ಬೆಂಗಳೂರು: ವಿಧಾನ ಪರಿಷತ್ ಕಾರ್ಯಕಲಾಪ ಸಲಹಾ ಸಮಿತಿಗೆ ನೂತನ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಸಭಾಪತಿಗಳ ನೇತೃತ್ವದ ಕಾರ್ಯಕಲಾಪ ಸಲಹಾ ಸಮಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಉಪಸಭಾಪತಿಗಳು, ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಪ್ರತಿಪಕ್ಷ ಸಚೇತಕ ನಾರಾಯಣಸ್ವಾಮಿ, ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಕಾಂಗ್ರೆಸ್ನ ನಜೀರ್ ಅಹಮದ್, ಬಿ.ಕೆ.ಹರಿಪ್ರಸಾದ್, ಬಿಜೆಪಿ ಸದಸ್ಯ ಶಶೀಲ್ ನಮೋಶಿ ಸದಸ್ಯರಾಗಿರಲಿದ್ದಾರೆ.
ಓದಿ: ಜ. 31ಕ್ಕೆ ಪೋಲಿಯೋ ಲಸಿಕೆ ಕಾರ್ಯಕ್ರಮ ಆಯೋಜನೆ: ಸಚಿವ ಸುಧಾಕರ್
ಉಪಸಭಾಪತಿ, ಕೋಟಾ, ಎಸ್.ಆರ್.ಪಾಟೀಲ್, ಕವಟಗಿಮಠ, ನಾರಾಯಣಸ್ವಾಮಿ, ಬಸವರಾಜ ಹೊರಟ್ಟಿ, ನಜೀರ್ ಅಹಮ್, ಹರಿಪ್ರಸಾದ್, ನಮೋಷಿ, ಸಿಎಂ ಬಿಎಸ್ವೈ, ಬೊಮ್ಮಾಯಿ, ಸಭಾಪತಿ ಸಮಿತಿ ಅಧ್ಯಕ್ಷರಾಗಿರಲಿದ್ದಾರೆ.