ETV Bharat / state

ಆಗಸ್ಟ್ 5 ಬೆಂಗಳೂರಿಗೆ ಬೆಳಕು ಬಂದ ದಿನ.. ನಾಡಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ದೂರದೃಷ್ಟಿ ಕೊಡುಗೆ!! - ಬೆಂಗಳೂರು ನಗರ

ಮೊದಲು ಕೆಆರ್‌ಮಾರುಕಟ್ಟೆ ಮುಂಭಾಗದಲ್ಲಿರುವ ಸಣ್ಣ ಗಣಪತಿ ದೇವಸ್ಥಾನದ ಜಾಗದಲ್ಲಿ ಆ ಬೀದಿ ದೀಪದ ವಿದ್ಯುತ್ ಕಂಬ ಇತ್ತು. ಆ ಕಾಲದಲ್ಲಿ ಕೆ ಆರ್ ಮಾರುಕಟ್ಟೆಯೂ ಇರಲಿಲ್ಲ, ದೇವಸ್ಥಾನವೂ ಇರಲಿಲ್ಲ. 1905ರಲ್ಲಿ ಸಿದ್ದಿಕಟ್ಟೆ ಎಂಬ ಸಣ್ಣ ಕೆರೆ ಇತ್ತು. ಅಲ್ಲೇ ರಸ್ತೆಯಲ್ಲಿ ಮೊತ್ತ ಮೊದಲ ಬೀದಿ ದೀಪ ಹತ್ತಿತ್ತು..

August 5 is a historic day for Bangalore
ವಿದ್ಯುತ್​ ಕಂಬ
author img

By

Published : Aug 5, 2020, 7:46 PM IST

ಬೆಂಗಳೂರು: 1905 ಆಗಸ್ಟ್​​​ 5.. ಈ ದಿನ ಬೆಂಗಳೂರಿಗೆ ವಿಶೇಷ.. ಯಾಕೆಂದರೆ, ಏಷ್ಯಾದಲ್ಲೇ ಮೊದಲ ಬಾರಿಗೆ ವಿದ್ಯುತ್ ದೀಪ​​ ಬೆಳಗಿದ್ದು ಇದೇ ಬೆಂಗಳೂರಿನಲ್ಲಿಯೇ.. ಅಂದು ಸರಿಯಾಗಿ 5.30ಕ್ಕೆ ಬೀದಿ ಬದಿಗಳಲ್ಲಿ ಬೆಳಕು ಚೆಲ್ಲಿತ್ತು. ಆಗಿನ್ನೂ ದೆಹಲಿ, ಮುಂಬೈ, ಕೋಲ್ಕತ್ತಾದಂತಹ ಪ್ರಮುಖ ನಗರಗಳಲ್ಲಿ ಬೀದಿ ದೀಪಗಳಿರಲಿಲ್ಲ.

ಇತಿಹಾಸಕಾರ ಆರೇನಳ್ಳಿ ಶಿವಶಂಕರ್ ಧರ್ಮೇಂದ್ರ ಕುಮಾರ್ ಅವರು, ಸಾಮಾಜಿಕ ಜಾಲತಾಣದ ಮೈಸೂರಿನ ಕಥೆಗಳು ಎಂಬ ಫೇಸ್​​ಬುಕ್ ಪೇಜ್​​ನಲ್ಲಿ ಈ ಮಾಹಿತಿ ಕುರಿತ ವಿಡಿಯೋ ಹಂಚಿಕೊಂಡಿದ್ದಾರೆ.

ಇತಿಹಾಸಕಾರ ಆರೇನಳ್ಳಿ ಶಿವಶಂಕರ್ ಧರ್ಮೇಂದ್ರ ಕುಮಾರ್..

1905ರಲ್ಲಿ ಬೆಳಕು ಬೆಳಗಿದ ಆ ಕಂಬ ಈಗಲೂ ಬಿಬಿಎಂಪಿ ಕಚೇರಿಯ ಆವರಣದಲ್ಲಿದೆ. ಮೊದಲು ಕೆಆರ್‌ಮಾರುಕಟ್ಟೆ ಮುಂಭಾಗದಲ್ಲಿರುವ ಸಣ್ಣ ಗಣಪತಿ ದೇವಸ್ಥಾನದ ಜಾಗದಲ್ಲಿ ಆ ಬೀದಿ ದೀಪದ ವಿದ್ಯುತ್ ಕಂಬ ಇತ್ತು. ಆ ಕಾಲದಲ್ಲಿ ಕೆ ಆರ್ ಮಾರುಕಟ್ಟೆಯೂ ಇರಲಿಲ್ಲ, ದೇವಸ್ಥಾನವೂ ಇರಲಿಲ್ಲ. 1905ರಲ್ಲಿ ಸಿದ್ದಿಕಟ್ಟೆ ಎಂಬ ಸಣ್ಣ ಕೆರೆ ಇತ್ತು. ಅಲ್ಲೇ ರಸ್ತೆಯಲ್ಲಿ ಮೊತ್ತ ಮೊದಲ ಬೀದಿ ದೀಪ ಹತ್ತಿತ್ತು ಎಂದರು.

ಇದರ ಸಂಪೂರ್ಣ ಹೆಗ್ಗಳಿಕೆ, ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್​​ಗೆ ಸಲ್ಲಬೇಕು. ಜೊತೆಗೆ ಒಡೆಯರ್ ತಾಯಿ, ಮಹಾರಾಣಿ ವಾಣಿವಿಲಾಸ ಸನ್ನಿಧಾನ ಹಾಗೂ ದಿವಾನ ಶೇಷಾದ್ರಿ ಅಯ್ಯರ್​ಗೆ ಈ ಕೀರ್ತಿ ಸೇರಬೇಕು ಎಂದರು.

ಬೆಂಗಳೂರು: 1905 ಆಗಸ್ಟ್​​​ 5.. ಈ ದಿನ ಬೆಂಗಳೂರಿಗೆ ವಿಶೇಷ.. ಯಾಕೆಂದರೆ, ಏಷ್ಯಾದಲ್ಲೇ ಮೊದಲ ಬಾರಿಗೆ ವಿದ್ಯುತ್ ದೀಪ​​ ಬೆಳಗಿದ್ದು ಇದೇ ಬೆಂಗಳೂರಿನಲ್ಲಿಯೇ.. ಅಂದು ಸರಿಯಾಗಿ 5.30ಕ್ಕೆ ಬೀದಿ ಬದಿಗಳಲ್ಲಿ ಬೆಳಕು ಚೆಲ್ಲಿತ್ತು. ಆಗಿನ್ನೂ ದೆಹಲಿ, ಮುಂಬೈ, ಕೋಲ್ಕತ್ತಾದಂತಹ ಪ್ರಮುಖ ನಗರಗಳಲ್ಲಿ ಬೀದಿ ದೀಪಗಳಿರಲಿಲ್ಲ.

ಇತಿಹಾಸಕಾರ ಆರೇನಳ್ಳಿ ಶಿವಶಂಕರ್ ಧರ್ಮೇಂದ್ರ ಕುಮಾರ್ ಅವರು, ಸಾಮಾಜಿಕ ಜಾಲತಾಣದ ಮೈಸೂರಿನ ಕಥೆಗಳು ಎಂಬ ಫೇಸ್​​ಬುಕ್ ಪೇಜ್​​ನಲ್ಲಿ ಈ ಮಾಹಿತಿ ಕುರಿತ ವಿಡಿಯೋ ಹಂಚಿಕೊಂಡಿದ್ದಾರೆ.

ಇತಿಹಾಸಕಾರ ಆರೇನಳ್ಳಿ ಶಿವಶಂಕರ್ ಧರ್ಮೇಂದ್ರ ಕುಮಾರ್..

1905ರಲ್ಲಿ ಬೆಳಕು ಬೆಳಗಿದ ಆ ಕಂಬ ಈಗಲೂ ಬಿಬಿಎಂಪಿ ಕಚೇರಿಯ ಆವರಣದಲ್ಲಿದೆ. ಮೊದಲು ಕೆಆರ್‌ಮಾರುಕಟ್ಟೆ ಮುಂಭಾಗದಲ್ಲಿರುವ ಸಣ್ಣ ಗಣಪತಿ ದೇವಸ್ಥಾನದ ಜಾಗದಲ್ಲಿ ಆ ಬೀದಿ ದೀಪದ ವಿದ್ಯುತ್ ಕಂಬ ಇತ್ತು. ಆ ಕಾಲದಲ್ಲಿ ಕೆ ಆರ್ ಮಾರುಕಟ್ಟೆಯೂ ಇರಲಿಲ್ಲ, ದೇವಸ್ಥಾನವೂ ಇರಲಿಲ್ಲ. 1905ರಲ್ಲಿ ಸಿದ್ದಿಕಟ್ಟೆ ಎಂಬ ಸಣ್ಣ ಕೆರೆ ಇತ್ತು. ಅಲ್ಲೇ ರಸ್ತೆಯಲ್ಲಿ ಮೊತ್ತ ಮೊದಲ ಬೀದಿ ದೀಪ ಹತ್ತಿತ್ತು ಎಂದರು.

ಇದರ ಸಂಪೂರ್ಣ ಹೆಗ್ಗಳಿಕೆ, ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್​​ಗೆ ಸಲ್ಲಬೇಕು. ಜೊತೆಗೆ ಒಡೆಯರ್ ತಾಯಿ, ಮಹಾರಾಣಿ ವಾಣಿವಿಲಾಸ ಸನ್ನಿಧಾನ ಹಾಗೂ ದಿವಾನ ಶೇಷಾದ್ರಿ ಅಯ್ಯರ್​ಗೆ ಈ ಕೀರ್ತಿ ಸೇರಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.