ETV Bharat / state

ಮದ್ಯ ಕೊಡಿಸಿಲ್ಲ ಎಂದು ಸ್ನೇಹಿತನನ್ನೇ ಕೊಲೆ‌ಗೈದಿದ್ದ ಆರೋಪಿಗಳಿಬ್ಬರು ಅಂದರ್

author img

By

Published : Mar 3, 2021, 2:45 PM IST

ಮದ್ಯ ಕೊಡಿಸಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ‌ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

two accused arrest
ಆರೋಪಿಗಳು ಅಂದರ್

ಬೆಂಗಳೂರು: ಮದ್ಯ ಕೊಡಿಸಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ತಲೆಗೆ ಸಿಮೆಂಟ್ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

ದೊಮ್ಮಲೂರು‌ ನಿವಾಸಿಗಳಾದ ಮನು (23) ಹಾಗೂ ನಾಗರಾಜ್ (54) ಬಂಧಿತ ಆರೋಪಿಗಳು. ಸ್ಟೀಫನ್ ಕೊಲೆಯಾದ ದುರ್ದೈವಿ. ಒಂದೇ ಏರಿಯಾದಲ್ಲಿ ವಾಸವಾಗಿದ್ದ ಮೂವರೂ ಸ್ನೇಹಿತರಾಗಿದ್ದರು. ಜೀವನೋಪಾಯಕ್ಕಾಗಿ ನಗರದಲ್ಲಿ‌ ಕೂಲಿ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ‌ಮೂವರು ಒಂದೆಡೆ ಸೇರಿ ಮದ್ಯ ಸೇವನೆ ಮಾಡುತ್ತಿದ್ದರು‌‌.

ಇದರಂತೆ ಕಳೆದ ಭಾನುವಾರ ಮೂವರು ಹಲಸೂರು ಠಾಣಾ ವ್ಯಾಪ್ತಿಯ ದೊಮ್ಮಲೂರು ಬಳಿಯ ಬಯಲು ರಂಗಮಂದಿರ ಬಳಿ ಸೇರಿದ್ದಾರೆ. ಈ ವೇಳೆ‌ ಮೂವರ ನಡುವೆ ಹಣಕಾಸು ವಿಚಾರಕ್ಕಾಗಿ ಗಲಾಟೆ ನಡೆದಿದೆ. ಅಲ್ಲದೆ‌ ಮದ್ಯ ಕೊಡಿಸಿಲ್ಲ ಎಂಬ ಕಾರಣಕ್ಕಾಗಿ ಮನು ಹಾಗೂ ನಾಗರಾಜ್ ಸ್ಟೀಫನ್​ ಮೇಲೆ‌ ಮುಗಿಬಿದ್ದು ಆತನನ್ನು ಹೊಡೆದಿದ್ದಾರೆ. ಬಳಿಕ ಕಾಲುವೆಗೆ ಬಿಸಾಡಿ ಆತನ ತಲೆ ಮೇಲೆ ಸಿಮೆಂಟ್ ಕಲ್ಲು ಹಾಕಿ ಕೊಲೆ‌ ಮಾಡಿ ಪರಾರಿಯಾಗಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ 24 ಗಂಟೆಯೊಳಗೆ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು: ಮದ್ಯ ಕೊಡಿಸಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ತಲೆಗೆ ಸಿಮೆಂಟ್ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

ದೊಮ್ಮಲೂರು‌ ನಿವಾಸಿಗಳಾದ ಮನು (23) ಹಾಗೂ ನಾಗರಾಜ್ (54) ಬಂಧಿತ ಆರೋಪಿಗಳು. ಸ್ಟೀಫನ್ ಕೊಲೆಯಾದ ದುರ್ದೈವಿ. ಒಂದೇ ಏರಿಯಾದಲ್ಲಿ ವಾಸವಾಗಿದ್ದ ಮೂವರೂ ಸ್ನೇಹಿತರಾಗಿದ್ದರು. ಜೀವನೋಪಾಯಕ್ಕಾಗಿ ನಗರದಲ್ಲಿ‌ ಕೂಲಿ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ‌ಮೂವರು ಒಂದೆಡೆ ಸೇರಿ ಮದ್ಯ ಸೇವನೆ ಮಾಡುತ್ತಿದ್ದರು‌‌.

ಇದರಂತೆ ಕಳೆದ ಭಾನುವಾರ ಮೂವರು ಹಲಸೂರು ಠಾಣಾ ವ್ಯಾಪ್ತಿಯ ದೊಮ್ಮಲೂರು ಬಳಿಯ ಬಯಲು ರಂಗಮಂದಿರ ಬಳಿ ಸೇರಿದ್ದಾರೆ. ಈ ವೇಳೆ‌ ಮೂವರ ನಡುವೆ ಹಣಕಾಸು ವಿಚಾರಕ್ಕಾಗಿ ಗಲಾಟೆ ನಡೆದಿದೆ. ಅಲ್ಲದೆ‌ ಮದ್ಯ ಕೊಡಿಸಿಲ್ಲ ಎಂಬ ಕಾರಣಕ್ಕಾಗಿ ಮನು ಹಾಗೂ ನಾಗರಾಜ್ ಸ್ಟೀಫನ್​ ಮೇಲೆ‌ ಮುಗಿಬಿದ್ದು ಆತನನ್ನು ಹೊಡೆದಿದ್ದಾರೆ. ಬಳಿಕ ಕಾಲುವೆಗೆ ಬಿಸಾಡಿ ಆತನ ತಲೆ ಮೇಲೆ ಸಿಮೆಂಟ್ ಕಲ್ಲು ಹಾಕಿ ಕೊಲೆ‌ ಮಾಡಿ ಪರಾರಿಯಾಗಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ 24 ಗಂಟೆಯೊಳಗೆ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.