ETV Bharat / state

ಬೆಂಗಳೂರು ಗಲಭೆಗೆ ಕುಮ್ಮಕ್ಕು ಆರೋಪ: ಮಾಜಿ ಮೇಯರ್ ಆಪ್ತ ಅರುಣ್ ಅರೆಸ್ಟ್​

ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟಂತೆ ಮಾಜಿ ಮೇಯರ್ ಸಂಪತ್​ರಾಜ್ ಆಪ್ತ ಅರುಣ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗಲಾಟೆಗೆ ಕುಮ್ಮಕ್ಕು ನೀಡಿರುವ ಕುರಿತಾದ ತಾಂತ್ರಿಕ ಸಾಕ್ಷ್ಯಗಳು ಲಭ್ಯವಾಗಿದ್ದರಿಂದ ಪೊಲೀಸರು ಈತನನ್ನು ಬಂಧಿಸಿದ್ದಾರೆ.

author img

By

Published : Aug 19, 2020, 9:28 PM IST

Ex mayor's aide Arun arrested in Bangaluru
ಮಾಜಿ ಮೇಯರ್ ಆಪ್ತ ಅರುಣ್

ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾಜಿ ಮೇಯರ್ ಸಂಪತ್​ರಾಜ್ ಆಪ್ತ ಅರುಣ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಎಸ್​ಡಿಪಿಐ ಮುಖಂಡ ಮುಜಮಿಲ್ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಅರುಣ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿದ್ದರಿಂದ ಇಂದು ಅರುಣ್​ನನ್ನು ಬಂಧಿಸಲಾಗಿದೆ‌‌‌‌.

Ex mayor's aide Arun arrested in Bangaluru
ಮಾಜಿ ಮೇಯರ್ ಆಪ್ತ ಅರುಣ್

ನಾಳೆ ವಿಡಿಯೊ ಕಾನ್ಪರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಲಭೆ ವೇಳೆ ಮುಜಮಿಲ್ ಜೊತೆ ಅರುಣ್ ಫೋನ್​ ಮೂಲಕ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಗಲಭೆಯ ವಿಡಿಯೋ ತರಿಸಿಕೊಂಡು ವೀಕ್ಷಣೆ ಮಾಡಿ ಬೇರೆಯವರಿಗೆ ಕಳುಹಿಸಿದ್ದ.

ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾಜಿ ಮೇಯರ್ ಸಂಪತ್​ರಾಜ್ ಆಪ್ತ ಅರುಣ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಎಸ್​ಡಿಪಿಐ ಮುಖಂಡ ಮುಜಮಿಲ್ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಅರುಣ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿದ್ದರಿಂದ ಇಂದು ಅರುಣ್​ನನ್ನು ಬಂಧಿಸಲಾಗಿದೆ‌‌‌‌.

Ex mayor's aide Arun arrested in Bangaluru
ಮಾಜಿ ಮೇಯರ್ ಆಪ್ತ ಅರುಣ್

ನಾಳೆ ವಿಡಿಯೊ ಕಾನ್ಪರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಲಭೆ ವೇಳೆ ಮುಜಮಿಲ್ ಜೊತೆ ಅರುಣ್ ಫೋನ್​ ಮೂಲಕ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಗಲಭೆಯ ವಿಡಿಯೋ ತರಿಸಿಕೊಂಡು ವೀಕ್ಷಣೆ ಮಾಡಿ ಬೇರೆಯವರಿಗೆ ಕಳುಹಿಸಿದ್ದ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.