ETV Bharat / state

ದೋಷಾರೋಪ ಪಟ್ಟಿಯಲ್ಲಿ ಮಾಜಿ ಮೇಯರ್​ ಹೆಸರು: ಸಂಪತ್​ ರಾಜ್ ಸಂಚು ಹೇಗಿತ್ತು ಗೊತ್ತಾ..?

author img

By

Published : Oct 13, 2020, 7:34 PM IST

ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಸಿಬಿ, ಮಾಜಿ ಮೇಯರ್​ ಸಂಪತ್​ ರಾಜ್​ನ್ನು ಆರೋಪಿಯಾಗಿ ಮಾಡಿದೆ. ಗಲಭೆಯಲ್ಲಿ ಸಂಪತ್​ ರಾಜ್ ಸಂಚಿನ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ.

CCB Submitted Charge Sheet about DJ Halli Riot
ಡಿ.ಜೆ ಹಳ್ಳಿ ಗಲಭೆಯಲ್ಲಿ ಮಾಜಿ ಮೇಯರ್​ ಆರೋಪಿ

ಬೆಂಗಳೂರು : ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ಪ್ರಕರಣದಲ್ಲಿ ಮಾಜಿ ಮೇಯರ್​ ಸಂಪತ್ ರಾಜ್ 51 ನೇ ಆರೋಪಿಯಾಗಿದ್ದಾರೆ. ಗಲಭೆ ನಡೆದಾಗ ಅಖಂಡ ಶ್ರೀನಿವಾಸ್ ಮೂರ್ತಿ ಮನೆಯ 300 ಮೀಟರ್ ದೂರದಲ್ಲಿ ಆಪ್ತ ಸಂತೋಷ್ ಮನೆಯಲ್ಲಿದ್ದುಕೊಂಡು ಮಾಜಿ ಮೇಯರ್ ಸಂಪತ್​ ರಾಜ್​ ಗಲಭೆಯ ಅಪ್ಡೇಟ್​ ಪಡೆದುಕೊಳ್ಳುತ್ತಿದ್ದರು ಎಂಬ ವಿಚಾರವನ್ನು ಚಾರ್ಜ್ ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟು ಮಾತ್ರವಲ್ಲದೆ, ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಕೊಲೆಗೂ ಸ್ಕೆಚ್ ಹಾಕಲಾಗಿತ್ತು. ​​ ಅದೃಷ್ಟವಶಾತ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಮನೆಗೆ ಬೆಂಕಿ ಹಚ್ಚಲು ನಡೆದಿತ್ತು ಫಡಿಂಗ್ :

ಶಾಸಕ ಅಂಖಡ ಶ್ರೀನಿವಾಸಮೂರ್ತಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಸಂಪತ್​​ ರಾಜ್ ಮತ್ತು ಮಾಜಿ ಕಾರ್ಪೋರೇಟರ್​ ಜಾಕಿರ್​, ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಇಡಲು ತನ್ನ ಆಪ್ತರ ಮುಖಾಂತರ ಫಡಿಂಗ್ ಮಾಡಿದ್ದರು. ಪ್ರತಿಭಟನೆ ಮಾಡಲು ಬರುವ ಹುಡುಗರಿಗೆ ಉಚಿತವಾಗಿ ಪೆಟ್ರೋಲ್ ಕೊಡುವಂತೆ ಸ್ಥಳೀಯ ಪೆಟ್ರೋಲ್ ಬಂಕ್ ಮಾಲೀಕನಿಗೆ ಹೇಳಿದ್ದರು. ಸಂಪತ್​ ಹೆಸರು ಯಾರು ಹೇಳ್ತಾರೆ ಅವರಿಗೆ ಪೆಟ್ರೋಲ್ ಕೊಡಿ ಎಂದಿದ್ದರು. ಸಂಪತ್ ರಾಜ್ ಪಿಎ ಅರುಣ್ ಇಡೀ ಪ್ರಕರಣದ ಉಸ್ತುವಾರಿ ವಹಿಸಿಕೊಂಡು, ಕಾವಲ್ ಬೈರಸಂದ್ರ ಬಸ್ ಸ್ಟ್ಯಾಂಡ್ ಬಳಿ ಪುಂಡರಿಗೆ ಹಣ ಕೊಟ್ಟಿದ್ದ ಎನ್ನಲಾಗಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

200 ಕ್ಕೂ ಹೆಚ್ಚು ಮೊಬೈಲ್, ಸಿಸಿ ಟಿವಿ ದೃಶ್ಯ, 100 ಮಂದಿ ಪ್ರತ್ಯಕ್ಷ್ಯದರ್ಶಿಗಳ ಹೇಳಿಕೆ :

ಪ್ರಕರಣದಲ್ಲಿ ಸಂಪತ್​ ರಾಜ್ ಹೆಸರು ಕೇಳಿ ಬಂದ ತಕ್ಷಣ, ಸಿಸಿಬಿ ಪೊಲೀಸರು ಗಲಭೆ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ಸಂಪತ್​ರಾಜ್ ಚಲನವಲನಗಳನ್ನು ಗಮನಿಸಲಾಗಿದೆ. ಆರೋಪಿಗಳಿಗೆ ಮಾಜಿ ಮೇಯರ್ ಹಾಗೂ ಮಾಜಿ ‌ಕಾರ್ಪೋರೆಟರ್ ಆಪ್ತರು ಹಣ ಹಂಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಜೊತೆಗೆ, ಸಂಪತ್​ ರಾಜ್ , ಅರುಣ್ ರಾಜ್, ಮತ್ತು ಮುಜಾಮಿಲ್ ನಡುವಿನ ಸಂಭಾಷಣೆ, ವಾಟ್ಸ್​ ಆ್ಯಪ್ ಸಂದೇಶಗಳನ್ನು ಕೂಡ ಸಾಕ್ಷಿಯಾಗಿ ಪರಿಗಣಿಸಲಾಗಿದೆ.

ಸದ್ಯ, ಅನಾರೋಗ್ಯವೆಂದು ವೈದ್ಯರು ಸರ್ಟಿಫಿಕೇಟ್ ನೀಡಿರುವ ಕಾರಣ, ಸಂಪತ್​ ರಾಜ್​ ಬಂಧನವಾಗಿಲ್ಲ. ಚಿಕಿತ್ಸೆ ಬಳಿಕ ಬಂಧಿಸಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ನಿರೀಕ್ಷಣಾ ಜಾಮೀನು ಪಡೆಯಲು ಸಂಪತ್​ ರಾಜ್ ಕೂಡ ತಯಾರಿ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.

ಬೆಂಗಳೂರು : ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ಪ್ರಕರಣದಲ್ಲಿ ಮಾಜಿ ಮೇಯರ್​ ಸಂಪತ್ ರಾಜ್ 51 ನೇ ಆರೋಪಿಯಾಗಿದ್ದಾರೆ. ಗಲಭೆ ನಡೆದಾಗ ಅಖಂಡ ಶ್ರೀನಿವಾಸ್ ಮೂರ್ತಿ ಮನೆಯ 300 ಮೀಟರ್ ದೂರದಲ್ಲಿ ಆಪ್ತ ಸಂತೋಷ್ ಮನೆಯಲ್ಲಿದ್ದುಕೊಂಡು ಮಾಜಿ ಮೇಯರ್ ಸಂಪತ್​ ರಾಜ್​ ಗಲಭೆಯ ಅಪ್ಡೇಟ್​ ಪಡೆದುಕೊಳ್ಳುತ್ತಿದ್ದರು ಎಂಬ ವಿಚಾರವನ್ನು ಚಾರ್ಜ್ ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟು ಮಾತ್ರವಲ್ಲದೆ, ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಕೊಲೆಗೂ ಸ್ಕೆಚ್ ಹಾಕಲಾಗಿತ್ತು. ​​ ಅದೃಷ್ಟವಶಾತ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಮನೆಗೆ ಬೆಂಕಿ ಹಚ್ಚಲು ನಡೆದಿತ್ತು ಫಡಿಂಗ್ :

ಶಾಸಕ ಅಂಖಡ ಶ್ರೀನಿವಾಸಮೂರ್ತಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಸಂಪತ್​​ ರಾಜ್ ಮತ್ತು ಮಾಜಿ ಕಾರ್ಪೋರೇಟರ್​ ಜಾಕಿರ್​, ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಇಡಲು ತನ್ನ ಆಪ್ತರ ಮುಖಾಂತರ ಫಡಿಂಗ್ ಮಾಡಿದ್ದರು. ಪ್ರತಿಭಟನೆ ಮಾಡಲು ಬರುವ ಹುಡುಗರಿಗೆ ಉಚಿತವಾಗಿ ಪೆಟ್ರೋಲ್ ಕೊಡುವಂತೆ ಸ್ಥಳೀಯ ಪೆಟ್ರೋಲ್ ಬಂಕ್ ಮಾಲೀಕನಿಗೆ ಹೇಳಿದ್ದರು. ಸಂಪತ್​ ಹೆಸರು ಯಾರು ಹೇಳ್ತಾರೆ ಅವರಿಗೆ ಪೆಟ್ರೋಲ್ ಕೊಡಿ ಎಂದಿದ್ದರು. ಸಂಪತ್ ರಾಜ್ ಪಿಎ ಅರುಣ್ ಇಡೀ ಪ್ರಕರಣದ ಉಸ್ತುವಾರಿ ವಹಿಸಿಕೊಂಡು, ಕಾವಲ್ ಬೈರಸಂದ್ರ ಬಸ್ ಸ್ಟ್ಯಾಂಡ್ ಬಳಿ ಪುಂಡರಿಗೆ ಹಣ ಕೊಟ್ಟಿದ್ದ ಎನ್ನಲಾಗಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

200 ಕ್ಕೂ ಹೆಚ್ಚು ಮೊಬೈಲ್, ಸಿಸಿ ಟಿವಿ ದೃಶ್ಯ, 100 ಮಂದಿ ಪ್ರತ್ಯಕ್ಷ್ಯದರ್ಶಿಗಳ ಹೇಳಿಕೆ :

ಪ್ರಕರಣದಲ್ಲಿ ಸಂಪತ್​ ರಾಜ್ ಹೆಸರು ಕೇಳಿ ಬಂದ ತಕ್ಷಣ, ಸಿಸಿಬಿ ಪೊಲೀಸರು ಗಲಭೆ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ಸಂಪತ್​ರಾಜ್ ಚಲನವಲನಗಳನ್ನು ಗಮನಿಸಲಾಗಿದೆ. ಆರೋಪಿಗಳಿಗೆ ಮಾಜಿ ಮೇಯರ್ ಹಾಗೂ ಮಾಜಿ ‌ಕಾರ್ಪೋರೆಟರ್ ಆಪ್ತರು ಹಣ ಹಂಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಜೊತೆಗೆ, ಸಂಪತ್​ ರಾಜ್ , ಅರುಣ್ ರಾಜ್, ಮತ್ತು ಮುಜಾಮಿಲ್ ನಡುವಿನ ಸಂಭಾಷಣೆ, ವಾಟ್ಸ್​ ಆ್ಯಪ್ ಸಂದೇಶಗಳನ್ನು ಕೂಡ ಸಾಕ್ಷಿಯಾಗಿ ಪರಿಗಣಿಸಲಾಗಿದೆ.

ಸದ್ಯ, ಅನಾರೋಗ್ಯವೆಂದು ವೈದ್ಯರು ಸರ್ಟಿಫಿಕೇಟ್ ನೀಡಿರುವ ಕಾರಣ, ಸಂಪತ್​ ರಾಜ್​ ಬಂಧನವಾಗಿಲ್ಲ. ಚಿಕಿತ್ಸೆ ಬಳಿಕ ಬಂಧಿಸಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ನಿರೀಕ್ಷಣಾ ಜಾಮೀನು ಪಡೆಯಲು ಸಂಪತ್​ ರಾಜ್ ಕೂಡ ತಯಾರಿ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.