ETV Bharat / state

ಪ್ರತಿಜ್ಞಾ ವಿಧಿ ಬೋಧಿಸಿ ದಿನಸಿ ಕಿಟ್ ವಿತರಣೆ: ಆಪ್ ಪಕ್ಷದಿಂದ ವಿಶೇಷ ಜಾಗೃತಿ ಪ್ರಯತ್ನ - Basavanagudi T D Naganna Ground

ಬೆಂಗಳೂರು ನಗರದ ಬಸವನಗುಡಿಯ ಟಿ.ಡಿ.ನಾಗಣ್ಣ ಮೈದಾನದಲ್ಲಿ ಸುಮಾರು 200ಕ್ಕೂ ಅಧಿಕ ಮಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಆಪ್ ಮುಖಂಡ ಪ್ರಕಾಶ್ ದಿನಸಿ ಕಿಟ್ ವಿತರಿಸಿದ್ದಾರೆ.

AAP leader prakash donate food kit in bengalore
ಆಪ್ ಪಕ್ಷದಿಂದ ವಿಶೇಷ ಜಾಗೃತಿ ಪ್ರಯತ್ನ
author img

By

Published : May 30, 2021, 4:24 PM IST

ಬೆಂಗಳೂರು: ಕೊರೊನಾ ಸಂಕಷ್ಟ ಹಿನ್ನೆಲೆ ಬಡಬಗ್ಗರಿಗೆ ಸಹಾಯ ಮಾಡಿದ ಆಪ್ ಮುಖಂಡ ಪ್ರಕಾಶ್​ ಮತ್ತು ತಂಡ ಜನರಿಗೆ ದಿನಸಿ ಕಿಟ್ ಕೊಡುವ ಮೊದಲು ಪ್ರತಿಜ್ಞಾ ವಿಧಿ ಬೋಧಿಸಿದೆ.

ದಿನಸಿ ಕಿಟ್​ ಪಡೆಯಲು ಬಂದವರು ಪ್ರತಿಜ್ಞಾ ವಿಧಿ ಸ್ವೀಕರಿಸಿ ಕಾಯಾ, ವಾಚಾ, ಮನಸಾ ನಾವು ಕೊರೊನಾ ನಿಯಮ ಪಾಲನೆ ಮಾಡುತ್ತೇವೆ ಎಂದು ಹೇಳಿದರು.

ದಿನಸಿ ಕಿಟ್ ವಿತರಿಸಿದ ಆಪ್​ ಪಕ್ಷದ ಮುಖಂಡ

ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಹಸ್ತ ನೀಡೋಣ. ಯಾವುದೇ ಕಾರಣಕ್ಕೂ ನಾನು ಕೊರೊನಾದಿಂದ ಭಯ ಪಡುವುದಿಲ್ಲ. ಎಲ್ಲರೂ ಸೇರಿ ಸೋಂಕಿನ ವಿರುದ್ಧ ಹೋರಾಟ ಮಾಡೋಣ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ನಗರದ ಬಸವನಗುಡಿಯ ಟಿ.ಡಿ.ನಾಗಣ್ಣ ಮೈದಾನದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ 200ಕ್ಕೂ ಅಧಿಕ ಮಂದಿಗೆ ದಿನಸಿ ಕಿಟ್​ಗಳನ್ನು ತಮ್ಮ ವೇತನದ ಹಣದಲ್ಲಿ ವಿತರಣೆ ಮಾಡಿದ ಪ್ರಕಾಶ್, ಕೊರೊನಾ ಮುಗಿಯುವ ತನಕ ತಮ್ಮ ವೇತನದ ಒಂದಿಷ್ಟು ಹಣ ತೆಗೆದಿಟ್ಟು ಜನರ ಸಹಾಯಕ್ಕೆ ಮುಂದಾಗಿದ್ದಾರೆ.

ಓದಿ: ಕರುಣೆಯಿಲ್ಲದ ಕೊರೊನಾ: 1 ವರ್ಷದ ಕಂದಮ್ಮನ ಬಲಿ ಪಡೆದ ಕ್ರೂರಿ

ಬೆಂಗಳೂರು: ಕೊರೊನಾ ಸಂಕಷ್ಟ ಹಿನ್ನೆಲೆ ಬಡಬಗ್ಗರಿಗೆ ಸಹಾಯ ಮಾಡಿದ ಆಪ್ ಮುಖಂಡ ಪ್ರಕಾಶ್​ ಮತ್ತು ತಂಡ ಜನರಿಗೆ ದಿನಸಿ ಕಿಟ್ ಕೊಡುವ ಮೊದಲು ಪ್ರತಿಜ್ಞಾ ವಿಧಿ ಬೋಧಿಸಿದೆ.

ದಿನಸಿ ಕಿಟ್​ ಪಡೆಯಲು ಬಂದವರು ಪ್ರತಿಜ್ಞಾ ವಿಧಿ ಸ್ವೀಕರಿಸಿ ಕಾಯಾ, ವಾಚಾ, ಮನಸಾ ನಾವು ಕೊರೊನಾ ನಿಯಮ ಪಾಲನೆ ಮಾಡುತ್ತೇವೆ ಎಂದು ಹೇಳಿದರು.

ದಿನಸಿ ಕಿಟ್ ವಿತರಿಸಿದ ಆಪ್​ ಪಕ್ಷದ ಮುಖಂಡ

ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಹಸ್ತ ನೀಡೋಣ. ಯಾವುದೇ ಕಾರಣಕ್ಕೂ ನಾನು ಕೊರೊನಾದಿಂದ ಭಯ ಪಡುವುದಿಲ್ಲ. ಎಲ್ಲರೂ ಸೇರಿ ಸೋಂಕಿನ ವಿರುದ್ಧ ಹೋರಾಟ ಮಾಡೋಣ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ನಗರದ ಬಸವನಗುಡಿಯ ಟಿ.ಡಿ.ನಾಗಣ್ಣ ಮೈದಾನದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ 200ಕ್ಕೂ ಅಧಿಕ ಮಂದಿಗೆ ದಿನಸಿ ಕಿಟ್​ಗಳನ್ನು ತಮ್ಮ ವೇತನದ ಹಣದಲ್ಲಿ ವಿತರಣೆ ಮಾಡಿದ ಪ್ರಕಾಶ್, ಕೊರೊನಾ ಮುಗಿಯುವ ತನಕ ತಮ್ಮ ವೇತನದ ಒಂದಿಷ್ಟು ಹಣ ತೆಗೆದಿಟ್ಟು ಜನರ ಸಹಾಯಕ್ಕೆ ಮುಂದಾಗಿದ್ದಾರೆ.

ಓದಿ: ಕರುಣೆಯಿಲ್ಲದ ಕೊರೊನಾ: 1 ವರ್ಷದ ಕಂದಮ್ಮನ ಬಲಿ ಪಡೆದ ಕ್ರೂರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.