ಬೆಂಗಳೂರು: ವಿಧಾನಸಭಾ ಉಪಚುನಾವಣೆ ಹಿನ್ನೆಲೆ ನಗರದಾದ್ಯಂತ ಖಾಕಿ ಕಣ್ಗಾವಲು ಹಾಕಲಾಗಿದೆ. ಚುನಾವಣೆಗೆ ಯಾವ ರೀತಿ ನಗರದಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂಬುದರ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾಸ್ಕರ್ ರಾವ್, ನಗರದಲ್ಲಿ ನಾಲ್ಕು ಕಡೆ ಚುನಾವಣೆ ನಡೆಯಲಿದ್ದು, ಹೀಗಾಗಿ ಚುನಾವಣಾ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ ಎಂದರು.
ಮತ ಎಣಿಕಾ ಕೇಂದ್ರಗಳ ವಿವಿರ:
ಶಿವಾಜಿನಗರ- ಮೌಂಟ್ ಕಾರ್ಮಲ್ ಮಹಿಳಾ ಕಾಲೇಜು ,ವಸಂತನಗರ
ಕೆಆರ್ ಪುರ- ಸೆಂಟ್ ಜೋಸೆಫ್ ಇಂಡಿಯನ್ ಶಾಲೆ, ವಿಠಲ್ ಮಲ್ಯ ರಸ್ತೆ
ಮಹಾಲಕ್ಷ್ಮಿ ಲೇಔಟ್ - ಸೆಂಟ್ ಜೋಸೆಫ್ ಇಂಡಿಯನ್ ಶಾಲೆ, ವಿಠಲ್ ಮಲ್ಯ ರಸ್ತೆ
ಯಶವಂತಪುರ - ಆರ್ ವಿ ಇಂಜಿನಿಯರಿಂಗ್ ಕಾಲೇಜು, ಮೈಸೂರು ರಸ್ತೆ
ಹೊಸಕೋಟೆ- ಆಕ್ಷಾ ಇಂಟರ್ನ್ಯಾಷನಲ್ ಸೂಲ್ಕ್ ,ದೇವನಹಳ್ಳಿ ಈ ಕಡೆ ಮುಂಜಾನೆ 7 ರಿಂದ ಸಂಜೆ 6 ಗಂಟೆವರೆಗೆ ಭದ್ರತೆ ವಹಿಸಲಾಗಿದೆ ಎಂದರು.
ಭದ್ರತೆಗೆ ಪೊಲೀಸ್ ವ್ಯವಸ್ಥೆ:
ಜನರ ಭದ್ರತೆ ದೃಷ್ಟಿಯಿಂದ ನಗರಾದ್ಯಂತ ಎಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 7ಡಿಸಿಪಿ, ಎಸಿಪಿ14, 30 ಜನ ಇನ್ಸ್ಪೆಕ್ಟರ್ಗಳು, ಪಿಎಸ್ಐ 68, ಎಸ್ಐ160, 1666 ಜನ ಕಾನ್ಸ್ಟೇಬಲ್ಗಳು, ಎಪಿಫ್ 10, ಕೆಎಸ್ಆರ್ಪಿ 38, ಸಿಎಆರ್ 40, ಆರ್ಐವಿ 4, ರೂಟ್ ಮಾರ್ಚ್ 38 ನಿಯೋಜನೆ ಮಾಡಲಾಗಿದೆ ಎಂದರು.
ನಾಳೆಯಿಂದ 144 ಸೆಕ್ಷನ್ ಜಾರಿ:
ಚುನಾವಣಾ ಕ್ಷೇತ್ರದಲ್ಲಿ ನಾಳೆಯಿಂದ 144 ಜಾರಿ ಮಾಡಿದ್ದು, ಈನಿಷೇದಾಜ್ಞೆ ಡಿ.06ರ ತನಕ ಜಾರಿ ಮಾಡಲಾಗಿದೆ.
ಒಟ್ಟು1064 ಮತಗಟ್ಟೆಗಳಿದ್ದು, 238 ಸೂಕ್ಷ್ಮ ಮತಗಟ್ಟೆಗಳು, ಸಾಮಾನ್ಯ ಮತಗಟ್ಟೆ 826 ನಿಯೋಜನೆ ಮಾಡಲಾಗಿದೆ. ಇದುವರೆಗೂ ಚುನಾವಣೆ ನಿಯಮ ಉಲ್ಲಂಘನೆ ಅಡಿಯಲ್ಲಿ ಇಲ್ಲಿವರೆಗೆ ಸುಮಾರು 16 ಪ್ರಕರಣಗಳನ್ನು ದಾಖಲು ಮಾಡಿ ಒಟ್ಟು 15 ಲಕ್ಷದ, 92 ಸಾವಿರದ 855 ಹಣ ವಶಪಡಿಸಲಾಗಿದೆ. ಅಹಿತಕರ ಘಟನೆ ನಡೆಸುವ ರೌಡಿಗಳ ಮಟ್ಟ ಹಾಕುವ ದೃಷ್ಟಿಯಿಂದ ಕೆಲ ರೌಡಿಗಳಿಂದ ಮುಚ್ಚಳಿಕೆ ಬರೆಸಿ ಗೂಂಡಾ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದರು.