ETV Bharat / state

ನಕಲಿ ದಾಖಲೆ ನೀಡಿ ಕೋಟ್ಯಂತರ ರೂ. ವಂಚನೆ ಆರೋಪ: ಸಿಬಿಐ ಮುಂದೆ ಹಾಜರಾದ ಮಾಜಿ ಸಚಿವ - undefined

ನಕಲಿ ದಾಖಲೆಗಳನ್ನ ಬ್ಯಾಂಕ್​ಗೆ ನೀಡಿ ಬಹುಕೋಟಿ ಹಣ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ವೈ.ಎಸ್.ಚೌಧರಿ ಇಂದು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ‌.

ವೈ.ಎಸ್.ಚೌಧರಿ
author img

By

Published : Apr 26, 2019, 8:55 PM IST

ಬೆಂಗಳೂರು: ನಕಲಿ ದಾಖಲೆಗಳನ್ನ ಬ್ಯಾಂಕ್​ಗೆ ನೀಡಿ ಬಹುಕೋಟಿ ಹಣ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ವೈ.ಎಸ್.ಚೌಧರಿ ಇಂದು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ‌. ತೆಲುಗು ದೇಶಂ ಪಾರ್ಟಿಯ ಮಾಜಿ ಸಚಿವರಾಗಿರುವ ವೈ.ಎಸ್.ಚೌಧರಿ ಅವರಿಗೆ ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿತ್ತು.

ಆಂಧ್ರಾ ಬ್ಯಾಂಕ್​ಗೆ ಸುಳ್ಳು ದಾಖಲೆ ನೀಡಿ 71 ಕೋಟಿ ರೂ. ವಂಚಿಸಿರುವ ಆರೋಪ ವೈ.ಎಸ್.ಚೌಧರಿ ಮೇಲಿದೆ‌. ಬಿಸ್ಟ್ ಹಾಗೂ ಕ್ರೋಪಾಟನ್ ಇಂಜಿನಿಯರಿಂಗ್ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ಹೆಸರಲ್ಲಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ 2017 ರಲ್ಲಿ ಸಿಬಿಐ ವೈ.ಎಸ್.ಚೌಧರಿ, ಕಂಪನಿ ಎಂ.ಡಿ ಶ್ರೀನಿವಾಸ್ ಕಲ್ಯಾಣ್ ರಾವ್ ಸೇರಿದಂತೆ ಕಂಪನಿಯ ಎಲ್ಲಾ ಡೈರೆಕ್ಟರ್​ಗಳ ವಿರುದ್ಧ ದೂರು ದಾಖಲಿಸಿಕೊಂಡಿತ್ತು. 2018 ರಲ್ಲಿ ಪ್ರಕರಣ ಸಂಬಂಧ ಇಡಿ ಹಾಗೂ ಐಟಿ ಇಲಾಖೆ ಅಧಿಕಾರಿಗಳು ಸಹ ಚೌಧರಿಯವರ ಮನೆ ಮೇಲೆ ದಾಳಿ ನೆಡೆಸಿ ಕೆಲ ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದರು.

ಸದ್ಯ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗಿದ್ದ ವೈ.ಎಸ್.ಚೌಧರಿ ವಿಚಾರಣೆ ಎದುರಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ನಕಲಿ ದಾಖಲೆಗಳನ್ನ ಬ್ಯಾಂಕ್​ಗೆ ನೀಡಿ ಬಹುಕೋಟಿ ಹಣ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ವೈ.ಎಸ್.ಚೌಧರಿ ಇಂದು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ‌. ತೆಲುಗು ದೇಶಂ ಪಾರ್ಟಿಯ ಮಾಜಿ ಸಚಿವರಾಗಿರುವ ವೈ.ಎಸ್.ಚೌಧರಿ ಅವರಿಗೆ ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿತ್ತು.

ಆಂಧ್ರಾ ಬ್ಯಾಂಕ್​ಗೆ ಸುಳ್ಳು ದಾಖಲೆ ನೀಡಿ 71 ಕೋಟಿ ರೂ. ವಂಚಿಸಿರುವ ಆರೋಪ ವೈ.ಎಸ್.ಚೌಧರಿ ಮೇಲಿದೆ‌. ಬಿಸ್ಟ್ ಹಾಗೂ ಕ್ರೋಪಾಟನ್ ಇಂಜಿನಿಯರಿಂಗ್ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ಹೆಸರಲ್ಲಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ 2017 ರಲ್ಲಿ ಸಿಬಿಐ ವೈ.ಎಸ್.ಚೌಧರಿ, ಕಂಪನಿ ಎಂ.ಡಿ ಶ್ರೀನಿವಾಸ್ ಕಲ್ಯಾಣ್ ರಾವ್ ಸೇರಿದಂತೆ ಕಂಪನಿಯ ಎಲ್ಲಾ ಡೈರೆಕ್ಟರ್​ಗಳ ವಿರುದ್ಧ ದೂರು ದಾಖಲಿಸಿಕೊಂಡಿತ್ತು. 2018 ರಲ್ಲಿ ಪ್ರಕರಣ ಸಂಬಂಧ ಇಡಿ ಹಾಗೂ ಐಟಿ ಇಲಾಖೆ ಅಧಿಕಾರಿಗಳು ಸಹ ಚೌಧರಿಯವರ ಮನೆ ಮೇಲೆ ದಾಳಿ ನೆಡೆಸಿ ಕೆಲ ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದರು.

ಸದ್ಯ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗಿದ್ದ ವೈ.ಎಸ್.ಚೌಧರಿ ವಿಚಾರಣೆ ಎದುರಿಸಿದ್ದಾರೆ ಎಂದು ತಿಳಿದುಬಂದಿದೆ.

Intro:Body:ಬ್ಯಾಂಕ್ ಗೆ ನಕಲಿ ದಾಖಲೆ ನೀಡಿ ಕೋಟ್ಯಂತರ ರೂ.ವಂಚನೆ ಆರೋಪ: ಸಿಬಿಐ ಅಧಿಕಾರಿಗಳ ಮುಂದೆ ಹಾಜರಾದ ಟಿಡಿಪಿ ಪಕ್ಷದ ಮಾಜಿ ಸಚಿವ

ಬೆಂಗಳೂರು:
ನಕಲಿ ದಾಖಲೆಗಳನ್ನ ಬ್ಯಾಂಕಿಗೆ ನೀಡಿ ಬಹುಕೋಟಿ ಹಣ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ವೈ ಎಸ್ ಚೌಧರಿ ಇವತ್ತು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ‌. ತೆಲುಗು ದೇಶಂ ಪಾರ್ಟಿಯ ಮಾಜಿ ಸಚಿವರಾಗಿರುವ ವೈಎಸ್ ಚೌಧರಿಗೆ ಇವತ್ತು ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿತ್ತು. ಆಂಧ್ರಾ ಬ್ಯಾಂಕ್ ಗೆ ಸುಳ್ಳು ದಾಖಲೆ ನೀಡಿ 71 ಕೋಟಿ ರೂಪಾಯಿ ವಂಚಿಸಿರುವ ಆರೋಪ ಟಿಡಿಪಿ ಮುಖಂಡನ ಮೇಲಿದೆ‌. ಬಿಸ್ಟ್ ಹಾಗೂ ಕ್ರೋಪಾಟನ್ ಇಂಜಿನಿಯರಿಂಗ್ ಪ್ರಾಜೆಕ್ಟ್ ಲಿಮಿಟೆಡ್ ಕಂಪೆನಿ ಹೆಸರಲ್ಲಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ 2017ರಲ್ಲಿ ಸಿಬಿಐ, ಚೌಧರಿ, ಕಂಪನಿ ಎಂ.ಡಿ ಶ್ರೀನಿವಾಸ್ ಕಲ್ಯಾಣ್ ರಾವ್ ಸೇರಿದಂತೆ ಕಂಪನಿಯ ಎಲ್ಲಾ ಡೈರೆಕ್ಟರ್ ಗಳ ವಿರುದ್ಧ ದೂರು ದಾಖಲಿಸಿಕೊಂಡಿತ್ತು.
2018ರಲ್ಲಿ ಪ್ರಕರಣ ಸಂಬಂಧ ಇ.ಡಿ ಹಾಗೂ ಐಟಿ ಇಲಾಖೆ ಸಹ ಚೌಧರಿ ಮನೆ ಮೇಲೆ ದಾಳಿ ನೆಡೆಸಿ ಕೆಲ ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದವು. ಸದ್ಯ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗಿದ್ದ ವೈ.ಎಸ್ ವಿಚಾರಣೆ ಎದುರಿಸಿದ್ದಾರೆ ಎಂದು ತಿಳಿದುಬಂದಿದೆ.Conclusion:Bharath

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.