ಬೆಂಗಳೂರು: ನಗರದಲ್ಲಿ ಎನ್ಆರ್ಸಿ ಹಾಗೂ ಸಿಎಎ ವಿರುದ್ಧ ಕಿಚ್ಚು ಮತ್ತೊಮ್ಮೆ ಹೊತ್ತಿಕೊಂಡಿದೆ. ಚರ್ಚ್ಸ್ಟ್ರೀಟ್ನಲ್ಲಿ ರಾತ್ರೋ ರಾತ್ರಿ ಕಿಡಿಗೇಡಿಗಳು ಅಂಗಡಿಗಳ ಶಟರ್ಗಳ ಮೇಲೆ ನೋ ಸಿಎಎ ಹಾಗೀ ನೋ ಎನ್ಆರ್ಸಿ ಎಂದು ಬರೆದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ''ಫ್ರೀ ಕಾಶ್ಮೀರ'' ಎಂಬ ಬರಹವನ್ನು ಬರೆದು ಅದರ ಮೇಲೆ ಮತ್ತಷ್ಟು ಘೋಷಣೆಗಳನ್ನು ಕಿಡಿಗೇಡಿಗಳು ಬರೆದಿದ್ದಾರೆ. ಈ ಮೂಲಕ ಮೈಸೂರಿನ ಕಿಚ್ಚು ಇಲ್ಲೂ ಕೂಡಾ ಹೊತ್ತಿಕೊಳ್ಳುವ ಅನುಮಾನಗಳು ಕಾಡುತ್ತಿವೆ.
ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.