ETV Bharat / state

ಮೋದಿ ಅಧಿಕಾರಕ್ಕೆ ಬಂದ ನಂತರ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ: ಶೋಭಾ ಕರಂದ್ಲಾಜೆ

author img

By

Published : Jun 3, 2022, 3:27 PM IST

ನರೇಂದ್ರ ಮೋದಿಯವರು ಪ್ರಧಾನಿಯಾಗಿ ಎಂಟು ವರ್ಷ ಕಳೆದಿದೆ. ಬೇರೆ ರಾಷ್ಟ್ರಗಳಿಗೆ ಸಹಾಯ ಮಾಡುವ ಧೈರ್ಯ ಇಂದು ನಮ್ಮ ದೇಶಕ್ಕೆ ಬಂದಿದೆ. ಮೋದಿ ಪ್ರಧಾನಿಯಾದ ಬಳಿಕ ಉತ್ತಮ ಆಡಳಿತ ನಡೆಸಿದ್ದಾರೆ. ಗುಜರಾತ್ ಮಾದರಿಯಲ್ಲಿ ದೇಶ ಅಭಿವೃದ್ಧಿ ಮಾಡಲು ಕೆಲಸ ಮಾಡಿದ್ದಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Shobha Karandlaje held a press conference at the BJP city office in Malleswaram
ಶೋಭಾ ಕರಂದ್ಲಾಜೆ

ಬೆಂಗಳೂರು: ನೆರೆಯ ದೇಶಗಳ ಜೊತೆ ವ್ಯವಹಾರ ಮಾಡುವ, ಸಂಕಷ್ಟದಲ್ಲಿದ್ದಾಗ ಆ ರಾಷ್ಟ್ರಗಳಿಗೆ ಸಹಾಯ ಮಾಡುವ ಧೈರ್ಯ ಇಂದು ದೇಶಕ್ಕೆ ಬಂದಿದೆ. ಇದು ದೇಶದ ತ್ರಿವರ್ಣ ಧ್ವಜಕ್ಕೆ ಹೆಚ್ಚು ಗೌರವ ತಂದುಕೊಟ್ಟಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಯೇ ಕಾರಣ, ಮೋದಿ ಅವರಿಂದಾಗಿಯೇ ಇಂದು ಭಾರತಕ್ಕೆ ಜಾಗತಿಕ ಮನ್ನಣೆ, ಗೌರವ ಸಿಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕರಂದ್ಲಾಜೆ: ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾಗಿ ಎಂಟು ವರ್ಷ ಕಳೆದಿದೆ. ಅವರು ಪ್ರಧಾನಿಯಾಗೋ ಮೊದಲು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಮೋದಿ ಪ್ರಧಾನಿಯಾದ ಬಳಿಕ ಉತ್ತಮ ಆಡಳಿತ ನಡೆಸಿದ್ದಾರೆ. ಕಳೆದ ಎರಡು ವರ್ಷ ಕಠಿಣವಾಗಿತ್ತು.

ಕೊರೊನಾ ಬಂದು ಇಡೀ ದೇಶವೇ ಸಮಸ್ಯೆ ಎದುರಿಸಿತ್ತು. ಕೊರೊನಾ ಬಳಿಕ ಹೆಚ್ಚು ಬಂಡವಾಳ ಹೂಡಿಕೆ ಕೂಡ ಹರಿದು ಬಂದಿದೆ. ಇದರ ನಡುವೆ ಜಿಡಿಪಿ‌ ಕೂಡ ಶೇ.8.5ರಷ್ಟು ಇದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದ ನಡುವೆ ಎಲ್ಲ ವಿದ್ಯಾರ್ಥಿಗಳನ್ನ ಕರೆದುಕೊಂಡು ಬರಲು ಸಫಲರಾಗಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾರತವನ್ನ ಹಾಡಿ ಹೊಗಳಿದ್ದಾರೆ ಎಂದು ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡರು.

ಭ್ರಷ್ಟಾಚಾರ ರಹಿತ ಆಡಳಿತ: ಮೋದಿಯವರು 20 ವರ್ಷ ಆಡಳಿತ ಮಾಡಿದ್ದಾರೆ. 12 ವರ್ಷ ಗುಜರಾತ್ ಸಿಎಂ ಆಗಿ, 8 ವರ್ಷ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ್ದಾರೆ. ಗುಜರಾತ್ ಮಾದರಿಯಲ್ಲಿ ದೇಶವನ್ನು ಅಭಿವೃದ್ಧಿ ಮಾಡಲು ಕೆಲಸ ಮಾಡಿದ್ದಾರೆ. ದೇಶದ ಗಡಿಗಳಲ್ಲಿ ಭದ್ರತೆ ಸಿಗಬೇಕು, ಸೈನಿಕರಿಗೆ ಬಲ ಸಿಗಬೇಕು ಅಂತ ವಿಚಾರಗಳನ್ನು ಇಟ್ಟರು. ನಾಲ್ಕು ಅಂಶ ಇಟ್ಟುಕೊಂಡು ದೇಶದ ಜನತೆ ಮುಂದೆ ಮತ ಕೇಳಿದ್ದರು. ಇದುವರೆಗೂ ಒಂದು ಕಪ್ಪು ಚುಕ್ಕೆ ಇಲ್ಲದೇ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ವಿದೇಶದವರು ಮನಮೋಹನ್ ಸಿಂಗ್ ಅವರನ್ನು ಕರೆದು ಮಾತನಾಡಿಸುವ ಕೆಲಸ ಮಾಡುತ್ತಿರಲಿಲ್ಲ ಎಂದರು.

ದೇಶದ ಗಡಿಗೆ ಬೇಲಿ ಹಾಕುವ ಕೆಲಸ ಆಗಿದೆ: ಮೋದಿಯವರಿಗೆ ಗೌರವ ಕೊಟ್ಟರೆ, ಇಡೀ ದೇಶಕ್ಕೆ ಗೌರವ ಸಿಕ್ಕಂತಾಗಿದೆ. ಉಕ್ರೇನ್-ರಷ್ಯಾ ಯುದ್ಧದಲ್ಲಿ 20 ಸಾವಿರ ಜನರನ್ನ ಸುರಕ್ಷಿತವಾಗಿ ಕರೆತಂದರು. ಏಕ‌ಕಾಲದಲ್ಲಿ ಎರಡೂ ದೇಶದ ಪ್ರಧಾನಿಗಳ ಜೊತೆ ಮಾತನಾಡಿದ್ದರೇ ಅದು ಮೋದಿ ಮಾತ್ರ. ನೆರೆಯ ದೇಶಗಳ ಜೊತೆ ವ್ಯವಹಾರ ಮಾಡುವ, ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವ ಧೈರ್ಯ ದೇಶಕ್ಕೆ ಬಂದಿದೆ.

ಇದು ದೇಶದ ತ್ರಿವರ್ಣ ಧ್ವಜಕ್ಕೆ ಹೆಚ್ಚು ಗೌರವ ತಂದುಕೊಟ್ಟಿದೆ. ಭಾರತ ಬಾಂಗ್ಲಾದೇಶದ ಗಡಿ‌ ಯಾವುದು ಅಂತ ಗೊತ್ತಿರಲಿಲ್ಲ. ಈಗ ದೇಶದ ಗಡಿಗೆ ಬೇಲಿ ಹಾಕುವ ಕೆಲಸ ಆಗಿದೆ. ಗಡಿಯಲ್ಲಿರೋ ಎರಡೂ ದೇಶದ ಪ್ರಜೆಗಳು ಸುರಕ್ಷಿತವಾಗಿರಲು ಕ್ರಮ ತೆಗೆದುಕೊಳ್ಳಲಾಗಿದೆ. ಭೂ ಸೇನೆ, ವಾಯುಪಡೆ ನೌಕಾದಳಕ್ಕೆ ಬೇಕಿರುವ ಎಲ್ಲಾ ಶಸ್ತ್ರಾಸ್ತ್ರ ಪೂರೈಸುವ ಕೆಲಸ ಮೋದಿ ಸರ್ಕಾರ ಮಾಡಿದೆ.

ಮೋದಿ ಪೊರಕೆ ಹಿಡಿದಾಗ ಪ್ರತಿಪಕ್ಷದವರು ನಕ್ಕಿದ್ದರು, ಪ್ರಧಾನಿ ಪೊರಕೆ ಹಿಡಿದರೆ ಸ್ವಚ್ಚ ಆಗುತ್ತಾ ಅಂತ ವ್ಯಂಗ್ಯವಾಡಿದ್ದರು. ಇಂದು 11ಕೋಟಿಗಿಂತಲೂ ಹೆಚ್ಚು ಶೌಚಾಲಯ ನಿರ್ಮಾಣ ಆಗಿವೆ. ಉಜ್ವಲ‌ ಯೋಜನೆ ಅಡಿ ಗ್ಯಾಸ್ ವಿತರಿಸಲಾಗಿದೆ. 4ಕೋಟಿ ಜನರಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ. ಇಂದು 10-15 ಕಂಬ ಹಾಕಿ ವಿದ್ಯುತ್ ಪೂರೈಸಲಾಗಿದೆ. 28 ಸಾವಿರ ಹಳ್ಳಿಗಳಿಗೆ ವಿದ್ಯುತ್ ಪೂರೈಸಲಾಗಿದೆ. ಕೊರೊನಾ ಸಂದರ್ಭದಲ್ಲಿ ‌ಮೆಡಿಸಿನ್ ಕೊಡಿಸುವ ಕೆಲಸ ಮಾಡಲಾಗಿದೆ. ಯಾವುದೋ ದೇಶ ಮೆಡಿಸಿನ್ ಕಂಡು ಹಿಡಿದು, ವರ್ಷದ ಬಳಿಕ ಭಾರತಕ್ಕೆ ಬರುತ್ತಿತ್ತು. ಆದರೆ ಕೊರೊನಾ ಬಂದ ಕೂಡಲೇ ಭಾರತದಲ್ಲೇ ವ್ಯಾಕ್ಸಿನ್ ಕಂಡು ಹಿಡಿಯುವ ಕೆಲಸ ಮಾಡಲಾಯಿತು.

ಇದನ್ನೂ ಓದಿ: ಮಂಡ್ಯ ವಿಶೇಷಚೇತನ ಯುವಕನಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟ ಪ್ರಧಾನಿ.. ಅದೇನಾಗಿತ್ತು ಅಂದ್ರೇ..

ಏಳು ವರ್ಷದ ಅವಧಿಯಲ್ಲಿ ಪ್ರಧಾನಿ 1,32,000 ಕೋಟಿ ರೈತ ಬಜೆಟ್ ಮಾಡಿದ್ದಾರೆ. ರೈತ ಸಮ್ಮನ್ ಯೋಜನೆ ಮೂಲಕ ಕೋಟ್ಯಂತರ ರೈತರಿಗೆ ಧನ ಸಹಾಯ ಮಾಡಲಾಗಿದೆ. 1,83,000 ಕೋಟಿ ಈವರೆಗೂ ರೈತರ ಅಕೌಂಟಿಗೆ ಹಾಕಲಾಗಿದೆ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುವಂತೆ ಮಾಡಲಾಗಿದೆ. ವಿದೇಶಗಳಿಗೆ ಎಕ್ಸ್‌ಪೋರ್ಟ್ ಮಾಡುವ ಕೆಲಸ ಮಾಡಲಾಗಿದೆ.

314 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯ ಕಳೆದ ವರ್ಷ ಬೆಳೆದಿದ್ದೇವೆ. ನಮ್ಮ ದೇಶದ 135ಕೋಟಿ ಜನ ತಿನ್ನಲು ಇಷ್ಟು ಬೇಕಿಲ್ಲ. ಹಾಗಾಗಿ ‌ಇದನ್ನ ಮಾರ್ಕೆಟಿಂಗ್ ಮಾಡಿ, ಎಕ್ಸ್‌ಪೋರ್ಟ್ ಮಾಡುವ ಕೆಲಸ ಆಗ್ತಿದೆ ಎಂದು ಮೋದಿ ಸರ್ಕಾರದ ಸಾಧನೆಯನ್ನು ಹಾಡಿ ಹೊಗಳಿದರು.

ಬೆಂಗಳೂರು: ನೆರೆಯ ದೇಶಗಳ ಜೊತೆ ವ್ಯವಹಾರ ಮಾಡುವ, ಸಂಕಷ್ಟದಲ್ಲಿದ್ದಾಗ ಆ ರಾಷ್ಟ್ರಗಳಿಗೆ ಸಹಾಯ ಮಾಡುವ ಧೈರ್ಯ ಇಂದು ದೇಶಕ್ಕೆ ಬಂದಿದೆ. ಇದು ದೇಶದ ತ್ರಿವರ್ಣ ಧ್ವಜಕ್ಕೆ ಹೆಚ್ಚು ಗೌರವ ತಂದುಕೊಟ್ಟಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಯೇ ಕಾರಣ, ಮೋದಿ ಅವರಿಂದಾಗಿಯೇ ಇಂದು ಭಾರತಕ್ಕೆ ಜಾಗತಿಕ ಮನ್ನಣೆ, ಗೌರವ ಸಿಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕರಂದ್ಲಾಜೆ: ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾಗಿ ಎಂಟು ವರ್ಷ ಕಳೆದಿದೆ. ಅವರು ಪ್ರಧಾನಿಯಾಗೋ ಮೊದಲು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಮೋದಿ ಪ್ರಧಾನಿಯಾದ ಬಳಿಕ ಉತ್ತಮ ಆಡಳಿತ ನಡೆಸಿದ್ದಾರೆ. ಕಳೆದ ಎರಡು ವರ್ಷ ಕಠಿಣವಾಗಿತ್ತು.

ಕೊರೊನಾ ಬಂದು ಇಡೀ ದೇಶವೇ ಸಮಸ್ಯೆ ಎದುರಿಸಿತ್ತು. ಕೊರೊನಾ ಬಳಿಕ ಹೆಚ್ಚು ಬಂಡವಾಳ ಹೂಡಿಕೆ ಕೂಡ ಹರಿದು ಬಂದಿದೆ. ಇದರ ನಡುವೆ ಜಿಡಿಪಿ‌ ಕೂಡ ಶೇ.8.5ರಷ್ಟು ಇದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದ ನಡುವೆ ಎಲ್ಲ ವಿದ್ಯಾರ್ಥಿಗಳನ್ನ ಕರೆದುಕೊಂಡು ಬರಲು ಸಫಲರಾಗಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾರತವನ್ನ ಹಾಡಿ ಹೊಗಳಿದ್ದಾರೆ ಎಂದು ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡರು.

ಭ್ರಷ್ಟಾಚಾರ ರಹಿತ ಆಡಳಿತ: ಮೋದಿಯವರು 20 ವರ್ಷ ಆಡಳಿತ ಮಾಡಿದ್ದಾರೆ. 12 ವರ್ಷ ಗುಜರಾತ್ ಸಿಎಂ ಆಗಿ, 8 ವರ್ಷ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ್ದಾರೆ. ಗುಜರಾತ್ ಮಾದರಿಯಲ್ಲಿ ದೇಶವನ್ನು ಅಭಿವೃದ್ಧಿ ಮಾಡಲು ಕೆಲಸ ಮಾಡಿದ್ದಾರೆ. ದೇಶದ ಗಡಿಗಳಲ್ಲಿ ಭದ್ರತೆ ಸಿಗಬೇಕು, ಸೈನಿಕರಿಗೆ ಬಲ ಸಿಗಬೇಕು ಅಂತ ವಿಚಾರಗಳನ್ನು ಇಟ್ಟರು. ನಾಲ್ಕು ಅಂಶ ಇಟ್ಟುಕೊಂಡು ದೇಶದ ಜನತೆ ಮುಂದೆ ಮತ ಕೇಳಿದ್ದರು. ಇದುವರೆಗೂ ಒಂದು ಕಪ್ಪು ಚುಕ್ಕೆ ಇಲ್ಲದೇ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ವಿದೇಶದವರು ಮನಮೋಹನ್ ಸಿಂಗ್ ಅವರನ್ನು ಕರೆದು ಮಾತನಾಡಿಸುವ ಕೆಲಸ ಮಾಡುತ್ತಿರಲಿಲ್ಲ ಎಂದರು.

ದೇಶದ ಗಡಿಗೆ ಬೇಲಿ ಹಾಕುವ ಕೆಲಸ ಆಗಿದೆ: ಮೋದಿಯವರಿಗೆ ಗೌರವ ಕೊಟ್ಟರೆ, ಇಡೀ ದೇಶಕ್ಕೆ ಗೌರವ ಸಿಕ್ಕಂತಾಗಿದೆ. ಉಕ್ರೇನ್-ರಷ್ಯಾ ಯುದ್ಧದಲ್ಲಿ 20 ಸಾವಿರ ಜನರನ್ನ ಸುರಕ್ಷಿತವಾಗಿ ಕರೆತಂದರು. ಏಕ‌ಕಾಲದಲ್ಲಿ ಎರಡೂ ದೇಶದ ಪ್ರಧಾನಿಗಳ ಜೊತೆ ಮಾತನಾಡಿದ್ದರೇ ಅದು ಮೋದಿ ಮಾತ್ರ. ನೆರೆಯ ದೇಶಗಳ ಜೊತೆ ವ್ಯವಹಾರ ಮಾಡುವ, ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವ ಧೈರ್ಯ ದೇಶಕ್ಕೆ ಬಂದಿದೆ.

ಇದು ದೇಶದ ತ್ರಿವರ್ಣ ಧ್ವಜಕ್ಕೆ ಹೆಚ್ಚು ಗೌರವ ತಂದುಕೊಟ್ಟಿದೆ. ಭಾರತ ಬಾಂಗ್ಲಾದೇಶದ ಗಡಿ‌ ಯಾವುದು ಅಂತ ಗೊತ್ತಿರಲಿಲ್ಲ. ಈಗ ದೇಶದ ಗಡಿಗೆ ಬೇಲಿ ಹಾಕುವ ಕೆಲಸ ಆಗಿದೆ. ಗಡಿಯಲ್ಲಿರೋ ಎರಡೂ ದೇಶದ ಪ್ರಜೆಗಳು ಸುರಕ್ಷಿತವಾಗಿರಲು ಕ್ರಮ ತೆಗೆದುಕೊಳ್ಳಲಾಗಿದೆ. ಭೂ ಸೇನೆ, ವಾಯುಪಡೆ ನೌಕಾದಳಕ್ಕೆ ಬೇಕಿರುವ ಎಲ್ಲಾ ಶಸ್ತ್ರಾಸ್ತ್ರ ಪೂರೈಸುವ ಕೆಲಸ ಮೋದಿ ಸರ್ಕಾರ ಮಾಡಿದೆ.

ಮೋದಿ ಪೊರಕೆ ಹಿಡಿದಾಗ ಪ್ರತಿಪಕ್ಷದವರು ನಕ್ಕಿದ್ದರು, ಪ್ರಧಾನಿ ಪೊರಕೆ ಹಿಡಿದರೆ ಸ್ವಚ್ಚ ಆಗುತ್ತಾ ಅಂತ ವ್ಯಂಗ್ಯವಾಡಿದ್ದರು. ಇಂದು 11ಕೋಟಿಗಿಂತಲೂ ಹೆಚ್ಚು ಶೌಚಾಲಯ ನಿರ್ಮಾಣ ಆಗಿವೆ. ಉಜ್ವಲ‌ ಯೋಜನೆ ಅಡಿ ಗ್ಯಾಸ್ ವಿತರಿಸಲಾಗಿದೆ. 4ಕೋಟಿ ಜನರಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ. ಇಂದು 10-15 ಕಂಬ ಹಾಕಿ ವಿದ್ಯುತ್ ಪೂರೈಸಲಾಗಿದೆ. 28 ಸಾವಿರ ಹಳ್ಳಿಗಳಿಗೆ ವಿದ್ಯುತ್ ಪೂರೈಸಲಾಗಿದೆ. ಕೊರೊನಾ ಸಂದರ್ಭದಲ್ಲಿ ‌ಮೆಡಿಸಿನ್ ಕೊಡಿಸುವ ಕೆಲಸ ಮಾಡಲಾಗಿದೆ. ಯಾವುದೋ ದೇಶ ಮೆಡಿಸಿನ್ ಕಂಡು ಹಿಡಿದು, ವರ್ಷದ ಬಳಿಕ ಭಾರತಕ್ಕೆ ಬರುತ್ತಿತ್ತು. ಆದರೆ ಕೊರೊನಾ ಬಂದ ಕೂಡಲೇ ಭಾರತದಲ್ಲೇ ವ್ಯಾಕ್ಸಿನ್ ಕಂಡು ಹಿಡಿಯುವ ಕೆಲಸ ಮಾಡಲಾಯಿತು.

ಇದನ್ನೂ ಓದಿ: ಮಂಡ್ಯ ವಿಶೇಷಚೇತನ ಯುವಕನಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟ ಪ್ರಧಾನಿ.. ಅದೇನಾಗಿತ್ತು ಅಂದ್ರೇ..

ಏಳು ವರ್ಷದ ಅವಧಿಯಲ್ಲಿ ಪ್ರಧಾನಿ 1,32,000 ಕೋಟಿ ರೈತ ಬಜೆಟ್ ಮಾಡಿದ್ದಾರೆ. ರೈತ ಸಮ್ಮನ್ ಯೋಜನೆ ಮೂಲಕ ಕೋಟ್ಯಂತರ ರೈತರಿಗೆ ಧನ ಸಹಾಯ ಮಾಡಲಾಗಿದೆ. 1,83,000 ಕೋಟಿ ಈವರೆಗೂ ರೈತರ ಅಕೌಂಟಿಗೆ ಹಾಕಲಾಗಿದೆ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುವಂತೆ ಮಾಡಲಾಗಿದೆ. ವಿದೇಶಗಳಿಗೆ ಎಕ್ಸ್‌ಪೋರ್ಟ್ ಮಾಡುವ ಕೆಲಸ ಮಾಡಲಾಗಿದೆ.

314 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯ ಕಳೆದ ವರ್ಷ ಬೆಳೆದಿದ್ದೇವೆ. ನಮ್ಮ ದೇಶದ 135ಕೋಟಿ ಜನ ತಿನ್ನಲು ಇಷ್ಟು ಬೇಕಿಲ್ಲ. ಹಾಗಾಗಿ ‌ಇದನ್ನ ಮಾರ್ಕೆಟಿಂಗ್ ಮಾಡಿ, ಎಕ್ಸ್‌ಪೋರ್ಟ್ ಮಾಡುವ ಕೆಲಸ ಆಗ್ತಿದೆ ಎಂದು ಮೋದಿ ಸರ್ಕಾರದ ಸಾಧನೆಯನ್ನು ಹಾಡಿ ಹೊಗಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.