ETV Bharat / state

ಪತ್ನಿ ನಟಿಸಿರುವ "ಆದಿಲಕ್ಷ್ಮಿ ಪುರಾಣ" ಟ್ರೈಲರ್​​ ಲಾಂಚ್​​​ ಮಾಡಿದ ಯಶ್

author img

By

Published : Jul 13, 2019, 9:04 AM IST

Updated : Jul 13, 2019, 12:12 PM IST

ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆದ ಟ್ರೇಲರ್​​ ಬಿಡುಗಡೆ ಕಾರ್ಯಕ್ರಮಕ್ಕೆ  ರಾಧಿಕಾ ಪಂಡಿತ್​ರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಆಗಮಿಸಿ ಚಿತ್ರದ ಟ್ರೇಲರನ್ನು ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು.

ಪತ್ನಿ ನಟಿಸುರುವ "ಆದಿಲಕ್ಷ್ಮಿ ಪುರಾಣ" ಟ್ರೈಲರ್ ಲಾಂಚ್​ ಮಾಡಿದ ಯಶ್

ಸ್ಯಾಂಡಲ್​ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮದುವೆಯಾದ ನಂತರ ಅಭಿನಯಿಸಿರುವ ಮೊದಲನೇ ಚಿತ್ರ ಆದಿಲಕ್ಷ್ಮಿ ಪುರಾಣ ಇದೇ ತಿಂಗಳ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಪತ್ನಿ ನಟಿಸುರುವ "ಆದಿಲಕ್ಷ್ಮಿ ಪುರಾಣ" ಚಿತ್ರದ ಟ್ರೇಲರ್​ ಲಾಂಚ್​ ಮಾಡಿದ ಯಶ್

ಇನ್ನು ಚಿತ್ರದ ಪ್ರಮೋಷನ್​​ಅಲ್ಲಿ ಚಿತ್ರತಂಡ ಸಖತ್ ಬ್ಯುಸಿಯಾಗಿದ್ದು, ಈ ಗ್ಯಾಪ್​​ನಲ್ಲಿ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ನಗರದ ಕಲಾವಿದರ ಸಂಘದಲ್ಲಿ ನಡೆದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ರಾಧಿಕಾ ಪಂಡಿತ್​ರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಆಗಮಿಸಿ ಚಿತ್ರದ ಟ್ರೇಲರನ್ನು ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು. ಅಲ್ಲದೇ, ಆದಿಲಕ್ಷ್ಮಿ ಪುರಾಣ ಚಿತ್ರಕಥೆ ನನಗೆ ತುಂಬಾ ಇಷ್ಟ ಆಗಿತ್ತು. ಕಥೆ ಕೇಳಿದ ರಾಕ್​​ಲೈನ್ ವೆಂಕಟೇಶ್ ಅವರು ತುಂಬಾ ಇಷ್ಟಪಟ್ಟು ಆದಿಲಕ್ಷ್ಮಿ ಪುರಾಣ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲೂ ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಅಭಿನಯಿಸಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದರು ಯಶ್​.

ಇನ್ನು ಇದೇ ವೇಳೆ ಮಾತನಾಡಿದ ರಾಧಿಕಾ ಪಂಡಿತ್​, ಆದಿಲಕ್ಷ್ಮಿ ಪುರಾಣ ಚಿತ್ರದ ಟ್ರೇಲರ್​​ ನನಗೆ ತುಂಬಾ ಸ್ಪೆಷಲ್. ಯಾಕಂದ್ರೆ, ನನ್ನ ಹಸ್ಬೆಂಡ್ ಚಿತ್ರದ ಟ್ರೇಲರ್​​ ಬಿಡುಗಡೆ ಮಾಡಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದರು. ಇನ್ನು ಚಿತ್ರದಲ್ಲಿ ನನ್ನ ಪಾತ್ರ ತುಂಬಾ ವಿಶೇಷವಾಗಿದೆ. ಇದೊಂದು ಬೇರೆ ತರಹದ ಸಿನಿಮಾವೆನಿಸಲಿದೆ ಎಂದರು.

ಟ್ರೇಲರ್​​ ಬಿಡುಗಡೆ ಕಾರ್ಯಕ್ರಮಕ್ಕೆ ಹಿರಿಯ ನಟ ದೊಡ್ಡಣ್ಣ, ಸುಚೇಂದ್ರ ಪ್ರಸಾದ್, ತಾರಾ ಸೇರಿದಂತೆ ಇಡೀ ಚಿತ್ರತಂಡವೇ ಭಾಗಿಯಾಗಿತ್ತು. ಇನ್ನು ಆದಿಲಕ್ಷ್ಮಿ ಪುರಾಣ ಚಿತ್ರವನ್ನು ಸ್ಟಾರ್ ಡೈರೆಕ್ಟರ್ ಮಣಿರತ್ನಂ ಅವರ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿರುವ ಪ್ರಿಯಾ ಅವರು ಮೊದಲ ಬಾರಿಗೆ ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ.

ಇನ್ನು ಚಿತ್ರದಲ್ಲಿ ರಾಧಿಕಾ ಪಂಡಿತ್ ನಾಯಕಿಯಾದರೆ, ರಂಗಿತರಂಗ ಖ್ಯಾತಿಯ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ಇನ್ನು ಆದಿಲಕ್ಷ್ಮಿ ಪುರಾಣ ಪ್ರಸ್ತುತ ಸಮಾಜದಲ್ಲಿ ಯುವಜನತೆಯ ಮೇಲೆ ಪ್ರಭಾವ ಬೀರಿರುವ ಮಾದಕ ವಸ್ತುಗಳ ಸಮಸ್ಯೆ ಆಧಾರಿತ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಸಮಾಜಕ್ಕೆ ಒಂದು ಸಂದೇಶ ಕೊಡಲು ನಿರ್ದೇಶಕಿ ಪ್ರಿಯಾ ಹೊರಟಿದ್ದಾರೆ.

ಈ ಚಿತ್ರದ ಹಾಡುಗಳು ಈಗಾಗಲೇ ಜನರಿಂದ ಮೆಚ್ಚುಗೆ ಪಡೆದಿದ್ದು, ಎಲ್ಲರ ಬಾಯಲ್ಲೂ ಗುನುಗುತ್ತಿವೆ. ರಂಗಿತರಂಗ ಚಿತ್ರದ ನಂತರ ಅನೂಪ್ ಭಂಡಾರಿ ಈ ಚಿತ್ರಕ್ಕೆ ಸಂಗೀತ ನೀಡುವುದರ ಜೊತೆಗೆ ಸಾಹಿತ್ಯವನ್ನು ಬರೆದಿದ್ದು, ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದೇ ತಿಂಗಳ 19ಕ್ಕೆ ಆದಿಲಕ್ಷ್ಮಿ ಪುರಾಣ ಥಿಯೇಟರ್​ಗೆ ಲಗ್ಗೆ ಇಡಲಿದ್ದು, ಬಾಕ್ಸಾಫೀಸ್​​ನಲ್ಲಿ ಕಮಾಲ್ ಮಾಡುತ್ತಾ ಕಾದು ನೋಡಬೇಕಿದೆ.

ಸ್ಯಾಂಡಲ್​ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮದುವೆಯಾದ ನಂತರ ಅಭಿನಯಿಸಿರುವ ಮೊದಲನೇ ಚಿತ್ರ ಆದಿಲಕ್ಷ್ಮಿ ಪುರಾಣ ಇದೇ ತಿಂಗಳ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಪತ್ನಿ ನಟಿಸುರುವ "ಆದಿಲಕ್ಷ್ಮಿ ಪುರಾಣ" ಚಿತ್ರದ ಟ್ರೇಲರ್​ ಲಾಂಚ್​ ಮಾಡಿದ ಯಶ್

ಇನ್ನು ಚಿತ್ರದ ಪ್ರಮೋಷನ್​​ಅಲ್ಲಿ ಚಿತ್ರತಂಡ ಸಖತ್ ಬ್ಯುಸಿಯಾಗಿದ್ದು, ಈ ಗ್ಯಾಪ್​​ನಲ್ಲಿ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ನಗರದ ಕಲಾವಿದರ ಸಂಘದಲ್ಲಿ ನಡೆದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ರಾಧಿಕಾ ಪಂಡಿತ್​ರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಆಗಮಿಸಿ ಚಿತ್ರದ ಟ್ರೇಲರನ್ನು ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು. ಅಲ್ಲದೇ, ಆದಿಲಕ್ಷ್ಮಿ ಪುರಾಣ ಚಿತ್ರಕಥೆ ನನಗೆ ತುಂಬಾ ಇಷ್ಟ ಆಗಿತ್ತು. ಕಥೆ ಕೇಳಿದ ರಾಕ್​​ಲೈನ್ ವೆಂಕಟೇಶ್ ಅವರು ತುಂಬಾ ಇಷ್ಟಪಟ್ಟು ಆದಿಲಕ್ಷ್ಮಿ ಪುರಾಣ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲೂ ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಅಭಿನಯಿಸಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದರು ಯಶ್​.

ಇನ್ನು ಇದೇ ವೇಳೆ ಮಾತನಾಡಿದ ರಾಧಿಕಾ ಪಂಡಿತ್​, ಆದಿಲಕ್ಷ್ಮಿ ಪುರಾಣ ಚಿತ್ರದ ಟ್ರೇಲರ್​​ ನನಗೆ ತುಂಬಾ ಸ್ಪೆಷಲ್. ಯಾಕಂದ್ರೆ, ನನ್ನ ಹಸ್ಬೆಂಡ್ ಚಿತ್ರದ ಟ್ರೇಲರ್​​ ಬಿಡುಗಡೆ ಮಾಡಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದರು. ಇನ್ನು ಚಿತ್ರದಲ್ಲಿ ನನ್ನ ಪಾತ್ರ ತುಂಬಾ ವಿಶೇಷವಾಗಿದೆ. ಇದೊಂದು ಬೇರೆ ತರಹದ ಸಿನಿಮಾವೆನಿಸಲಿದೆ ಎಂದರು.

ಟ್ರೇಲರ್​​ ಬಿಡುಗಡೆ ಕಾರ್ಯಕ್ರಮಕ್ಕೆ ಹಿರಿಯ ನಟ ದೊಡ್ಡಣ್ಣ, ಸುಚೇಂದ್ರ ಪ್ರಸಾದ್, ತಾರಾ ಸೇರಿದಂತೆ ಇಡೀ ಚಿತ್ರತಂಡವೇ ಭಾಗಿಯಾಗಿತ್ತು. ಇನ್ನು ಆದಿಲಕ್ಷ್ಮಿ ಪುರಾಣ ಚಿತ್ರವನ್ನು ಸ್ಟಾರ್ ಡೈರೆಕ್ಟರ್ ಮಣಿರತ್ನಂ ಅವರ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿರುವ ಪ್ರಿಯಾ ಅವರು ಮೊದಲ ಬಾರಿಗೆ ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ.

ಇನ್ನು ಚಿತ್ರದಲ್ಲಿ ರಾಧಿಕಾ ಪಂಡಿತ್ ನಾಯಕಿಯಾದರೆ, ರಂಗಿತರಂಗ ಖ್ಯಾತಿಯ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ಇನ್ನು ಆದಿಲಕ್ಷ್ಮಿ ಪುರಾಣ ಪ್ರಸ್ತುತ ಸಮಾಜದಲ್ಲಿ ಯುವಜನತೆಯ ಮೇಲೆ ಪ್ರಭಾವ ಬೀರಿರುವ ಮಾದಕ ವಸ್ತುಗಳ ಸಮಸ್ಯೆ ಆಧಾರಿತ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಸಮಾಜಕ್ಕೆ ಒಂದು ಸಂದೇಶ ಕೊಡಲು ನಿರ್ದೇಶಕಿ ಪ್ರಿಯಾ ಹೊರಟಿದ್ದಾರೆ.

ಈ ಚಿತ್ರದ ಹಾಡುಗಳು ಈಗಾಗಲೇ ಜನರಿಂದ ಮೆಚ್ಚುಗೆ ಪಡೆದಿದ್ದು, ಎಲ್ಲರ ಬಾಯಲ್ಲೂ ಗುನುಗುತ್ತಿವೆ. ರಂಗಿತರಂಗ ಚಿತ್ರದ ನಂತರ ಅನೂಪ್ ಭಂಡಾರಿ ಈ ಚಿತ್ರಕ್ಕೆ ಸಂಗೀತ ನೀಡುವುದರ ಜೊತೆಗೆ ಸಾಹಿತ್ಯವನ್ನು ಬರೆದಿದ್ದು, ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದೇ ತಿಂಗಳ 19ಕ್ಕೆ ಆದಿಲಕ್ಷ್ಮಿ ಪುರಾಣ ಥಿಯೇಟರ್​ಗೆ ಲಗ್ಗೆ ಇಡಲಿದ್ದು, ಬಾಕ್ಸಾಫೀಸ್​​ನಲ್ಲಿ ಕಮಾಲ್ ಮಾಡುತ್ತಾ ಕಾದು ನೋಡಬೇಕಿದೆ.

Intro:ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮದುವೆಯಾದ ನಂತರ ಅಭಿನಯಿಸಿರುವ ಆದಿಲಕ್ಷ್ಮಿ ಪುರಾಣ ಚಿತ್ರ ಇದೇ ತಿಂಗಳ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇನ್ನು ಚಿತ್ರದ ಪ್ರಮೋಷನ್ ಅಲ್ಲಿ ಚಿತ್ರತಂಡ ಸಖತ್ ಬ್ಯುಸಿಯಾಗಿದ್ದು. ಈ ಗ್ಯಾಪ್ ನಲ್ಲಿ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಟ್ರೈಲರ್ ನ ವಿಶೇಷ ಅಂದರೆ ರಾಕಿಂಗ್ ಸ್ಟಾರ್ ಯಶ್ ಲಾಂಚ್ ಮಾಡಿದ್ದು.


Body:ಎಸ್ ನಗರದ ಕಲಾವಿದರ ಸಂಘದಲ್ಲಿ ನಡೆದ ಟ್ರೈಲರ್ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಸಮೇತ ಆಗಮಿಸಿ ಚಿತ್ರದ ಟ್ರೇಲರನ್ನು ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು. ಅಲ್ಲದೆ ಆದಿಲಕ್ಷ್ಮಿ ಪುರಾಣ ಚಿತ್ರದ ಕಥೆ ನನಗೆ ತುಂಬಾ ಇಷ್ಟ ಆಗಿತ್ತು. ಏನು ಈ ಕಥೆ ಕೇಳಿ ನಾನು ಪ್ರಾಕ್ಟೀಸ್ ಅವರನ್ನು ಕಥೆ ಹೇಳುವಂತೆ ಹೇಳಿದ್ದೆ. ಕಥೆ ಕೇಳಿದ ರಾಕ್ ಲೈನ್ ವೆಂಕಟೇಶ್ ಅವರು ತುಂಬಾ ಇಷ್ಟಪಟ್ಟು ಆದಿಲಕ್ಷ್ಮಿ ಪುರಾಣ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಾಧಿಕಾ ಪಂಡಿತ್ ಅಭಿನಯಿಸಿರುವುದು ನನಗೆ ತುಂಬ ಖುಷಿಯಾಗಿದೆ ಅಲ್ಲದೆ ಚಿತ್ರದ ಟ್ರೈಲರ್ ಮಾಡಿರುವುದು ದೊಡ್ಡ ವಿಷಯವೇನಲ್ಲ. ಆದರೆ ನಾನಿಲ್ಲಿ ಬಂದು ಟ್ರೈಲರ್ ಲಾಂಚ್ ಮಾಡಿದ್ದಿದ್ದರೆ ಮನೆಯಲ್ಲಿ ನನ್ನ ಹೆಂಡತಿ ಸುಮ್ಮನೆ ಬಿಡುತ್ತಿರಲಿಲ್ಲ ಎಂದು ನಗೆ ಚಟಾಕಿ ಹಾರಿಸುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಲ್ಲದೆ ಆದಿಲಕ್ಷ್ಮಿ ಪುರಾಣ ಚಿತ್ರದ ಟ್ರೈಲರ್ ನನಗೆ ತುಂಬಾ ಸ್ಪೆಷಲ್ ಆಗಿದೆ ಅಂದ್ರೆ ಹಸ್ಬೆಂಡ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿರುವುದು ನನಗೆ ತುಂಬಾ ಸ್ಪೆಷಲ್ ಆಗಿದೆ ಎಂದು ರಾಧಿಕಾ ಪಂಡಿತ್ ಟ್ರೈಲರ್ ಲಾಂಚ್ ಮಾಡಿದ ರಾಕಿಂಗ್ ಸ್ಟಾರ್ ಗೆ ಹೇಳಿದರು. ಇನ್ನು ಚಿತ್ರದಲ್ಲಿ ನನ್ನ ಪಾತ್ರ ತುಂಬಾ ವಿಶೇಷವಾಗಿದೆ ಇದೊಂದು ಬೇರೆ ತರಹದ ಸಿನಿಮಾ ವಾಗಲಿದೆ ಎಂಬ ಭರವಸೆಯೊಂದಿಗೆ ನಾನು ಈ ಸಿನಿಮಾದಲ್ಲಿ ಆಕ್ಟ್ ಮಾಡಿದೆ ಅಲ್ಲದೆ ಚಿತ್ರದ ಶೂಟಿಂಗ್ ಅನುಭವ ತುಂಬಾ ವಿಶೇಷವಾಗಿತ್ತು ಎಂದು ನಾಯಕ ನಿರೂಪ್ ಭಂಡಾರಿ ತಿಳಿಸಿದರು.


Conclusion:ಇನ್ನು ಟೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ನಟ ದೊಡ್ಡಣ್ಣ ಸುಚೇಂದ್ರ ಪ್ರಸಾದ್ ತಾರಾ ಸೇರಿದಂತೆ ಇಡೀ ಚಿತ್ರತಂಡವೇ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಇನ್ನು ಆದಿಲಕ್ಷ್ಮಿ ಪುರಾಣ ಚಿತ್ರವನ್ನು ಸ್ಟಾರ್ ಡೈರೆಕ್ಟರ್ ಮಣಿರತ್ನಂ ಅವರ ಬಳಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿರುವ ಪ್ರಿಯಾ ಅವರು ಮೊದಲ ಬಾರಿಗೆ ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ರಾಧಿಕಾ ಪಂಡಿತ್ ನಾಯಕಿಯಾದರೆ ರಂಗಿತರಂಗ ಖ್ಯಾತಿಯ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ಇನ್ನು ಆದಿಲಕ್ಷ್ಮಿ ಪುರಾಣ ಪ್ರಸ್ತುತ ಸಮಾಜದಲ್ಲಿ ಯುವಜನತೆಯ ಮೇಲೆ ಪ್ರಭಾವ ಬೀರಿರುವ ಮಾದಕ ವಸ್ತುಗಳ ಸಮಸ್ಯೆ ಆಧಾರಿತ ಸಿನಿಮಾವಾಗಿದ್ದು. ಈ ಚಿತ್ರದ ಮೂಲಕ ಸಮಾಜಕ್ಕೆ ಒಂದು ಸಂದೇಶ ಕೊಡಲು ನಿರ್ದೇಶಕಿ ಪ್ರಿಯಾ ಹೊರಟಿದ್ದಾರೆ. ಇನ್ನು ಈ ಚಿತ್ರದ ಹಾಡುಗಳು ಈಗಾಗಲೇ ಜನರಿಂದ ಮೆಚ್ಚುಗೆ ಪಡೆದಿದ್ದು ಎಲ್ಲರ ಬಾಯಲ್ಲೂ ಗುನುಗುತ್ತಿವೆ. ರಂಗಿತರಂಗ ಚಿತ್ರದ ನಂತರ ಅನೂಪ್ ಭಂಡಾರಿ ಈ ಚಿತ್ರಕ್ಕೆ ಸಂಗೀತ ನೀಡುವುದರ ಜೊತೆಗೆ ಸಾಹಿತ್ಯವನ್ನು ಬರೆದಿದ್ದು ಇವರ ಟ್ಯೂನ್ ಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದೇ ತಿಂಗಳ ೧೯ಕ್ಕೆ ಆದಿಲಕ್ಷ್ಮಿ ಪುರಾಣ ಥಿಯೇಟರ್ಗೆ ಲಗ್ಗೆ ಇಡಲಿದೆ ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡುತ್ತಾ ಕಾದು ನೋಡಬೇಕಿದೆ.

ಸತೀಶ ಎಂಬಿ
Last Updated : Jul 13, 2019, 12:12 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.