ETV Bharat / state

ಸರ್ಕಾರಿ ಕೆಲಸ ಕೊಡಿಸುವುದಾಗಿ ಮಹಿಳೆಗೆ ವಂಚನೆ: ಆರೋಪಿಯ ಬಂಧನ

ನಿಮ್ಮ ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿ ಮಹಿಳೆಯೋರ್ವಳಿಂದ ಲಕ್ಷಗಟ್ಟಲೇ ಹಣ ದೋಚಿ ಪರಾರಿಯಾಗಿದ್ದ ವ್ಯಕ್ತಿಯೋರ್ವನನ್ನು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.

author img

By

Published : Jan 26, 2021, 8:21 PM IST

Accused
ಬಂಧಿತ ಆರೋಪಿ

ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಪಡೆದು ಕೆಲಸವನ್ನೂ ಕೊಡಿಸದೆ, ಹಣವನ್ನೂ ಮರಳಿಸದೆ ವಂಚನೆ ಮಾಡಿರುವ ಆರೋಪಿಯೋರ್ವನನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿ ನಿವಾಸಿ ಪ್ರಮಿಳಾ ನೀಡಿದ ದೂರಿನ ಆಧಾರದ ಮೇರೆಗೆ ಮಂಡ್ಯ ಮೂಲದ ರಾಘವೇಂದ್ರ ಎಂಬಾತನನ್ನು ಬಂಧಿಸಿದ ಪೊಲೀಸರು, ಇದೀಗ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ. 2017ರಲ್ಲಿ ದೂರುದಾರೆ ಪ್ರಮೀಳಾ ಚಂದ್ರಾ ಲೇಔಟ್‌ನಲ್ಲಿ ವಾಸಿಸುತ್ತಿದ್ದರು. ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಆರೋಪಿ ರಾಘವೇಂದ್ರ ಪತ್ನಿ ಮನು ಎಂಬಾಕೆ ಪ್ರಮಿಳಾಗೆ ಪರಿಚಿತರಾಗಿದ್ದರು. 2017ರಲ್ಲಿ ಸರ್ಕಾರದ ನೇರ ನೇಮಕಾತಿ ಹುದ್ದೆಯ ಅಧಿಸೂಚನೆಗೆ ಸಂಬಂಧಿಸಿದ ಗೆಜೆಟ್ ಪತ್ರದ ನಕಲು ಪ್ರತಿಯನ್ನು ಪ್ರಮಿಳಾಗೆ ತೋರಿಸಿದ ಮನು, ನಮ್ಮ ಪತಿ ರಾಘವೇಂದ್ರಗೆ ದೊಡ್ಡ ರಾಜಕಾರಣಿಗಳ ಪರಿಚಯವಿದೆ. ನಿಮ್ಮ ಮಕ್ಕಳಿಗೆ ಸ್ಪೀಕರ್ ಕಡೆಯಿಂದ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು.

ಈಕೆಯ ಮಾತನ್ನು ನಂಬಿದ ಪ್ರಮಿಳಾ, ಮಕ್ಕಳಿಗೆ ಒಳ್ಳೆಯ ಸರ್ಕಾರಿ ಕೆಲಸ ಸಿಗಬಹುದು ಎಂದುಕೊಂಡು ಅವರ ಶೈಕ್ಷಣಿಕ ದಾಖಲಾತಿಯನ್ನು ರಾಘವೇಂದ್ರ ಅವರಿಗೆ ನೀಡಿದ್ದರು. ತದನಂತರ ರಾಘವೇಂದ್ರ ನಕಲು ಅರ್ಜಿ ಭರ್ತಿ ಮಾಡಿಸಿ ಪ್ರಮೀಳಾರಿಂದ 10 ಲಕ್ಷ ರೂ. ಪಡೆದಿದ್ದ. ಇದಾದ ಬಳಿಕ ಇನ್ನೂ ಕಾರ್ಯ ಪೂರ್ಣಗೊಂಡಿಲ್ಲ ಎಂದು ಹಂತ ಹಂತವಾಗಿ 8 ಲಕ್ಷಕ್ಕೂ ಹೆಚ್ಚಿನ ಹಣವನ್ನು ತೆಗೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಆರೋಪಿ ರಾಘವೇಂದ್ರನ ಮಾರ್ಗದರ್ಶನದಂತೆ ಆತನ ಸ್ನೇಹಿತರಾದ ಹರೀಶ್ ಮತ್ತು ನವೀನ್, ಪ್ರಮೀಳಾ ಮನೆಗೆ ಬಂದು ನಾವು ಸ್ಪೀಕರ್ ಕಚೇರಿಯಿಂದ ಬಂದಿದ್ದೇವೆ ಎಂದು ನಂಬಿಸಿ ಮಕ್ಕಳ ಮಾರ್ಕ್ಸ್‌ ಕಾರ್ಡ್ ಪರಿಶೀಲಿಸಬೇಕು ಎಂದು 30 ಸಾವಿರ ರೂ. ಪಡೆದಿದ್ದರಂತೆ.

ಈ ಬೆಳವಣಿಗೆ ಬಳಿಕ ರಾಘವೇಂದ್ರ ಹಾಗೂ ಆತನ ಪತ್ನಿ ಮನು ಮನೆ ಖಾಲಿ ಮಾಡಿಕೊಂಡು ಹೋಗಿ ಮೊಬೈಲ್ ಸಂಪರ್ಕಕ್ಕೂ ಸಿಗದೆ ವಂಚಿಸಿದ್ದರು. 2019ರಲ್ಲಿ ಮೋಸ ಹೋಗಿರುವುದನ್ನು ಅರಿತ ಪ್ರಮೀಳಾ, ಚಂದ್ರಾ ಲೇಔಟ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು.

ಪ್ರಮೀಳಾ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಇದೀಗ ಆರೋಪಿ ರಾಘವೇಂದ್ರನನ್ನು ಬಂಧಿಸಿದ್ದು, ಈತನ ಪತ್ನಿ ಹಾಗೂ ಸ್ನೇಹಿತರನ್ನು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಪಡೆದು ಕೆಲಸವನ್ನೂ ಕೊಡಿಸದೆ, ಹಣವನ್ನೂ ಮರಳಿಸದೆ ವಂಚನೆ ಮಾಡಿರುವ ಆರೋಪಿಯೋರ್ವನನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿ ನಿವಾಸಿ ಪ್ರಮಿಳಾ ನೀಡಿದ ದೂರಿನ ಆಧಾರದ ಮೇರೆಗೆ ಮಂಡ್ಯ ಮೂಲದ ರಾಘವೇಂದ್ರ ಎಂಬಾತನನ್ನು ಬಂಧಿಸಿದ ಪೊಲೀಸರು, ಇದೀಗ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ. 2017ರಲ್ಲಿ ದೂರುದಾರೆ ಪ್ರಮೀಳಾ ಚಂದ್ರಾ ಲೇಔಟ್‌ನಲ್ಲಿ ವಾಸಿಸುತ್ತಿದ್ದರು. ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಆರೋಪಿ ರಾಘವೇಂದ್ರ ಪತ್ನಿ ಮನು ಎಂಬಾಕೆ ಪ್ರಮಿಳಾಗೆ ಪರಿಚಿತರಾಗಿದ್ದರು. 2017ರಲ್ಲಿ ಸರ್ಕಾರದ ನೇರ ನೇಮಕಾತಿ ಹುದ್ದೆಯ ಅಧಿಸೂಚನೆಗೆ ಸಂಬಂಧಿಸಿದ ಗೆಜೆಟ್ ಪತ್ರದ ನಕಲು ಪ್ರತಿಯನ್ನು ಪ್ರಮಿಳಾಗೆ ತೋರಿಸಿದ ಮನು, ನಮ್ಮ ಪತಿ ರಾಘವೇಂದ್ರಗೆ ದೊಡ್ಡ ರಾಜಕಾರಣಿಗಳ ಪರಿಚಯವಿದೆ. ನಿಮ್ಮ ಮಕ್ಕಳಿಗೆ ಸ್ಪೀಕರ್ ಕಡೆಯಿಂದ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು.

ಈಕೆಯ ಮಾತನ್ನು ನಂಬಿದ ಪ್ರಮಿಳಾ, ಮಕ್ಕಳಿಗೆ ಒಳ್ಳೆಯ ಸರ್ಕಾರಿ ಕೆಲಸ ಸಿಗಬಹುದು ಎಂದುಕೊಂಡು ಅವರ ಶೈಕ್ಷಣಿಕ ದಾಖಲಾತಿಯನ್ನು ರಾಘವೇಂದ್ರ ಅವರಿಗೆ ನೀಡಿದ್ದರು. ತದನಂತರ ರಾಘವೇಂದ್ರ ನಕಲು ಅರ್ಜಿ ಭರ್ತಿ ಮಾಡಿಸಿ ಪ್ರಮೀಳಾರಿಂದ 10 ಲಕ್ಷ ರೂ. ಪಡೆದಿದ್ದ. ಇದಾದ ಬಳಿಕ ಇನ್ನೂ ಕಾರ್ಯ ಪೂರ್ಣಗೊಂಡಿಲ್ಲ ಎಂದು ಹಂತ ಹಂತವಾಗಿ 8 ಲಕ್ಷಕ್ಕೂ ಹೆಚ್ಚಿನ ಹಣವನ್ನು ತೆಗೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಆರೋಪಿ ರಾಘವೇಂದ್ರನ ಮಾರ್ಗದರ್ಶನದಂತೆ ಆತನ ಸ್ನೇಹಿತರಾದ ಹರೀಶ್ ಮತ್ತು ನವೀನ್, ಪ್ರಮೀಳಾ ಮನೆಗೆ ಬಂದು ನಾವು ಸ್ಪೀಕರ್ ಕಚೇರಿಯಿಂದ ಬಂದಿದ್ದೇವೆ ಎಂದು ನಂಬಿಸಿ ಮಕ್ಕಳ ಮಾರ್ಕ್ಸ್‌ ಕಾರ್ಡ್ ಪರಿಶೀಲಿಸಬೇಕು ಎಂದು 30 ಸಾವಿರ ರೂ. ಪಡೆದಿದ್ದರಂತೆ.

ಈ ಬೆಳವಣಿಗೆ ಬಳಿಕ ರಾಘವೇಂದ್ರ ಹಾಗೂ ಆತನ ಪತ್ನಿ ಮನು ಮನೆ ಖಾಲಿ ಮಾಡಿಕೊಂಡು ಹೋಗಿ ಮೊಬೈಲ್ ಸಂಪರ್ಕಕ್ಕೂ ಸಿಗದೆ ವಂಚಿಸಿದ್ದರು. 2019ರಲ್ಲಿ ಮೋಸ ಹೋಗಿರುವುದನ್ನು ಅರಿತ ಪ್ರಮೀಳಾ, ಚಂದ್ರಾ ಲೇಔಟ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು.

ಪ್ರಮೀಳಾ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಇದೀಗ ಆರೋಪಿ ರಾಘವೇಂದ್ರನನ್ನು ಬಂಧಿಸಿದ್ದು, ಈತನ ಪತ್ನಿ ಹಾಗೂ ಸ್ನೇಹಿತರನ್ನು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.