ETV Bharat / state

ನವೋದ್ಯಮಗಳು ಆದಾಯದಲ್ಲಿ R&Dಗೆ ಶೇ.30ರಷ್ಟು ಹಣ ಮೀಸಲಿಡಿ: ಸಚಿವ ಅಶ್ವತ್ಥನಾರಾಯಣ - ಇಂಡಿಯಾ ಫಸ್ಟ್ ಟೆಕ್ ಸ್ಟಾರ್ಟಪ್ 2022 ಸಮಾವೇಶಕ್ಕೆ ಬುಧವಾರ ಚಾಲನೆ

'ಇಂಡಿಯಾ ಫಸ್ಟ್ ಟೆಕ್ ಸ್ಟಾರ್ಟಪ್-2022' ಸಮಾವೇಶಕ್ಕೆ ಇಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.

ashwaththanarayana
ಸಚಿವ ಅಶ್ವತ್ಥನಾರಾಯಣ
author img

By

Published : Jun 8, 2022, 7:50 PM IST

ಬೆಂಗಳೂರು: 'ನವೋದ್ಯಮಗಳು ತಮ್ಮ ಆದಾಯದಲ್ಲಿ ಶೇ.30ರಷ್ಟನ್ನಾದರೂ ಸಂಶೋಧನೆ ಮತ್ತು ಅಭಿವೃದ್ಧಿಗೆ(R&D) ಮೀಸಲಿಡಬೇಕು. ಇಲ್ಲದೆ ಹೋದರೆ ದೇಶಕ್ಕೇನೂ ಪ್ರಯೋಜನವಿಲ್ಲ. ಇದರ ಜೊತೆಗೆ, ನವೋದ್ಯಮಗಳು ಭಾರತವನ್ನೇ ಉತ್ಪಾದನೆಯ ತೊಟ್ಟಿಲನ್ನಾಗಿ ಬೆಳೆಸುವ ಗುರಿ ಇಟ್ಟುಕೊಳ್ಳಬೇಕು' ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಲಹೆ ನೀಡಿದರು.

ಇಂಡಿಯಾ ಫಸ್ಟ್ ಟೆಕ್ ಸ್ಟಾರ್ಟಪ್ 2022 ಸಮಾವೇಶಕ್ಕೆ ಚಾಲನೆ

'ಕರ್ನಾಟಕವೆಂದರೆ ಇಲ್ಲಿ ಭಾರತವೇ ಅಡಗಿದೆ. ನಮ್ಮಲ್ಲಿರುವಷ್ಟು ಕಾಸ್ಮೋಪಾಲಿಟನ್ ಸಂಸ್ಕೃತಿ ದೇಶದ ಉಳಿದ ಭಾಗಗಳಲ್ಲಿ ಕಂಡುಬರುವುದಿಲ್ಲ. ನಮ್ಮಲ್ಲಿ ಭಾಷೆ, ಧರ್ಮ ಇತ್ಯಾದಿಗಳ ಹೆಸರಿನಲ್ಲಿ ಸಂಕುಚಿತ ಧೋರಣೆಯನ್ನು ಯಾವತ್ತೂ ಬೆಳೆಸಿಲ್ಲ. ರಾಜ್ಯವು ಇಡೀ ಜಗತ್ತಿನ ಜನರನ್ನು ಸ್ವಾಗತಿಸುತ್ತದೆ' ಎಂದರು.

ಉದ್ಯಮಶೀಲ ವಾತಾವರಣಕ್ಕೆ ಪ್ರೋತ್ಸಾಹ: 'ರಾಜ್ಯವು ಮೊದಲಿನಿಂದಲೂ ಉದ್ಯಮಶೀಲ ವಾತಾವರಣಕ್ಕೆ ಪ್ರೋತ್ಸಾಹ ಕೊಡುತ್ತಲೇ ಬಂದಿದೆ. ಇತ್ತೀಚಿನ ದಶಕಗಳಲ್ಲಿ ಐಟಿ, ಬಿಟಿ ಜತೆಗೆ ಆಧುನಿಕ ತಂತ್ರಜ್ಞಾನಗಳಿಗೂ ತೆರೆದುಕೊಂಡಿದ್ದು, ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ' ಎಂದು ನುಡಿದರು.

ಎನ್ಇಪಿ ಜಾರಿಗೆ ಉದ್ಯಮಗಳು ಅಗತ್ಯ: 'ಎನ್ಇಪಿ ಜಾರಿಗೆ ಉದ್ಯಮಗಳು ಅಗತ್ಯ. ಅವರಿಗೆ ಬೇಕಾದ ಕೌಶಲ್ಯ, ಸೂಕ್ತ ಪಠ್ಯಕ್ರಮ, ಸಂವಹನ ತರಬೇತಿ, ಇಂಟರ್ನ್ಶಿಪ್ ಇತ್ಯಾದಿಗಳಿಗೆ ಗಮನ ಕೊಡಲಾಗಿದೆ' ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಭಾರತದ ಕುರಿಗಾಹಿಗಳ ಸಂಕಷ್ಟಗಳನ್ನು ಯುನೆಸ್ಕೋದಲ್ಲಿ ನಿಂತು ಹೇಳಲಿದ್ದೇವೆ: ಹೆಚ್.ವಿಶ್ವನಾಥ್

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.