ETV Bharat / state

ಮನೆಯಲ್ಲಿ ದೋಷವಿದೆ ಎಂದು ಬಂದ ಗೊರವಯ್ಯಗಳಿಂದ ಮನೆಯವರ ವಶೀಕರಣ, ಆಮೇಲೇನಾಯ್ತು? - ಬೆಂಗಳೂರಿನಲ್ಲಿ ಮೈಲಾರಲಿಂಗೇಶ್ವರನ ಹೆಸರಲ್ಲಿ ದೋಖಾ

ದೇವರ ಹೆಸರಲ್ಲಿ ಮೋಸ ಮಾಡೋರ ಸಂಖ್ಯೆ ಹೆಚ್ಚಾಗಿದ್ದು,ಮತ್ತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.

ಮೈಲಾರಲಿಂಗೇಶ್ವರನ ಹೆಸರಲ್ಲಿ ದೋಖಾ
author img

By

Published : Oct 25, 2019, 1:52 PM IST

ಬೆಂಗಳೂರು: ಮೈಲಾರಲಿಂಗೇಶ್ವರನ ಹೆಸರಲ್ಲಿ ಮೂವರು ಗೊರವಯ್ಯಗಳು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೋಸ ಹೋದ ಮಂದಿ ನಗರ ಪೊಲೀಸರ ಸಾಮಾಜಿಕ ಜಾಲತಾಣಗಳ ಪೇಜ್​​ಗೆ ಟ್ಯಾಗ್ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಗೊರವಯ್ಯಗಳು ಕಗ್ಗದಾಸಪುರದ ಮಲ್ಲೇಶ್ ಪಾಳ್ಯ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಮನೆ ಮನೆಗೆ ತೆರಳಿ‌ ಕೆಲವರನ್ನ ಟಾರ್ಗೆಟ್ ಮಾಡುತ್ತಾರೆ. ಬಳಿಕ ಅವರ ವಿಳಾಸ ತಿಳಿದುಕೊಂಡು ನಿಮ್ಮ ಮನೆಯಲ್ಲಿ ದೋಷವಿದೆ ಎಂದು ಹೇಳಿ 25 ಸಾವಿರ ಕೇಳುತ್ತಾರಂತೆ. ಮನೆಯಲ್ಲಿರುವ ಸಮಸ್ಯೆ ಹೇಳಿ ವಶೀಕರಣ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಾರೆ.

ಸದ್ಯ ಇದೇ ರೀತಿ ಕಗ್ಗದಾಸಪುರದಲ್ಲಿ ಈ ಮೂವರು ಬಹಳಷ್ಟು ಮಂದಿಗೆ ಮೋಸ ಮಾಡಿದ್ದು, ಸದ್ಯ ಈ ಕುರಿತು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ನೊಂದ ಸಾರ್ವಜನಿಕರು ದೂರು ನೀಡಿ ದ್ದಾರೆ. ಈ ಸಂಬಂಧ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು: ಮೈಲಾರಲಿಂಗೇಶ್ವರನ ಹೆಸರಲ್ಲಿ ಮೂವರು ಗೊರವಯ್ಯಗಳು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೋಸ ಹೋದ ಮಂದಿ ನಗರ ಪೊಲೀಸರ ಸಾಮಾಜಿಕ ಜಾಲತಾಣಗಳ ಪೇಜ್​​ಗೆ ಟ್ಯಾಗ್ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಗೊರವಯ್ಯಗಳು ಕಗ್ಗದಾಸಪುರದ ಮಲ್ಲೇಶ್ ಪಾಳ್ಯ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಮನೆ ಮನೆಗೆ ತೆರಳಿ‌ ಕೆಲವರನ್ನ ಟಾರ್ಗೆಟ್ ಮಾಡುತ್ತಾರೆ. ಬಳಿಕ ಅವರ ವಿಳಾಸ ತಿಳಿದುಕೊಂಡು ನಿಮ್ಮ ಮನೆಯಲ್ಲಿ ದೋಷವಿದೆ ಎಂದು ಹೇಳಿ 25 ಸಾವಿರ ಕೇಳುತ್ತಾರಂತೆ. ಮನೆಯಲ್ಲಿರುವ ಸಮಸ್ಯೆ ಹೇಳಿ ವಶೀಕರಣ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಾರೆ.

ಸದ್ಯ ಇದೇ ರೀತಿ ಕಗ್ಗದಾಸಪುರದಲ್ಲಿ ಈ ಮೂವರು ಬಹಳಷ್ಟು ಮಂದಿಗೆ ಮೋಸ ಮಾಡಿದ್ದು, ಸದ್ಯ ಈ ಕುರಿತು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ನೊಂದ ಸಾರ್ವಜನಿಕರು ದೂರು ನೀಡಿ ದ್ದಾರೆ. ಈ ಸಂಬಂಧ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Intro:ಮೈಲಾರಲಿಂಗೇಶ್ವರನ ಹೆಸರೇಳೀಕೊಂಡು ಹಣ ದೋಚುತ್ತಿರುವ ಸ್ವಾಮೀಜಿಗಳು..

ಮೈಲಾರಲಿಂಗೇಶ್ವರನ ಹೆಸರೇಳೀಕೊಂಡು ಹಣ ದೋಚುತ್ತಿದ್ದಾರೆ ಸ್ವಾಮೀಜಿಗಳು ಎಂದು ನೊಂದವರು ಬೆಂಗಳೂರು ನಗರ ಪೊಲೀಸರ ಫೇಜ್ಗೆ ಟ್ಯಾಗ್ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಮೂವರು ಸ್ವಾಮೀಜಿಗಳು ವಶೀಕರಣ ವಿದ್ಯೆ ಕಲಿತು
ಕಗ್ಗದಾಸಪುರದ ಮಲ್ಲೇಶ್ ಪಾಳ್ಯ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಮನೆ ಮನೆಗೆ ತೆರಳಿ‌ ಮೂರು ಜನ ತಂಡ ಕೆಲವರನ್ನ ಟಾರ್ಗೆಟ್ ಮಾಡಿ ಅವರನ್ನ ಫಾಲೋ ಮಾಡಿ ಅವರ ಬಗ್ಗೆ ಮೊದಲು ತಿಳಿದುಕೊಳ್ಳುತ್ತಾರೆ.

ಇದಾದ ಬಳಿಕ ಅವರ ಮನೆ ತಿಳಿದುಕೊಂಡು ಅವರಿಗೆ ತಿಳಿಯದಂತೆ ಹಿಪ್ನೊಟೈಸ್ ಮಾಡುತ್ತಾರೆ..‌ ಅಲ್ಲದೆ ನಿಮ್ಮ ಮನೆಯಲ್ಲಿ ಆ ದೋಷ ಇದೆ ಈ ದೋಷ ಇದೆ ಎಂದು ಹೇಳಿ 25 ಸಾವಿರ ಕೇಳುತ್ತಾರೆ..
ಮನೆಯಲ್ಲಿರುವ ಸಮಸ್ಯೆಗಳನ್ನ ಹೇಳಿ ತದನಂತರ ಅವರನ್ನ ತಮ್ಮ ಕಡೆ ಸೆಳೆದು ವಶಿಕರಣ ಮಾಡಿದ ನಂತ್ರ ಮನೆಯಲ್ಲಿದ್ದ ಎಲ್ಲಾ ಚಿನ್ನಗಳನ್ನ ದೋಚಿ ಪರಾರಿಯಾಗುತ್ತಾರೆ..

ಸದ್ಯ ಇದೇ ರೀತಿ ಕಗ್ಗದಾಸಪುರದಲ್ಲಿ ಮೂರು ಜನ ಬಹಳಷ್ಟು ಮಂದಿಗೆ ಮೋಸ ಮಾಡಿದ್ದು ಸದ್ಯ ಈ ಕುರಿತು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ನೊಂದ ಸಾರ್ವಜನಿಕರು ದೂರು ನೀಡಿ ದ್ದಾರೆ. ಹಾಗೆ ನಗರ ಪೊಲೀಸರ ಫೇಜ್ಗೆ ಕೂಡ ಟ್ಯಾಗ್ ಮಾಡಿದ್ದು ಸಂಬಂಧ ಪಟ್ಟ ಡಿಸಿಪಿಗೆ ತನೀಕೆ ನಡೆಸುವಂತೆ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದು ಮೂವರು ಆರೋಪಿ ಗಳ ಪತ್ತೆಗೆ ತನೀಕೆ ಮುಂದುವರೆದಿದೆBody:KN_BNG_04_SWMIJI_7204498Conclusion:KN_BNG_04_SWMIJI_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.