ETV Bharat / state

ವೀಕೆಂಡ್​ ಕರ್ಫ್ಯೂ ನಡುವೆಯೂ ಮದುವೆಗೆ ಹೋದ ನಟ ಮಂಡ್ಯ ರಮೇಶ್: ಪಿಎಸ್​ಐ ಹೇಳಿದ್ದೇನು?

ವೀಕೆಂಡ್​ ಕರ್ಫ್ಯೂ ಇದ್ದರೂ ಮದುವೆಗೆ ತೆರಳಿ ವಾಪಸ್ ಆಗ್ತಿದ್ದ ನಟ ಮಂಡ್ಯ ರಮೇಶ್​ಗೆ ಪಿರಿಯಾಪಟ್ಟಣ ಪೊಲೀಸ್​ ಕಾರು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಮಂಡ್ಯ ರಮೇಶ್​ ಮದುವೆ ಕಾರ್ಡ್​ ತೋರಿಸಿದ್ದು, ಪಿಎಸ್​ಐ ಕಾರಿನಲ್ಲಿ ಹೋಗುವುದಕ್ಕೆ ಅನುಮತಿ ಪಡೆಯಬೇಕು ಎಂದು ಹೇಳಿ ಕಳಿಸಿದ್ದಾರೆ.

author img

By

Published : Apr 24, 2021, 8:57 PM IST

Updated : Apr 24, 2021, 10:36 PM IST

ನಟ ಮಂಡ್ಯ ರಮೇಶ್
mandya ramesh

ಮೈಸೂರು: ವಾರಂತ್ಯ ಕರ್ಫ್ಯೂ ಇದ್ದರೂ ಅನುಮತಿ ಇಲ್ಲದೆ ಮದುವೆಗೆ ಹೋಗಿ ಬರುತ್ತಿದ್ದ ನಟ ಮಂಡ್ಯ ರಮೇಶ್​​ಗೆ ಪಿಎಸ್​ಐ ಬುದ್ಧಿಮಾತು ಹೇಳಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.

ನಟ ಮಂಡ್ಯ ರಮೇಶ್

ನಟ ಮಂಡ್ಯ ರಮೇಶ್ ಮದುವೆಗೆ ಹೋಗಿ ಬರುತ್ತಿರುವುದಾಗಿ ಹೇಳಿದಾಗ, ಮದುವೆಯಾಗುವವರು, ಕಲ್ಯಾಣಮಂಟಪದಲ್ಲೇ ಇರುವವರಿಗೆ ಅನುಮತಿ ಕೊಟ್ಟಿದ್ದಾರೆ. ನೀವು ಕಾರಿನಲ್ಲಿ ಹೋಗುವುದಕ್ಕೆ ಅನುಮತಿ ಪಡೆಯಬೇಕು. ಅದಕ್ಕೆ ಪಾಸ್ ಕೊಡುತ್ತಾರೆ, ತೆಗೆದುಕೊಳ್ಳಬೇಕು ಎಂದು ಬೈಲಕುಪ್ಪೆ ಠಾಣೆ ಪಿಎಸ್​ಐ ಪುಟ್ಟರಾಜು ಹೇಳಿದ್ದಾರೆ. ಅದಕ್ಕೆ ಮಂಡ್ಯ ರಮೇಶ್ ಮದುವೆ ಕಾರ್ಡ್​ ತೋರಿಸಲು ಮುಂದಾದಾಗ, ಆಯ್ತು ಹೋಗಿ ಅಂತಾ ಪಿಎಸ್​ಐ ಕಳುಹಿಸಿದ್ದಾರೆ.

ಮೈಸೂರು: ವಾರಂತ್ಯ ಕರ್ಫ್ಯೂ ಇದ್ದರೂ ಅನುಮತಿ ಇಲ್ಲದೆ ಮದುವೆಗೆ ಹೋಗಿ ಬರುತ್ತಿದ್ದ ನಟ ಮಂಡ್ಯ ರಮೇಶ್​​ಗೆ ಪಿಎಸ್​ಐ ಬುದ್ಧಿಮಾತು ಹೇಳಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.

ನಟ ಮಂಡ್ಯ ರಮೇಶ್

ನಟ ಮಂಡ್ಯ ರಮೇಶ್ ಮದುವೆಗೆ ಹೋಗಿ ಬರುತ್ತಿರುವುದಾಗಿ ಹೇಳಿದಾಗ, ಮದುವೆಯಾಗುವವರು, ಕಲ್ಯಾಣಮಂಟಪದಲ್ಲೇ ಇರುವವರಿಗೆ ಅನುಮತಿ ಕೊಟ್ಟಿದ್ದಾರೆ. ನೀವು ಕಾರಿನಲ್ಲಿ ಹೋಗುವುದಕ್ಕೆ ಅನುಮತಿ ಪಡೆಯಬೇಕು. ಅದಕ್ಕೆ ಪಾಸ್ ಕೊಡುತ್ತಾರೆ, ತೆಗೆದುಕೊಳ್ಳಬೇಕು ಎಂದು ಬೈಲಕುಪ್ಪೆ ಠಾಣೆ ಪಿಎಸ್​ಐ ಪುಟ್ಟರಾಜು ಹೇಳಿದ್ದಾರೆ. ಅದಕ್ಕೆ ಮಂಡ್ಯ ರಮೇಶ್ ಮದುವೆ ಕಾರ್ಡ್​ ತೋರಿಸಲು ಮುಂದಾದಾಗ, ಆಯ್ತು ಹೋಗಿ ಅಂತಾ ಪಿಎಸ್​ಐ ಕಳುಹಿಸಿದ್ದಾರೆ.

Last Updated : Apr 24, 2021, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.