ಬೆಂಗಳೂರು: ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದವರ ವಿರುದ್ಧ ಬಿಡಿಎ ಇಂದು ಕಾರ್ಯಾಚರಣೆ ನಡೆಸಿದೆ.
ನಾಗರಬಾವಿ ಗ್ರಾಮ ಸರ್ವೆ ನಂ.120 ರಲ್ಲಿನ 24 ಗುಂಟೆ ಜಾಗವನ್ನು ಒತ್ತುವರಿ ಮಾಡಲಾಗಿತ್ತು. 40 ಕೋಟಿ ಬೆಲೆಬಾಳುವ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ಶೆಡ್ ನಿರ್ಮಿಸಿಕೊಂಡಿದ್ದರು.
ಈ ಜಾಗವನ್ನ ಗುರುತಿಸಿದ ಬಿಡಿಎ ಅಧಿಕಾರಿಗಳು, ಬಿಡಿಎ ಆಯುಕ್ತ ಜೆಸಿ ಪ್ರಕಾಶ್ ಆದೇಶದಂತೆ, ಬಿಡಿಎ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ತೆರವು ಮಾಡಿದೆ. ಅಲ್ಲದೇ ಜಾಗದ ಸುತ್ತ ಬಿಡಿಎ ಎಂದು ಬರೆದು ಬೇಲಿ ಹಾಕಲಾಗಿದೆ.