ETV Bharat / state

ಮುಗಿಯದ ಚಾಮರಾಜಪೇಟೆ ಮೈದಾನದ ವಿವಾದ.. ಅಪ್ಪು ಶಂಕರ್ ನಾಗ್ ಗಣೇಶೋತ್ಸವಕ್ಕೆ ಮುಂದಾದ ಫ್ಯಾನ್ಸ್​

author img

By

Published : Aug 24, 2022, 5:26 PM IST

ಸಾವರ್ಕರ್ ಗಣೇಶೋತ್ಸವ ವಿರೋಧಿಸಿ ಚಾಮರಾಜೇಂದ್ರ ಒಡೆಯರ್ ಹಾಗೂ ಅಪ್ಪು ಗಣೇಶೋತ್ಸವ ಆಚರಿಸಲು ಸಂಘಟನೆ ಮುಂದಾಗಿದೆ. ಹಾಗೆ 'ಸಾವರ್ಕರ್​ಗೂ ಕರ್ನಾಟಕಕ್ಕೂ ಏನು ಸಂಬಂಧ ಎಂದು ಸಂಘಟನೆ ಮುಖಂಡರು ಪ್ರಶ್ನಿಸಿದ್ದಾರೆ.

ಅಪ್ಪು, ಶಂಕರ್​​ನಾಗ್ ಗಣೇಶೋತ್ಸವ ಆಚರಿಸುತ್ತೇವೆ!'
ಅಪ್ಪು, ಶಂಕರ್​​ನಾಗ್ ಗಣೇಶೋತ್ಸವ ಆಚರಿಸುತ್ತೇವೆ!'

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ವಿವಾದದ ಮೇಲೆ ವಿವಾದ ಎದ್ದು ಕಾಣುತ್ತಿದೆ. ಇದೀಗ ವೀರ ಸಾವರ್ಕರ್ ಗಣೇಶೋತ್ಸವ ವಿರೋಧಿಸಿ ಚಾಮರಾಜೇಂದ್ರ ಒಡೆಯರ್ ಹಾಗೂ ಅಪ್ಪು ಗಣೇಶೋತ್ಸವ ಆಚರಿಸಲು ಸಂಘಟನೆ ಮುಂದಾಗಿದೆ.

ಶಂಕರ್​ ನಾಗ್ ಕನ್ನಡ ಜ್ಯೋತಿ ಗೆಳೆಯರ ಬಳಗ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 500 ಕಡೆ ಚಾಮರಾಜೇಂದ್ರ ಒಡೆಯರ್, ಅಪ್ಪು ಹಾಗೂ ಶಂಕರ್ ನಾಗ್ ಗಣೇಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸೂಚನೆ ಪತ್ರ
ಸೂಚನೆ ಪತ್ರ

ಈ ಕುರಿತು ಪ್ರತಿಕ್ರಿಯಿಸಿದ ಶಂಕರ್ ನಾಗ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಗಜೇಂದ್ರ, ಸಾವರ್ಕರ್​ಗೂ ಕರ್ನಾಟಕಕ್ಕೂ ಏನು ಸಂಬಂಧ. ಅಂತಹ ವ್ಯಕ್ತಿಯ ಹೆಸರಿನಲ್ಲಿ ಸಾರ್ವಜನಿಕ ಹಣದಿಂದ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡುವುದು ಖಂಡನೀಯ ಎಂದರು.

ಅಪ್ಪು, ಶಂಕರ್​​ನಾಗ್ ಗಣೇಶೋತ್ಸವ ಆಚರಿಸುತ್ತೇವೆ!'

ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಸಂಚು: ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಭಾರಿ ಸಂಚು ಇದೆ. ಹಾಗಾಗಿ, ಈ ರೀತಿಯ ವಿವಾದಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದನ್ನು ಹತ್ತಿಕ್ಕಬೇಕಾದ ಸರ್ಕಾರವೇ ಪ್ರೋತ್ಸಾಹ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಅಭಿಮಾನಿಗಳಿಂದ ಆಚರಣೆ: ರಾಜ್ಯ ಸರ್ಕಾರ ಚಾಮರಾಜೇಂದ್ರ ಒಡೆಯರ್, ಅಪ್ಪು ಹಾಗೂ ಶಂಕರ್ ನಾಗ್ ಅವರ ಭಾವಚಿತ್ರ ಇಟ್ಟು ಗಣೇಶೋತ್ಸವ ಆಚರಣೆಗೆ ಮುಂದಾಗಬೇಕು. ಇಲ್ಲದಿದ್ದರೆ, ನಾವೇ ಸ್ವತಃ ಅಭಿಮಾನಿಗಳೇ ಆಚರಣೆ ಮಾಡುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಹಲಾಲ್ ಮುಕ್ತ ಗಣೇಶ ಹಬ್ಬ ಮಾಡಬೇಕು: ಸಾವರ್ಕರ್ ಭಾವಚಿತ್ರ ಹಂಚಿದ ಮುತಾಲಿಕ್​

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ವಿವಾದದ ಮೇಲೆ ವಿವಾದ ಎದ್ದು ಕಾಣುತ್ತಿದೆ. ಇದೀಗ ವೀರ ಸಾವರ್ಕರ್ ಗಣೇಶೋತ್ಸವ ವಿರೋಧಿಸಿ ಚಾಮರಾಜೇಂದ್ರ ಒಡೆಯರ್ ಹಾಗೂ ಅಪ್ಪು ಗಣೇಶೋತ್ಸವ ಆಚರಿಸಲು ಸಂಘಟನೆ ಮುಂದಾಗಿದೆ.

ಶಂಕರ್​ ನಾಗ್ ಕನ್ನಡ ಜ್ಯೋತಿ ಗೆಳೆಯರ ಬಳಗ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 500 ಕಡೆ ಚಾಮರಾಜೇಂದ್ರ ಒಡೆಯರ್, ಅಪ್ಪು ಹಾಗೂ ಶಂಕರ್ ನಾಗ್ ಗಣೇಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸೂಚನೆ ಪತ್ರ
ಸೂಚನೆ ಪತ್ರ

ಈ ಕುರಿತು ಪ್ರತಿಕ್ರಿಯಿಸಿದ ಶಂಕರ್ ನಾಗ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಗಜೇಂದ್ರ, ಸಾವರ್ಕರ್​ಗೂ ಕರ್ನಾಟಕಕ್ಕೂ ಏನು ಸಂಬಂಧ. ಅಂತಹ ವ್ಯಕ್ತಿಯ ಹೆಸರಿನಲ್ಲಿ ಸಾರ್ವಜನಿಕ ಹಣದಿಂದ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡುವುದು ಖಂಡನೀಯ ಎಂದರು.

ಅಪ್ಪು, ಶಂಕರ್​​ನಾಗ್ ಗಣೇಶೋತ್ಸವ ಆಚರಿಸುತ್ತೇವೆ!'

ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಸಂಚು: ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಭಾರಿ ಸಂಚು ಇದೆ. ಹಾಗಾಗಿ, ಈ ರೀತಿಯ ವಿವಾದಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದನ್ನು ಹತ್ತಿಕ್ಕಬೇಕಾದ ಸರ್ಕಾರವೇ ಪ್ರೋತ್ಸಾಹ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಅಭಿಮಾನಿಗಳಿಂದ ಆಚರಣೆ: ರಾಜ್ಯ ಸರ್ಕಾರ ಚಾಮರಾಜೇಂದ್ರ ಒಡೆಯರ್, ಅಪ್ಪು ಹಾಗೂ ಶಂಕರ್ ನಾಗ್ ಅವರ ಭಾವಚಿತ್ರ ಇಟ್ಟು ಗಣೇಶೋತ್ಸವ ಆಚರಣೆಗೆ ಮುಂದಾಗಬೇಕು. ಇಲ್ಲದಿದ್ದರೆ, ನಾವೇ ಸ್ವತಃ ಅಭಿಮಾನಿಗಳೇ ಆಚರಣೆ ಮಾಡುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಹಲಾಲ್ ಮುಕ್ತ ಗಣೇಶ ಹಬ್ಬ ಮಾಡಬೇಕು: ಸಾವರ್ಕರ್ ಭಾವಚಿತ್ರ ಹಂಚಿದ ಮುತಾಲಿಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.