ETV Bharat / state

ಅಮಿತ್​ ಶಾ ಆಗಮನದಿಂದ ಬಿಜೆಪಿಗೆ ಆನೆ ಬಲ ಬಂದಿದೆ : ಸಿಎಂ ಬೊಮ್ಮಾಯಿ

author img

By

Published : Dec 31, 2022, 5:38 PM IST

ಈ ಹಿಂದೆ ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ದೇಶವು ಪ್ರಗತಿಯಲ್ಲಿ ಹಿಂದೆ ಬಿದ್ದಿತ್ತು. ಮನಮೋಹನ್​ ಸಿಂಗ್​​ ಅವರು ಭ್ರಷ್ಟ ಆಳ್ವಿಕೆ ನಡೆಸಿದರು. ಆದರೆ ಈಗ ಪ್ರಧಾನಿ ಮೋದಿ ಸರ್ಕಾರ ಗುಜರಾತ್ ಮಾಡೆಲ್ ಮೂಲಕ ಇದೆಲ್ಲದಕ್ಕೆ ಇತಿಶ್ರೀ ಹಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

bjp-got-more-power-after-amit-shah-visit-says-cm-bommai
ಅಮಿತ್​ ಶಾ ಆಗಮನದಿಂದ ಬಿಜೆಪಿಗೆ ಆನೆ ಬಲ ಬಂದಿದೆ : ಸಿಎಂ ಬೊಮ್ಮಾಯಿ

ಬೆಂಗಳೂರು: ಅಮಿತ್ ಶಾ ರಾಜ್ಯಕ್ಕೆ ಬಂದಿರುವುದು ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಅವರು ಹಳೆ ಮೈಸೂರಿಗೆ ಬಂದಿದ್ದರಿಂದ ದಕ್ಷಿಣ ಕರ್ನಾಟಕದಲ್ಲಿಯೂ ಪಕ್ಷಕ್ಕೆ ಸದೃಢಗೊಳ್ಳಲು ಸಹಕಾರಿಯಾಗಲಿದೆ. 2023ರಲ್ಲಿಯೂ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಮಹಾನಗರ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ದೇಶಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧ ಎನ್ನುವ ದೇಶ ಭಕ್ತರ ಪಕ್ಷ ಬಿಜೆಪಿ, ಕಾಂಗ್ರೆಸ್ ಪಕ್ಷದ ಸದಸ್ಯರು ಕೇವಲ ಅಧಿಕಾರಕ್ಕಾಗಿ ಇರುವ ಸದಸ್ಯರಾಗಿದ್ದಾರೆ. ಬಿಜೆಪಿ ಸದಸ್ಯರದ್ದು ದೇಶ ಸೇವೆಯಾಗಿದೆ. ನಾವು ಭಾರತ್ ಮಾತಾ ಕಿ ಜೈ ಎಂದರೆ, ಕಾಂಗ್ರೆಸ್​ನವರು ಇಟಲಿ ಮಾತೆಗೆ ಜೈ ಎನ್ನುತ್ತಾರೆ ಎಂದು ಟೀಕಿಸಿದರು.

ಮೋದಿ ಸರ್ಕಾರದ ಗುಜರಾತ್ ಮಾಡೆಲ್: ಈ ದೇಶವನ್ನು ಉಳಿಸಿ ಬೆಳೆಸಿ, ಉಜ್ವಲ ಭವಿಷ್ಯ ರೂಪಿಸುವುದು ಬಿಜೆಪಿಯಿಂದ ಮಾತ್ರ ಸಾಧ್ಯ. ದೇಶದ ಅಖಂಡತೆ, ಏಕತೆ, ಸುರಕ್ಷತೆ, ಆರ್ಥಿಕತೆ ಎಲ್ಲವೂ ಬಿಜೆಪಿ ಮಾಡಲು ಸಾಧ್ಯ. ದೇಶದ ಯಶಸ್ಸಿಗೆ ನೀತಿ, ಸಿದ್ಧಾಂತ, ನಾಯಕತ್ವ, ಕ್ರಿಯಾಶೀಲ ಸದಸ್ಯರು ಮುಖ್ಯ, ನಮಗೆ ಮೋದಿ ನಾಯಕತ್ವ ಸಿಕ್ಕಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಭಾರತವು ಪ್ರಗತಿಯಲ್ಲಿ ಹಿಂದೆ ಹೋಯಿತು. ಸಿಂಗ್​​ ಅವರು ಭ್ರಷ್ಟತೆಯಿಂದ ಆಳ್ವಿಕೆ ಮಾಡಿದರು. ಇದಕ್ಕೆಲ್ಲ ಮೋದಿ ಸರ್ಕಾರ ಗುಜರಾತ್ ಮಾಡೆಲ್ ಮೂಲಕ ಎಲ್ಲದಕ್ಕೆ ಇತಿಶ್ರೀ ಹಾಡಿದೆ ಎಂದರು.

ಕಾಶ್ಮೀರವು ಇಷ್ಟು ವರ್ಷ ಯಾಕೆ ವಿಶೇಷ ಸ್ಥಾನಮಾನದಿಂದ ಮುಕ್ತವಾಗಲಿಲ್ಲ? ಗಡಿ, ನೆಲ ಜಲ ರಕ್ಷಣೆ ಮಾಡದವರು ದೇಶಕ್ಕೆ ಬೇಡ ಎನ್ನುವ ತೀರ್ಮಾನವನ್ನು ಜನರು ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವು ಕರ್ನಾಟಕವನ್ನು ಹಿಂದುಳಿದ ರಾಜ್ಯವನ್ನಾಗಿ ಮಾಡಿತ್ತು. ಕೋವಿಡ್ ಇಲ್ಲದಿದ್ದರೂ ಎರಡು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದರು. ಆದರೂ ನಮಗೆ ಸಾಲ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಲೋಕಾಯುಕ್ತ ಯಾಕೆ ಮುಚ್ಚಿದರು? ತಮ್ಮನ್ನು ರಕ್ಷಿಸಿಕೊಳ್ಳಲು ಎಸಿಬಿ ಮಾಡಿದರು. ಎಲ್ಲ ಹಗರಣಗಳ ಆರೋಪಕ್ಕೂ ಎಸಿಬಿಯು ಬಿ ರಿಪೋರ್ಟ್ ನೀಡಿದೆ. ಎಸಿಬಿ ರಚಿಸಿ ಭ್ರಷ್ಟಾಚಾರದಿಂದ ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿತ್ತು ಎನ್ನುವುದಕ್ಕೆ ಇದೇ ನಿದರ್ಶನವಾಗಿದೆ. ಆದರೆ ನಾವು ಲೋಕಾಯುಕ್ತದ ಮೂಲಕ ಎಲ್ಲ ಪ್ರಕರಣಗಳ ತನಿಖೆ ಮಾಡಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಕುಟುಂಬ ರಾಜಕಾರಣಕ್ಕೆ ಬ್ರೇಕ್: ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದೇಶ ಮತ್ತು ರಾಜ್ಯದಲ್ಲಿ ಇನ್ನುಮುಂದೆ ಕುಟುಂಬ ರಾಜಕಾರಣ ಇರುವುದಿಲ್ಲ. ಈ ಕುಟುಂಬ ರಾಜಕಾರಣದಿಂದಲೇ ಭ್ರಷ್ಟಾಚಾರ ಹೆಚ್ಚಾಗಿದೆ. ಅಭಿವೃದ್ಧಿ ಕಾರ್ಯಗಳು ನಾಶವಾಗಿವೆ, ಹೀಗಾಗಿ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಕುಟುಂಬ ರಾಜಕಾರಣ ಅಂತ್ಯವಾಗಲಿದೆ ಎಂದು ಹೇಳಿದರು.

ಸಾವಿರ ಜನರಲ್ಲಿ 600 ಜನರು ಮತ ಹಾಕಲಿದ್ದಾರೆ. ಮ್ಯಾಕ್ರೋ ಮ್ಯಾನೇಜ್ಮೆಂಟ್ ಮಾಡಬೇಕಿದೆ. ಬಿಎಲ್ಒಗಳನ್ನೇ ನಮ್ಮ ಬೂತ್ ಏಜೆಂಟ್ ಮಾಡಬೇಕು ಎನ್ನುವ ಚಿಂತನೆ ಇದೆ. ಪ್ರತಿ ಬೂತ್​​ನಲ್ಲಿ ನಾವು ಬಹುಮತ ಗಳಿಸಿದಾಗ ನಮಗೆ ಗೆಲುವು ಖಚಿತ. ನಮ್ಮ ನಮ್ಮ ಬೂತ್​​ಗಳಲ್ಲಿ ಬಹುಮತ ತರುವ ಸಂಕಲ್ಪ ಮಾಡಬೇಕು ಎಂದು ಜೋಶಿ ಕರೆ ನೀಡಿದರು.

ಸಿಎಂ ಕನಸು ಕಂಡವರಿಗೆ ತಳಮಳ ಎಂದ ಕಟೀಲ್​: ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಶರ್ಟ್, ಪ್ಯಾಂಟ್ ಹೊಲಿಸಿಕೊಂಡು ಕಾದು ಕುಳಿತಿದ್ದವರಿಗೆ ಅಮಿತ್ ಶಾ ರಾಜ್ಯ ಪ್ರವಾಸದಿಂದ ತಳಮಳ ಉಂಟಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು. ಅಮಿತ್ ಶಾ ಅವರು ಹಳೆ ಮೈಸೂರು - ಮಂಡ್ಯ ಭಾಗದಲ್ಲಿ ರಾಜಕೀಯ ಬದಲಾವಣೆ ಮಾಡುವ ಸಂಕಲ್ಪ ಮಾಡಿದ್ದಾರೆ. ಇದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಗಿ ಶರ್ಟ್, ಪ್ಯಾಂಟ್ ಹೊಲಿಸಿದವರು ಮತ್ತು ಜೆಡಿಎಸ್​ನಲ್ಲಿ ಭಯ ಶುರುವಾಗಿದೆ ಎಂದರು.

ಇದನ್ನೂ ಓದಿ: ಬರೀ ಬೂಟಾಟಿಕೆ ಪಾರ್ಟಿ ಬಿಜೆಪಿ: ಸುಳ್ಳುಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಕರ್ಮ ನಿಮಗೇಕೆ ಬಂತು ಶಾ ಜೀ.. ಹೆಚ್​ಡಿಕೆ

ಬೆಂಗಳೂರು: ಅಮಿತ್ ಶಾ ರಾಜ್ಯಕ್ಕೆ ಬಂದಿರುವುದು ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಅವರು ಹಳೆ ಮೈಸೂರಿಗೆ ಬಂದಿದ್ದರಿಂದ ದಕ್ಷಿಣ ಕರ್ನಾಟಕದಲ್ಲಿಯೂ ಪಕ್ಷಕ್ಕೆ ಸದೃಢಗೊಳ್ಳಲು ಸಹಕಾರಿಯಾಗಲಿದೆ. 2023ರಲ್ಲಿಯೂ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಮಹಾನಗರ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ದೇಶಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧ ಎನ್ನುವ ದೇಶ ಭಕ್ತರ ಪಕ್ಷ ಬಿಜೆಪಿ, ಕಾಂಗ್ರೆಸ್ ಪಕ್ಷದ ಸದಸ್ಯರು ಕೇವಲ ಅಧಿಕಾರಕ್ಕಾಗಿ ಇರುವ ಸದಸ್ಯರಾಗಿದ್ದಾರೆ. ಬಿಜೆಪಿ ಸದಸ್ಯರದ್ದು ದೇಶ ಸೇವೆಯಾಗಿದೆ. ನಾವು ಭಾರತ್ ಮಾತಾ ಕಿ ಜೈ ಎಂದರೆ, ಕಾಂಗ್ರೆಸ್​ನವರು ಇಟಲಿ ಮಾತೆಗೆ ಜೈ ಎನ್ನುತ್ತಾರೆ ಎಂದು ಟೀಕಿಸಿದರು.

ಮೋದಿ ಸರ್ಕಾರದ ಗುಜರಾತ್ ಮಾಡೆಲ್: ಈ ದೇಶವನ್ನು ಉಳಿಸಿ ಬೆಳೆಸಿ, ಉಜ್ವಲ ಭವಿಷ್ಯ ರೂಪಿಸುವುದು ಬಿಜೆಪಿಯಿಂದ ಮಾತ್ರ ಸಾಧ್ಯ. ದೇಶದ ಅಖಂಡತೆ, ಏಕತೆ, ಸುರಕ್ಷತೆ, ಆರ್ಥಿಕತೆ ಎಲ್ಲವೂ ಬಿಜೆಪಿ ಮಾಡಲು ಸಾಧ್ಯ. ದೇಶದ ಯಶಸ್ಸಿಗೆ ನೀತಿ, ಸಿದ್ಧಾಂತ, ನಾಯಕತ್ವ, ಕ್ರಿಯಾಶೀಲ ಸದಸ್ಯರು ಮುಖ್ಯ, ನಮಗೆ ಮೋದಿ ನಾಯಕತ್ವ ಸಿಕ್ಕಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಭಾರತವು ಪ್ರಗತಿಯಲ್ಲಿ ಹಿಂದೆ ಹೋಯಿತು. ಸಿಂಗ್​​ ಅವರು ಭ್ರಷ್ಟತೆಯಿಂದ ಆಳ್ವಿಕೆ ಮಾಡಿದರು. ಇದಕ್ಕೆಲ್ಲ ಮೋದಿ ಸರ್ಕಾರ ಗುಜರಾತ್ ಮಾಡೆಲ್ ಮೂಲಕ ಎಲ್ಲದಕ್ಕೆ ಇತಿಶ್ರೀ ಹಾಡಿದೆ ಎಂದರು.

ಕಾಶ್ಮೀರವು ಇಷ್ಟು ವರ್ಷ ಯಾಕೆ ವಿಶೇಷ ಸ್ಥಾನಮಾನದಿಂದ ಮುಕ್ತವಾಗಲಿಲ್ಲ? ಗಡಿ, ನೆಲ ಜಲ ರಕ್ಷಣೆ ಮಾಡದವರು ದೇಶಕ್ಕೆ ಬೇಡ ಎನ್ನುವ ತೀರ್ಮಾನವನ್ನು ಜನರು ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವು ಕರ್ನಾಟಕವನ್ನು ಹಿಂದುಳಿದ ರಾಜ್ಯವನ್ನಾಗಿ ಮಾಡಿತ್ತು. ಕೋವಿಡ್ ಇಲ್ಲದಿದ್ದರೂ ಎರಡು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದರು. ಆದರೂ ನಮಗೆ ಸಾಲ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಲೋಕಾಯುಕ್ತ ಯಾಕೆ ಮುಚ್ಚಿದರು? ತಮ್ಮನ್ನು ರಕ್ಷಿಸಿಕೊಳ್ಳಲು ಎಸಿಬಿ ಮಾಡಿದರು. ಎಲ್ಲ ಹಗರಣಗಳ ಆರೋಪಕ್ಕೂ ಎಸಿಬಿಯು ಬಿ ರಿಪೋರ್ಟ್ ನೀಡಿದೆ. ಎಸಿಬಿ ರಚಿಸಿ ಭ್ರಷ್ಟಾಚಾರದಿಂದ ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿತ್ತು ಎನ್ನುವುದಕ್ಕೆ ಇದೇ ನಿದರ್ಶನವಾಗಿದೆ. ಆದರೆ ನಾವು ಲೋಕಾಯುಕ್ತದ ಮೂಲಕ ಎಲ್ಲ ಪ್ರಕರಣಗಳ ತನಿಖೆ ಮಾಡಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಕುಟುಂಬ ರಾಜಕಾರಣಕ್ಕೆ ಬ್ರೇಕ್: ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದೇಶ ಮತ್ತು ರಾಜ್ಯದಲ್ಲಿ ಇನ್ನುಮುಂದೆ ಕುಟುಂಬ ರಾಜಕಾರಣ ಇರುವುದಿಲ್ಲ. ಈ ಕುಟುಂಬ ರಾಜಕಾರಣದಿಂದಲೇ ಭ್ರಷ್ಟಾಚಾರ ಹೆಚ್ಚಾಗಿದೆ. ಅಭಿವೃದ್ಧಿ ಕಾರ್ಯಗಳು ನಾಶವಾಗಿವೆ, ಹೀಗಾಗಿ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಕುಟುಂಬ ರಾಜಕಾರಣ ಅಂತ್ಯವಾಗಲಿದೆ ಎಂದು ಹೇಳಿದರು.

ಸಾವಿರ ಜನರಲ್ಲಿ 600 ಜನರು ಮತ ಹಾಕಲಿದ್ದಾರೆ. ಮ್ಯಾಕ್ರೋ ಮ್ಯಾನೇಜ್ಮೆಂಟ್ ಮಾಡಬೇಕಿದೆ. ಬಿಎಲ್ಒಗಳನ್ನೇ ನಮ್ಮ ಬೂತ್ ಏಜೆಂಟ್ ಮಾಡಬೇಕು ಎನ್ನುವ ಚಿಂತನೆ ಇದೆ. ಪ್ರತಿ ಬೂತ್​​ನಲ್ಲಿ ನಾವು ಬಹುಮತ ಗಳಿಸಿದಾಗ ನಮಗೆ ಗೆಲುವು ಖಚಿತ. ನಮ್ಮ ನಮ್ಮ ಬೂತ್​​ಗಳಲ್ಲಿ ಬಹುಮತ ತರುವ ಸಂಕಲ್ಪ ಮಾಡಬೇಕು ಎಂದು ಜೋಶಿ ಕರೆ ನೀಡಿದರು.

ಸಿಎಂ ಕನಸು ಕಂಡವರಿಗೆ ತಳಮಳ ಎಂದ ಕಟೀಲ್​: ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಶರ್ಟ್, ಪ್ಯಾಂಟ್ ಹೊಲಿಸಿಕೊಂಡು ಕಾದು ಕುಳಿತಿದ್ದವರಿಗೆ ಅಮಿತ್ ಶಾ ರಾಜ್ಯ ಪ್ರವಾಸದಿಂದ ತಳಮಳ ಉಂಟಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು. ಅಮಿತ್ ಶಾ ಅವರು ಹಳೆ ಮೈಸೂರು - ಮಂಡ್ಯ ಭಾಗದಲ್ಲಿ ರಾಜಕೀಯ ಬದಲಾವಣೆ ಮಾಡುವ ಸಂಕಲ್ಪ ಮಾಡಿದ್ದಾರೆ. ಇದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಗಿ ಶರ್ಟ್, ಪ್ಯಾಂಟ್ ಹೊಲಿಸಿದವರು ಮತ್ತು ಜೆಡಿಎಸ್​ನಲ್ಲಿ ಭಯ ಶುರುವಾಗಿದೆ ಎಂದರು.

ಇದನ್ನೂ ಓದಿ: ಬರೀ ಬೂಟಾಟಿಕೆ ಪಾರ್ಟಿ ಬಿಜೆಪಿ: ಸುಳ್ಳುಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಕರ್ಮ ನಿಮಗೇಕೆ ಬಂತು ಶಾ ಜೀ.. ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.