ETV Bharat / state

ಮದುವೆ ಆಗೋಣ ಅಂದ್ರೆ ಇನ್ನೊಬ್ಬನನ್ನು ಲವ್​ ಮಾಡ್ತೇನೆ ಎಂದ ಪ್ರೇಯಸಿ ಕೊಲೆ - Bagalore latest news

ಬೆಂಗಳೂರಿನ ಮಾರತಹಳ್ಳಿಯಲ್ಲಿ ಈ ಪ್ರೇಮಿಗಳು ಸಹಜೀವನ ನಡೆಸುತ್ತಿದ್ದರು. ಕ್ಯಾಬ್ ಚಾಲಕನಾಗಿ ಪ್ರಿಯತಮ ಕೆಲಸಮಾಡುತ್ತಿದ್ದರೆ, ದಿನಸಿ ಸಾಮಗ್ರಿ ಮಾರಾಟ ಮಳಿಗೆಯಲ್ಲಿ ಪ್ರೇಯಸಿ ಕೆಲಸ ಮಾಡುತ್ತಿದ್ದಳು. 8 ತಿಂಗಳ ಹಿಂದೆ ಪರಿಚಯವಾಗಿ ಕಳೆದ ನಾಲ್ಕು ತಿಂಗಳಿಂದ ಸಹಜೀವನ ನಡೆಸುತ್ತಿದ್ದರು.

A man killed his Girlfriend in Bangalore
ಆರೋಪಿ ತಿಪ್ಪೇಸ್ವಾಮಿ
author img

By

Published : May 22, 2020, 8:53 AM IST

ಬೆಂಗಳೂರು: ಪ್ರೇಮಿಗಳಿಬ್ಬರ ನಡುವೆ ನಡೆದ ಗಲಾಟೆ ಪ್ರೇಯಸಿ ಕೊಲೆಯಲ್ಲಿ ಅಂತ್ಯವಾಗಿದೆ.

ಚಿಕ್ಕಮಗಳೂರಿನ ತರಿಕೆರೆ ಮೂಲದ ನಯನಾ (25) ಕೊಲೆಯಾದ ಯುವತಿ. ಬೆಂಗಳೂರಿನ ಮಾರತಹಳ್ಳಿಯಲ್ಲಿ ಈ ಪ್ರೇಮಿಗಳು ಸಹಜೀವನ ನಡೆಸುತ್ತಿದ್ದರು. ಕ್ಯಾಬ್ ಚಾಲಕನಾಗಿ ತಿಪ್ಪೇಸ್ವಾಮಿ ಕೆಲಸಮಾಡುತ್ತಿದ್ದರೆ, ದಿನಸಿ ಸಾಮಗ್ರಿ ಮಾರಾಟ ಮಳಿಗೆಯಲ್ಲಿ ನಯನಾ ಕೆಲಸ ಮಾಡುತ್ತಿದ್ದಳು. 8 ತಿಂಗಳ ಹಿಂದೆ ಪರಿಚಯವಾಗಿ ಕಳೆದ ನಾಲ್ಕು ತಿಂಗಳಿಂದ ಸಹಜೀವನ ನಡೆಸುತ್ತಿದ್ದರು.

ಕೊಲೆಯಾದ ಯುವತಿ
ಕೊಲೆಯಾದ ಯುವತಿ

ಮೇ 19 ರಾತ್ರಿ ತಿಪ್ಪೇಸ್ವಾಮಿ ಮದುವೆಯಾಗೋಣ ಅಂತ ನಯನಾಗೆ ಕೇಳಿದ್ದ. ಈ ವೇಳೆ ನಯನಾ ತಾನು ಮತ್ತೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ನಿನ್ನನ್ನು ಮದುವೆಯಾಗುವುದಿಲ್ಲ ಅಂದಿದ್ದಾಳಂತೆ. ರೊಚ್ಚಿಗೆದ್ದ ತಿಪ್ಪೆಸ್ವಾಮಿ ನಯನಾಗೆ ಚಾಕುವಿನಿಂದ ಹಲ್ಲೆ ಮಾಡಿ, ನಂತ್ರ ದೋಸೆ ತವಾದಿಂದ ಹೊಡೆದು ಕೊಲೆ ಮಾಡಿದ್ದಾನೆ.

ಘಟನೆ ನಂತರ ತಿಪ್ಪೇಸ್ವಾಮಿ ಮಾರತ್ತಹಳ್ಳಿ ಪೊಲೀಸರಿಗೆ ಶರಣಾಗಿದ್ದಾನೆ.‌ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಬೆಂಗಳೂರು: ಪ್ರೇಮಿಗಳಿಬ್ಬರ ನಡುವೆ ನಡೆದ ಗಲಾಟೆ ಪ್ರೇಯಸಿ ಕೊಲೆಯಲ್ಲಿ ಅಂತ್ಯವಾಗಿದೆ.

ಚಿಕ್ಕಮಗಳೂರಿನ ತರಿಕೆರೆ ಮೂಲದ ನಯನಾ (25) ಕೊಲೆಯಾದ ಯುವತಿ. ಬೆಂಗಳೂರಿನ ಮಾರತಹಳ್ಳಿಯಲ್ಲಿ ಈ ಪ್ರೇಮಿಗಳು ಸಹಜೀವನ ನಡೆಸುತ್ತಿದ್ದರು. ಕ್ಯಾಬ್ ಚಾಲಕನಾಗಿ ತಿಪ್ಪೇಸ್ವಾಮಿ ಕೆಲಸಮಾಡುತ್ತಿದ್ದರೆ, ದಿನಸಿ ಸಾಮಗ್ರಿ ಮಾರಾಟ ಮಳಿಗೆಯಲ್ಲಿ ನಯನಾ ಕೆಲಸ ಮಾಡುತ್ತಿದ್ದಳು. 8 ತಿಂಗಳ ಹಿಂದೆ ಪರಿಚಯವಾಗಿ ಕಳೆದ ನಾಲ್ಕು ತಿಂಗಳಿಂದ ಸಹಜೀವನ ನಡೆಸುತ್ತಿದ್ದರು.

ಕೊಲೆಯಾದ ಯುವತಿ
ಕೊಲೆಯಾದ ಯುವತಿ

ಮೇ 19 ರಾತ್ರಿ ತಿಪ್ಪೇಸ್ವಾಮಿ ಮದುವೆಯಾಗೋಣ ಅಂತ ನಯನಾಗೆ ಕೇಳಿದ್ದ. ಈ ವೇಳೆ ನಯನಾ ತಾನು ಮತ್ತೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ನಿನ್ನನ್ನು ಮದುವೆಯಾಗುವುದಿಲ್ಲ ಅಂದಿದ್ದಾಳಂತೆ. ರೊಚ್ಚಿಗೆದ್ದ ತಿಪ್ಪೆಸ್ವಾಮಿ ನಯನಾಗೆ ಚಾಕುವಿನಿಂದ ಹಲ್ಲೆ ಮಾಡಿ, ನಂತ್ರ ದೋಸೆ ತವಾದಿಂದ ಹೊಡೆದು ಕೊಲೆ ಮಾಡಿದ್ದಾನೆ.

ಘಟನೆ ನಂತರ ತಿಪ್ಪೇಸ್ವಾಮಿ ಮಾರತ್ತಹಳ್ಳಿ ಪೊಲೀಸರಿಗೆ ಶರಣಾಗಿದ್ದಾನೆ.‌ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.