ETV Bharat / state

ವಂಚನೆ ಆರೋಪ ತಳ್ಳಿ ಹಾಕಿದ ಶಾಸಕ ಉದಯ್ ಗರುಡಾಚಾರ್ - Accused of fraud Refused by Chikpet MLA Uaday Garudachar

ಉದಯ್ ಗರುಡಾಚಾರ್ ಜೊತೆ ಸೇರಿಕೊಂಡು ಮೆವರಿಕ್ ಹೋಲ್ಡಿಂಗ್ ಆ್ಯಂಡ್ ಇನ್ವೆಸ್ಟ್ ಮೆಂಟ್ ಪ್ರೈ.ಲಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಈ ವೇಳೆ ಲಾಭದಲ್ಲಿ ಇಂತಿಷ್ಟು ಭಾಗ ಕೊಡುವುದಾಗಿ ಶಾಸಕ ಗರುಡಾಚಾರ್​ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದ ಪ್ರಕಾರ ಹಣ ಕೇಳಿದಾಗ ವರಸೆ ತೆಗೆದ ಶಾಸಕ, ಮನೆಗೆ ಕರೆದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಣ ಹೂಡಿಕೆ ಮಾಡಿದ ಪ್ರಶಾಂತ್ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಾಸಕ ಉದಯ್ ಗರುಡಾಚಾರ್
author img

By

Published : Oct 27, 2019, 6:20 PM IST

ಬೆಂಗಳೂರು: ವ್ಯಾಪಾರದಲ್ಲಿ ವಂಚನೆ ಆರೋಪದಡಿ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ವಿರುದ್ದ ಎಫ್‌ಐಆರ್ ದಾಖಲಾಗಿದೆ.

ಸೋದರ ಸಂಬಂಧಿಯಾಗಿರುವ ಪ್ರಶಾಂತ್ ಎಂಬವರು ಉದಯ್ ಗರುಡಾಚಾರ್ ಜೊತೆ ಸೇರಿಕೊಂಡು ಮೆವರಿಕ್ ಹೋಲ್ಡಿಂಗ್ ಅಂಡ್ ಇನ್ವೆಸ್ಟ್ ಮೆಂಟ್ ಪ್ರೈ.ಲಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಈ ವೇಳೆ ಲಾಭದಲ್ಲಿ ಇಂತಿಷ್ಟು ಭಾಗ ಕೊಡುವುದಾಗಿ ಶಾಸಕ ಗರುಡಾಚಾರ್​ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದ ಪ್ರಕಾರ ಹಣ ಕೇಳಿದಾಗ ವರಸೆ ತೆಗೆದ ಶಾಸಕ, ಮನೆಗೆ ಕರೆದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಣ ಹೂಡಿಕೆ ಮಾಡಿದ ಪ್ರಶಾಂತ್ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಾಸಕ ಉದಯ್ ಗರುಡಾಚಾರ್

ಆರೋಪದ ಬಗ್ಗೆ ಉದಯ್ ಗರುಡಾಚಾರ್ ಪ್ರತಿಕ್ರಿಯಿಸಿದ್ದು, ಬೆಳಗ್ಗೆ ನನಗೆ ವಿಚಾರ ಗೊತ್ತಾಯಿತು. ದೂರುದಾರ‌ ನನ್ನ ತಮ್ಮ ಅಲ್ಲ, ಸೋದರತ್ತೆಯ ಮಗ. 10 ವರ್ಷಗಳಿಂದ ನನಗೂ ಆತನಿಗೂ ಸಂಪರ್ಕವೇ ಇರಲಿಲ್ಲ. ದಿಢೀರನೆ ಪೊಲೀಸರು ಬಂದು, ನೀವು ಆತನ ಬ್ಯುಸಿನೆಸ್ ಪಾರ್ಟನರ್, ನೀವು ಮೋಸ ಮಾಡಿದ್ದೀರಿ ಎಂದು ದೂರು ಬಂದಿದೆ ಎಂದರು. ಈ ಹುಡುಗ ನನಗೆ ಬ್ಲಾಕ್‌ಮೇಲ್ ಮಾಡಿದ್ದಾನೆ. ಈತನ ಹಿನ್ನೆಲೆ ಪರೀಕ್ಷಿಸಬೇಕು, ಆತನಿಗೆ ಕೆಲಸವಿಲ್ಲ. ಹೆಂಡತಿಯ ಸಂಪಾದನೆಯಲ್ಲಿ ಆತ ಬದುಕುತ್ತಿದ್ದಾನೆ. ವ್ಯವಹಾರಕ್ಕೆ ಹೂಡಿಕೆ ಮಾಡುವ ಸಾಮರ್ಥ್ಯವೇ ಇಲ್ಲ. ಹಬ್ಬದ ದಿನ ಶುಭಾಷಯ ಹೇಳೋ ಬದ್ಲು ಈ ವಿಚಾರದ ವಿವರಣೆ ಕೊಡ್ಬೇಕಾಗಿರೋದು ಬೇಸರದ ಸಂಗತಿ. ನಾನು ಪೊಲೀಸರು ಹಾಗೂ ಸಿಸಿಬಿಗೆ ದೂರು ನೀಡಲು ನಿರ್ಧರಿಸಿದ್ದೇನೆ. ನನ್ನ ಜೊತೆ ಹೂಡಿಕೆ ಮಾಡಿದ್ದೀನಿ ಎನ್ನುವ ಬಗ್ಗೆ ಆತ ದಾಖಲೆ ನೀಡಲಿ. ಯಾರಾದ್ರು ಹೆಸರು ಮಾಡಿದ್ರೆ, ಪರಿಶ್ರಮದಿಂದ ಮೇಲೆ ಬಂದರೆ ಹೀಗೆ ಮಾಡೋರು ಇರ್ತಾರೆ. ಈಗ ಕಾನೂನು ಬದ್ಧವಾಗಿ ಆತನ ವಿರುದ್ಧ ನಾನು ದೂರು ನೀಡಲಿದ್ದೇನೆ ಎಂದು ಹೆಳಿದರು.

ಬೆಂಗಳೂರು: ವ್ಯಾಪಾರದಲ್ಲಿ ವಂಚನೆ ಆರೋಪದಡಿ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ವಿರುದ್ದ ಎಫ್‌ಐಆರ್ ದಾಖಲಾಗಿದೆ.

ಸೋದರ ಸಂಬಂಧಿಯಾಗಿರುವ ಪ್ರಶಾಂತ್ ಎಂಬವರು ಉದಯ್ ಗರುಡಾಚಾರ್ ಜೊತೆ ಸೇರಿಕೊಂಡು ಮೆವರಿಕ್ ಹೋಲ್ಡಿಂಗ್ ಅಂಡ್ ಇನ್ವೆಸ್ಟ್ ಮೆಂಟ್ ಪ್ರೈ.ಲಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಈ ವೇಳೆ ಲಾಭದಲ್ಲಿ ಇಂತಿಷ್ಟು ಭಾಗ ಕೊಡುವುದಾಗಿ ಶಾಸಕ ಗರುಡಾಚಾರ್​ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದ ಪ್ರಕಾರ ಹಣ ಕೇಳಿದಾಗ ವರಸೆ ತೆಗೆದ ಶಾಸಕ, ಮನೆಗೆ ಕರೆದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಣ ಹೂಡಿಕೆ ಮಾಡಿದ ಪ್ರಶಾಂತ್ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಾಸಕ ಉದಯ್ ಗರುಡಾಚಾರ್

ಆರೋಪದ ಬಗ್ಗೆ ಉದಯ್ ಗರುಡಾಚಾರ್ ಪ್ರತಿಕ್ರಿಯಿಸಿದ್ದು, ಬೆಳಗ್ಗೆ ನನಗೆ ವಿಚಾರ ಗೊತ್ತಾಯಿತು. ದೂರುದಾರ‌ ನನ್ನ ತಮ್ಮ ಅಲ್ಲ, ಸೋದರತ್ತೆಯ ಮಗ. 10 ವರ್ಷಗಳಿಂದ ನನಗೂ ಆತನಿಗೂ ಸಂಪರ್ಕವೇ ಇರಲಿಲ್ಲ. ದಿಢೀರನೆ ಪೊಲೀಸರು ಬಂದು, ನೀವು ಆತನ ಬ್ಯುಸಿನೆಸ್ ಪಾರ್ಟನರ್, ನೀವು ಮೋಸ ಮಾಡಿದ್ದೀರಿ ಎಂದು ದೂರು ಬಂದಿದೆ ಎಂದರು. ಈ ಹುಡುಗ ನನಗೆ ಬ್ಲಾಕ್‌ಮೇಲ್ ಮಾಡಿದ್ದಾನೆ. ಈತನ ಹಿನ್ನೆಲೆ ಪರೀಕ್ಷಿಸಬೇಕು, ಆತನಿಗೆ ಕೆಲಸವಿಲ್ಲ. ಹೆಂಡತಿಯ ಸಂಪಾದನೆಯಲ್ಲಿ ಆತ ಬದುಕುತ್ತಿದ್ದಾನೆ. ವ್ಯವಹಾರಕ್ಕೆ ಹೂಡಿಕೆ ಮಾಡುವ ಸಾಮರ್ಥ್ಯವೇ ಇಲ್ಲ. ಹಬ್ಬದ ದಿನ ಶುಭಾಷಯ ಹೇಳೋ ಬದ್ಲು ಈ ವಿಚಾರದ ವಿವರಣೆ ಕೊಡ್ಬೇಕಾಗಿರೋದು ಬೇಸರದ ಸಂಗತಿ. ನಾನು ಪೊಲೀಸರು ಹಾಗೂ ಸಿಸಿಬಿಗೆ ದೂರು ನೀಡಲು ನಿರ್ಧರಿಸಿದ್ದೇನೆ. ನನ್ನ ಜೊತೆ ಹೂಡಿಕೆ ಮಾಡಿದ್ದೀನಿ ಎನ್ನುವ ಬಗ್ಗೆ ಆತ ದಾಖಲೆ ನೀಡಲಿ. ಯಾರಾದ್ರು ಹೆಸರು ಮಾಡಿದ್ರೆ, ಪರಿಶ್ರಮದಿಂದ ಮೇಲೆ ಬಂದರೆ ಹೀಗೆ ಮಾಡೋರು ಇರ್ತಾರೆ. ಈಗ ಕಾನೂನು ಬದ್ಧವಾಗಿ ಆತನ ವಿರುದ್ಧ ನಾನು ದೂರು ನೀಡಲಿದ್ದೇನೆ ಎಂದು ಹೆಳಿದರು.

Intro:ವ್ಯಾಪರದಲ್ಲಿ ಕೋಟಿ ಕೋಟಿ ವಂಚನೆ ಮಾಡಿದ್ದಾರೆಂಬ ಆರೋಪ
ಆರೋಪ ತಳ್ಳಿಹಾಕಿದ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್

ವ್ಯಾಪಾರ ಒಪ್ಪಂದ ಮಾಡಿಕೊಂಡು ಶಾಸಕ ಗರುಡಾಚಾರ್ ಮೊಸ ಮಾಡಿದ್ದಾರೆಂಬ ಆರೋಪ ಕೇಳಿಬಂದಿದ್ದು ಸದ್ಯ ಪ್ರಭಾವಿ
ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ವಿರುದ್ದ ಎಫ್ ಐಆರ್ ದಾಖಲಾಗಿದೆ.

ಸೋದರ ಸಂಬಂಧಿಯಾಗಿರುವ ಪ್ರಶಾಂತ್ ಎಂಬುವರು ಉದಯ್ ಗರುಡಾಚಾರ್ ಜೊತೆ ಸೇರಿಕೊಂಡು ಮೆವರಿಕ್ ಹೋಲ್ಡಿಂಗ್ ಅಂಡ್ ಇನ್ವೆಸ್ಟ್ ಮೆಂಟ್ ಪ್ರೈ.ಲಿ ಕಂಪನಿಯಲ್ಲಿ ಹಣ ಜಮೆ ಮಾಡಿ ವ್ಯಾಪರ ವಿಚಾರ ಪ್ರಸ್ತಾಪ ಮಾಡಿಕೊಂಡಿದ್ರಂತೆ. ಈ ವೇಳೆ ಪ್ರಶಾಂತ್ ಕಂಪೆನಿಗೆ ಹಣ ಹೂಡಿಕೆ ಮಾಡಿದ್ದು ಈ ವೇಳೆ ವ್ಯಾಪಾರದಲ್ಲಿ ಇಂತಿಷ್ಟು ಭಾಗ ಕೊಡೋದಾಗಿ ಗರುಡಾಚಾರ್ ಜೊತೆ
ಒಪ್ಪಂದ ಮಾಡಿದ್ರಂತೆ. ಹೀಗಾಗಿ ಒಪ್ಪಂದ ಪ್ರಕಾರ
ಹಣವನ್ನ ಪ್ರಶಾಂತ್ ಕೇಳಿದಾಗ ವರಸೆ ತೆಗೆದ ಶಾಸಕ ಮನೆಗೆ ಕರೆದು
ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಶಾಂತ್ ಸದ್ಯ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಇನ್ನು ಈ ವಿಚಾರಕ್ಕೆ ಉದಯ್ ಗರುಡಾಚಾರ್ ಪ್ರತಿಕ್ರಿಯೆ ನೀಡಿ
ಬೆಳಗ್ಗೆ ನಂಗೆ ವಿಚಾರ ಗೊತ್ತಾಯ್ತು. ಆದರೆ ದೂರುದಾರ‌ ನನ್ನ ತಮ್ಮ ಅಲ್ಲ, ಸೋದರತ್ತೆಯ ಮಗ ಹಾಗೆ 10 ವರ್ಷಗಳಿಂದ ನನಗೂ ಆತನಿಗೂ ಸಂಪರ್ಕವೇ ಇರಲಿಲ್ಲ.

25 ವರ್ಷಗಳ ಹಿಂದೆ ನನಗೆ ಆತ ಲಕ್ಷ್ಮಿ ಲಾಕೆಟ್ ಕೊಟ್ಟಿದ್ದಾನಂತೆ ಅದು ನೆನಪಿದ್ಯಾ, ಅದ್ರಿಂದಲೇ ನಿನಗೆ ಇಷ್ಟು ಲಕ್ಷ್ಮಿ ಒಲಿದಿದ್ದು, ಅದನ್ನು ಮರಳಿಸು ಎಂದು ಕೇಳಿದ್ದ ನನಗೆ ಇದ್ಯಾವೂ ನೆನಪೇ ಇಲ್ಲ‌ ಪದೇ ಪದೇ ಇದೇ ವಿಚಾರ ತೆಗೆದಾಗ ಮನೆಗೆ ಬಾ, ನೀನೇ ಹುಡುಕು ಎಂದೆ‌ ಆತ ಬರಲಿಲ್ಲ‌ನಾನು ಆತನ ಅಕ್ಕ ಹೇಮಾಗೆ ಕರೆ ಮಾಡಿ ಈತನ ವಿಚಾರ ತಿಳಿದುಕೊಂಡೆ ಆಗ ಆತ ಗಾಂಜಾ ಸೇದ್ತಾನೆ ಅಂತ ಆಕೆ ಹೇಳಿದ್ರು .

ಆದರೆ ಧಿಡೀರನೆ ಪೋಲೀಸರು ಬಂದು ನೀವು ಆತನ ಬ್ಯುಸಿನೆಸ್ ಪಾರ್ಟನರ್, ನೀವು ಮೋಸ ಮಾಡಿದ್ದೀರಿ ಎಂದು ದೂರು ಬಂದಿದೆ ಎಂದರು.ಈ ಹುಡುಗ ನನಗೆ ಬ್ಲಾಕ್ ಮೇಲ್ ಮಾಡಿದ್ದಾನೆ
ಈತನ ಹಿನ್ನೆಲೆ ಪರೀಕ್ಷಿಸಬೇಕು, ಆತನಿಗೆ ಕೆಲಸವಿಲ್ಲ. ಹೆಂಡತಿಯ ಸಂಪಾದನೆಯಲ್ಲಿ ಆತ ಬದುಕುತ್ತಿದ್ದಾನೆ ವ್ಯವಹಾರಕ್ಕೆ ಹೂಡಿಕೆ ಮಾಡುವ ಸಾಮರ್ಥ್ಯವೇ ಇಲ್ಲ‌

ಆದರೆ‌ ಹಬ್ಬದ ದಿನ ಶುಭಾಷಯ ಹೇಳೋ ಬದ್ಲು ಈ ವಿಚಾರದ ವಿವರಣೆ ಕೊಡ್ಬೇಕಾಗಿರೋದು ಬೇಸರದ ಸಂಗತಿ ನಾನು ಪೋಲೀಸರು ಹಾಗೂ ಸಿಸಿಬಿಗೆ ದೂರು ನೀಡಲು ನಿರ್ಧರಿಸಿದ್ದಾನೆ. ನನ್ನ ಜೊತೆ ಹೂಡಿಕೆ ಮಾಡಿದ್ದೀನಿ ಎನ್ನುವ ಆತ ದಾಖಲೆ ನೀಡಲಿ ಯಾರಾದ್ರೂ ಹೆಸರು ಮಾಡಿದ್ರೆ, ಪರಿಶ್ರಮದಿಂದ ಮೇಲೆ ಬಂದಿದ್ರೇ ಹೀಗೆ ಮಾಡೋರು ಇರ್ತಾರೆ. ಈಗ ಕಾನೂನು ಬದ್ಧವಾಗಿ ಆತನ ವಿರುದ್ಧ ನಾನು ದೂರು ನೀಡಲಿದ್ದೇನೆ ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ ಗರುಡಾಚಾರ್ ಹೇಳಿಕೆ ನೀಡಿದ್ದಾರೆ
Body:KN_BNG_08_GARDUCHAR_7204498Conclusion:KN_BNG_08_GARDUCHAR_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.