ETV Bharat / state

ಸುಮಲತಾ ಅಂಬರೀಶ್ ಮನೆಯ ರಸ್ತೆ ಓಪನ್​: ಕೋವಿಡ್ ನಿಯಮ ಪಾಲನೆಯಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಆರೋಪ

author img

By

Published : Jul 9, 2020, 6:31 PM IST

ಸೋಮವಾರ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ‌ ಸೋಂಕು ತಗುಲಿತ್ತು. ಅವರು ಕ್ವಾರಂಟೈನ್​​ನಲ್ಲಿರುವ ಜೆ.ಪಿ. ನಗರ ಮನೆಯ ರಸ್ತೆಯನ್ನು, ಸೀಲ್​ಡೌನ್​​ ಮಾಡದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ‌ ಎಂಬ ಆರೋಪ ಕೇಳಿಬಂದಿದೆ.

BBMP irresponsibility in covidi 19 rule
ಸುಮಲತಾ ಅಂಬರೀಶ್ ಮನೆಯ ರಸ್ತೆ ಓಪನ್

ಬೆಂಗಳೂರು: ಕೋವಿಡ್ -19 ನಿಯಮ ಪಾಲನೆಯಲ್ಲಿ ಬಿಬಿಎಂಪಿಯ ಬೇಜವಾಬ್ದಾರಿತನ ಮತ್ತೊಮ್ಮೆ ಸಾಬೀತಾಗಿದೆ.

ಸರ್ಕಾರದ ಕೋವಿಡ್ ನಿಯಮದಂತೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡವರ ಮನೆ ಹಾಗೂ ರಸ್ತೆಯನ್ನು ಸೀಲ್​​ಡೌನ್ ಮಾಡಿ, ಅಲ್ಲಿ ಯಾರು ಒಡಾಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಆದರೆ ಸಂಸದೆ ಸುಮಲತಾ ಅಂಬರೀಶ್ ಕ್ವಾರಂಟೈನ್​​ನಲ್ಲಿರುವ ಜೆ.ಪಿ. ನಗರ ಮನೆಯ ರಸ್ತೆಯನ್ನು, ಸೀಲ್​ಡೌನ್​​ ಮಾಡದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ‌.

ಜೆ.ಪಿ. ನಗರದ ಅಂಬಿ ನಿವಾಸದ ಗೇಟ್ ಬಳಿ ಬ್ಯಾರಿಕೇಡ್​ ಹಾಕಿ ಕೊರೊನಾ ಪಾಸಿಟಿವ್ ಎಂದು ಬೋರ್ಡ್ ಹಾಕಿದ್ದು ಬಿಟ್ಟರೆ, ಆ ರಸ್ತೆಯಲ್ಲಿ ಯಾವುದೇ ಮುಂಜಾಗ್ರತೆ ವಹಿಸಿಲ್ಲ. ಅಂಬಿ ಮನೆಯ ರಸ್ತೆಯಲ್ಲಿ ಸದಾ ವಾಹನಗಳು ಓಡಾಡುತ್ತವೆ. ಇದು ಗೊತ್ತಿದ್ದರೂ ಸಹ ಬಿಬಿಎಂಪಿ ಅಧಿಕಾರಿಗಳು ಕಂಟೇನ್​ಮೆಂಟ್​​​ ಝೋನ್​​ನಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿಲ್ಲ ಎನ್ನಲಾಗ್ತಿದೆ.

ಸುಮಲತಾ ಅಂಬರೀಶ್ ಮನೆಯ ರಸ್ತೆ ಓಪನ್

ಸೋಮವಾರ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ‌ ಸೋಂಕು ತಗುಲಿತ್ತು. ಇದನ್ನು ಸ್ವತಃ ಅವರೇ ದೃಢಪಡಿಸಿದ್ರು. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕೆಲವರಿಗೆ ಈಗಾಗಲೇ ಪಾಸಿಟಿವ್ ವರದಿಯಾಗಿದೆ.

ಬಿಬಿಎಂಪಿಯ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾನ್ಯರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಸಾಮಾನ್ಯ ಜನ ವಾಸಿಸುವ ಏರಿಯಾದಲ್ಲಿ ಕೊರೊನಾ ಪತ್ತೆಯಾದ್ರೆ, ಆ ರಸ್ತೆಯನ್ನೇ ಮುಚ್ಚಿ ಜನರಿಗೆ ತೊಂದರೆ ಕೊಡ್ತಾರೆ ಎಂದು ಜನರು ಕಿಡಿಕಾರಿದ್ದಾರೆ.

ಬೆಂಗಳೂರು: ಕೋವಿಡ್ -19 ನಿಯಮ ಪಾಲನೆಯಲ್ಲಿ ಬಿಬಿಎಂಪಿಯ ಬೇಜವಾಬ್ದಾರಿತನ ಮತ್ತೊಮ್ಮೆ ಸಾಬೀತಾಗಿದೆ.

ಸರ್ಕಾರದ ಕೋವಿಡ್ ನಿಯಮದಂತೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡವರ ಮನೆ ಹಾಗೂ ರಸ್ತೆಯನ್ನು ಸೀಲ್​​ಡೌನ್ ಮಾಡಿ, ಅಲ್ಲಿ ಯಾರು ಒಡಾಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಆದರೆ ಸಂಸದೆ ಸುಮಲತಾ ಅಂಬರೀಶ್ ಕ್ವಾರಂಟೈನ್​​ನಲ್ಲಿರುವ ಜೆ.ಪಿ. ನಗರ ಮನೆಯ ರಸ್ತೆಯನ್ನು, ಸೀಲ್​ಡೌನ್​​ ಮಾಡದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ‌.

ಜೆ.ಪಿ. ನಗರದ ಅಂಬಿ ನಿವಾಸದ ಗೇಟ್ ಬಳಿ ಬ್ಯಾರಿಕೇಡ್​ ಹಾಕಿ ಕೊರೊನಾ ಪಾಸಿಟಿವ್ ಎಂದು ಬೋರ್ಡ್ ಹಾಕಿದ್ದು ಬಿಟ್ಟರೆ, ಆ ರಸ್ತೆಯಲ್ಲಿ ಯಾವುದೇ ಮುಂಜಾಗ್ರತೆ ವಹಿಸಿಲ್ಲ. ಅಂಬಿ ಮನೆಯ ರಸ್ತೆಯಲ್ಲಿ ಸದಾ ವಾಹನಗಳು ಓಡಾಡುತ್ತವೆ. ಇದು ಗೊತ್ತಿದ್ದರೂ ಸಹ ಬಿಬಿಎಂಪಿ ಅಧಿಕಾರಿಗಳು ಕಂಟೇನ್​ಮೆಂಟ್​​​ ಝೋನ್​​ನಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿಲ್ಲ ಎನ್ನಲಾಗ್ತಿದೆ.

ಸುಮಲತಾ ಅಂಬರೀಶ್ ಮನೆಯ ರಸ್ತೆ ಓಪನ್

ಸೋಮವಾರ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ‌ ಸೋಂಕು ತಗುಲಿತ್ತು. ಇದನ್ನು ಸ್ವತಃ ಅವರೇ ದೃಢಪಡಿಸಿದ್ರು. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕೆಲವರಿಗೆ ಈಗಾಗಲೇ ಪಾಸಿಟಿವ್ ವರದಿಯಾಗಿದೆ.

ಬಿಬಿಎಂಪಿಯ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾನ್ಯರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಸಾಮಾನ್ಯ ಜನ ವಾಸಿಸುವ ಏರಿಯಾದಲ್ಲಿ ಕೊರೊನಾ ಪತ್ತೆಯಾದ್ರೆ, ಆ ರಸ್ತೆಯನ್ನೇ ಮುಚ್ಚಿ ಜನರಿಗೆ ತೊಂದರೆ ಕೊಡ್ತಾರೆ ಎಂದು ಜನರು ಕಿಡಿಕಾರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.