ETV Bharat / state

ಖರ್ಗೆ ಕೊಲೆಗೆ ಸಂಚು ಮಾಡಿದ್ದಾರೆ ಎಂದು ಆರೋಪಿಸಿ ಕಟ್ ಕಾಪಿ ಪೇಸ್ಟ್​ ಆಡಿಯೋ ಬಿಡುಗಡೆ ಮಾಡಿದ್ದಾರೆ: ಅಣ್ಣಾಮಲೈ

ರಾಜ್ಯದಲ್ಲಿ ಬಿಜೆಪಿ 130 ಸ್ಥಾನದತ್ತ ಸಾಗುತ್ತಿದೆ, ಇದರಿಂದ ವಿಚಲಿತರಾಗಿರುವ ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ವಿರುದ್ಧ ಸುಳ್ಳು ಹೇಳಲು ಶುರು ಮಾಡಿದ್ದಾರೆ ಎಂದು ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.

author img

By

Published : May 6, 2023, 7:31 PM IST

annamalai-reaction-on-congress-leaders
ಖರ್ಗೆ ಕೊಲೆಗೆ ಸಂಚು ಮಾಡಿದ್ದಾರೆ ಎಂದು ಆರೋಪಿಸಿ ಕಟ್ ಕಾಪಿ ಪೇಸ್ಟ್​ ಆಡಿಯೋ ಬಿಡುಗಡೆ ಮಾಡಿದ್ದಾರೆ: ಅಣ್ಣಾಮಲೈ

ಬೆಂಗಳೂರು: ಇಂದು ಕಾಂಗ್ರೆಸ್ ನಾಚಿಕೆಗೇಡಿನ ಮಾಧ್ಯಮಗೋಷ್ಟಿ ಮಾಡಿದೆ, ಚಿಕ್ಕಮಕ್ಕಳು ಮಾತಾಡುವ ರೀತಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮಾತನಾಡಿದ್ದಾರೆ. ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ್ ರಾಠೋಡ್ ಖರ್ಗೆಯನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಕಟ್ ಕಾಪಿ ಪೇಸ್ಟ್​ನ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ನಗೆಪಾಟಿಲಿಗೆ ಈಡಾಗಿದೆ. ಬಹುಶಃ ಸುರ್ಜೆವಾಲಾರಿಗೆ ಕರ್ನಾಟಕ ರಾಜಕೀಯದ ಹೀಟ್ ತಾಲೋಕೆ ಆಗ್ತಾ ಇಲ್ಲ. ದೇಹ ತಂಪಾಗಲು ನಮ್ಮ ಕಡೆ ಮಜ್ಜಿಗೆ ಕುಡಿಯುತ್ತಾರೆ. ಸುರ್ಜೇವಾಲ ಕೂಡ ಮಜ್ಜಿಗೆ ಕುಡಿಯುವುದು ಒಳ್ಳೆಯದು ನಂದಿನಿ ಮಜ್ಜಿಗೆ ಉತ್ತಮವಾಗಿರುತ್ತೆ. ಅದನ್ನೇ ಕುಡಿಯಲಿ ಎಂದು ಸಲಹೆ ನೀಡುತ್ತೇನೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಟಾಂಗ್ ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಂದ ನಂತರ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿ 130 ಸ್ಥಾನದತ್ತ ಸಾಗುತ್ತಿದೆ, ಇದರಿಂದ ವಿಚಲಿತರಾಗಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಸುಳ್ಳು ಹೇಳಲು ಶುರು ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನಸ್ಸಿನಲ್ಲಿ ಇದ್ದ ಭ್ರಷ್ಟಾಚಾರದ ರೇಟಿಂಗ್ ಅನ್ನು ಪತ್ರಿಕಾ ಜಾಹೀತಾತು ಕೊಟ್ಟಿದ್ದಾರೆ ಎಂದು ಹರಿಹಾಯ್ದರು.

ಈಗ ನೋಡಿದರೆ ನಮ್ಮ ಚಿತ್ತಾಪುರ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ಕೊಲೆ ಸಂಚಿನ ಆರೋಪ ಮಾಡಿದ್ದಾರೆ. ಖರ್ಗೆ ಅವರನ್ನು ಕೊಲ್ಲಲು ಷಡ್ಯಂತ್ರ ರೂಪಿಸಿದ್ದಾರೆ ಎನ್ನುವ ಆರೋಪ ಮಾಡಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಎಲ್​ಕೆಜಿ ಮಗು ಕೂಡ ನಗುವಂತಿದೆ. ಇದು ಜಗತ್ತಿನ ಅತಿ ಕೆಟ್ಟ ಅಸಾಸಿನೇಷನ್ ಪ್ಲಾಂಟ್, ಕಟ್ ಕಾಪಿ ಪೇಸ್ಟ್ ಆಡಿಯೋ ಬಿಡುಗಡೆ ಮಾಡಿದ್ದಾರೆ. ಸುರ್ಜೆವಾಲಾಗೆ ಒಂದು ಮಾತು ಹೇಳುತ್ತೇನೆ, ದಕ್ಷಿಣ ಭಾರತದಲ್ಲಿ ಬಿಸಿಗೆ ಮಜ್ಜಿಗೆ ಕುಡಿಬೇಕು ಎನ್ನುವ ಮಾತಿದೆ, ಅದಕ್ಕೆ ನಂದಿನಿ ಮಜ್ಜಿಗೆ ಕುಡಿಯಿರಿ ಎನ್ನುವ ಸಲಹೆ ನೀಡುತ್ತೇನೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ನಲ್ಲಿ ಒಬ್ಬರಿಗೆ ಸೀಟ್ ಕೊಟ್ಡಿದ್ದಾರೆ ಸ್ಪೆಸಿಫಿಕ್ ಆಗಿ ವಿನಯ್ ಕುಲಕರ್ಣಿ ವಿಚಾರದಲ್ಲಿ ಹೇಳುವುದಾದರೆ ಅವರು ಬೇಲ್​ ಮೇಲೆ ಇರುವ ಅಭ್ಯರ್ಥಿ, ಅವರಿಗೆ ಧಾರವಾಡ ಜಿಲ್ಲೆ ಪ್ರವೇಶ ನಿರ್ಬಂಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅವರು ನೇರವಾಗಿ ಪ್ರಚಾರ ಮಾಡುವಂತಿಲ್ಲ, ಅಂತವರಿಗೆ ಟಿಕೆಟ್ ಕೊಟ್ಟಿರುವ ನೀವು ನಮ್ಮ ಅಭ್ಯರ್ಥಿ ವಿರುದ್ಧ ಇರುವ ಕೇಸ್ ಗಳನ್ನು ಪ್ರಸ್ತಾಪಿಸುತ್ತಿದ್ದು, ನಿಮಗೆ ಯಾವ ನೈತಿಕತೆ ಇದೆ. 26 ವರ್ಷದ ಮಣಿಕಂಠ ವಿರುದ್ಧ ಯಾಕಿಷ್ಟು ಸಿಟ್ಟು ಎಂದು ಗೊತ್ತಿಲ್ಲ. ಕಳೆದ ಎರಡು ವರ್ಷದಲ್ಲಿ ಮಣಿಕಂಠ ವಿರುದ್ಧ ಎಷ್ಟು ಕೇಸು ಹಾಕಿದ್ದಾರೆ ಎಂದು ಅವರೇ ಹೇಳಲಿ ಎಂದು ಅಣ್ಣಾಮಲೈ ಪ್ರಶ್ನಿಸಿದರು.

ಅಷ್ಟು ಚಿಕ್ಕ ಹುಡುಗನ ಮೇಲೆ ಒಂದು ಕೋಟಿ ಮಾನನಷ್ಟ ಮೊಕದ್ದಮೆ ಸೇರಿ ಹತ್ತು ಹಲವು ಕೇಸ್ ಹಾಕಿಸಿದ್ದಾರೆ. ಯಾಕೆ ಇಷ್ಟು ಭಯ ನಮ್ಮ ಅಭ್ಯರ್ಥಿ ಮೇಲೆ ಎಂದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್​ನ 35 ಜನರ ವಿರುದ್ಧ ಗಂಭೀರ ಅಪರಾಧ ಆರೋಪಗಳಿವೆ. ನಿಷೇಧಿತ ಸಂಘಟನೆಗೆ ಹಣಕಾಸು ಪೂರೈಕೆ ಆರೋಪ ಒಬ್ಬರ ಮೇಲಿದೆ. ಕೊತ್ವಾಲ್ ರಾಮಚಂದ್ರ ಶಿಷ್ಯ ಡಿ ಕೆ ಶಿವಕುಮಾರ್ ಮೇಲೆ ಎಷ್ಟು ಕೇಸಿತ್ತು, ಏನೇನು ಕೇಸಿತ್ತು ಗೊತ್ತಾ? ಎಂದು ಅಣ್ಣಾಮಲೈ ಹರಿಹಾಯ್ದರು.

ಚಿತ್ತಾಪುರದಲ್ಲಿ ಪಿಎಂ ಪ್ರವಾಸ ಇತ್ತು, ನಂತರ ರಾಥೋಡ್ ಹಿನ್ನೆಲೆ ಕಾರಣದಿಂದಾಗಿ ರದ್ದಾಗಿದೆ ಎಂದು ಆರೋಪಿಸುವುದು ಸರಿಯಲ್ಲ. ಇದನ್ನು ಕಾಂಗ್ರೆಸ್ ನಾಯಕರು ಇಮ್ಯಾಜಿನೇಷನ್ ಮಾಡಿಕೊಂಡಿದ್ದಾರೆ. ಆದರೆ ಮೋದಿ ಕಾರ್ಯಕ್ರಮ ತಿಂಗಳ ಮೊದಲೇ ನಿಗದಿಯಂತೆ ನಡೆಯುತ್ತಿದೆ. ಮಣಿಕಂಠ ರಾಥೋಡ್ ಈಗ ಖರ್ಗೆ ಕನಸಿನಲ್ಲೂ ಬರುತ್ತಿರುವಂತಿದೆ. ನಮ್ಮ ಅಭ್ಯರ್ಥಿ ವಿರುದ್ಧ 40 ಕೇಸ್ ದಾಖಲಿಸಿದ್ದಾರೆ. 26 ವರ್ಷದ ಹುಡುಗನ ಮೇಲೆ ಅಷ್ಟು ಹೆದರಿಕೆಯಾ? ಕ್ಷೇತ್ರದಲ್ಲಿ ಖರ್ಗೆ ಕುಟುಂಬದ ಹಿಡಿತ ಕೈತಪ್ಪುವ ಆತಂಕದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ಮೋದಿ ಇಂದು ನಡೆಸಿದ ರೋಡ್ ಶೋಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ - ಅಣ್ಣಾಮಲೈ: ಇನ್ನು ಪ್ರಧಾನಿ ನರೇಂದ್ರ ಮೋದಿ ಇಂದು ನಡೆಸಿದ ರೋಡ್ ಶೋಗೆ ಅಭೂತಪೂರ್ವ ಯಶಸ್ಸು ಸಿಕ್ಕಿದ್ದು, ಯಾವುದೇ ರಾಷ್ಟ್ರೀಯ ನಾಯಕರಿಗೂ ಸಿಗದ ರೀತಿಯ ಬೆಂಬಲ ನೀಡಿದ್ದಾರೆ. ನಾಳೆ ನಡೆಯಲಿರುವ ರೋಡ್ ಶೋಗೂ ಜನತೆ ಇದೇ ರೀತಿಯ ಬೆಂಬಲ ನೀಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಹಾಗೂ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದು, ಬೆಂಬಲಿಸಿದ ಜನತೆಗೆ ಧನ್ಯವಾದ ಸಲ್ಲಿಕೆ ಮಾಡಿದ್ದಾರೆ.

ಮೋದಿ ರೋಡ್ ಶೋ ಅತ್ಯಂತ ಯಶಸ್ವಿಯಾಯಿತು, ಬೆಂಗಳೂರು ಜನತೆ ಮೋದಿಗೆ ತುಂಬಾ ಪ್ರೀತಿ ತೋರಿಸಿದ್ದಾರೆ. ಈ ರೀತಿಯ ಬೆಂಬಲವನ್ನು ಯಾವ ನಾಯಕರಿಗೂ ರಾಜ್ಯದ ಹಾಗು ಬೆಂಗಳೂರಿನ ಜನರು ಕೊಟ್ಟಿರಲಿಲ್ಲ. ಇಂದಿನ ರೋಡ್ ಶೋ ಭಾರಿ ಯಶಸ್ಸು ಕಂಡಿದ್ದು, ನಾಳೆ ನಡೆಯಲಿರುವ ರೋಡ್ ಶೋಗೂ ಕೂಡ ಇದೇ ರೀತಿಯ ಬೆಂಬಲ ಸಿಗಲಿದೆ ಎಂದು ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ಇಂದು ಪ್ರಧಾನಿ ಮೋದಿ 26 ಕಿ.ಮೀ ಐತಿಹಾಸಿಕ ರೋಡ್ ಶೋ ಮಾಡಿದ್ದಾರೆ. ರೋಡ್ ಶೋ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆರಂಭಿಸಿ, ಕೇಂದ್ರ ಲೋಕಸಭಾ ಕ್ಷೇತ್ರ ದಾಟಿ, ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸಂಪನ್ನ ವಾಗಿದೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ರೋಡ್ ಶೋ ನಡೆಯಿತು. 12 ಲಕ್ಷ ಜನ ಭಾಗಿಯಾಗಿ ಮೋದಿಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಮೋದಿ ರೋಡ್ ಶೋ ಮೂಲಕ ಬೆಂಗಳೂರಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಂಖ್ಯೆ ಹೆಚ್ಚಾಗಲಿದೆ. ನಮಗೆ ರೋಡ್ ಶೋ ಮೂಲಕ ಅಭೂತಪೂರ್ವ ಯಶಸ್ಸು ಸಿಕ್ಕಿದೆ, ಬೆಂಗಳೂರಿನಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲಿದ್ದೇವೆ ಎಂದು ಅವರು ಭವಿಷ್ಯ ನುಡಿದರು.

ಇದನ್ನೂ ಓದಿ:ಹನುಮಂತನ ನಾಡಿನಲ್ಲಿ ಬಜರಂಗದಳ ನಿಷೇಧಿಸಲು ಕಾಂಗ್ರೆಸ್ ಯತ್ನ: ಯೋಗಿ ಆದಿತ್ಯನಾಥ್ ವಾಗ್ದಾಳಿ

ಬೆಂಗಳೂರು: ಇಂದು ಕಾಂಗ್ರೆಸ್ ನಾಚಿಕೆಗೇಡಿನ ಮಾಧ್ಯಮಗೋಷ್ಟಿ ಮಾಡಿದೆ, ಚಿಕ್ಕಮಕ್ಕಳು ಮಾತಾಡುವ ರೀತಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮಾತನಾಡಿದ್ದಾರೆ. ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ್ ರಾಠೋಡ್ ಖರ್ಗೆಯನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಕಟ್ ಕಾಪಿ ಪೇಸ್ಟ್​ನ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ನಗೆಪಾಟಿಲಿಗೆ ಈಡಾಗಿದೆ. ಬಹುಶಃ ಸುರ್ಜೆವಾಲಾರಿಗೆ ಕರ್ನಾಟಕ ರಾಜಕೀಯದ ಹೀಟ್ ತಾಲೋಕೆ ಆಗ್ತಾ ಇಲ್ಲ. ದೇಹ ತಂಪಾಗಲು ನಮ್ಮ ಕಡೆ ಮಜ್ಜಿಗೆ ಕುಡಿಯುತ್ತಾರೆ. ಸುರ್ಜೇವಾಲ ಕೂಡ ಮಜ್ಜಿಗೆ ಕುಡಿಯುವುದು ಒಳ್ಳೆಯದು ನಂದಿನಿ ಮಜ್ಜಿಗೆ ಉತ್ತಮವಾಗಿರುತ್ತೆ. ಅದನ್ನೇ ಕುಡಿಯಲಿ ಎಂದು ಸಲಹೆ ನೀಡುತ್ತೇನೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಟಾಂಗ್ ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಂದ ನಂತರ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿ 130 ಸ್ಥಾನದತ್ತ ಸಾಗುತ್ತಿದೆ, ಇದರಿಂದ ವಿಚಲಿತರಾಗಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಸುಳ್ಳು ಹೇಳಲು ಶುರು ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನಸ್ಸಿನಲ್ಲಿ ಇದ್ದ ಭ್ರಷ್ಟಾಚಾರದ ರೇಟಿಂಗ್ ಅನ್ನು ಪತ್ರಿಕಾ ಜಾಹೀತಾತು ಕೊಟ್ಟಿದ್ದಾರೆ ಎಂದು ಹರಿಹಾಯ್ದರು.

ಈಗ ನೋಡಿದರೆ ನಮ್ಮ ಚಿತ್ತಾಪುರ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ಕೊಲೆ ಸಂಚಿನ ಆರೋಪ ಮಾಡಿದ್ದಾರೆ. ಖರ್ಗೆ ಅವರನ್ನು ಕೊಲ್ಲಲು ಷಡ್ಯಂತ್ರ ರೂಪಿಸಿದ್ದಾರೆ ಎನ್ನುವ ಆರೋಪ ಮಾಡಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಎಲ್​ಕೆಜಿ ಮಗು ಕೂಡ ನಗುವಂತಿದೆ. ಇದು ಜಗತ್ತಿನ ಅತಿ ಕೆಟ್ಟ ಅಸಾಸಿನೇಷನ್ ಪ್ಲಾಂಟ್, ಕಟ್ ಕಾಪಿ ಪೇಸ್ಟ್ ಆಡಿಯೋ ಬಿಡುಗಡೆ ಮಾಡಿದ್ದಾರೆ. ಸುರ್ಜೆವಾಲಾಗೆ ಒಂದು ಮಾತು ಹೇಳುತ್ತೇನೆ, ದಕ್ಷಿಣ ಭಾರತದಲ್ಲಿ ಬಿಸಿಗೆ ಮಜ್ಜಿಗೆ ಕುಡಿಬೇಕು ಎನ್ನುವ ಮಾತಿದೆ, ಅದಕ್ಕೆ ನಂದಿನಿ ಮಜ್ಜಿಗೆ ಕುಡಿಯಿರಿ ಎನ್ನುವ ಸಲಹೆ ನೀಡುತ್ತೇನೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ನಲ್ಲಿ ಒಬ್ಬರಿಗೆ ಸೀಟ್ ಕೊಟ್ಡಿದ್ದಾರೆ ಸ್ಪೆಸಿಫಿಕ್ ಆಗಿ ವಿನಯ್ ಕುಲಕರ್ಣಿ ವಿಚಾರದಲ್ಲಿ ಹೇಳುವುದಾದರೆ ಅವರು ಬೇಲ್​ ಮೇಲೆ ಇರುವ ಅಭ್ಯರ್ಥಿ, ಅವರಿಗೆ ಧಾರವಾಡ ಜಿಲ್ಲೆ ಪ್ರವೇಶ ನಿರ್ಬಂಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅವರು ನೇರವಾಗಿ ಪ್ರಚಾರ ಮಾಡುವಂತಿಲ್ಲ, ಅಂತವರಿಗೆ ಟಿಕೆಟ್ ಕೊಟ್ಟಿರುವ ನೀವು ನಮ್ಮ ಅಭ್ಯರ್ಥಿ ವಿರುದ್ಧ ಇರುವ ಕೇಸ್ ಗಳನ್ನು ಪ್ರಸ್ತಾಪಿಸುತ್ತಿದ್ದು, ನಿಮಗೆ ಯಾವ ನೈತಿಕತೆ ಇದೆ. 26 ವರ್ಷದ ಮಣಿಕಂಠ ವಿರುದ್ಧ ಯಾಕಿಷ್ಟು ಸಿಟ್ಟು ಎಂದು ಗೊತ್ತಿಲ್ಲ. ಕಳೆದ ಎರಡು ವರ್ಷದಲ್ಲಿ ಮಣಿಕಂಠ ವಿರುದ್ಧ ಎಷ್ಟು ಕೇಸು ಹಾಕಿದ್ದಾರೆ ಎಂದು ಅವರೇ ಹೇಳಲಿ ಎಂದು ಅಣ್ಣಾಮಲೈ ಪ್ರಶ್ನಿಸಿದರು.

ಅಷ್ಟು ಚಿಕ್ಕ ಹುಡುಗನ ಮೇಲೆ ಒಂದು ಕೋಟಿ ಮಾನನಷ್ಟ ಮೊಕದ್ದಮೆ ಸೇರಿ ಹತ್ತು ಹಲವು ಕೇಸ್ ಹಾಕಿಸಿದ್ದಾರೆ. ಯಾಕೆ ಇಷ್ಟು ಭಯ ನಮ್ಮ ಅಭ್ಯರ್ಥಿ ಮೇಲೆ ಎಂದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್​ನ 35 ಜನರ ವಿರುದ್ಧ ಗಂಭೀರ ಅಪರಾಧ ಆರೋಪಗಳಿವೆ. ನಿಷೇಧಿತ ಸಂಘಟನೆಗೆ ಹಣಕಾಸು ಪೂರೈಕೆ ಆರೋಪ ಒಬ್ಬರ ಮೇಲಿದೆ. ಕೊತ್ವಾಲ್ ರಾಮಚಂದ್ರ ಶಿಷ್ಯ ಡಿ ಕೆ ಶಿವಕುಮಾರ್ ಮೇಲೆ ಎಷ್ಟು ಕೇಸಿತ್ತು, ಏನೇನು ಕೇಸಿತ್ತು ಗೊತ್ತಾ? ಎಂದು ಅಣ್ಣಾಮಲೈ ಹರಿಹಾಯ್ದರು.

ಚಿತ್ತಾಪುರದಲ್ಲಿ ಪಿಎಂ ಪ್ರವಾಸ ಇತ್ತು, ನಂತರ ರಾಥೋಡ್ ಹಿನ್ನೆಲೆ ಕಾರಣದಿಂದಾಗಿ ರದ್ದಾಗಿದೆ ಎಂದು ಆರೋಪಿಸುವುದು ಸರಿಯಲ್ಲ. ಇದನ್ನು ಕಾಂಗ್ರೆಸ್ ನಾಯಕರು ಇಮ್ಯಾಜಿನೇಷನ್ ಮಾಡಿಕೊಂಡಿದ್ದಾರೆ. ಆದರೆ ಮೋದಿ ಕಾರ್ಯಕ್ರಮ ತಿಂಗಳ ಮೊದಲೇ ನಿಗದಿಯಂತೆ ನಡೆಯುತ್ತಿದೆ. ಮಣಿಕಂಠ ರಾಥೋಡ್ ಈಗ ಖರ್ಗೆ ಕನಸಿನಲ್ಲೂ ಬರುತ್ತಿರುವಂತಿದೆ. ನಮ್ಮ ಅಭ್ಯರ್ಥಿ ವಿರುದ್ಧ 40 ಕೇಸ್ ದಾಖಲಿಸಿದ್ದಾರೆ. 26 ವರ್ಷದ ಹುಡುಗನ ಮೇಲೆ ಅಷ್ಟು ಹೆದರಿಕೆಯಾ? ಕ್ಷೇತ್ರದಲ್ಲಿ ಖರ್ಗೆ ಕುಟುಂಬದ ಹಿಡಿತ ಕೈತಪ್ಪುವ ಆತಂಕದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ಮೋದಿ ಇಂದು ನಡೆಸಿದ ರೋಡ್ ಶೋಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ - ಅಣ್ಣಾಮಲೈ: ಇನ್ನು ಪ್ರಧಾನಿ ನರೇಂದ್ರ ಮೋದಿ ಇಂದು ನಡೆಸಿದ ರೋಡ್ ಶೋಗೆ ಅಭೂತಪೂರ್ವ ಯಶಸ್ಸು ಸಿಕ್ಕಿದ್ದು, ಯಾವುದೇ ರಾಷ್ಟ್ರೀಯ ನಾಯಕರಿಗೂ ಸಿಗದ ರೀತಿಯ ಬೆಂಬಲ ನೀಡಿದ್ದಾರೆ. ನಾಳೆ ನಡೆಯಲಿರುವ ರೋಡ್ ಶೋಗೂ ಜನತೆ ಇದೇ ರೀತಿಯ ಬೆಂಬಲ ನೀಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಹಾಗೂ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದು, ಬೆಂಬಲಿಸಿದ ಜನತೆಗೆ ಧನ್ಯವಾದ ಸಲ್ಲಿಕೆ ಮಾಡಿದ್ದಾರೆ.

ಮೋದಿ ರೋಡ್ ಶೋ ಅತ್ಯಂತ ಯಶಸ್ವಿಯಾಯಿತು, ಬೆಂಗಳೂರು ಜನತೆ ಮೋದಿಗೆ ತುಂಬಾ ಪ್ರೀತಿ ತೋರಿಸಿದ್ದಾರೆ. ಈ ರೀತಿಯ ಬೆಂಬಲವನ್ನು ಯಾವ ನಾಯಕರಿಗೂ ರಾಜ್ಯದ ಹಾಗು ಬೆಂಗಳೂರಿನ ಜನರು ಕೊಟ್ಟಿರಲಿಲ್ಲ. ಇಂದಿನ ರೋಡ್ ಶೋ ಭಾರಿ ಯಶಸ್ಸು ಕಂಡಿದ್ದು, ನಾಳೆ ನಡೆಯಲಿರುವ ರೋಡ್ ಶೋಗೂ ಕೂಡ ಇದೇ ರೀತಿಯ ಬೆಂಬಲ ಸಿಗಲಿದೆ ಎಂದು ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ಇಂದು ಪ್ರಧಾನಿ ಮೋದಿ 26 ಕಿ.ಮೀ ಐತಿಹಾಸಿಕ ರೋಡ್ ಶೋ ಮಾಡಿದ್ದಾರೆ. ರೋಡ್ ಶೋ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆರಂಭಿಸಿ, ಕೇಂದ್ರ ಲೋಕಸಭಾ ಕ್ಷೇತ್ರ ದಾಟಿ, ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸಂಪನ್ನ ವಾಗಿದೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ರೋಡ್ ಶೋ ನಡೆಯಿತು. 12 ಲಕ್ಷ ಜನ ಭಾಗಿಯಾಗಿ ಮೋದಿಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಮೋದಿ ರೋಡ್ ಶೋ ಮೂಲಕ ಬೆಂಗಳೂರಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಂಖ್ಯೆ ಹೆಚ್ಚಾಗಲಿದೆ. ನಮಗೆ ರೋಡ್ ಶೋ ಮೂಲಕ ಅಭೂತಪೂರ್ವ ಯಶಸ್ಸು ಸಿಕ್ಕಿದೆ, ಬೆಂಗಳೂರಿನಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲಿದ್ದೇವೆ ಎಂದು ಅವರು ಭವಿಷ್ಯ ನುಡಿದರು.

ಇದನ್ನೂ ಓದಿ:ಹನುಮಂತನ ನಾಡಿನಲ್ಲಿ ಬಜರಂಗದಳ ನಿಷೇಧಿಸಲು ಕಾಂಗ್ರೆಸ್ ಯತ್ನ: ಯೋಗಿ ಆದಿತ್ಯನಾಥ್ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.