ETV Bharat / state

ನೂತನ ಸಚಿವರಿಗೆ ಖಾತೆ ಹಂಚಿಕೆ: ಸಿಎಂ ಬಳಿಯಿರುವ ಖಾತೆಗಳಾವುವು ಗೊತ್ತಾ?

ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ತಮ್ಮ ಬಳಿ 23 ಖಾತೆಗಳನ್ನು ಇಟ್ಟುಕೊಂಡಿದ್ದಾರೆ.3 ಸಚಿವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದು, ತಮ್ಮ ಸಂಪುಟದ 17 ಸಚಿವರಿಗೆ ಒಟ್ಟು 22 ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

author img

By

Published : Aug 26, 2019, 11:12 PM IST

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ

ಬೆಂಗಳೂರು: ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂಧನ, ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ, ಆಹಾರ, ಕಾರ್ಮಿಕ ಇಲಾಖೆ ಅಂತಹ ಮಹತ್ವದ ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. 22 ಖಾತೆಗಳನ್ನು ಹಂಚಿಕೆ ಮಾಡಿದ್ದು, ಉಳಿದ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ.

ಅನರ್ಹ ಶಾಸಕರ ಒತ್ತಡಕ್ಕೆ ಕಡೆಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಣಿದಿದ್ದಾರೆ. ಖಾತೆಗಳ ಹಂಚಿಕೆಯಲ್ಲಿ ಮಹತ್ವದ ಖಾತೆಗಳನ್ನು ತಮ್ಮ ಬಳಿ ಇರಿಸಿಕೊಳ್ಳುವ ಮೂಲಕ ಅನರ್ಹರಿಗೆ ನೀಡುವ ಖಾತೆಗಳನ್ನು ಇತರ ಸಚಿವರು ನೋಡಬಾರದು ಎನ್ನುವ ಅನರ್ಹ ಶಾಸಕರ ಬೇಡಿಕೆಯನ್ನು ಸಿಎಂ ಈಡೇರಿಸಿದ್ದಾರೆ. ದೆಹಲಿ ಭೇಟಿ ವೇಳೆ ಅನರ್ಹ ಶಾಸಕರು ಈ ಷರತ್ತು ವಿಧಿಸಿದ್ದು, ಅದರಂತೆ ಸಿಎಂ ನಡೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

3 ಸಚಿವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದು, ತಮ್ಮ ಸಂಪುಟದ 17 ಸಚಿವರಿಗೆ ಒಟ್ಟು 22 ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಬಾಕಿ ಉಳಿದಿರುವ 23 ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಹಣಕಾಸು, ಗುಪ್ತಚರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯಂತಹ ಕೆಲ ಖಾತೆಯನ್ನು ಸಿಎಂ ಇರಿಸಿಕೊಳ್ಳುತ್ತಾರಾದರೂ ಅನಿವಾರ್ಯ ಕಾರಣದಿಂದ ಸಿಎಂ ಅನೇಕ ಮಹತ್ವದ ಖಾತೆಗಳನ್ನು ಹಂಚಿಕೆ ಮಾಡದೆ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

ಈ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂದು ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ 11 ಖಾತೆಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದರು. ಇದೀಗ ಇಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ 23 ಖಾತೆಗಳನ್ನು ಇರಿಸಿಕೊಂಡಿದ್ದಾರೆ.

ಸಿಎಂ ಬಳಿ ಇರುವ ಖಾತೆ:

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ಹಣಕಾಸು
ಗುಪ್ತಚರ
ವಾರ್ತಾ ಮತ್ತು ಪ್ರಚಾರ
ಯೋಜನೆ ಮತ್ತು ಸಾಂಖ್ಯಿಕ
ಇಂಧನ ಖಾತೆ
ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ, ವಾಣಿಜ್ಯ ಕೈಗಾರಿಕೆ
ಯುವಜನಸೇವೆ ಮತ್ತು ಕ್ರೀಡಾ ಇಲಾಖೆ
ಕೌಶಲ್ಯಾಭಿವೃದ್ಧಿ ಇಲಾಖೆ
ಸಹಕಾರ ಇಲಾಖೆ
ಜಲಸಂಪನ್ಮೂಲ ಇಲಾಖೆ
ವೈದ್ಯಕೀಯ ಶಿಕ್ಷಣ
ತೋಟಗಾರಿಕಾ ಇಲಾಖೆ
ಕೃಷಿ ಇಲಾಖೆ
ಸಣ್ಣ ಕೈಗಾರಿಕಾ ಇಲಾಖೆ
ಪೌರಾಡಳಿತ ಇಲಾಖೆ
ನಗರಾಭಿವೃದ್ಧಿ ಇಲಾಖೆ
ರೇಷ್ಮೆ ಇಲಾಖೆ
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ
ಕಾರ್ಮಿಕ ಇಲಾಖೆ
ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ
ಅರಣ್ಯ ಮತ್ತು ಪರಿಸರ ಇಲಾಖೆ

ಬೆಂಗಳೂರು: ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂಧನ, ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ, ಆಹಾರ, ಕಾರ್ಮಿಕ ಇಲಾಖೆ ಅಂತಹ ಮಹತ್ವದ ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. 22 ಖಾತೆಗಳನ್ನು ಹಂಚಿಕೆ ಮಾಡಿದ್ದು, ಉಳಿದ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ.

ಅನರ್ಹ ಶಾಸಕರ ಒತ್ತಡಕ್ಕೆ ಕಡೆಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಣಿದಿದ್ದಾರೆ. ಖಾತೆಗಳ ಹಂಚಿಕೆಯಲ್ಲಿ ಮಹತ್ವದ ಖಾತೆಗಳನ್ನು ತಮ್ಮ ಬಳಿ ಇರಿಸಿಕೊಳ್ಳುವ ಮೂಲಕ ಅನರ್ಹರಿಗೆ ನೀಡುವ ಖಾತೆಗಳನ್ನು ಇತರ ಸಚಿವರು ನೋಡಬಾರದು ಎನ್ನುವ ಅನರ್ಹ ಶಾಸಕರ ಬೇಡಿಕೆಯನ್ನು ಸಿಎಂ ಈಡೇರಿಸಿದ್ದಾರೆ. ದೆಹಲಿ ಭೇಟಿ ವೇಳೆ ಅನರ್ಹ ಶಾಸಕರು ಈ ಷರತ್ತು ವಿಧಿಸಿದ್ದು, ಅದರಂತೆ ಸಿಎಂ ನಡೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

3 ಸಚಿವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದು, ತಮ್ಮ ಸಂಪುಟದ 17 ಸಚಿವರಿಗೆ ಒಟ್ಟು 22 ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಬಾಕಿ ಉಳಿದಿರುವ 23 ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಹಣಕಾಸು, ಗುಪ್ತಚರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯಂತಹ ಕೆಲ ಖಾತೆಯನ್ನು ಸಿಎಂ ಇರಿಸಿಕೊಳ್ಳುತ್ತಾರಾದರೂ ಅನಿವಾರ್ಯ ಕಾರಣದಿಂದ ಸಿಎಂ ಅನೇಕ ಮಹತ್ವದ ಖಾತೆಗಳನ್ನು ಹಂಚಿಕೆ ಮಾಡದೆ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

ಈ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂದು ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ 11 ಖಾತೆಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದರು. ಇದೀಗ ಇಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ 23 ಖಾತೆಗಳನ್ನು ಇರಿಸಿಕೊಂಡಿದ್ದಾರೆ.

ಸಿಎಂ ಬಳಿ ಇರುವ ಖಾತೆ:

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ಹಣಕಾಸು
ಗುಪ್ತಚರ
ವಾರ್ತಾ ಮತ್ತು ಪ್ರಚಾರ
ಯೋಜನೆ ಮತ್ತು ಸಾಂಖ್ಯಿಕ
ಇಂಧನ ಖಾತೆ
ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ, ವಾಣಿಜ್ಯ ಕೈಗಾರಿಕೆ
ಯುವಜನಸೇವೆ ಮತ್ತು ಕ್ರೀಡಾ ಇಲಾಖೆ
ಕೌಶಲ್ಯಾಭಿವೃದ್ಧಿ ಇಲಾಖೆ
ಸಹಕಾರ ಇಲಾಖೆ
ಜಲಸಂಪನ್ಮೂಲ ಇಲಾಖೆ
ವೈದ್ಯಕೀಯ ಶಿಕ್ಷಣ
ತೋಟಗಾರಿಕಾ ಇಲಾಖೆ
ಕೃಷಿ ಇಲಾಖೆ
ಸಣ್ಣ ಕೈಗಾರಿಕಾ ಇಲಾಖೆ
ಪೌರಾಡಳಿತ ಇಲಾಖೆ
ನಗರಾಭಿವೃದ್ಧಿ ಇಲಾಖೆ
ರೇಷ್ಮೆ ಇಲಾಖೆ
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ
ಕಾರ್ಮಿಕ ಇಲಾಖೆ
ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ
ಅರಣ್ಯ ಮತ್ತು ಪರಿಸರ ಇಲಾಖೆ

Intro: ಸಿಎಂ ಬಳಿ ಹಣಕಾಸು, ಇಂಧನ, ಜಲಸಂಪನ್ಮೂಲ
ಕೃಷಿ, ಬೆಂಗಳೂರು ಅಭಿವೃದ್ಧಿ ಸೇರಿ ೧೬ ಖಾತೆಗಳು....

ಬೆಂಗಳೂರು :

ಹಗ್ಗ ಜಗ್ಗಾಟದ ನಂತರ, ಡಿಸಿಎಂ ನೇಮಕ ಗೊಂದಲದ ನಂತರ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಗಳು ತಮ್ಮ ಬಳಿ ಹಣಕಾಸು, ಇಂಧನ, ಜಲಸಂಪನ್ಮೂಲ, ಕೃಷಿ ಸೇರಿದಂತೆ ೧೬ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ.

ಅಶ್ವತ್ಥ ನಾರಾಯಣ ಹಾಗು ಆರ್ ಅಶೋಕ್ ನಡುವಿನ ಗೊಂದಲ ದಿಂದಾಗಿ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಯಾರಿಗೂ ನೀಡದೆ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ.


Body: ಅನರ್ಹ ಶಾಸಕರು ಬಿಜೆಪಿ ಸೇರಿದ ನಂತರ ಅವರನ್ನು ಸಚಿವರನ್ನಾಗಿ ನೇಮಕ ಮಾಡಿ ಹಂಚಲಾಗುವ ಖಾತೆಗಳನ್ನು ಸಿಎಂ ತಮ್ಮ ಹತ್ತಿರ ಉಳಿಸಿಕೊಂಡಿದ್ದಾರೆ.

ಸಿಎಂ ಬಳಿ ಇರುವ ಪ್ರಮುಖ ಖಾತೆಗಳು...

ಹಣಕಾಸು,

ಇಂಧನ

ಜಲಸಂಪನ್ಮೂಲ

ಬೆಂಗಳೂರು ಅಭಿವೃದ್ಧಿ

ನಗರಾಭಿವೃದ್ಧಿ

ಆಹಾರ ಮತ್ತು ನಾಗರೀಕ ಪೂರೈಕೆ

ಕೃಷಿ

ತೋಟಗಾರಿಕೆ

ಅರಣ್ಯ ಮತ್ತು ಪರಿಸರ

ಪೌರಾಡಳಿತ

ಕೃಷಿ ಮಾರುಕಟ್ಟೆ

ಮೂಲ ಸೌಕರ್ಯ ಅಭಿವೃದ್ಧಿ

ಸಹಕಾರ

ಸಣ್ಣ ಕೈಗಾರಿಕೆ

ಕಾರ್ಮಿಕ

ಸಕ್ಕರೆ








Conclusion: ಸುಮಾರು ೧೬ ಖಾತೆಗಳನ್ನು ಮುಖ್ಯಮಂತ್ರಿ ಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಅನರ್ಹ ಶಾಸಕರು ಭವಿಷ್ಯದಲ್ಲಿ ತಮಗೆ ಹಂಚಿಕೆ ಮಾಡಬೇಕಾದ ಖಾತೆಗಳನ್ನು ಯಾವ ಸಚಿವರಿಗೂ ನೀಡದೇ ಸಿಎಂ ಬಳಿಯೇ ಉಳಿಸಿಕೊಳ್ಳಬೇಕೆಂದು ಷರತ್ತು ಹಾಕಿದ್ದರು.ಅದರಂತೆ ಮುಖ್ಯ ಮಂತ್ರಿ ಯಡಿಯೂರಪ್ಪನವರು ಅನರ್ಹ ಶಾಸಕರಿಗೆ ನೀಡಲು ಒಪ್ಪಿಕೊಂಡಿರುವ ಖಾತೆಗಳನ್ನು ಸಚಿವರಿಗೆ ಹಂಚಿಕೆ ಮಾಡದೇ ತಮ್ಮ ಹತ್ತಿರ ಉಳಿಸಿಕೊಂಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.