ETV Bharat / state

ಕಣ್ಣೀರು ಹಾಕುವುದು ಹೆಚ್​ಡಿಕೆ ಕುಟುಂಬದ ಬಳುವಳಿಯಾಗಿದೆ: ಸದಾನಂದಗೌಡ ವ್ಯಂಗ್ಯ

author img

By

Published : Nov 28, 2019, 7:03 PM IST

ಇಪ್ಪತ್ತೆರಡು ಜಿಲ್ಲೆಗಳಲ್ಲಿ ಪ್ರವಾಹ ಬಂದು ಹಾನಿಯಾಗಿದೆ. ಆದರೆ ಪ್ರವಾಹ ಬಂದಿಲ್ಲದ ಕಡೆ ಕುಮಾರಸ್ವಾಮಿ ಕಣ್ಣೀರು ಹಾಕಿ ಮುಳುಗಿಸ್ತಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ವ್ಯಂಗ್ಯವಾಡಿದ್ರು.

ಕೇಂದ್ರ ಸಚಿವ ಸದಾನಂದಗೌಡ
ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು: ಇಪ್ಪತ್ತೆರಡು ಜಿಲ್ಲೆಗಳಲ್ಲಿ ಪ್ರವಾಹ ಬಂದು ಹಾನಿಯಾಗಿದೆ. ಆದರೆ ಪ್ರವಾಹ ಬಂದಿಲ್ಲದ ಕಡೆ ಕುಮಾರಸ್ವಾಮಿ ಕಣ್ಣೀರು ಹಾಕಿ ಮುಳುಗಿಸ್ತಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ವ್ಯಂಗ್ಯವಾಡಿದ್ರು. ಮಹಾಲಕ್ಷ್ಮಿ ಲೇಔಟ್​ನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ಪ್ರಚಾರದ ವೇಳೆ ಮಾತನಾಡದ ಅವರು, ಕಣ್ಣೀರಿನ ನಾಟಕವನ್ನು ಇನ್ನೆಷ್ಟು ದಿನ ಆಡುತ್ತಾರೆ ಎಂದರು.

ನಾನು ಕೂಡ ಕೆ.ಆರ್.ಪೇಟೆಗೆ ಹೋಗಿದ್ದೆ. ಕುಮಾರಸ್ವಾಮಿ ಅಳೋದು ಇದೇ ಮೊದಲಲ್ಲ ಎಂದು ಅಲ್ಲಿಯ ಜನ ಹೇಳ್ತಿದ್ದರು ಎಂದರು. ಕಣ್ಣೀರು ಹಾಕುವುದು ಅವರ ಕುಟುಂಬದ ಬಳುವಳಿಯಾಗಿದೆ. ಕುಮಾರಸ್ವಾಮಿಯವರ ತಂದೆ ಮೊದಲು ಅಳುತ್ತಿದ್ದರು. ಈಗ ಅವರು ಅಳುತ್ತಿದ್ದಾರೆ. ಮುಂದೆ ಅವರ ಮಗ ನಿಖಿಲ್ ಕೂಡ ಅಳ್ತಾನೆ ಎಂದರು.

ಕೇಂದ್ರ ಸಚಿವ ಸದಾನಂದಗೌಡ

ಇನ್ನು ಬಿಎಸ್​ವೈ ಸರ್ಕಾರದ ಅಸ್ತಿತ್ವದ ಬಗ್ಗೆ ಹೆಚ್​ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಯಾವ ಸೀಮೆ ಜ್ಯೋತಿಷಿಯೋ ಗೊತ್ತಿಲ್ಲ. ಸಾಧಾರಣ ಈ ರೀತಿಯ ಜ್ಯೋತಿಷ್ಯವನ್ನು ಅವರು ಹೇಳ್ತಿರ್ತಾರೆ. ಅವರು ಮಾಡೋದು ಎರಡೇ ಕೆಲಸ. ಒಂದು ಜ್ಯೋತಿಷ್ಯ ಹೇಳೋದು. ಇನ್ನೊಂದು ಅಳೋದು ಎಂದರು. ಇನ್ನು ಚುನಾವಣಾ ಪ್ರಚಾರದ ವೇಳೆ ಸಚಿವ ಸುರೇಶ್ ಕುಮಾರ್ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

ಬೆಂಗಳೂರು: ಇಪ್ಪತ್ತೆರಡು ಜಿಲ್ಲೆಗಳಲ್ಲಿ ಪ್ರವಾಹ ಬಂದು ಹಾನಿಯಾಗಿದೆ. ಆದರೆ ಪ್ರವಾಹ ಬಂದಿಲ್ಲದ ಕಡೆ ಕುಮಾರಸ್ವಾಮಿ ಕಣ್ಣೀರು ಹಾಕಿ ಮುಳುಗಿಸ್ತಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ವ್ಯಂಗ್ಯವಾಡಿದ್ರು. ಮಹಾಲಕ್ಷ್ಮಿ ಲೇಔಟ್​ನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ಪ್ರಚಾರದ ವೇಳೆ ಮಾತನಾಡದ ಅವರು, ಕಣ್ಣೀರಿನ ನಾಟಕವನ್ನು ಇನ್ನೆಷ್ಟು ದಿನ ಆಡುತ್ತಾರೆ ಎಂದರು.

ನಾನು ಕೂಡ ಕೆ.ಆರ್.ಪೇಟೆಗೆ ಹೋಗಿದ್ದೆ. ಕುಮಾರಸ್ವಾಮಿ ಅಳೋದು ಇದೇ ಮೊದಲಲ್ಲ ಎಂದು ಅಲ್ಲಿಯ ಜನ ಹೇಳ್ತಿದ್ದರು ಎಂದರು. ಕಣ್ಣೀರು ಹಾಕುವುದು ಅವರ ಕುಟುಂಬದ ಬಳುವಳಿಯಾಗಿದೆ. ಕುಮಾರಸ್ವಾಮಿಯವರ ತಂದೆ ಮೊದಲು ಅಳುತ್ತಿದ್ದರು. ಈಗ ಅವರು ಅಳುತ್ತಿದ್ದಾರೆ. ಮುಂದೆ ಅವರ ಮಗ ನಿಖಿಲ್ ಕೂಡ ಅಳ್ತಾನೆ ಎಂದರು.

ಕೇಂದ್ರ ಸಚಿವ ಸದಾನಂದಗೌಡ

ಇನ್ನು ಬಿಎಸ್​ವೈ ಸರ್ಕಾರದ ಅಸ್ತಿತ್ವದ ಬಗ್ಗೆ ಹೆಚ್​ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಯಾವ ಸೀಮೆ ಜ್ಯೋತಿಷಿಯೋ ಗೊತ್ತಿಲ್ಲ. ಸಾಧಾರಣ ಈ ರೀತಿಯ ಜ್ಯೋತಿಷ್ಯವನ್ನು ಅವರು ಹೇಳ್ತಿರ್ತಾರೆ. ಅವರು ಮಾಡೋದು ಎರಡೇ ಕೆಲಸ. ಒಂದು ಜ್ಯೋತಿಷ್ಯ ಹೇಳೋದು. ಇನ್ನೊಂದು ಅಳೋದು ಎಂದರು. ಇನ್ನು ಚುನಾವಣಾ ಪ್ರಚಾರದ ವೇಳೆ ಸಚಿವ ಸುರೇಶ್ ಕುಮಾರ್ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

Intro:ಪ್ರವಾಹ ಬಂದಿಲ್ಲದ ಕಡೆ ಕಣ್ಣೀರಿನ ಪ್ರವಾಹದಲ್ಲಿ ಮುಳುಗಿಸ್ತಾರೆ- ಕುಮಾರಸ್ವಾಮಿ ಕಣ್ಣೀರಿಗೆ ಸದಾನಂದಗೌಡ ಟಾಂಗ್


ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಕೆ.ಆರ್ ಪೇಟೆ ಚುನಾವಣೆಯಲ್ಲಿ ಕಣ್ಣೀರಿಟ್ಟ ವಿಚಾರವಾಗಿ ವ್ಯಂಗ್ಯವಾಡಿದ ಕೇಂದ್ರ ಸಚಿವ ಸದಾನಂದಗೌಡ, ಇಪ್ಪತ್ತೆರಡು ಜಿಲ್ಲೆಗಳಲ್ಲಿ ಪ್ರವಾಹ ಬಂದು ಮುಳುಗಿದೆ. ಪ್ರವಾಹ ಬಂದಿಲ್ಲದ ಕಡೆ ಕಣ್ಣೀರಿನ ಪ್ರವಾಹದಲ್ಲೇ ಮುಳುಗಿಸ್ತಾರೆ. ಇದು ಆ ಪ್ರವಾಹಕ್ಕಿಂತ ಅಪಾಯಕಾರಿ ಎಂದು ಟೀಕಿಸಿದರು.
ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ಪ್ರಚಾರ ಮಾಡಿದ ಸದಾನಂದಗೌಡರು, ಕಣ್ಣೀರಿನ ನಾಟಕ ಇನ್ನೂ ಎಷ್ಟು ದಿನ ಮಾಡುತ್ತಾರೆ. ನಾನು ಕೂಡ ಕೆಆರ್ ಪೇಟೆಗೆ ಹೋಗಿದ್ದೆ.. ಅಲ್ಲಿ ಜನ ಹೇಳ್ತಿದ್ದರು ಕುಮಾರಸ್ವಾಮಿ ಅಳೋದು ಇದೇ ಮೊದಲಲ್ಲ.. ಇದು ಕುಟುಂಬ ಬಳುವಳಿ.. ಕುಮಾರಸ್ವಾಮಿಯವರ ತಂದೆ ಮೊದಲು ಅಳುತ್ತಿದ್ದರು.. ಈಗ ಮಗ ಕುಮಾರಸ್ವಾಮಿ ಅಳುತ್ತಿದ್ದಾರೆ.. ಮುಂದೆ ಅವರ ಮಗ ನಿಖಿಲ್ ಕೂಡ ಅಳ್ತಾನೆ ಎಂದರು.
ಇನ್ನು ಬಿಎಸ್ವೈ ಸರ್ಕಾರ ಅಸ್ತಿತ್ವ ಉಳಿವಿನ ಹೇಳಿಕೆ ವಿಚಾರವಾಗಿ ಟಾಂಗ್ ಕೊಟ್ಟು, ಕುಮಾರಸ್ವಾಮಿ ಯಾವ ಸೀಮೆ ಜ್ಯೋತಿಷಿಯೋ ಗೊತ್ತಿಲ್ಲ.. ಸಾಧಾರಣ ಈ ರೀತಿಯ ಜ್ಯೋತಿಷ್ಯವನ್ನು ಅವರು ಹೇಳ್ತಿರ್ತಾರೆ.. ಅವರು ಮಾಡೋದು ಎರಡೇ ಕೆಲಸ ಒಂದು ಜ್ಯೋತಿಷ್ಯ ಹೇಳೋದು.. ಇನ್ನೊಂದು ಅಳೋದು ಎಂದರು.
ಚುನಾವಣಾ ಪ್ರಚಾರದ ವೇಳೆ ಸಚಿವ ಸುರೇಶ್ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.


ಸೌಮ್ಯಶ್ರೀ
kn_bng_04_bjp_visual_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.