ETV Bharat / state

ಸಿ.ಟಿ.ರವಿ ಬಿಡಿಎ ನಿವೇಶನಕ್ಕೇ ಕನ್ನ: ಬಿಡಿಎ ವಿರುದ್ಧ ಗುಡುಗಿದ ಶಾಸಕರು

author img

By

Published : Jun 26, 2019, 3:36 PM IST

2006ರಲ್ಲಿ ಬಿಡಿಎ ನಗರದ ಎಚ್​​ಬಿಆರ್ ಬಡಾವಣೆಯಲ್ಲಿ 4000 ಚ.ಅಡಿ ವಿಸ್ತೀರ್ಣದ ನಿವೇಶನವನ್ನು ನನಗೆ ಹಂಚಿಕೆ ಮಾಡಿತ್ತು. ಅಕ್ಕಪಕ್ಕ ಕಾಡು ಪ್ರದೇಶವಿದ್ದುದರಿಂದ ನಾನು 2016ರಲ್ಲಿ ಬಿಡಿಎ ಬಳಿ ಬದಲಿ ನಿವೇಶನ ಕೇಳಿದ್ದೆ. ಆದರೆ, 2018 ರಲ್ಲಿ ಬಿಡಿಎ ನನ್ನ ಹೆಸರಿನಲ್ಲಿರುವ ನಿವೇಶನವನ್ನು ಬೇರೆಯವರಿಗೆ ಹಂಚಿಕೆ ಮಾಡಿದ್ದು, ಅದರ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಸಿ.ಟಿ.ರವಿ

ಬೆಂಗಳೂರು: ನಾನು 2016ರಲ್ಲಿ ಬಿಡಿಎ ಅವರಿಗೆ ಬದಲಿ ನಿವೇಶನ ಕೇಳಿದ್ದೆ. ನನಗೆ ಇದ್ದ ನಿವೇಶನವನ್ನು ಬೇರೊಬ್ಬ ವ್ಯಕ್ತಿಗೆ ನೀಡಿದ್ದು, ಅದನ್ನು ಅವರು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ಬಿಡಿಎ ಅಕ್ರಮದ‌ ಬಗ್ಗೆ ಬಿಜೆಪಿ ಶಾಸಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕ ಸಿ.ಟಿ.ರವಿ

ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2006ರಲ್ಲಿ ಸಿ.ಟಿ.ರವಿಗೆ ಬಿಡಿಎ ನಗರದ ಎಚ್​​ಬಿಆರ್ ಬಡಾವಣೆಯಲ್ಲಿ 4000 ಚ.ಅಡಿ ವಿಸ್ತೀರ್ಣದ ನಿವೇಶನವನ್ನು ಹಂಚಿಕೆ ಮಾಡಿತ್ತು. ಅಕ್ಕಪಕ್ಕ ಕಾಡು ಪ್ರದೇಶವಿದ್ದರಿಂದ ನಾನು 2016ರಲ್ಲಿ ಬಿಡಿಎ ಬಳಿ ಬದಲಿ ನಿವೇಶನ ಕೇಳಿದ್ದೆ. ನನಗೆ ಬದಲಿ ನಿವೇಶನ ನೀಡುವ ಮೊದಲೇ ನನ್ನ ಖಾತೆಯಲ್ಲಿದ್ದ ನಿವೇಶನವನ್ನು 2018, ಏಪ್ರಿಲ್​​ನಲ್ಲಿ ಶಾಕುಂತಲಾದೇವಿ ಎಂಬುವವರಿಗೆ ಬಿಡಿಎ ನೋಂದಣಿ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಕುಂತಲಾ ದೇವಿಯವರು 45 ದಿನಗಳಲ್ಲಿ ಅದೇ ನಿವೇಶನವನ್ನು ಇನ್ನೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದು, ಆ ವ್ಯಕ್ತಿ ನಿವೇಶನದಲ್ಲಿ ಕೊಳವೆ ಬಾವಿ ತೋಡುತ್ತಿದ್ದಾರೆ. ಈ ಬಗ್ಗೆ ಪಕ್ಕದ ನಿವೇಶನದ ಮಾಲೀಕರು ನನಗೆ ಮಾಹಿತಿ ನೀಡಿ, ಪರಿಶೀಲಿಸಿದಾಗ ಬಿಡಿಎಯ ಕರ್ಮಕಾಂಡ ಬಯಲಾಗಿದೆ. ಈ ಸಂಬಂಧ ಬಿಡಿಎ ಕಚೇರಿಗೆ ತೆರಳಿ ಅಧಿಕಾರಿಗಳಲ್ಲಿ ಪರಿಶೀಲನೆ ನಡೆಸಿದ್ದೇನೆ. ನನಗೆ ಬದಲಿ ನಿವೇಶನ ಕೊಡುವ ಮೊದಲೇ ನನ್ನ ಹೆಸರಲ್ಲಿರುವ ನಿವೇಶನವನ್ನು ಇನ್ನೊಬ್ಬರಿಗೆ ಮಾರಾಟ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ವಾರದಲ್ಲಿ ಆಗಿರುವ ಯಡವಟ್ಟು ಸರಿಪಡಿಸದಿದ್ದರೆ ಬಿಡಿಎ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದೇನೆ ಎಂದು ಶಾಸಕರು ಎಚ್ಚರಿಕೆ ನೀಡಿದರು.

ಬೆಂಗಳೂರು: ನಾನು 2016ರಲ್ಲಿ ಬಿಡಿಎ ಅವರಿಗೆ ಬದಲಿ ನಿವೇಶನ ಕೇಳಿದ್ದೆ. ನನಗೆ ಇದ್ದ ನಿವೇಶನವನ್ನು ಬೇರೊಬ್ಬ ವ್ಯಕ್ತಿಗೆ ನೀಡಿದ್ದು, ಅದನ್ನು ಅವರು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ಬಿಡಿಎ ಅಕ್ರಮದ‌ ಬಗ್ಗೆ ಬಿಜೆಪಿ ಶಾಸಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕ ಸಿ.ಟಿ.ರವಿ

ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2006ರಲ್ಲಿ ಸಿ.ಟಿ.ರವಿಗೆ ಬಿಡಿಎ ನಗರದ ಎಚ್​​ಬಿಆರ್ ಬಡಾವಣೆಯಲ್ಲಿ 4000 ಚ.ಅಡಿ ವಿಸ್ತೀರ್ಣದ ನಿವೇಶನವನ್ನು ಹಂಚಿಕೆ ಮಾಡಿತ್ತು. ಅಕ್ಕಪಕ್ಕ ಕಾಡು ಪ್ರದೇಶವಿದ್ದರಿಂದ ನಾನು 2016ರಲ್ಲಿ ಬಿಡಿಎ ಬಳಿ ಬದಲಿ ನಿವೇಶನ ಕೇಳಿದ್ದೆ. ನನಗೆ ಬದಲಿ ನಿವೇಶನ ನೀಡುವ ಮೊದಲೇ ನನ್ನ ಖಾತೆಯಲ್ಲಿದ್ದ ನಿವೇಶನವನ್ನು 2018, ಏಪ್ರಿಲ್​​ನಲ್ಲಿ ಶಾಕುಂತಲಾದೇವಿ ಎಂಬುವವರಿಗೆ ಬಿಡಿಎ ನೋಂದಣಿ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಕುಂತಲಾ ದೇವಿಯವರು 45 ದಿನಗಳಲ್ಲಿ ಅದೇ ನಿವೇಶನವನ್ನು ಇನ್ನೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದು, ಆ ವ್ಯಕ್ತಿ ನಿವೇಶನದಲ್ಲಿ ಕೊಳವೆ ಬಾವಿ ತೋಡುತ್ತಿದ್ದಾರೆ. ಈ ಬಗ್ಗೆ ಪಕ್ಕದ ನಿವೇಶನದ ಮಾಲೀಕರು ನನಗೆ ಮಾಹಿತಿ ನೀಡಿ, ಪರಿಶೀಲಿಸಿದಾಗ ಬಿಡಿಎಯ ಕರ್ಮಕಾಂಡ ಬಯಲಾಗಿದೆ. ಈ ಸಂಬಂಧ ಬಿಡಿಎ ಕಚೇರಿಗೆ ತೆರಳಿ ಅಧಿಕಾರಿಗಳಲ್ಲಿ ಪರಿಶೀಲನೆ ನಡೆಸಿದ್ದೇನೆ. ನನಗೆ ಬದಲಿ ನಿವೇಶನ ಕೊಡುವ ಮೊದಲೇ ನನ್ನ ಹೆಸರಲ್ಲಿರುವ ನಿವೇಶನವನ್ನು ಇನ್ನೊಬ್ಬರಿಗೆ ಮಾರಾಟ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ವಾರದಲ್ಲಿ ಆಗಿರುವ ಯಡವಟ್ಟು ಸರಿಪಡಿಸದಿದ್ದರೆ ಬಿಡಿಎ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದೇನೆ ಎಂದು ಶಾಸಕರು ಎಚ್ಚರಿಕೆ ನೀಡಿದರು.

Intro:Ct ravi bda siteBody:KN_BNG_01_26_BDA_CTRAVISITE_SCRIPT_VENKAT_7201951

ಶಾಸಕ ಸಿ.ಟಿ.ರವಿಯ ಬಿಡಿಎ ನಿವೇಶನಕ್ಕೇ ಕನ್ನ!: ಇನ್ನೊಬ್ಬ ವ್ಯಕ್ತಿಗೆ ನೋಂದಣಿ ಮಾಡಿಸಿದ ಬಿಡಿಎ!

ಬೆಂಗಳೂರು: ಶಾಸಕ ಸಿ.ಟಿ.ರವಿಗೆ ನೀಡಿರುವ ಬಿಡಿಎ ನಿವೇಶನವನ್ನೇ ಬೇರೊಬ್ಬರಿಗೆ ನೋಂದಣಿ ಮಾಡಿರುವ ಘಟನೆ ನಡೆದಿದೆ.

ಈ ಬಗ್ಗೆ ವಿಧಾನಸೌಧದಲ್ಲಿ ಬಹಿರಂಗ ಪಡಿಸಿರುವ ಸಿ.ಟಿ.ರವಿ ಬಿಡಿಎ ಅಕ್ರಮದ‌ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. 2006ರಲಿ ಸಿ.ಟಿ.ರವಿಗೆ ಬಿಡಿಎ ನಗರದ ಎಚ್ ಬಿಆರ್ ಬಡಾವಣೆಯಲ್ಲಿ 4000 ಚ.ಅಡಿ ವಿಸ್ತೀರ್ಣದ ನಿವೇಶನವನ್ನು ಹಂಚಿಕೆ ಮಾಡಿತ್ತು. ಅಕ್ಕಪಕ್ಕ ಕಾಡು ಪ್ರದೇಶವಿದ್ದರಿಂದ ನಾನು 2016ರಲ್ಲಿ ಬಿಡಿಎ ಬಳಿ ಬದಲಿ ನಿವೇಶನ ಕೇಳಿದ್ದೆ. ನನಗೆ ಬದಲಿ ನಿವೇಶನ ನೀಡುವ ಮೊದಲೇ ನನ್ನ ಖಾತೆಯಲ್ಲೇ ಇರುವ ನಿವೇಶನವನ್ನು 2018, ಏಪ್ರಿಲ್ ನಲ್ಲಿ ಶಾಕುಂತಲ ದೇವಿ ಎಂಬವರಿಗೆ ಬಿಡಿಎ ನೋಂದಣಿ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಕುಂತಲಾ ದೇವಿಯವರು 45 ದಿನಗಳಲ್ಲಿ ಅದೇ ನಿವೇಶನವನ್ನು ಇನ್ನೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಆ ವ್ಯಕ್ತಿ ನಿವೇಶನದಲ್ಲಿ ಕೊಳವೆ ಬಾವಿ ತೋಡುತ್ತಿದ್ದಾರೆ. ಈ ಬಗ್ಗೆ ಪಕ್ಕದ ನಿವೇಶನದ ಮಾಲೀಕರು ನನಗೆ ಮಾಹಿತಿ ನೀಡಿ, ಪರಿಶೀಲಿಸಿದಾಗ ಬಿಡಿಎಯ ಕರ್ಮಕಾಂಡ ಬಯಲಾಗಿದೆ ಎಂದು ಆರೋಪಿಸಿದರು.

ಈ ಸಂಬಂಧ ಬಿಡಿಎ ಕಚೇರಿಗೆ ತೆರಳಿ ಅಧಿಕಾರಿಗಳಲ್ಲಿ ಪರಿಶೀಲನೆ ನಡೆಸಿದ್ದೇನೆ. ನನಗೆ ಬದಲಿ ನಿವೇಶನ ಕೊಡುವ ಮೊದಲೇ ನನ್ನ ಹೆಸರಲ್ಲೇ ಇರುವ ನಿವೇಶನವನ್ನು ಇನ್ನೊಬ್ಬರಿಗೆ ಮಾರಾಟ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಂದು ವಾರದಲ್ಲಿ ಆಗಿರುವ ಯಡವಟ್ಟು ಸರಿಪಡಿಸಿಲ್ಲವಾದರೆ ಬಿಡಿಎ ಕಚೇರಿ ಮುಂದೆನೇ ಪ್ರತಿಭಟನೆ ನಡೆಸಲಿದ್ದೇನೆ ಎಂದು ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.

ನನ್ನಂತವರಿಗೆ ಹೀಗಾದರೆ ಜನಸಾಮಾನ್ಯನ ಸ್ಥಿತಿ ಏನಾಗಬಹುದು?. ಬಿಡಿಎ ಯಾಕೆ ನಷ್ಟದಲ್ಲಿ ಇದೆ ಎಂಬುದಕ್ಕೂ ಕಾರಣ ಹುಡುಕ ಬಹುದು. ಬಿಡಿಎ ಇರುವುದೇ ದಂಧೆಗಾಗಿ. ನ್ಯಾಯಯುತವಾಗಿ ಕೇಳುವವರಿಗೆ ನಿವೇಶನ ಸಿಗಲ್ಲ. ಸದಾಕಾಲ ನಷ್ಟದಲ್ಲಿ ಇರುವಂಥ ಲಾಭದಾಯಕ ಮತ್ತು ಪೈಪೋಟಿಯಲ್ಲಿರುವಂಥ ಆಯಕಟ್ಟಿನ ಜಾಗ ಅದಾಗಿದೆ ಎಂದು ಕಿಡಿ ಕಾರಿದರು.Conclusion:Venkat

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.