ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕುವೈತ್ಗೆ ಹೋಗುತ್ತಿದ್ದ ಪ್ರಯಾಣಿಕನ ಬಳಿ 5 ಗುಂಡುಗಳನ್ನ ಲೋಡ್ ಮಾಡಲಾಗಿದ್ದ ಪಿಸ್ತೂಲ್ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಚನ್ನಕೇಶವನಗರದ ಶ್ರೀನಿವಾಸ ಎಸ್ಎನ್ ನವೆಂಬರ್ 18ರ ಮುಂಜಾನೆ 12:30 ಸಮಯದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. J9-432 ವಿಮಾನದಲ್ಲಿ ಕುವೈತ್ ಪ್ರಯಾಣಿಸಲು ಬಂದಿದ್ದ ಶ್ರೀನಿವಾಸ ಲೈನ್ ನಂಬರ್ 18 ರಲ್ಲಿ CISF ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಈ ಸಮಯದಲ್ಲಿ ಶ್ರೀನಿವಾಸ ಅವರ ಲಗೇಜ್ನಲ್ಲಿ ಪಿಸ್ತೂಲ್ ಪತ್ತೆಯಾಗಿದೆ.
ಚೆಕೊಸ್ಲೊವೇಕಿಯಾದಲ್ಲಿ ತಯಾರದ 6.35 ಬೋರ್ ಪಿಸ್ತೂಲ್ ಆಗಿದ್ದು, 5 ಗುಂಡುಗಳನ್ನ ಪಿಸ್ತೂಲ್ನಲ್ಲಿ ಲೋಡ್ ಮಾಡಲಾಗಿತ್ತು. ಶ್ರೀನಿವಾಸ ಅವರ ಬಳಿ ಪಿಸ್ತೂಲ್ ಹೊಂದುವ ಬಗ್ಗೆ ಸಮರ್ಪಕವಾದ ದಾಖಲೆಗಳು ಇಲ್ಲದ ಹಿನ್ನೆಲೆ ಆರ್ಮ್ಸ್ ಆಕ್ಟ್ 1959 ಅಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ: ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ ಅಫ್ತಾಬ್ಗೆ ಸುಳ್ಳು ಪತ್ತೆ ಪರೀಕ್ಷೆ ಶುರು