ETV Bharat / state

ನನ್ನ ಆಳ್ವಿಕೆಯಲ್ಲಿ ಎಸ್ಎಂ ಕೃಷ್ಣ ಆಡಳಿತದ ಛಾಪು ಇರಲಿದೆ: ಸಿಎಂ ಬೊಮ್ಮಾಯಿ

author img

By

Published : Aug 9, 2021, 10:34 PM IST

ಹೊಸತನ, ಯೌವನ ಮತ್ತು ರಾಜಕೀಯ ಪರಂಪರೆಯಿಂದ ಬಸವರಾಜ ಬೊಮ್ಮಾಯಿ ಬಂದಿದ್ದಾರೆ. ಹಾಗಾಗಿ ಬಹಳ ದಕ್ಷತೆಯಿಂದ ಈ ನಾಡಿನ ನಾಯಕತ್ವವನ್ನು ವಹಿಸಿಕೊಂಡು ಈ ನಾಡನ್ನು ಮುಂದುವರಿಸುತ್ತಾರೆ ಎನ್ನುವ ಅಖಂಡವಾದ ವಿಶ್ವಾಸ ನನ್ನಲ್ಲಿದೆ ಎಂದು ಎಸ್.ಎಂ ಕೃಷ್ಣ ಹೇಳಿದರು.

cm-bommai-reaction-after-visit-to-sm-krishna-home
ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ನವಕರ್ನಾಟಕದ ನಿರ್ಮಾಣ, ಹೊಸತನದ ನಿರ್ಮಾಣ ಎಸ್.ಎಂ ಕೃಷ್ಣ ಅವಧಿಯಲ್ಲಿ ಆರಂಭಗೊಂಡಿದ್ದು, ನನ್ನ ಆಡಳಿತದಲ್ಲಿ ಕೃಷ್ಣ ಆಡಳಿತದ ಛಾಪು ಇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಎಸ್.ಎಂ ಕೃಷ್ಣ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ ಕೃಷ್ಣ ಮತ್ತು ನಮ್ಮ ತಂದೆಯವರು ಅತ್ಯಂತ ಆತ್ಮೀಯ ಸ್ನೇಹಿತರು, ಇಂದು ಅವರನ್ನು ಕಂಡು ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಅವರ ಮಾರ್ಗದರ್ಶನವನ್ನು ಕೇಳಿದ್ದೇನೆ ಅವರ ಆಡಳಿತ ಕಾಲದಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದಾರೆ. ಹಲವಾರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಒಂದು ರೀತಿಯಲ್ಲಿ ನವಕರ್ನಾಟಕದ ನಿರ್ಮಾಣ, ಹೊಸತನದ ನಿರ್ಮಾಣ, ಐಟಿ-ಬಿಟಿ ಎಲ್ಲವೂ ಕೂಡ ಅವರ ಕಾಲದಲ್ಲಿ ಆರಂಭವಾಗಿದೆ ಹೀಗಾಗಿ ಅವರ ಅನುಭವ ನಮಗೆ ಬಹಳಷ್ಟು ದಾರಿದೀಪವಾಗಲಿದೆ ಎಂದರು.

ಕೃಷ್ಣ ಮಾರ್ಗದರ್ಶನ, ಆಶೀರ್ವಾದ ಮಾಡಿದ್ದಾರೆ:

ಮಾರ್ಗದರ್ಶನ ನೀಡುವಂತೆ ಕೃಷ್ಣ ಅವರನ್ನು ಕೋರಿದಾಗ ಬಹಳ ಸಂತೋಷದಿಂದ ಆಶೀರ್ವಾದ ಮಾಡಿದ್ದಾರೆ. ಮಾರ್ಗದರ್ಶನದ ಭರವಸೆ ನೀಡಿದ್ದಾರೆ, ಹೀಗಾಗಿ ಅವರ ಭೇಟಿಯಿಂದ ನನಗೆ ಆತ್ಮವಿಶ್ವಾಸ ಹೆಚ್ಚಾಗಿದೆ. ಅವರ ಆಡಳಿತದ ವೇಳೆಯಲ್ಲಿನ ಹಲವಾರು ನಿರ್ಣಯಗಳನ್ನು ಈ ಭೇಟಿ ವೇಳೆ ಮೆಲುಕು ಹಾಕಿದ್ದೇವೆ. ಅವೆಲ್ಲವೂ ಬರುವ ದಿನಗಳಲ್ಲಿ ನನಗೆ ಸಹಕಾರಿಯಾಗಲಿದೆ. ನನ್ನ ಆಡಳಿತದಲ್ಲಿ ಕೃಷ್ಣ ಆಡಳಿತದ ಒಂದು ಛಾಪು, ಛಾಯೆ ಖಂಡಿತವಾಗಿಯೂ ಇರಲಿದೆ ಎಂದು ತಿಳಿಸಿದ್ದಾರೆ.

ಹೊಸತನ, ಯೌವನ ಮತ್ತು ರಾಜಕೀಯ ಪರಂಪರೆಯಿಂದ ಬಂದವರು ಬೊಮ್ಮಾಯಿ

ನಂತರ ಮಾತನಾಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ, ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಮತ್ತು ನಾನು ಅತ್ಯಂತ ಆತ್ಮೀಯತೆಯಿಂದ ಕೂಡಿದ ಸ್ನೇಹಿತರಾಗಿದ್ದೆವು. ಇಂದು ಅವರ ಸುಪುತ್ರ ನಮ್ಮ ರಾಜ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಕಾರ್ಯ ಮಾಡಲು ಆರಂಭಿಸಿದ್ದಾರೆ. ಹೊಸತನ, ಯೌವನ ಮತ್ತು ರಾಜಕೀಯ ಪರಂಪರೆಯಿಂದ ಅವರು ಬಂದಿದ್ದಾರೆ. ಹಾಗಾಗಿ ಬಹಳ ದಕ್ಷತೆಯಿಂದ ಈ ನಾಡಿನ ನಾಯಕತ್ವವನ್ನು ವಹಿಸಿಕೊಂಡು ಈ ನಾಡನ್ನು ಮುಂದುವರಿಸುತ್ತಾರೆ ಎನ್ನುವ ಅಖಂಡವಾದ ವಿಶ್ವಾಸ ನನ್ನಲ್ಲಿದೆ ಎಂದರು.

ಅವರ ಕಾರ್ಯದಕ್ಷತೆಯನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ನೋಡಿದ್ದೇನೆ. ನಾನು ಸಿಎಂ ಆಗಿದ್ದಾಗ ಅವರು ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ನನಗೆ ಬಹಳ ತೊಂದರೆ ಕೊಡುತ್ತಿದ್ದರು. ಆದರೆ, ಎಲ್ಲವೂ ಕೂಡ ಸದುದ್ದೇಶದಿಂದ ಕೂಡಿದ್ದವು. ನಮ್ಮಿಬ್ಬರ ಒಟ್ಟಾರೆ ದೃಷ್ಟಿ ರಾಜ್ಯದ ಸರ್ವತೋಮುಖವಾದ ಅಭಿವೃದ್ಧಿಯಾಗಿತ್ತು. ಕೇವಲ ರಾಜ್ಯದ ಅಭಿವೃದ್ಧಿಗಾಗಿ ವಿವಿಧ ದೃಷ್ಟಿಕೋನದಿಂದ ಚಿಂತನೆ ಮಾಡುತ್ತಿದ್ದೆವು. ಹೀಗಾಗಿ ಇಂದು ಅವರ ಬೆಂಬಲಕ್ಕೆ ನಾವೆಲ್ಲ ಇದ್ದೇವೆ. ಅವರು ರಾಜ್ಯವನ್ನು ಮುನ್ನಡೆಸುವಂತೆ ಹಾರೈಸಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟಿ-20 ಇತಿಹಾಸದಲ್ಲೇ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ, 4-1ರಲ್ಲಿ ಸರಣಿ ಗೆದ್ದ ಬಾಂಗ್ಲಾ

ಬೆಂಗಳೂರು: ರಾಜ್ಯದಲ್ಲಿ ನವಕರ್ನಾಟಕದ ನಿರ್ಮಾಣ, ಹೊಸತನದ ನಿರ್ಮಾಣ ಎಸ್.ಎಂ ಕೃಷ್ಣ ಅವಧಿಯಲ್ಲಿ ಆರಂಭಗೊಂಡಿದ್ದು, ನನ್ನ ಆಡಳಿತದಲ್ಲಿ ಕೃಷ್ಣ ಆಡಳಿತದ ಛಾಪು ಇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಎಸ್.ಎಂ ಕೃಷ್ಣ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ ಕೃಷ್ಣ ಮತ್ತು ನಮ್ಮ ತಂದೆಯವರು ಅತ್ಯಂತ ಆತ್ಮೀಯ ಸ್ನೇಹಿತರು, ಇಂದು ಅವರನ್ನು ಕಂಡು ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಅವರ ಮಾರ್ಗದರ್ಶನವನ್ನು ಕೇಳಿದ್ದೇನೆ ಅವರ ಆಡಳಿತ ಕಾಲದಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದಾರೆ. ಹಲವಾರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಒಂದು ರೀತಿಯಲ್ಲಿ ನವಕರ್ನಾಟಕದ ನಿರ್ಮಾಣ, ಹೊಸತನದ ನಿರ್ಮಾಣ, ಐಟಿ-ಬಿಟಿ ಎಲ್ಲವೂ ಕೂಡ ಅವರ ಕಾಲದಲ್ಲಿ ಆರಂಭವಾಗಿದೆ ಹೀಗಾಗಿ ಅವರ ಅನುಭವ ನಮಗೆ ಬಹಳಷ್ಟು ದಾರಿದೀಪವಾಗಲಿದೆ ಎಂದರು.

ಕೃಷ್ಣ ಮಾರ್ಗದರ್ಶನ, ಆಶೀರ್ವಾದ ಮಾಡಿದ್ದಾರೆ:

ಮಾರ್ಗದರ್ಶನ ನೀಡುವಂತೆ ಕೃಷ್ಣ ಅವರನ್ನು ಕೋರಿದಾಗ ಬಹಳ ಸಂತೋಷದಿಂದ ಆಶೀರ್ವಾದ ಮಾಡಿದ್ದಾರೆ. ಮಾರ್ಗದರ್ಶನದ ಭರವಸೆ ನೀಡಿದ್ದಾರೆ, ಹೀಗಾಗಿ ಅವರ ಭೇಟಿಯಿಂದ ನನಗೆ ಆತ್ಮವಿಶ್ವಾಸ ಹೆಚ್ಚಾಗಿದೆ. ಅವರ ಆಡಳಿತದ ವೇಳೆಯಲ್ಲಿನ ಹಲವಾರು ನಿರ್ಣಯಗಳನ್ನು ಈ ಭೇಟಿ ವೇಳೆ ಮೆಲುಕು ಹಾಕಿದ್ದೇವೆ. ಅವೆಲ್ಲವೂ ಬರುವ ದಿನಗಳಲ್ಲಿ ನನಗೆ ಸಹಕಾರಿಯಾಗಲಿದೆ. ನನ್ನ ಆಡಳಿತದಲ್ಲಿ ಕೃಷ್ಣ ಆಡಳಿತದ ಒಂದು ಛಾಪು, ಛಾಯೆ ಖಂಡಿತವಾಗಿಯೂ ಇರಲಿದೆ ಎಂದು ತಿಳಿಸಿದ್ದಾರೆ.

ಹೊಸತನ, ಯೌವನ ಮತ್ತು ರಾಜಕೀಯ ಪರಂಪರೆಯಿಂದ ಬಂದವರು ಬೊಮ್ಮಾಯಿ

ನಂತರ ಮಾತನಾಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ, ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಮತ್ತು ನಾನು ಅತ್ಯಂತ ಆತ್ಮೀಯತೆಯಿಂದ ಕೂಡಿದ ಸ್ನೇಹಿತರಾಗಿದ್ದೆವು. ಇಂದು ಅವರ ಸುಪುತ್ರ ನಮ್ಮ ರಾಜ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಕಾರ್ಯ ಮಾಡಲು ಆರಂಭಿಸಿದ್ದಾರೆ. ಹೊಸತನ, ಯೌವನ ಮತ್ತು ರಾಜಕೀಯ ಪರಂಪರೆಯಿಂದ ಅವರು ಬಂದಿದ್ದಾರೆ. ಹಾಗಾಗಿ ಬಹಳ ದಕ್ಷತೆಯಿಂದ ಈ ನಾಡಿನ ನಾಯಕತ್ವವನ್ನು ವಹಿಸಿಕೊಂಡು ಈ ನಾಡನ್ನು ಮುಂದುವರಿಸುತ್ತಾರೆ ಎನ್ನುವ ಅಖಂಡವಾದ ವಿಶ್ವಾಸ ನನ್ನಲ್ಲಿದೆ ಎಂದರು.

ಅವರ ಕಾರ್ಯದಕ್ಷತೆಯನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ನೋಡಿದ್ದೇನೆ. ನಾನು ಸಿಎಂ ಆಗಿದ್ದಾಗ ಅವರು ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ನನಗೆ ಬಹಳ ತೊಂದರೆ ಕೊಡುತ್ತಿದ್ದರು. ಆದರೆ, ಎಲ್ಲವೂ ಕೂಡ ಸದುದ್ದೇಶದಿಂದ ಕೂಡಿದ್ದವು. ನಮ್ಮಿಬ್ಬರ ಒಟ್ಟಾರೆ ದೃಷ್ಟಿ ರಾಜ್ಯದ ಸರ್ವತೋಮುಖವಾದ ಅಭಿವೃದ್ಧಿಯಾಗಿತ್ತು. ಕೇವಲ ರಾಜ್ಯದ ಅಭಿವೃದ್ಧಿಗಾಗಿ ವಿವಿಧ ದೃಷ್ಟಿಕೋನದಿಂದ ಚಿಂತನೆ ಮಾಡುತ್ತಿದ್ದೆವು. ಹೀಗಾಗಿ ಇಂದು ಅವರ ಬೆಂಬಲಕ್ಕೆ ನಾವೆಲ್ಲ ಇದ್ದೇವೆ. ಅವರು ರಾಜ್ಯವನ್ನು ಮುನ್ನಡೆಸುವಂತೆ ಹಾರೈಸಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟಿ-20 ಇತಿಹಾಸದಲ್ಲೇ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ, 4-1ರಲ್ಲಿ ಸರಣಿ ಗೆದ್ದ ಬಾಂಗ್ಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.