ETV Bharat / state

ಗಂಡನ ಮನಸಲ್ಲಿ ಅನುಮಾನದ ಗುಮ್ಮ... ಮಗುವನ್ನು ಅಪಾರ್ಟ್​ಮೆಂಟ್​ನಿಂದ ತಳ್ಳಿ ತಾಯಿ ಆತ್ಮಹತ್ಯೆ - undefined

ಗಂಡನ ಅನುಮಾನಕ್ಕೆ ಬೇಸತ್ತ ಮಹಿಳೆವೋರ್ವಳು ಬಾರದ ಲೋಕಕ್ಕೆ ತೆರಳಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಮೊದಲು ಮಗುವನ್ನು ಅಪಾರ್ಟ್​ಮೆಂಟ್​​ನಿಂದ ತಳ್ಳಿದ ತಾಯಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ವಿರುದ್ದ ಕೊಲೆ ಕೇಸ್​ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗು
author img

By

Published : Jul 3, 2019, 4:05 PM IST

ಬೆಂಗಳೂರು: ಗಂಡನ ಅನುಮಾನದ ನಡವಳಿಕೆಗೆ ಬೇಸತ್ತ ಮಹಿಳೆವೋರ್ವಳು ಅಪಾರ್ಟ್​ಮೆಂಟ್​ನಿಂದ ಮಗು ತಳ್ಳಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಲ್ಲಿನ ಆರ್​.ಟಿ. ನಗರದ ಅಪಾರ್ಟ್​ಮೆಂಟ್​ವೊಂದರಲ್ಲಿ ಈ ದುರ್ಘಟನೆ ನಡೆದಿದೆ.

ಮಹಿಳೆ ಗಂಡನ ಕಿರುಕುಳದಿಂದಲೇ ಹೀಗೆ ಮಾಡಿಕೊಂಡಿದ್ದಾಳೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎನ್ನಲಾಗ್ತಿದೆ. ಪೊಲೀಸರು ಮೃತಳ ಮೊಬೈಲ್ ಪರಿಶೀಲಿಸಿದಾಗ ಆಕೆಯ ಗಂಡ ಅರಿಹಂತ್​ ಜೊತೆ ಮಾಡಿರುವ ಮೆಸೇಜ್​ಗಳು ಲಭ್ಯವಾಗಿವೆ. ಅದರಲ್ಲಿ ಪತ್ನಿ ಮೇಲೆ ಪತಿ ಅರಿಹಂತನಿಗೆ ಅನುಮಾನವಿತ್ತು ಅನ್ನೋದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಅರಿಹಂತ್ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಮೊಬೈಲ್​ನಲ್ಲಿ ಪತಿ- ಪತ್ನಿ ಮಧ್ಯೆ ನಡೆದಿರುವ ಸಂವಹನ ಸಂದೇಶಗಳು ಕೊಲೆಗೆ ಪ್ರಚೋದನೆ ನೀಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಮೃತಳ ಕುಟುಂಬಸ್ಥರಿಗೆ‌ ಅರಿಹಂತ್ ತಂದೆ ‌ಬೆದರಿಕೆ ಹಾಕಿದ್ದಾರೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಎರಡು ಎಫ್​.ಐ.ಆರ್​ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ಗಂಡನ ಅನುಮಾನದ ನಡವಳಿಕೆಗೆ ಬೇಸತ್ತ ಮಹಿಳೆವೋರ್ವಳು ಅಪಾರ್ಟ್​ಮೆಂಟ್​ನಿಂದ ಮಗು ತಳ್ಳಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಲ್ಲಿನ ಆರ್​.ಟಿ. ನಗರದ ಅಪಾರ್ಟ್​ಮೆಂಟ್​ವೊಂದರಲ್ಲಿ ಈ ದುರ್ಘಟನೆ ನಡೆದಿದೆ.

ಮಹಿಳೆ ಗಂಡನ ಕಿರುಕುಳದಿಂದಲೇ ಹೀಗೆ ಮಾಡಿಕೊಂಡಿದ್ದಾಳೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎನ್ನಲಾಗ್ತಿದೆ. ಪೊಲೀಸರು ಮೃತಳ ಮೊಬೈಲ್ ಪರಿಶೀಲಿಸಿದಾಗ ಆಕೆಯ ಗಂಡ ಅರಿಹಂತ್​ ಜೊತೆ ಮಾಡಿರುವ ಮೆಸೇಜ್​ಗಳು ಲಭ್ಯವಾಗಿವೆ. ಅದರಲ್ಲಿ ಪತ್ನಿ ಮೇಲೆ ಪತಿ ಅರಿಹಂತನಿಗೆ ಅನುಮಾನವಿತ್ತು ಅನ್ನೋದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಅರಿಹಂತ್ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಮೊಬೈಲ್​ನಲ್ಲಿ ಪತಿ- ಪತ್ನಿ ಮಧ್ಯೆ ನಡೆದಿರುವ ಸಂವಹನ ಸಂದೇಶಗಳು ಕೊಲೆಗೆ ಪ್ರಚೋದನೆ ನೀಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಮೃತಳ ಕುಟುಂಬಸ್ಥರಿಗೆ‌ ಅರಿಹಂತ್ ತಂದೆ ‌ಬೆದರಿಕೆ ಹಾಕಿದ್ದಾರೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಎರಡು ಎಫ್​.ಐ.ಆರ್​ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Intro:ಅಪಾರ್ಟ್ ಮೆಂಟ್ ನಿಂದ ತಾಯಿ ಮಗು ಬಿದ್ದು ಸಾವು ಪ್ರಕರಣ
ತನಿಖೆಯಿಂದ ಬಯಾಲಾಯ್ತು ರೋಚಕ ಕಹಾನಿ

ಬೆಂಗಳೂರಿನ ಅಪಾರ್ಟ್ ಮೆಂಟ್ ನಿಂದ ತಾಯಿ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಆರ್ ಟಿ ನಗರದ ವೈಟ್ ಹೌಸ್ ಅಪಾರ್ಟ್ ಮೆಂಟ್ ನಲ್ಲಿ ನಿನ್ನೆ ನಡೆದಿತ್ತು..ಆದ್ರೆ ಆರ್ ಟಿ ನಗರ ಪೊಲೀಸರ ತನೀಕೆಯಲ್ಲಿ ರೋಚಕ ಕಹಾನಿ ಬೆಳಕಿಗೆ ಬಂದಿದೆ.

ಹೀಗಾಗಿ ಎರಡು ಎಫ್ ಐ ಆರ್ ದಾಖಲು ಮಾಡಲು ಪೊಲೀಸರು ಚಿಂತನೆ ಮಾಡಿದ್ದಾರೆ. ಮಗುವನ್ನ ಮೊದಲು ಅಪಾರ್ಟ್ಮೆಂಟ್ ನಿಂದ ತಾಯಿ ಭಾವನ ತಳ್ಳಿ ನಂತ್ರ ಸಾವನ್ನಪ್ಪಿದ್ರು. ಈ ಹಿನ್ನೆಲೆ ಸಾವನ್ನಪ್ಪಿದ್ದ ಭಾವನ ವಿರುದ್ದ ಕೊಲೆ ಕೇಸ್ ದಾಖಲು ಮಾಡಲು ನಿರ್ಧಾರ ಮಾಡಿದ್ದಾರೆ. ಮತ್ತೊಂದೆಡೆ ಭಾವನ್ ಆತ್ಮಹತ್ಯೆ ಗೆ ಕಾರಣವಾಗಿರುವ ಭಾವನ ಪತಿ ಹರಿಹಂಥ್ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ಸಂಬಂಧ ಕೇಸ್ ದಾಖಲು ಮಾಡಿದ್ದಾರೆ. ಯಾಕಂದ್ರೆ ಆರೋಪಿ ಹರಿಹಂಥ್ ಮತ್ತು ಮೃತ ಭಾವನ ನಡೆಸಿರುವ ವಾಟ್ಸಪ್ ಚಾಟ್ ಪೊಲೀಸರಿಗೆ ಲಭ್ಯ ವಾಗಿದೆ. ಆ ಚ್ಯಾಟ್ನಲ್ಲಿ ನೀನು ಮದುವೆಗು ಮೊದಲು ಸಾಕಷ್ಟು ಜನರ ಜೊತೆ ಮಲಗಿದ್ದಿಯಾ .ಈಗಲು ನೀನು ಅನ್ಯರೊಡನೆ ಸಂಬಂಧ ಇಟ್ಟು ಕೊಂಡಿದ್ದಿಯಾ ಎಂದು ಹರಿಹಂಥ್ ಭಾವನಗೆ ಮೇಸೆಜ್ ಮಾಡಿದ್ದಾನೆ. ಮತ್ತೊಂದೆಡೆ ಭಾವನ ಕುಟುಂಬಸ್ಥರಿಗೆ‌ ಹರಿಹಂಥ್ ತಂದೆ ‌ಕಡೆಯವರು ನೀವು ಕೇಸ್ ಕೊಟ್ಟರು ನನ್ನ ಮಗನನ್ನು ನಾವು ಬಿಡಿಸಿಕೊಳ್ಳುತ್ತೆನೆ ಎಂದು ಬೆದರಿಸಿರುವ ವಿಚಾರ ತನೀಕೆ ಯಲ್ಲಿ ಬಯಲಾಗಿದೆ ಹೀಗಾಗಿ ಆರ್ ಟಿನಗರ ಪೊಲಿಸರು ಎರಡು ಪ್ರಕರಣ ದಾಖಲಿಸಿ ತನಿಖೆ‌ಮೂಮದುವರೆಸಲು ನಿರ್ಧಾರ‌ಮಾಡಿದ್ದಾರೆ
Body:KN_BNG_04_SUSIDE_7204498Conclusion:KN_BNG_04_SUSIDE_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.