ETV Bharat / state

ದೆಹಲಿಗೆ ವಾಪಸಾದ್ರು ಅರುಣ್​ ಸಿಂಗ್​; ಸಿಹಿ ಸುದ್ದಿ ನಿರೀಕ್ಷೆಯಲ್ಲಿದ್ದ ಸಿಎಂಗೆ ನಿರಾಶೆ

ಶಾಸಕ, ಸಂಸದರು ಹಾಗು ಸಚಿವರ ಸಭೆಯ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಜತೆಗೂ ಅರುಣ್ ಸಿಂಗ್ ಸಭೆ ನಡೆಸಿದ್ದಾರೆ. ಬಿಎಸ್​ವೈ ಅವರಿಂದಲೂ ಕೆಲ ಮಾಹಿತಿ ಪಡೆದುಕೊಂಡಿರುವ ಸಿಂಗ್​, ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಹೈಕಮಾಂಡ್ ಪರವಾಗಿ ಯಾವುದೇ ಸಿಹಿ ಸುದ್ದಿ ನೀಡದಿರುವುದರಿಂದ ಸಿಎಂ ಬೇಸರಗೊಂಡರು ಎನ್ನಲಾಗಿದೆ.

author img

By

Published : Dec 6, 2020, 9:23 PM IST

Arun Singh returned to Delhi
ಅರುಣ್​ ಸಿಂಗ್ ಗೆ ಸನ್ಮಾನ

ಬೆಂಗಳೂರು: ಬಿಜೆಪಿ ನೂತನ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನವದೆಹಲಿಯಿಂದ ಸಿಹಿ ಸುದ್ದಿ ತರುತ್ತಾರೆ ಎನ್ನುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರೀಕ್ಷೆ ಹುಸಿಯಾಗಿದೆ. ಸಂಪುಟ ವಿಸ್ತರಣೆ ಪ್ರಹಸನಕ್ಕೆ ತೆರೆ ಎಳೆಯದೆ ರಾಜ್ಯ ಉಸ್ತುವಾರಿ ಹಿಂದಿರುಗಿದ್ದು ಸಚಿವಾಕಾಂಕ್ಷಿಗಳಲ್ಲಿ ಮತ್ತೆ ನಿರಾಸೆ ಮೂಡಿಸಿದೆ.

ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ರಾಜ್ಯಕ್ಕೆ ಮೊದಲ ಭೇಟಿ ನೀಡಿದ್ದ ಅರುಣ್ ಸಿಂಗ್ ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ, ಕಾರ್ಯಕಾರಿಣಿಯಲ್ಲಿ ಭಾಗಿಯಾಗಿ ಇಂದು ಬೆಂಗಳೂರಿನಲ್ಲಿ ಪ್ರಮುಖರ ಸಭೆ ನಡೆಸಿದರು. ಪಕ್ಷದ ಕಚೇರಿಯಲ್ಲಿ ಆಯ್ದ ಶಾಸಕರು, ಸಂಸದರು ಮತ್ತು ಸಚಿವರು ಭಾಗವಹಿಸಿದ್ದರು.

ಈ ವೇಳೆ ಕೆಲ ನಾಯಕರು ದೂರುಗಳ ಪಟ್ಟಿಯನ್ನು ನೀಡಿದ್ದಾರೆ. ಪಕ್ಷ ಹಾಗು ಸರ್ಕಾರದ ನಡುವೆ ಸಮನ್ವಯತೆ ಇಲ್ಲ ಎನ್ನುವ ಮಾಹಿತಿಗಳನ್ನು ನೀಡಿದ್ದಾರೆ. ಶಾಸಕರ ಸಭೆ ನಡೆದಿಲ್ಲ, ಅನುದಾನ ಸರಿಯಾಗಿ ನೀಡುತ್ತಿಲ್ಲ, ಆಡಳಿತದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ನಿಗಮ ಮಂಡಳಿಗಳ ನೇಮಕಾತಿ ವೇಳೆ ಪಕ್ಷದ ಸಲಹೆ ಪರಿಗಣಿಸಿಲ್ಲ ಎನ್ನುವ ದೂರುಗಳನ್ನು ಅರುಣ್ ಸಿಂಗ್ ಗೆ ನೀಡಿದ್ದು ಇದನ್ನೆಲ್ಲಾ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.

ಓದಿ: ರಾಜ್ಯ ಉಸ್ತುವಾರಿ-ಸಿಎಂ ಭೇಟಿ ಅಂತ್ಯ: ಮುಂದುವರಿದ ಸಂಪುಟ ವಿಸ್ತರಣೆ ಕುತೂಹಲ

ಇಬ್ಬರು ಸಚಿವರು ಮತ್ತು ಇಬ್ಬರು ಶಾಸಕರು ಒಂದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಅರುಣ್ ಸಿಂಗ್ ಪರಿಗಣಿಸಿದ್ದು, ಈ ಬಗ್ಗೆ ವಿಸ್ತೃತ ಮಾತುಕತೆ ನಡೆಸಬೇಕಿದೆ. ದೆಹಲಿಗೆ ಬನ್ನಿ ಎಂದು ಶಾಸಕರೊಬ್ಬರಿಗೆ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಶಾಸಕ, ಸಂಸದ, ಸಚಿವರ ಸಭೆ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಜತೆಗೂ ಅರುಣ್ ಸಿಂಗ್ ಸಭೆ ನಡೆಸಿದ್ದಾರೆ. ಬಿಎಸ್​ವೈ ಅವರಿಂದಲೂ ಕೆಲ ಮಾಹಿತಿ ಪಡೆದುಕೊಂಡಿರುವ ಸಿಂಗ್​, ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಹೈಕಮಾಂಡ್ ಪರವಾಗಿ ಯಾವುದೇ ಸಿಹಿ ಸುದ್ದಿ ನೀಡದಿರುವುದರಿಂದ ಸಿಎಂ ಬೇಸರಗೊಂಡರು ಎನ್ನಲಾಗಿದೆ.

ಇಷ್ಟಕ್ಕೆ ಮುಗಿಯದೇ ಸಂಪುಟ ವಿಸ್ತರಣೆ ವಿಷಯ ಬಿಟ್ಟು, ನಿಗಮ ಮಂಡಳಿ ಸೇರಿದಂತೆ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡುವಾಗ ಪಕ್ಷಕ್ಕೆ ದುಡಿದ ನಿಷ್ಠಾವಂತರಿಗೆ ಆದ್ಯತೆ ನೀಡಬೇಕು. ಹಿಂಬಾಲಕರಿಗೆ, ತಮಗೆ ಬೇಕಾದವರಿಗೆ ಹುದ್ದೆಗಳನ್ನು ನೀಡಬೇಡಿ. ಈ ಕುರಿತು ದೂರುಗಳು ಬಂದಿವೆ. ಎಲ್ಲವನ್ನು ಸರಿಪಡಿಸಿ ಎಂದು ಸಿಎಂಗೆ ಅರುಣ್ ಸಿಂಗ್ ಸೂಚನೆ ನೀಡಿದ್ದಾರೆ.

ಓದಿ: ಬಿಜೆಪಿ ಮುಖ್ಯ ಕಚೇರಿಗೆ ಭೇಟಿ ನೀಡಿದ ಅರುಣ್ ಸಿಂಗ್‌ಗೆ ಅದ್ದೂರಿ ಸ್ವಾಗತ

ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಇಲ್ಲ. ಇದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು ಎಂದು ಅರುಣ್ ಸಿಂಗ್ ಸಲಹೆ ನೀಡಿದ್ದಾರೆ. ಇದರಿಂದ ಸಿಎಂ ಮತ್ತಷ್ಟು ನಿರಾಶರಾದರು ಎಂದು ತಿಳಿದುಬಂದಿದೆ.

ಪಕ್ಷ ಹಾಗೂ ಸರ್ಕಾರಕ್ಕೆ ಡ್ಯಾಮೇಜ್ ಆಗುವಂತಹ ಹೇಳಿಕೆ ನೀಡುವವರಿಗೆ ಸ್ಪಷ್ಟ ಎಚ್ಚರಿಕೆ ನೀಡುವಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೂ ಅರುಣ್ ತಾಕೀತು ಮಾಡಿದ್ದಾರೆ.

ಇಷ್ಟೆಲ್ಲದರ ನಂತರ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳ ಜತೆ ಸಭೆ ನಡೆಸಿ ನಂತರ ಸಂಜೆ ನವದೆಹಲಿ ಕಡೆ ಅರುಣ್ ಸಿಂಗ್ ಪ್ರಯಾಣ ಬೆಳೆಸಿದರು. ಸಂಘಟನೆ ಸಂಬಂಧ ಸಭೆ, ಚರ್ಚೆಗಳು ಹೆಚ್ಚು ನಡೆದಿದ್ದು ಸಂಪುಟ ವಿಸ್ತರಣೆ ಕುರಿತು ಅಷ್ಟಾಗಿ ಚರ್ಚೆ ನಡೆಯದಿರುವುದು ಸಿಎಂಗೆ ಬೇಸರ ತರಿಸಿದೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರು: ಬಿಜೆಪಿ ನೂತನ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನವದೆಹಲಿಯಿಂದ ಸಿಹಿ ಸುದ್ದಿ ತರುತ್ತಾರೆ ಎನ್ನುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರೀಕ್ಷೆ ಹುಸಿಯಾಗಿದೆ. ಸಂಪುಟ ವಿಸ್ತರಣೆ ಪ್ರಹಸನಕ್ಕೆ ತೆರೆ ಎಳೆಯದೆ ರಾಜ್ಯ ಉಸ್ತುವಾರಿ ಹಿಂದಿರುಗಿದ್ದು ಸಚಿವಾಕಾಂಕ್ಷಿಗಳಲ್ಲಿ ಮತ್ತೆ ನಿರಾಸೆ ಮೂಡಿಸಿದೆ.

ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ರಾಜ್ಯಕ್ಕೆ ಮೊದಲ ಭೇಟಿ ನೀಡಿದ್ದ ಅರುಣ್ ಸಿಂಗ್ ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ, ಕಾರ್ಯಕಾರಿಣಿಯಲ್ಲಿ ಭಾಗಿಯಾಗಿ ಇಂದು ಬೆಂಗಳೂರಿನಲ್ಲಿ ಪ್ರಮುಖರ ಸಭೆ ನಡೆಸಿದರು. ಪಕ್ಷದ ಕಚೇರಿಯಲ್ಲಿ ಆಯ್ದ ಶಾಸಕರು, ಸಂಸದರು ಮತ್ತು ಸಚಿವರು ಭಾಗವಹಿಸಿದ್ದರು.

ಈ ವೇಳೆ ಕೆಲ ನಾಯಕರು ದೂರುಗಳ ಪಟ್ಟಿಯನ್ನು ನೀಡಿದ್ದಾರೆ. ಪಕ್ಷ ಹಾಗು ಸರ್ಕಾರದ ನಡುವೆ ಸಮನ್ವಯತೆ ಇಲ್ಲ ಎನ್ನುವ ಮಾಹಿತಿಗಳನ್ನು ನೀಡಿದ್ದಾರೆ. ಶಾಸಕರ ಸಭೆ ನಡೆದಿಲ್ಲ, ಅನುದಾನ ಸರಿಯಾಗಿ ನೀಡುತ್ತಿಲ್ಲ, ಆಡಳಿತದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ನಿಗಮ ಮಂಡಳಿಗಳ ನೇಮಕಾತಿ ವೇಳೆ ಪಕ್ಷದ ಸಲಹೆ ಪರಿಗಣಿಸಿಲ್ಲ ಎನ್ನುವ ದೂರುಗಳನ್ನು ಅರುಣ್ ಸಿಂಗ್ ಗೆ ನೀಡಿದ್ದು ಇದನ್ನೆಲ್ಲಾ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.

ಓದಿ: ರಾಜ್ಯ ಉಸ್ತುವಾರಿ-ಸಿಎಂ ಭೇಟಿ ಅಂತ್ಯ: ಮುಂದುವರಿದ ಸಂಪುಟ ವಿಸ್ತರಣೆ ಕುತೂಹಲ

ಇಬ್ಬರು ಸಚಿವರು ಮತ್ತು ಇಬ್ಬರು ಶಾಸಕರು ಒಂದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಅರುಣ್ ಸಿಂಗ್ ಪರಿಗಣಿಸಿದ್ದು, ಈ ಬಗ್ಗೆ ವಿಸ್ತೃತ ಮಾತುಕತೆ ನಡೆಸಬೇಕಿದೆ. ದೆಹಲಿಗೆ ಬನ್ನಿ ಎಂದು ಶಾಸಕರೊಬ್ಬರಿಗೆ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಶಾಸಕ, ಸಂಸದ, ಸಚಿವರ ಸಭೆ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಜತೆಗೂ ಅರುಣ್ ಸಿಂಗ್ ಸಭೆ ನಡೆಸಿದ್ದಾರೆ. ಬಿಎಸ್​ವೈ ಅವರಿಂದಲೂ ಕೆಲ ಮಾಹಿತಿ ಪಡೆದುಕೊಂಡಿರುವ ಸಿಂಗ್​, ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಹೈಕಮಾಂಡ್ ಪರವಾಗಿ ಯಾವುದೇ ಸಿಹಿ ಸುದ್ದಿ ನೀಡದಿರುವುದರಿಂದ ಸಿಎಂ ಬೇಸರಗೊಂಡರು ಎನ್ನಲಾಗಿದೆ.

ಇಷ್ಟಕ್ಕೆ ಮುಗಿಯದೇ ಸಂಪುಟ ವಿಸ್ತರಣೆ ವಿಷಯ ಬಿಟ್ಟು, ನಿಗಮ ಮಂಡಳಿ ಸೇರಿದಂತೆ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡುವಾಗ ಪಕ್ಷಕ್ಕೆ ದುಡಿದ ನಿಷ್ಠಾವಂತರಿಗೆ ಆದ್ಯತೆ ನೀಡಬೇಕು. ಹಿಂಬಾಲಕರಿಗೆ, ತಮಗೆ ಬೇಕಾದವರಿಗೆ ಹುದ್ದೆಗಳನ್ನು ನೀಡಬೇಡಿ. ಈ ಕುರಿತು ದೂರುಗಳು ಬಂದಿವೆ. ಎಲ್ಲವನ್ನು ಸರಿಪಡಿಸಿ ಎಂದು ಸಿಎಂಗೆ ಅರುಣ್ ಸಿಂಗ್ ಸೂಚನೆ ನೀಡಿದ್ದಾರೆ.

ಓದಿ: ಬಿಜೆಪಿ ಮುಖ್ಯ ಕಚೇರಿಗೆ ಭೇಟಿ ನೀಡಿದ ಅರುಣ್ ಸಿಂಗ್‌ಗೆ ಅದ್ದೂರಿ ಸ್ವಾಗತ

ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಇಲ್ಲ. ಇದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು ಎಂದು ಅರುಣ್ ಸಿಂಗ್ ಸಲಹೆ ನೀಡಿದ್ದಾರೆ. ಇದರಿಂದ ಸಿಎಂ ಮತ್ತಷ್ಟು ನಿರಾಶರಾದರು ಎಂದು ತಿಳಿದುಬಂದಿದೆ.

ಪಕ್ಷ ಹಾಗೂ ಸರ್ಕಾರಕ್ಕೆ ಡ್ಯಾಮೇಜ್ ಆಗುವಂತಹ ಹೇಳಿಕೆ ನೀಡುವವರಿಗೆ ಸ್ಪಷ್ಟ ಎಚ್ಚರಿಕೆ ನೀಡುವಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೂ ಅರುಣ್ ತಾಕೀತು ಮಾಡಿದ್ದಾರೆ.

ಇಷ್ಟೆಲ್ಲದರ ನಂತರ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳ ಜತೆ ಸಭೆ ನಡೆಸಿ ನಂತರ ಸಂಜೆ ನವದೆಹಲಿ ಕಡೆ ಅರುಣ್ ಸಿಂಗ್ ಪ್ರಯಾಣ ಬೆಳೆಸಿದರು. ಸಂಘಟನೆ ಸಂಬಂಧ ಸಭೆ, ಚರ್ಚೆಗಳು ಹೆಚ್ಚು ನಡೆದಿದ್ದು ಸಂಪುಟ ವಿಸ್ತರಣೆ ಕುರಿತು ಅಷ್ಟಾಗಿ ಚರ್ಚೆ ನಡೆಯದಿರುವುದು ಸಿಎಂಗೆ ಬೇಸರ ತರಿಸಿದೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.