ಬೆಂಗಳೂರು: ಸರ್ಕಾರ ರಚನೆಯ ಉತ್ಸಾಹದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಫುಲ್ ರಿಲ್ಯಾಕ್ಸ್ ಆಗಿದ್ದು, ಶಾಸಕರೊಂದಿಗೆ ಕ್ರಿಕೆಟ್ ಆಡುತ್ತಾ ಕಾಲ ಕಳೆದರು.
ಕಳೆದ ಎರಡು ವಾರದಿಂದ ಸರಣಿ ಸಭೆಗಳನ್ನು ನಡೆಸುವುದರಲ್ಲಿ ನಿರತರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇದೀಗ ಸ್ವಲ್ಪ ನಿರಾಳರಾಗಿದ್ದಾರೆ. ಗುರು ಪೂರ್ಣಿಮೆ ದಿನವಾದ ಇಂದು ಬಿಜೆಪಿ ಶಾಸಕರು ತಂಗಿರುವ ರಮಡ ರೆಸಾರ್ಟ್ನಲ್ಲಿಯೇ ಇದ್ದು ಕಾಲ ಕಳೆದರು.
ಸಂಜೆ ಶಾಸಕರೊಂದಿಗೆ ಕ್ರಿಕೆಟ್ ಆಡಿದ ಯಡಿಯೂರಪ್ಪ, ಶಾಸಕರನ್ನು ಹುರಿದುಂಬಿಸಿದರು. ಬಿಎಸ್ವೈ ಬೌಂಡರಿ ಬಾರಿಸಿದ್ದು, ಅವರ ಆಟವನ್ನು ನೋಡಿ ಶಾಸಕರು ಫುಲ್ ಫಿದಾ ಆದರು.
ರೆಸಾರ್ಟ್ನಲ್ಲಿ ಸಭೆ, ಸಮಾಲೋಚನೆ, ಮಾತುಕತೆಗಳಲ್ಲಿಯೇ ಕಾಲ ಕಳೆದಿದ್ದ ಶಾಸಕರು ಯಡಿಯೂರಪ್ಪ ಜೊತೆ ಕ್ರಿಕೆಟ್ ಆಡುವ ಮೂಲಕ ಕೊಂಚ ರಿಲ್ಯಾಕ್ಸ್ ಆದರು. ಒಂದಷ್ಟು ಹರಟೆ, ಹಾಸ್ಯದ ಜೊತೆ ಬ್ಯಾಟ್, ಬಾಲ್ ಹಿಡಿದು ಕಾಲ ಕಳೆದರು.