ETV Bharat / state

'ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ-ಮಕ್ಕಳ ಪಕ್ಷವೂ ಅಲ್ಲ' - ಹೆಚ್​ ಡಿ ಕುಮಾರಸ್ವಾಮಿಗೆ ಬಿಜೆಪಿ ಟಾಂಗ್

ರಾಜ್ಯದಲ್ಲಿ ಬಿಜೆಪಿ ಬೆಳೆದು ನಿಂತಿದ್ದು ಸಾಂದರ್ಭಿಕ ಶಿಶುವಿನ ರೀತಿಯಲ್ಲ. ದಶಕಗಳ ಹೋರಾಟದ ಇತಿಹಾಸ ನಮಗಿದೆ. ಮಾಜಿ ಲಕ್ಕಿ ಡಿಪ್ ಸಿಎಂ ಹೆಚ್​ಡಿಕೆ ಅವರೇ, ಕಿತ್ತು ಹಾಕುತ್ತೇನೆ. ಗುಡ್ಡೆ ಹಾಕುತ್ತೇನೆ ಎಂಬ ಹರಕು ಬಾಯಿಯ ಪದಗಳಿಗಾಗಿ ಮಂಡ್ಯದ ಕನ್ನಡಿಗರು ಪುತ್ರರತ್ನನಿಗೆ ನೀಡಿದ ಉಡುಗೊರೆ ನೆನಪಿಸಿಕೊಳ್ಳಿ. ಉಡಾಫೆ ಮಾತಾಡುವ ಮುನ್ನ ಎಚ್ಚರವಿರಲಿ ಎಂದು ಬಿಜೆಪಿ ಹೆಚ್​ಡಿಕೆ ಕಾಲೆಳೆದಿದೆ.

ಬಿಜೆಪಿ
ಬಿಜೆಪಿ
author img

By

Published : Apr 11, 2022, 10:52 PM IST

ಬೆಂಗಳೂರು: ಕಿತ್ತು ಹಾಕುವುದಕ್ಕೆ ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ ಮಕ್ಕಳ ಪಕ್ಷವೂ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಟ್ವೀಟ್ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಹೊಂದಾಣಿಕೆ ರಾಜಕಾರಣದ ಪಿತಾಮಹರಾದ ನೀವು ಕನ್ನಡಿಗರ ಹೆಸರನ್ನೇಕೆ ದುರ್ಬಳಕೆ ಮಾಡಿಕೊಳ್ಳುತ್ತೀರಿ?. ಕಿತ್ತು ಹಾಕುವುದಕ್ಕೆ ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ ಮಕ್ಕಳ ಪಕ್ಷವೂ ಅಲ್ಲ.ಭಾರತೀಯ ಜನತಾ ಪಾರ್ಟಿ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಎನ್ನುವುದನ್ನು ನೆನಪಿಡಿ ಎಂದು ಹೆಚ್​ಡಿಕೆಗೆ ಬಿಜೆಪಿ ಟಾಂಗ್ ನೀಡಿದೆ.

  • ಮಾಜಿ #LuckyDipCMHDK ಅವರೇ,

    ಹೊಂದಾಣಿಕೆ ರಾಜಕಾರಣದ ಪಿತಾಮಹರಾದ ನೀವು ಕನ್ನಡಿಗರ ಹೆಸರನ್ನೇಕೆ ದುರ್ಬಳಕೆ ಮಾಡಿಕೊಳ್ಳುತ್ತೀರಿ?

    ಕಿತ್ತು ಹಾಕುವುದಕ್ಕೆ ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ ಮಕ್ಕಳ ಪಕ್ಷವೂ ಅಲ್ಲ.

    ಭಾರತೀಯ ಜನತಾ ಪಾರ್ಟಿ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಎನ್ನುವುದನ್ನು ನೆನಪಿಡಿ.

    — BJP Karnataka (@BJP4Karnataka) April 11, 2022 " class="align-text-top noRightClick twitterSection" data=" ">

ರಾಜ್ಯದಲ್ಲಿ ಬಿಜೆಪಿ ಬೆಳೆದು ನಿಂತಿದ್ದು ಸಾಂದರ್ಭಿಕ ಶಿಶುವಿನ ರೀತಿಯಲ್ಲ. ದಶಕಗಳ ಹೋರಾಟದ ಇತಿಹಾಸ ನಮಗಿದೆ. ಮಾಜಿ ಲಕ್ಕಿ ಡಿಪ್ ಸಿಎಂ ಹೆಚ್​ಡಿಕೆ ಅವರೇ ಕಿತ್ತು ಹಾಕುತ್ತೇನೆ. ಗುಡ್ಡೆ ಹಾಕುತ್ತೇನೆ ಎಂಬ ಹರಕು ಬಾಯಿಯ ಪದಗಳಿಗಾಗಿ ಮಂಡ್ಯದ ಕನ್ನಡಿಗರು ಪುತ್ರರತ್ನನಿಗೆ ನೀಡಿದ ಉಡುಗೊರೆ ನೆನಪಿಸಿಕೊಳ್ಳಿ. ಉಡಾಫೆ ಮಾತಾಡುವ ಮುನ್ನ ಎಚ್ಚರವಿರಲಿ ಎಂದು ಹೆಚ್​ಡಿಕೆ ಕಾಲೆಳೆದಿದೆ.

ಮಾಜಿ ಲಕ್ಕಿಡಿಪ್ ಸಿಎಂ ಹೆಚ್ಡಿಕೆ ಹೆಸರಿನ ಹ್ಯಾಷ್ ಟ್ಯಾಗ್ ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಜೆಡಿಎಸ್‌ ಪಕ್ಷದಲ್ಲಿ ಒಂದು ಕುಟುಂಬದಿಂದ ಎರಡು ಟಿಕೆಟ್‌ ಮಾತ್ರ ಎಂಬ ಘೋಷಣೆ ಮಾಡುವ ಸಾಮರ್ಥ್ಯ ಇದೆಯೇ?. ಜೆಡಿಎಸ್‌ ಪಕ್ಷದ ದಲಿತ ಸಿಎಂ ಅಭ್ಯರ್ಥಿ ಯಾರು?. ಅಧಿಕಾರಕ್ಕಾಗಿ ಕಣ್ಣೀರಧಾರೆ ಸುರಿಸಿ ಈಗ ಈಗ ಜನತಾಜಲಧಾರೆ ಎಂಬ ನಾಟಕ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಒಮಿಕ್ರಾನ್ ನಂತರ ಇದೀಗ XE, ME ರೂಪಾಂತರಿ ಭೀತಿ ; ತುರ್ತು ಸಭೆ ನಡೆಸಿದ ತಾಂತ್ರಿಕ ಸಲಹಾ ಸಮಿತಿ..

ಬೆಂಗಳೂರು: ಕಿತ್ತು ಹಾಕುವುದಕ್ಕೆ ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ ಮಕ್ಕಳ ಪಕ್ಷವೂ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಟ್ವೀಟ್ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಹೊಂದಾಣಿಕೆ ರಾಜಕಾರಣದ ಪಿತಾಮಹರಾದ ನೀವು ಕನ್ನಡಿಗರ ಹೆಸರನ್ನೇಕೆ ದುರ್ಬಳಕೆ ಮಾಡಿಕೊಳ್ಳುತ್ತೀರಿ?. ಕಿತ್ತು ಹಾಕುವುದಕ್ಕೆ ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ ಮಕ್ಕಳ ಪಕ್ಷವೂ ಅಲ್ಲ.ಭಾರತೀಯ ಜನತಾ ಪಾರ್ಟಿ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಎನ್ನುವುದನ್ನು ನೆನಪಿಡಿ ಎಂದು ಹೆಚ್​ಡಿಕೆಗೆ ಬಿಜೆಪಿ ಟಾಂಗ್ ನೀಡಿದೆ.

  • ಮಾಜಿ #LuckyDipCMHDK ಅವರೇ,

    ಹೊಂದಾಣಿಕೆ ರಾಜಕಾರಣದ ಪಿತಾಮಹರಾದ ನೀವು ಕನ್ನಡಿಗರ ಹೆಸರನ್ನೇಕೆ ದುರ್ಬಳಕೆ ಮಾಡಿಕೊಳ್ಳುತ್ತೀರಿ?

    ಕಿತ್ತು ಹಾಕುವುದಕ್ಕೆ ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ ಮಕ್ಕಳ ಪಕ್ಷವೂ ಅಲ್ಲ.

    ಭಾರತೀಯ ಜನತಾ ಪಾರ್ಟಿ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಎನ್ನುವುದನ್ನು ನೆನಪಿಡಿ.

    — BJP Karnataka (@BJP4Karnataka) April 11, 2022 " class="align-text-top noRightClick twitterSection" data=" ">

ರಾಜ್ಯದಲ್ಲಿ ಬಿಜೆಪಿ ಬೆಳೆದು ನಿಂತಿದ್ದು ಸಾಂದರ್ಭಿಕ ಶಿಶುವಿನ ರೀತಿಯಲ್ಲ. ದಶಕಗಳ ಹೋರಾಟದ ಇತಿಹಾಸ ನಮಗಿದೆ. ಮಾಜಿ ಲಕ್ಕಿ ಡಿಪ್ ಸಿಎಂ ಹೆಚ್​ಡಿಕೆ ಅವರೇ ಕಿತ್ತು ಹಾಕುತ್ತೇನೆ. ಗುಡ್ಡೆ ಹಾಕುತ್ತೇನೆ ಎಂಬ ಹರಕು ಬಾಯಿಯ ಪದಗಳಿಗಾಗಿ ಮಂಡ್ಯದ ಕನ್ನಡಿಗರು ಪುತ್ರರತ್ನನಿಗೆ ನೀಡಿದ ಉಡುಗೊರೆ ನೆನಪಿಸಿಕೊಳ್ಳಿ. ಉಡಾಫೆ ಮಾತಾಡುವ ಮುನ್ನ ಎಚ್ಚರವಿರಲಿ ಎಂದು ಹೆಚ್​ಡಿಕೆ ಕಾಲೆಳೆದಿದೆ.

ಮಾಜಿ ಲಕ್ಕಿಡಿಪ್ ಸಿಎಂ ಹೆಚ್ಡಿಕೆ ಹೆಸರಿನ ಹ್ಯಾಷ್ ಟ್ಯಾಗ್ ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಜೆಡಿಎಸ್‌ ಪಕ್ಷದಲ್ಲಿ ಒಂದು ಕುಟುಂಬದಿಂದ ಎರಡು ಟಿಕೆಟ್‌ ಮಾತ್ರ ಎಂಬ ಘೋಷಣೆ ಮಾಡುವ ಸಾಮರ್ಥ್ಯ ಇದೆಯೇ?. ಜೆಡಿಎಸ್‌ ಪಕ್ಷದ ದಲಿತ ಸಿಎಂ ಅಭ್ಯರ್ಥಿ ಯಾರು?. ಅಧಿಕಾರಕ್ಕಾಗಿ ಕಣ್ಣೀರಧಾರೆ ಸುರಿಸಿ ಈಗ ಈಗ ಜನತಾಜಲಧಾರೆ ಎಂಬ ನಾಟಕ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಒಮಿಕ್ರಾನ್ ನಂತರ ಇದೀಗ XE, ME ರೂಪಾಂತರಿ ಭೀತಿ ; ತುರ್ತು ಸಭೆ ನಡೆಸಿದ ತಾಂತ್ರಿಕ ಸಲಹಾ ಸಮಿತಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.