗೋಡೆಗೆ ಸುಣ್ಣ ಬಣ್ಣ ಬಳಿದು ಪೀಠೋಪಕರಣಗಳ‌ ದುರಸ್ಥಿ ಕಾರ್ಯ ಪೂರ್ಣಗೊಳಿಸಲಾಗಿದೆ. ನಾಳೆ ಬೆಳಗ್ಗೆಯೇ ನಿವಾಸದಲ್ಲಿ ಕುಟುಂಬ ಸದಸ್ಯರ ಜೊತೆಯಲ್ಲಿ ಪೂಜಾ ಕೈಂಕರ್ಯ,‌ ಹೋಮ, ಹವನ ನಡೆಸಲಿದ್ದಾರೆ.

ನಾಳೆ ಸರ್ಕಾರಿ ಬಂಗಲೆ ಪೂಜಾ ಕಾರ್ಯ ನೆರವೇರಿಸಿದರೂ ನಾಳೆಯಿಂದಲೇ ಸರ್ಕಾರಿ ನಿವಾಸದಲ್ಲಿ ಸಿಎಂ ವಾಸ್ತವ್ಯ ಸಾಧ್ಯತೆ ಕಡಿಮೆ ಇದೆ. ಬಜೆಟ್ ತಯಾರಿಯಲ್ಲಿ ತೊಡಗಿರುವ ಸಿಎಂ ಬಜೆಟ್ ಮಂಡನೆ ನಂತರ ಕಾವೇರಿ ನಿವಾಸಕ್ಕೆ‌ ಪೂರ್ಣ ಪ್ರಮಾಣದಲ್ಲಿ ವಾಸ್ತವ್ಯ ಸ್ಥಳಾಂತರ ಮಾಡಲಿದ್ದಾರೆ ಎನ್ನಲಾಗಿದೆ.

ಕಾವೇರಿ ನಿವಾಸದ ಮುಂದೆ ಸಂಚಾರ ನಿರ್ಬಂಧ: ನಾಳೆ ಮನೆ ಪ್ರವೇಶ ಹಿನ್ನೆಲೆಯಲ್ಲಿ ಸಾರ್ವಜನಿಕರು, ಮಾಧ್ಯಮಗಳಿಗೆ ಕಾವೇರಿ ನಿವಾಸದ ಮುಂದೆ ಹೋಗಲು ಇವತ್ತಿನಿಂದಲೇ ಪೊಲೀಸರು ಪ್ರವೇಶ ನಿರ್ಬಂಧ ವಿಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.