ಬೆಂಗಳೂರು: ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ನಟ ಪ್ರಕಾಶ್ ರೈ ಮತದಾರರ ಮನವೊಲಿಕೆ ಕಸರತ್ತು ನಡೆಸುತ್ತಿದ್ದಾರೆ.
ಇಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಓಕಲಿಪುರಂ ಬಳಿ ಪ್ರಕಾಶ್ ರೈ ಪ್ರಚಾರ ಕೈಗೊಂಡಿದ್ದರು. ಈ ವೇಳೆ ಅಭಿಮಾನಿಗಳು ಕ್ರೇನ್ನಲ್ಲಿ ಬೃಹತ್ ಹೂವಿನ ಹಾರ ಹಾಕುವ ಮೂಲಕ ಅವರಿಗೆ ಸ್ವಾಗತ ಕೋರಿದರು. ಓಕಲಿಪುರಂ ವಾರ್ಡಿನ ಸನ್ರೈಸ್ ವೃತ್ತದಿಂದ, ಪ್ರಕಾಶ್ ರೈ ರೋಡ್ ಶೋ ಮಾಡಿದರು. ಅಭಿಮಾನಿಗಳು ಹಾಗೂ ಕಾರ್ಯಕರ್ತರ ಪ್ರೀತಿಯಿಂದ ಪುಳಕಗೊಂಡ ಬಹುಭಾಷಾ ನಟ, ಅರೆಕ್ಷಣ ಥ್ರಿಲ್ ಆದರು.