ETV Bharat / state

ತೀವ್ರ ಚಟುವಟಿಕೆ ಕೇಂದ್ರವಾಗಿದ್ದ ಕುಮಾರಕೃಪಾ ಅತಿಥಿ ಗೃಹ ಸ್ಥಬ್ಧ

ರಾಜ್ಯ ಮೈತ್ರಿ ಸರ್ಕಾರಕ್ಕೆ ಎದುರಾದ ಆತಂಕ ನಿವಾರಣೆಗೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸಭೆ ನಡೆಸಲು ಕುಮಾರಕೃಪಾ ಅತಿಥಿ ಗೃಹವನ್ನು ಬಳಸಿಕೊಂಡಿದ್ದರು. ಆದರೆ ಕಳೆದ 10 -12 ದಿನಗಳಿಂದ ತೀವ್ರ ಚಟುವಟಿಕೆ ಕೇಂದ್ರವಾಗಿದ್ದ ಕುಮಾರಕೃಪಾ ಅತಿಥಿ ಗೃಹ ಇಂದು ಬಿಕೋ ಎನ್ನುತ್ತಿದೆ.

author img

By

Published : Jul 17, 2019, 6:33 PM IST

ಕುಮಾರಕೃಪಾ ಅತಿಥಿ ಗೃಹ

ಬೆಂಗಳೂರು: ಕಳೆದ 10 -12 ದಿನಗಳಿಂದ ತೀವ್ರ ಚಟುವಟಿಕೆ ಕೇಂದ್ರವಾಗಿದ್ದ ಕುಮಾರಕೃಪಾ ಅತಿಥಿ ಗೃಹ ಇಂದು ಬಿಕೋ ಎನ್ನುತ್ತಿದೆ.

ಕುಮಾರಕೃಪಾ ಅತಿಥಿ ಗೃಹ ಸ್ಥಬ್ಧ

ರಾಜ್ಯ ಮೈತ್ರಿ ಸರ್ಕಾರಕ್ಕೆ ಎದುರಾದ ಆತಂಕ ನಿವಾರಣೆಗೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸಭೆ ನಡೆಸಲು ಕುಮಾರಕೃಪಾ ಅತಿಥಿ ಗೃಹವನ್ನು ಬಳಸಿಕೊಂಡಿದ್ದರು. ಆದರೆ ನಡೆಸಿದ ಪ್ರಯತ್ನಗಳಿಗೆ ಸುಪ್ರೀಂ ಕೋರ್ಟ್ ತೀರ್ಪು ತಣ್ಣೀರೆರಚಿದೆ. ಈ ಹಿನ್ನೆಲೆ ಮುಂದಿನ ತೀರ್ಮಾನ ಕೈಗೊಳ್ಳುವ ಸಲುವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬೇರೆಡೆಗಳಲ್ಲಿ ಸಭೆ ನಡೆಸಿದ್ದು, ಕುಮಾರಕೃಪಾ ಅತಿಥಿ ಗೃಹದತ್ತ ಯಾರೂ ಸುಳಿದಿಲ್ಲ.

ಮುಂದಿನ ಕಾರ್ಯತಂತ್ರ ರೂಪಿಸುವ ಸಲುವಾಗಿ ನಾಯಕರೆಲ್ಲ ಇಲ್ಲಿಂದ ತೆರಳಿದ್ದು, ನಾಯಕರೆಲ್ಲ ಯಾವಾಗ ಹಿಂದಿರುಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಕಾರಣದಿಂದ ಇತ್ತ ಅವರನ್ನು ಸಂಪರ್ಕಿಸುವ ಸಲುವಾಗಿಯೂ ಯಾರೂ ಬರುತ್ತಿಲ್ಲ. ಬೆಳಗ್ಗೆ ಇಲ್ಲಿಂದ ತೆರಳಿದ್ದ ಕೆ.ಸಿ.ವೇಣುಗೋಪಾಲ್ ಹಾಗೂ ದಿನೇಶ್ ಗುಂಡೂರಾವ್ ಕೊನೆಗೂ 2.30ಕ್ಕೆ ಆಗಮಿಸಿ ಮಾಧ್ಯಮಗಳಿಗೆ ಮಾತನಾಡಿದ್ದು, ಇದಾದ ಬಳಿಕ ಬೇರೆ ಯಾವೊಬ್ಬ ನಾಯಕರು ಸುಳಿದಿಲ್ಲ. ಸಂಜೆಯ ಹೊತ್ತಿಗೆ ಎಲ್ಲ ನಾಯಕರು ಆಗಮಿಸಿ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬೆಂಗಳೂರು: ಕಳೆದ 10 -12 ದಿನಗಳಿಂದ ತೀವ್ರ ಚಟುವಟಿಕೆ ಕೇಂದ್ರವಾಗಿದ್ದ ಕುಮಾರಕೃಪಾ ಅತಿಥಿ ಗೃಹ ಇಂದು ಬಿಕೋ ಎನ್ನುತ್ತಿದೆ.

ಕುಮಾರಕೃಪಾ ಅತಿಥಿ ಗೃಹ ಸ್ಥಬ್ಧ

ರಾಜ್ಯ ಮೈತ್ರಿ ಸರ್ಕಾರಕ್ಕೆ ಎದುರಾದ ಆತಂಕ ನಿವಾರಣೆಗೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸಭೆ ನಡೆಸಲು ಕುಮಾರಕೃಪಾ ಅತಿಥಿ ಗೃಹವನ್ನು ಬಳಸಿಕೊಂಡಿದ್ದರು. ಆದರೆ ನಡೆಸಿದ ಪ್ರಯತ್ನಗಳಿಗೆ ಸುಪ್ರೀಂ ಕೋರ್ಟ್ ತೀರ್ಪು ತಣ್ಣೀರೆರಚಿದೆ. ಈ ಹಿನ್ನೆಲೆ ಮುಂದಿನ ತೀರ್ಮಾನ ಕೈಗೊಳ್ಳುವ ಸಲುವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬೇರೆಡೆಗಳಲ್ಲಿ ಸಭೆ ನಡೆಸಿದ್ದು, ಕುಮಾರಕೃಪಾ ಅತಿಥಿ ಗೃಹದತ್ತ ಯಾರೂ ಸುಳಿದಿಲ್ಲ.

ಮುಂದಿನ ಕಾರ್ಯತಂತ್ರ ರೂಪಿಸುವ ಸಲುವಾಗಿ ನಾಯಕರೆಲ್ಲ ಇಲ್ಲಿಂದ ತೆರಳಿದ್ದು, ನಾಯಕರೆಲ್ಲ ಯಾವಾಗ ಹಿಂದಿರುಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಕಾರಣದಿಂದ ಇತ್ತ ಅವರನ್ನು ಸಂಪರ್ಕಿಸುವ ಸಲುವಾಗಿಯೂ ಯಾರೂ ಬರುತ್ತಿಲ್ಲ. ಬೆಳಗ್ಗೆ ಇಲ್ಲಿಂದ ತೆರಳಿದ್ದ ಕೆ.ಸಿ.ವೇಣುಗೋಪಾಲ್ ಹಾಗೂ ದಿನೇಶ್ ಗುಂಡೂರಾವ್ ಕೊನೆಗೂ 2.30ಕ್ಕೆ ಆಗಮಿಸಿ ಮಾಧ್ಯಮಗಳಿಗೆ ಮಾತನಾಡಿದ್ದು, ಇದಾದ ಬಳಿಕ ಬೇರೆ ಯಾವೊಬ್ಬ ನಾಯಕರು ಸುಳಿದಿಲ್ಲ. ಸಂಜೆಯ ಹೊತ್ತಿಗೆ ಎಲ್ಲ ನಾಯಕರು ಆಗಮಿಸಿ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Intro:news


Body:ತೀವ್ರ ಚಟುವಟಿಕೆ ಕೇಂದ್ರವಾಗಿದ್ದ ಕುಮಾರಕೃಪ ಸ್ಥಬ್ಧ

ಬೆಂಗಳೂರು: ಕಳೆದ 10 -12 ದಿನಗಳಿಂದ ತೀವ್ರ ಚಟುವಟಿಕೆ ಕೇಂದ್ರವಾಗಿದ್ದ ಕುಮಾರಕೃಪಾ ಅತಿಥಿ ಗೃಹ ಇಂದು ಬೆಳಗ್ಗಿನಿಂದಲೇ ಬಿಕೋ ಎನ್ನುತ್ತಿದೆ.
ರಾಜ್ಯ ಮೈತ್ರಿ ಸರ್ಕಾರಕ್ಕೆ ಎದುರಾದ ಆತಂಕ ನಿವಾರಣೆಗೆ ರಾಜ್ಯ ಹಾಗೂ ಜೆಡಿಎಸ್ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸಭೆ ನಡೆಸಲು ಪ್ರಮುಖ ತಾಣವಾಗಿ ಕುಮಾರಕೃಪಾ ಅತಿಥಿ ಗೃಹವನ್ನು ಬಳಸಿಕೊಂಡಿದ್ದರು. ಆದರೆ ನಡೆಸಿದ ಪ್ರಯತ್ನಗಳಿಗೆ ಈಗಿನ ಸುಪ್ರೀಂ ಕೋರ್ಟ್ ತೀರ್ಪು ತಣ್ಣೀರೆರಚಿದೆ.
ಈ ಹಿನ್ನೆಲೆ ಮುಂದಿನ ತೀರ್ಮಾನ ಕೈಗೊಳ್ಳುವ ಸಲುವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬೇರೆಡೆಗಳಲ್ಲಿ ಸಭೆ ನಡೆಸಿದ್ದು ಕುಮಾರಕೃಪಾ ಅತಿಥಿ ಗೃಹದತ್ತ ಯಾರೂ ಆಗಮಿಸುತ್ತಿಲ್ಲ. ಇನ್ನು ಕೆಲವೇ ಸಮಯದಲ್ಲಿ ಕೆಲ ನಾಯಕರು ಇತ್ತ ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಇದಕ್ಕೆ ಯಾವುದೇ ಕುರುಹು ಕೂಡ ಇಲ್ಲಿ ಕಂಡು ಬರುತ್ತಿಲ್ಲ. ಮುಂದಿನ ಕಾರ್ಯತಂತ್ರ ರೂಪಿಸುವ ಸಲುವಾಗಿ ನಾಯಕರೆಲ್ಲ ಇಲ್ಲಿಂದ ತೆರಳಿದ್ದಾರೆ. ನಾಯಕರೆಲ್ಲ ಯಾವಾಗ ಹಿಂದಿರುಗುತ್ತಾರೆ ಎಂಬ ಸ್ಪಷ್ಟತೆ ಇಲ್ಲ ಈ ಕಾರಣದಿಂದ ಇತ್ತ ಅವರನ್ನು ಸಂಪರ್ಕಿಸುವ ಸಲುವಾಗಿಯೂ ಯಾರೂ ಬರುತ್ತಿಲ್ಲ.
ಬೆಳಗ್ಗೆ ಹತ್ತು ಮೂವತ್ತಕ್ಕೆ ತೆರಳಿದ್ದ ಕೆಸಿ ವೇಣುಗೋಪಾಲ್ ಹಾಗೂ ದಿನೇಶ್ ಗುಂಡೂರಾವ್ ಕೊನೆಗೂ 2.30ಕ್ಕೆ ಆಗಮಿಸಿ ಮಾಧ್ಯಮಗಳಿಗೆ ಮಾತನಾಡಿದ್ದು ಇದಾದ ಬಳಿಕ ಬೇರೆ ಯಾವೊಬ್ಬ ನಾಯಕರು ಹೆಚ್ಚಾಗಿ ಸುಳಿದಿಲ್ಲ ಸಂಜೆಯ ಹೊತ್ತಿಗೆ ಎಲ್ಲ ನಾಯಕರು ಆಗಮಿಸಿ ಸಭೆ ನಡೆಸುವ ಸಾಧ್ಯತೆ ಇದೆ. ಆಗ ಒಂದಿಷ್ಟು ಜನ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.


Conclusion:news

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.